ಕರ್ನಾಟಕ ಉಪ ಚುನಾವಣೆ: ಯಾವ ಪಕ್ಷದ ಮತ ಗಳಿಕೆ ಪ್ರಮಾಣ ಎಷ್ಟು?
ಕರ್ನಾಟಕದಲ್ಲಿ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯುವುದು ಪ್ರಮುಖ ಪಕ್ಷ ಬಿಜೆಪಿಗೆ ಬೇಡವಾಗಿತ್ತು. ಏಕೆಂದರೆ ಇನ್ನು ಆರೇಳು ತಿಂಗಳಿಗೆ ಲೋಕಸಭೆಗೆ ಮತ್ತೆ ಚುನಾವಣೆ ನಡೆಯಲಿದೆ. ಆದರೆ ಅನಿವಾರ್ಯ ಕಾರಣವಾದ್ದರಿಂದ ಎದುರಿಸಿತು. ಈ ಚುನಾವಣೆಯು ಜೆಡಿಎಸ್-ಕಾಂಗ್ರೆಸ್ ಪಾಲಿಗೆ ಪರೀಕ್ಷಾ ವೇದಿಕೆ ಆಗಿದ್ದಂತೂ ಸತ್ಯ.
ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭಾ ಸ್ಥಾನಗಳಿಗೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಶಿವಮೊಗ್ಗ ಹೊರತುಪಡಿಸಿ ಉಳಿದೆಡೆ ಗೆಲುವು ದಕ್ಕಿದೆ. ಮೊದಮೊದಲಿಗೆ ಶಿವಮೊಗ್ಗ ಕ್ಷೇತ್ರದಲ್ಲಿ ಆತಂಕದ ವಾತಾವರಣ ಇತ್ತು. ಆ ನಂತರ ನಿವಾರಣೆ ಆಯಿತು.
5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?
ಆದರೆ, ಉಳಿದ ಎಲ್ಲ ಕಡೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಗೆ ಭರ್ಜರಿ ಗೆಲುವು ದಕ್ಕಿದೆ. ರಾಮನಗರದಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ದಾಖಲಿಸಿದ ಗೆಲುವು ಚಾರಿತ್ರಿಕವಾಗಿ ಉಳಿಯಲಿದೆ. ಅಂದಹಾಗೆ ಯಾವ ಕ್ಷೇತ್ರದಲ್ಲಿ, ಯಾವ ಅಭ್ಯರ್ಥಿಗೆ ಎಷ್ಟು ಮತ ಬಿತ್ತು ಎಂಬುದರ ವಿವರ ಇಲ್ಲಿದೆ.