ಕಳೆದ ಚುನಾವಣೆಯಲ್ಲಿ ಧಾರವಾಡ ಪೇಡಾ ಸವಿದವರ್ಯಾರು?
ಧಾರವಾಡ ಕರ್ನಾಟಕದ ವಾಣಿಜ್ಯ ನಗರಿ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ! ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ.
ಬೆಂಗಳೂರಿನ ನಂತರ ಅತ್ಯಂತ ದೊಡ್ಡ ನಗರ ಪಾಲಿಕೆಯನ್ನು ಹೊಂದಿರುವ ನಗರವೆಂದರೆ ಧಾರವಾಡ. ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ದ.ರಾ.ಬೇಂದ್ರೆ ಅವರ ನೆಲವಾದ ಧಾರವಾಡ ಕನ್ನಡ ನಾಡಿನ ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ.ಗಂಗೂಬಾಯಿ ಹಾನಗಲ್, ಬೆಟಗೇರಿ ಕೃಷ್ಣಶರ್ಮ, ಎಂ.ಎಂ.ಕಲಬುರ್ಗಿ, ಕೀರ್ತಿನಾಥ ಕುರ್ತಕೋಟಿ, ವಿ.ಕೃ.ಗೋಕಾಕ, ಗಿರೀಶ ಕಾರ್ನಾಡ ಸೇರಿದಂತೆ ಹಲವು ಮಹನೀಯರ ನೆಲೆ ಧಾರವಾಡ.
ಗದಗದಲ್ಲಿ ಗೆದ್ದವರು, ಸೋತವರು: ಚಿತ್ರಸಹಿತ ಮಾಹಿತಿ
ಹಲವು ಉದ್ಯಮಗಳನ್ನು ಕಂಡ ಧಾರವಾಡ ನಗರದಲ್ಲಿ ಕನ್ನಡವೇ ಬಹುಮುಖ್ಯಭಾಷೆ. ಉತ್ತರ ಕರ್ನಾಟಕ ಶೈಲಿಯ ಇಲ್ಲಿನ ಕನ್ನಡ, ಕರ್ನಾಟಕದ ಜಾನಪದ ಸೊಗಡಿಗೆ ಕಳೆ ನೀಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಧಾರವಾಡದ 7 ಕ್ಷೇತ್ರಗಳು ಅತ್ಯಂತ ಮಹತ್ವದ್ದು ಎನ್ನಿಸಿವೆ. ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯ ಮೆಲುಕು ಹಾಕುವ ಚಿತ್ರ ಮಾಹಿತಿ ನಿಮಗಾಗಿ ಇಲ್ಲಿದೆ.