1959-2018: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಗುರುತು
Recommended Video
ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನರಾದ ನಂತರ ಅವರ ಸಾಧನೆಗಳ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿಬರುತ್ತಿವೆ. ಮುಖ್ಯವಾಗಿ ಜನೌಷಧಿ ಮಳಿಗೆಗಳ ಆರಂಭ ಹಾಗೂ ಕೆಲವು ಮಾರಣಾಂತಿಕ ಕಾಯಿಲೆಗಳ ಔಷಧ ಹಾಗೂ ಉಪಕರಣಗಳ ಬೆಲೆಗಳಲ್ಲಿ ಕಡಿತದಲ್ಲಿ ಅನಂತಕುಮಾರ್ ರ ಪಾತ್ರವನ್ನು ನೆನಪಿಸಿಕೊಳ್ಳಲೇಬೇಕು.
ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅನಂತಕುಮಾರ್ ಅವರಿಗೆ ಮೊದಲು ಸಿಕ್ಕಿದ್ದು ರಸಗೊಬ್ಬರ ಹಾಗೂ ಔಷಧ ಖಾತೆ. ಆ ಸಮಯದಲ್ಲಿ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಜನೌಷಧ ಮಳಿಗೆಗಳ ಆರಂಭ ಹಾಗೂ ಕಡಿಮೆ ಬೆಲೆಗೆ ಸ್ಟೆಂಟ್ ಇತ್ಯಾದಿ ದೊರಕಿಸುವ ಪ್ರಯತ್ನಕ್ಕೆ ಭರ್ತಿ ಮೆಚ್ಚುಗೆ ಸಿಕ್ಕಿತು.
ಅಗತ್ಯಕ್ಕೆ ತಕ್ಕಂತೆ ರೈತರಿಗೆ ರಸಗೊಬ್ಬರ ದೊರೆಯುವಂತೆ ಮಾಡಿದ್ದು ಸಹ ಸಾಧನೆಯೇ. ಇನ್ನು ಸಂಸದೀಯ ಸಚಿವರಾಗಿ ಅನಂತಕುಮಾರ್ ಆ ನಂತರ ಜವಾಬ್ದಾರಿ ಹೊತ್ತರು. ಕಾವೇರಿ ವಿವಾದದ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತುವುದರಲ್ಲಿ ಸಹ ಅವರ ಪಾತ್ರ ಇತ್ತು. ಅವರ ಹುಟ್ಟು, ಬೆಳವಣಿಗೆ ಇತ್ಯಾದಿ ವಿಚಾರಗಳ ಬಗ್ಗೆ ಇಲ್ಲಿ ಇನ್ ಫೋ ಗ್ರಾಫಿಕ್ಸ್ ಇದೆ. ಓದಿ- ನೋಡಿ.