ಮೊದಲು ಬೆಳ್ಳಗೆ ಇದ್ದ ದೆಹಲಿ ಕೆಂಪು ಕೋಟೆಯ ಇಂಟರೆಸ್ಟಿಂಗ್ ಮಾಹಿತಿ
ದೆಹಲಿಯ ಕೆಂಪು ಕೋಟೆಗೆ ಇರುವ ಐತಿಹಾಸಿಕ ಹಿನ್ನೆಲೆ, ಪ್ರಾಶಸ್ತ್ಯದ ಬಗ್ಗೆ ಆಸಕ್ತಿಕರವಾದ ಮಾಹಿತಿಗಳು ಇಲ್ಲಿವೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಇದೇ ಕೆಂಪು ಕೋಟೆಯಿಂದಲೇ ದೇಶದ ಪ್ರಧಾನಿಗಳು ಭಾಷಣ ಮಾಡುತ್ತಾರೆ. ಅದು ಭವಿಷ್ಯದ ಕಾರ್ಯಸೂಚಿ ತಿಳಿಸುವ ಸಂದರ್ಭವೂ ಹೌದು. ಜತೆಗೆ ಹೆಮ್ಮೆಯೂ ಹೌದು.
ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಶಿವಪುರ ಧ್ವಜ ಸತ್ಯಾಗ್ರಹ
ಈ ಪರಿಪಾಠ ಮೊದಲ ಸ್ವಾತಂತ್ರ್ಯ ದಿನಾಚರಣೆಯಿಂದ ನಡೆದುಕೊಂಡು ಬಂದಿದೆ. ಜವಾಹರ್ ಲಾಲ್ ನೆಹರೂರಿಂದ ಆರಂಭಗೊಂಡು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಎಚ್.ಡಿ.ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ..ಇದೀಗ ನರೇಂದ್ರ ಮೋದಿ ತನಕ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಕೆಂಪು ಕೋಟೆಯಿಂದ ಮಾಡಿದ್ದಾರೆ.
ಮೊದಲು ಬೆಳ್ಳಗೆ ಇದ್ದ ದೆಹಲಿ ಕೆಂಪು ಕೋಟೆಯ ಇಂಟರೆಸ್ಟಿಂಗ್ ಮಾಹಿತಿ
ಈ ಕೆಂಪುಕೋಟೆ ಮೂಲದಲ್ಲಿ ಬಿಳಿಯ ಬಣ್ಣದಲ್ಲಿತ್ತು ಅನ್ನೋದು ನಿಮಗೆ ಗೊತ್ತಿದೆಯೆ? ಷಾ ಜಹಾನ್ ಇದರ ನಿರ್ಮಾತೃ, ಕೊಹಿನೂರು ವಜ್ರ ಇಲ್ಲಿನ ಪೀಠೋಪಕರಣವೊಂದರಲ್ಲಿತ್ತು, ಈ ಕೋಟೆ ನಿರ್ಮಾಣಕ್ಕೆ ಹತ್ತು ವರ್ಷ ಸಮಯ ಹಿಡಿಯಿತು... ಇತ್ಯಾದಿ ಆಸಕ್ತಿಕರ ಮಾಹಿತಿಗಳು ಇಲ್ಲಿವೆ. ಇನ್ನೇನು ಸ್ವಾತಂತ್ರ್ಯ ದಿನಾಚರಣೆಗೆ ಕೆಲ ದಿನಗಳು ಬಾಕಿಯಿರುವಾಗ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.