Infographics: ಜಿಲ್ಲಾವಾರು ಕೊವಿಡ್ 19 ಸಾವು-ನೋವು, ಚಿತ್ರದುರ್ಗ ಕೊನೆ ಸ್ಥಾನ!
ಬೆಂಗಳೂರು, ಜುಲೈ 15: ಕಳೆದ ಒಂದು ದಿನದಲ್ಲಿ ರಾಜ್ಯದಲ್ಲಿ 2,496 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಗುಜರಾತ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ಏರಿಕೆಯಾಗಿ ಆತಂಕ ಮೂಡಿಸಿದೆ.
Recommended Video
ದೇಶದಲ್ಲಿ ಚೇತರಿಕೆ ಕಂಡಿರುವ ರೋಗಿಗಳ ಶೇಕಡಾವಾರು ನೋಡುವುದಾದರೆ 63.20ರಷ್ಟು ಏರಿಕೆಯಾಗಿದೆ. ಒಟ್ಟಾರೆ ಪ್ರಕರಣಗಳ ಪೈಕಿ ಭಾರತದಲ್ಲಿ ಶೇಕಡಾ 96.05ರಷ್ಟು ಜನರು ಗುಣಮುಖರಾಗಿದ್ದಾರೆ. ಶೇಕಡಾ 3.95ರಷ್ಟು ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ 29,429 ಹೊಸ ಕೇಸ್ ಪತ್ತೆ, ಟಾಪ್ 5 ರಾಜ್ಯಗಳು ಯಾವುದು?
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 44,077ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿನಿಂದ ಮೃತಪಟ್ಟವರು 87 ಜನ, ಒಟ್ಟು ಮೃತರ ಸಂಖ್ಯೆ 842ಕ್ಕೆ ಏರಿಕೆಯಾಗಿದೆ. ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದವರು 1,142 ಜನ, ಸಕ್ರಿಯ ಸೋಂಕಿತ ಪ್ರಕರಣಗಳು 25,839. ಒಟ್ಟಾರೆ ಗುಣಮುಖರಾದವರ ಸಂಖ್ಯೆ 17,390.
ಕರ್ನಾಟಕದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 20 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದರೆ, ದಕ್ಷಿಣ ಕನ್ನಡ 2444 ಟಾಪ್ 2 ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು 157, ಚಿತ್ರದುರ್ಗ 121 ಕೇಸ್ ಹೊಂದಿದ್ದು ಕೊನೆ ಎರಡು ಸ್ಥಾನದಲ್ಲಿವೆ.
ವಿವಿಧ ಜಿಲ್ಲೆಗಳಲ್ಲಿನ ಕೊರೊನಾವೈರಸ್ ಪ್ರಕರಣಗಳು, ಸಕ್ರಿಯ ಕೇಸ್, ಗುಣಮುಖರಾದವರು, ಮೃತರ ಸಂಖ್ಯೆಗಳ ಇನ್ಫೋಗ್ರಾಫಿಕ್ಸ್ ಇಲ್ಲಿದೆ: ವಿನ್ಯಾಸ: ಭರತ್ ಎಚ್. ಸಿ