ಬೆಂಗಳೂರು, ಮಂಗಳೂರು ಎಲ್ಲೆಡೆ ಮಳೆ, ಜಲಾಶಯಗಳು ಭರ್ತಿ
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಕ್ಷೀಣಿಸಿದ್ದು, ಮಲೆನಾಡು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಕಾರಣ ಆರಂಭವಾದ ಮಳೆ ಇನ್ನೂಮೂರ್ನಾಲ್ಕು ದಿನಗಳ ಕಾಲ ಸುರಿಯಲಿದೆ. ಗದಗ, ಬಾಗಲಕೋಟೆ, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಂಭವವಿದ್ದು, ಬೆಂಗಳೂರಿನಲ್ಲಿ ಇನ್ನೂ ಯೆಲ್ಲೋ ಅಲರ್ಟ್ ಇನ್ನೂ ಹಿಂತೆಗೆದುಕೊಂಡಿಲ್ಲ.
ಕಳೆದ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಮಳೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಾಗನಕಟ್ಟೆ ಎಂಬಲ್ಲಿ117ಮಿ.ಮೀ ಸುರಿದಿದೆ, ಬೆಂಗಳೂರು ದಕ್ಷಿಣ ವಿಭಾಗದ ಕೆಂಗೇರಿಯಲ್ಲಿ 109.5 ಮಿ.ಮೀ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿ ಎರಡು ದಿನ ಬಿಸಿಲು ಕಾಣಿಸಿಕೊಂಡರೂ ಸಂಜೆ ವೇಳೆ ಮಳೆ ಸುರಿಯಬಹುದು.
ಈ ನಡುವೆ ಕರ್ನಾಟಕದಲ್ಲಿ ಇಂದಿನ (ಅ.25) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಮಳೆ ಮುನ್ಸೂಚನೆ ಬಗ್ಗೆ ಮುಂದೆ ವಿವರವಾಗಿ ತಿಳಿಯಿರಿ. (ಅಂಕಿ ಅಂಶ ಕೃಪೆ: KSNMDC); ವಿನ್ಯಾಸ: ಭರತ್ ಎಚ್. ಸಿ.
ರಾಜ್ಯದೆಲ್ಲೆಡೆ
ಭರ್ಜರಿ
ಮಳೆ,
ಜಲಾಶಯಗಳ
ನೀರಿನ
ಪ್ರಮಾಣ
ಕರ್ನಾಟಕದ
ಹವಾಮಾನ
ವರದಿ,
ಅಣೆಕಟ್ಟುಗಳ
ವಿವರ
ಮಳೆ
ಮುನ್ಸೂಚನೆ
ರಾಜ್ಯದ
ಕರಾವಳಿ
ಹಾಗೂ
ದಕ್ಷಿಣ
ಒಳನಾಡು
ಜಿಲ್ಲೆಗಳಲ್ಲಿ
ಚದುರಿದಿಂದ
ವ್ಯಾಪಕವಾಗಿ
ಸಾಧರಣ
ಮಳೆ
ಹಾಗೂ
ಅಲ್ಲಲ್ಲಿ
ಉತ್ತಮದಿಂದ
ಅಧಿಕ
ಮಳೆ.
ಉತ್ತರ
ಒಳನಾಡು
ಜಿಲ್ಲೆಗಳಲ್ಲಿ
ಅಲ್ಲಲ್ಲಿ
ಚದುರಿದಂತೆ
ಸಾಧಾರಣ
ಮಳೆ.
ಮಲೆನಾಡು
ಜಿಲ್ಲೆಗಳಲ್ಲಿ
ವ್ಯಾಪಕವಾಗಿ
ಸಾಧರಣ
ಮಳೆ
ಹಾಗೂ
ಅಲ್ಲಲ್ಲಿ
ಉತ್ತಮದಿಂದ
ಅಧಿಕ
ಮಳೆಯಾಗುವ
ಸಾಧ್ಯತೆಯಿದೆ.
ರಾಜ್ಯದಾದ್ಯಂತ
ಅಲ್ಲಲ್ಲಿ
ಮಿಂಚಿನೊಂದಿಗೆ
ಗುಡುಗು
ಸಂಭವಿಸುವ
ಸಾಧ್ಯತೆಯಿದೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಹೇಮಾವತಿ, ಲಿಂಗನಮಕ್ಕಿ, ಹಾರಂಗಿ
ಹೇಮಾವತಿ, ಲಿಂಗನಮಕ್ಕಿ, ಹಾರಂಗಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ
ಕೃಷ್ಣರಾಜಸಾಗರ, ಭದ್ರಾ, ಕಬಿನಿ
ಕೃಷ್ಣರಾಜಸಾಗರ, ಭದ್ರಾ, ಕಬಿನಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.
ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ
ಬಸವಸಾಗರ(ನಾರಾಯಣಪುರ), ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.
ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ
ಸೂಪಾ, ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.