ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ: ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಅಕ್ಟೋಬರ್ 05: ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೋಮವಾರ ತಿಪಟೂರು, ತ್ಯಾಗರ್ತಿ, ಚನ್ನಗಿರಿ, ಕುಣಿಗಲ್, ಮಂಕಿ, ವಿರಾಜಪೇಟೆ, ಬೆಳಗಾವಿ, ಸಿದ್ದಾಪುರ, ಹಾಸನ, ಚಿಕ್ಕಮಗಳೂರು, ಕುಮಟಾ, ನಿಪ್ಪಾಣಿ, ಸಂಕೇಶ್ವರ, ಚಿಕ್ಕೋಡಿ, ಮಧುಗಿರಿ, ಹೊಸದುರ್ಗ, ಹುಂಚದಕಟ್ಟೆ, ಆನವಟ್ಟಿ, ಮಾಗಡಿ, ಸೋಮವಾರಪೇಟೆ, ನಾಪೊಕ್ಲು, ಚಿಂತಾಮಣಿಯಲ್ಲಿ ಮಳೆಯಾಗಿದೆ.
ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಮನೆಗೆ ಹಾನಿಯಾಗಿದೆ. ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕುಗಳಲ್ಲಿ ಮಳೆಯಾಗಿದ್ದು ಅಡಕೆ, ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ.
ದಾವಣಗೆರೆ ನಗರದಲ್ಲಿ ಸುರಿದ ಭಾರೀ ಮಳೆಗೆ ಹಳ್ಳಿಹಾಳ್ ಕ್ರಾಸ್ ಬಳಿ ಸಾಲು ಮರ ರಸ್ತೆಗುರುಳಿದ್ದು ವಾಹನ ಸವಾರರು ಸ್ವಲ್ಪದರಲ್ಲೇ ಅನಾಹುತದಿಂದ ಪಾರಾಗಿದ್ದಾರೆ.
ರಾಜಧಾನಿ
ಬೆಂಗಳೂರಿನಲ್ಲಿ
ಭಾನುವಾರ
ರಾತ್ರಿ
ಸುರಿದ
ಭಾರೀ
ಮಳೆ
ಸಾಕಷ್ಟುಅನಾಹುತ
ಸೃಷ್ಟಿಸಿದೆ.
ಮಳೆ
ನೀರು
ಕಾಲುವೆ,
ರಾಜಕಾಲುವೆಗಳು
ತುಂಬಿ
ಹರಿದು
ತಗ್ಗು
ಪ್ರದೇಶದ
ನೂರಾರು
ಮನೆಗಳು,
ಅಪಾರ್ಟ್ಮೆಂಟ್ಗಳು,
ಬಡಾವಣೆ
ರಸ್ತೆಗಳು,
ಅಂಗಡಿ-ಮುಂಗಟ್ಟುಗಳು
ಜಲಾವೃತವಾಗಿ
ನಿವಾಸಿಗಳು
ಪರದಾಡುವ
ಸ್ಥಿತಿ
ನಿರ್ಮಾಣವಾಗಿತ್ತು.
ಕರ್ನಾಟಕದಲ್ಲಿ
ನೈಋತ್ಯ
ಮುಂಗಾರು
ಅಂತ್ಯಗೊಂಡಿದೆ.
ಆದರೆ
ಚಂಡಮಾರುತದ
ಪರಿಣಾಮ
ವಿವಿಧ
ಜಿಲ್ಲೆಗಳಲ್ಲಿ
ಮಳೆಯಾಗುತ್ತಿದೆ.
ಭಾನುವಾರ
ರಾತ್ರಿ
ಬೆಂಗಳೂರಿನಲ್ಲಿ
ಸುರಿದ
ಮಳೆ
ಅವಾಂತರವನ್ನು
ಸೃಷ್ಟಿಸಿತ್ತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಸೋಮವಾರ ಅರ್ಧಗಂಟೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಿಕ್ರೆ ಹಳ್ಳದ ಸೇತುವೆ ಮೇಲೆ ನೀರು ನಿಂತು, ಸಂಚಾರಕ್ಕೆ ಅಡ್ಡಿಯಾಗಿತ್ತು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಸುರಿದ ಮಳೆ ನಗರದಲ್ಲಿ ಅವಾಂತರ ಸೃಷ್ಟಿ ಮಾಡಿತ್ತು. ಸೋಮವಾರ ಮೋಡ ಕವಿದ ವಾತಾವರಣವಿದ್ದರೂ ಮಳೆ ಸುರಿದಿಲ್ಲ. ಸೋಮವಾರ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದೆ.
ಮುಂಗಾರು
ಅವಧಿಯಲ್ಲಿ
ರೈತರು
ಬೆಳೆದಿದ್ದ
ಹತ್ತಿ,
ಮೆಣಸಿನಕಾಯಿ,
ಜೋಳ
ಭತ್ತದ
ಬೆಳೆಗಳು
ನೀರಿನ
ಅಭಾವದ
ಕಾರಣ
ಸೊರಗಿದ್ದವು.
ಬಿಸಿಲು
ಚೆನ್ನಾಗಿ
ಇದ್ದ
ಕಾರಣ
ರೈತರು
ಶೇಂಗಾ
ಬೆಳೆದಿದ್ದರು.
ಸೋಮವಾರ
ಸುರಿದ
ಮಳೆಯಿಂದ
ಎಪಿಎಂಸಿ
ಆವರಣದಲ್ಲಿ
ಒಣಗಲು
ಹಾಕಿದ್ದ
ಶೇಂಗಾ
ನೀರಿನಲ್ಲಿ
ಒದ್ದೆಯಾಗಿದೆ.
ಹಲವು
ಜಲಾಶಯಗಳು
ಭರ್ತಿಯಾಗಿವೆ.
ರಾಜ್ಯದ ದಕ್ಷಿಣ ಒಳನಾಡಿನ ಮಲೆನಾಡು ಜಿಲ್ಲೆಗಳ ಪೈಕಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಇನ್ನಿತರ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ 'ಯೆಲ್ಲೋ ಅಲರ್ಟ್'ಘೋಷಿಸಲಾಗಿದೆ.
ಮಂಗಳವಾರ ಹಾಗೂ ಬುಧವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಶಾಹೀನ್ ಚಂಡಮಾರುತ ಮತ್ತು ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಲಿದೆ.
ಕೆಲವು ಜಲಾಶಯಗಳ ನೀರಿನ ಮಟ್ಟದ ಬ್ಗಗೆ ಮಾಹಿತಿ ಇಲ್ಲಿದೆ. ವಿನ್ಯಾಸ: ಭರತ್ ಎಚ್ಸಿ
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಲಿಂಗನಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಇಂದು 553.49 ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 871.02ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು 887.88ಮೀಟರ್ನಷ್ಟಿದೆ.
ಕಬಿನಿ ಜಲಾಶಯದ ಮಟ್ಟ
ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್ನಷ್ಟಿದ್ದು, ಇಂದು 694.95ರಷ್ಟಿದೆ, ಕೆಆರ್ಎಸ್ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮಟ್ಟ 34.76ಮೀಟರ್ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 657.32ರಷ್ಟಿದೆ.
ತುಂಗಭದ್ರಾ ಜಲಾಶಯ
ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 497.71 ಮೀಟರ್ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು 519.57ಮೀಟರ್ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್ನಷ್ಟು ನೀರಿನ ಸಾಮರ್ಥ್ಯವಿದ್ದರೂ 492.17ಮೀಟರ್ನಷ್ಟು ನೀರಿದೆ.
ಸೂಪಾ ಜಲಾಶಯದ ನೀರಿನ ಮಟ್ಟ
ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ, 535.44ರಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 556.55ಮೀಟರ್ನಷ್ಟು ನೀರಿನ ಸಾಮರ್ಥ್ಯವಿದ್ದು, 662.91ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್ ನೀರಿನ ಸಾಮರ್ಥ್ಯವಿದ್ದು, 633.59ನೀರು ಸಂಗ್ರಹವಾಗಿದೆ.