ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!
ಬೆಂಗಳೂರು, ಫೆಬ್ರವರಿ 06: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಾರ್ಯ ಗುರುವಾರದಂದು ಅವರು ಅಂದುಕೊಂಡಿದ್ದ ಮುಹೂರ್ತದಲ್ಲೇ ನೆರವೇರಿದೆ. ರಾಜಭವನದಲ್ಲಿಂದು 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿವಾಲ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷಕ್ಕೆ ವಲಸೆ ಬಂದು ಉಪ ಚುನಾವಣೆಯಲ್ಲಿ ಗೆದ್ದವರ ಪೈಕಿ 10 ಮಂದಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ.
Karnataka Cabinet Expansion Live : 10 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡ ಯಡಿಯೂರಪ್ಪ
ಸಚಿವಸ್ಥಾನದ ಆಕಾಂಕ್ಷಿಯಾಗಿದ್ದ ಮಹೇಶ್ ಕುಮಟಳ್ಳಿ ಅವಕಾಶ ವಂಚಿತರಾಗಿದ್ದಾರೆ. ಇನ್ನು ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಎಚ್ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್ ಸೂಚಿಸಿತ್ತು. ಹಿರಿಯ ನಾಯಕರ ಆಜ್ಞೆಯನ್ನು ಕರುನಾಡ ಸಿಎಂ ಪಾಲಿಸಿದ್ದಾರೆ.
8 ಮಂದಿ ಶಾಸಕರು ಮೊದಲ ಬಾರಿಗೆ ಸಚಿವರಾದರು
10:
10ಮಂದಿ
ಗುರುವಾರ(ಫೆಬ್ರವರಿ
06)ದಂದು
ರಾಜಭವನದಲ್ಲಿ
ಪ್ರಮಾಣ
ವಚನ
ಸ್ವೀಕರಿಸಿದರು.
ಎಸ್
ಟಿ
ಸೋಮಶೇಖರ್,
ರಮೇಶ್
ಜಾರಕಿಹೊಳಿ,
ಆನಂದ್
ಸಿಂಗ್,
ಕೆ
ಸುಧಾಕರ್,
ಬೈರತಿ
ಬಸವರಾಜು,
ಶಿವರಾಮ
ಹೆಬ್ಬರ್,
ಬಿ.ಸಿ
ಪಾಟೀಲ್,
ಗೋಪಾಲಯ್ಯ,
ನಾರಾಯಣ
ಗೌಡ.
8:
ಎಸ್
ಟಿ
ಸೋಮಶೇಖರ್,
ಕೆ
ಸುಧಾಕರ್,
ಬೈರತಿ
ಬಸವರಾಜು,
ಶಿವರಾಮ
ಹೆಬ್ಬರ್,
ಬಿ.ಸಿ
ಪಾಟೀಲ್,
ಗೋಪಾಲಯ್ಯ,
ನಾರಾಯಣ
ಗೌಡ.
1:
ಮೊದಲ
ಪ್ರಯತ್ನದಲ್ಲೇ
ಸಚಿವರಾದ
ಶ್ರೀಮಂತ
ಪಾಟೀಲ್.
ಸಂಪುಟದಲ್ಲಿರುವ ಸಚಿವರ ಸಂಖ್ಯೆ
28:
ಯಡಿಯೂರಪ್ಪ
ಅವರ
ಸಂಪುಟದಲ್ಲಿರುವ
ಸಚಿವರ
ಸಂಖ್ಯೆ.
34:
ಕರ್ನಾಟಕ
ಕ್ಯಾಬಿನೆಟ್
ಗರಿಷ್ಠ
ಮಿತಿ.
117:
ವಿಧಾನಸಭೆಯಲ್ಲಿ
ಬಿಜೆಪಿ
ಸಂಖ್ಯಾಬಲ.
20:
ಯಡಿಯೂರಪ್ಪ
ತಮ್ಮ
ಬಳಿ
20ಕ್ಕೂ
ಹೆಚ್ಚು
ಖಾತೆ
ಉಳಿಸಿಕೊಂಡಿದ್ದಾರೆ.
ನೂತನ
10
ಸಚಿವರಿಗೆ
ಖಾತೆ
ಹಂಚಿಕೆ
ಮಾಡಿದ
ಬಳಿಕ,
ಮಿಕ್ಕ
ಖಾತೆಗಳನ್ನು
ತಮ್ಮಲ್ಲಿ
ಉಳಿಸಿಕೊಳ್ಳಬಹುದು.
ಹಿರೇಕೆರೂರು ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದಿದೆ
37: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿ. ಸಿ ಪಾಟೀಲ್ ಅವರು ಸಚಿವರಾಗುವ ಮೂಲಕ 37 ವರ್ಷಗಳ ಬಳಿಕ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದಿದೆ.
ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಇನ್ನೇನು ಸಿಕ್ಕಿತು ಎನ್ನುವಾಗ ಕೈತಪ್ಪಿತ್ತು. ನಂತರ ಆ ಸರ್ಕಾರ ಪತನಗೊಳ್ಳಲು ಕಾರಣರಾದವರ ಪೈಕಿ ಬಿಸಿ ಪಾಟೀಲ್ ಪ್ರಮುಖರೆನಿಸಿದರು. ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡ ಪಾಟೀಲ್, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವರಾಗಿದ್ದಾರೆ.
ಸದ್ಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಯಾರಿಗೂ ಇಲ್ಲ
ಸೋತವರ ಕಥೆ ಏನು? ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ವಲಸೆ ಬಂದಿರುವ ಶಾಸಕರ ದಂಡು ಬಿ.ಎಸ್ ಯಡಿಯೂರಪ್ಪರನ್ನು ಆಗ್ರಹಿಸುತ್ತಲೇ ಇದೆ. ಈ ಮೊದಲಿನ ತೀರ್ಮಾನದಂತೆ ರಮೇಶ್ ಜಾರಕಿಹೊಳಿ ಮತ್ತು ವಿಶ್ವನಾಥ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಬಲವಾಗಿ ಕೇಳಿ ಬಂದಿದೆ. ಆದರೆ, ಸದ್ಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಯಾರಿಗೂ ಇಲ್ಲ ಎಂಬುದು ಹೈಕಮಾಂಡ್ ಹೊರಡಿಸಿದ ಆಜ್ಞೆಯಾಗಿದೆ.
ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ
ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಅತೃಪ್ತರಾಗಿ ಅನರ್ಹರಾಗಿ, ಮುಂದೆ ಬಿಜೆಪಿ ಸೇರಿದ ನೂತನ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕಾರ್ವಿುಕ, ಕೌಶಲಾಭಿವೃದ್ಧಿ, ಕಾರ್ವಿುಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ