ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿಯೊಲ್ಮೆಯ ಕೋ ಧನ್ಯ ಯುಗಾದಿ : ಕುವೆಂಪು

By ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Ugadi portrayal in Kannada poems
ಮಾವಿನ ಬೇವಿನ ತೋರಣ ಕಟ್ಟು
ಬೇವು ಬೆಲ್ಲಗಳನೊಟ್ಟಿಗೆ ಕುಟ್ಟು
ಜೀವನವೆಲ್ಲಾ ಬೇವೂ ಬೆಲ್ಲ,
ಎರಡೂ ಸವಿವವನೆ ಕಲಿ ಮಲ್ಲ

ಕವಿಯೊಲ್ಮೆಯ ಕೋ ಧನ್ಯ ಯುಗಾದಿ
ಮರಳಲಿ ಇಂತಹ ನೂರು ಯುಗಾದಿ|
ಇದೆ ಕೋ ಹೊಸವರುಷದ ಸವಿಮುತ್ತು
ಅದಕೊಂದಾಲಿಂಗನದೊತ್ತು||
ರಸಋಷಿ ಕುವೆಂಪು (ಕುವೆಂಪು ಸಮಗ್ರ ಕಾವ್ಯ)

ನಮ್ಮ ಸಂಪ್ರದಾಯದಂತೆ ಈ ದಿನದಂದು ಸೇವಿಸುವ ಬೇವು-ಬೆಲ್ಲ ಜೀವನದ ಸುಖ - ದುಃಖ ಎರಡನ್ನೂ ಸಮವಾಗಿ ಸ್ವೀಕರಿಸುವ ಪ್ರತೀಕ. ಹಿಂದಿನ ವರುಷದ ಕಹಿ ಅನುಭವಗಳನ್ನು ಮರೆತು, ಮುಂಬರುವ ಭವಿಷ್ಯದ ಆನಂದಕ್ಕಾಗಿ ಯುಗಾದಿ ಹಬ್ಬ. ಈ ಜೀವನದ ನಿಜಾರ್ಥವನ್ನು ಕವಿವರ್ಯರು ಅತ್ಯಂತ ಸುಲಭವಾಗಿ ಅರ್ಥೈಸಿದ್ದಾರೆ. ಇದನ್ನು ನಾವು ಬಾಳಿನುದ್ದಕ್ಕೂ ಅಳವಡಿಸಿಕೊಳ್ಳಬೇಕು.

ಎಲ್ಲೆಲ್ಲೂ ಹೊಸ ಚಿಗುರು, ಹೊಸ ಹೂವು, ಹೊಸ ಫಲ, ಹೊಸ ನಿರೀಕ್ಷೆ, ನೀಲಾಕಾಶ, ಪ್ರಕೃತಿಯಲ್ಲಿ ನವ ಚೈತನ್ಯ. ಹೊಸ ವರ್ಷದ ಸ೦ಭ್ರಮ. ಎಲ್ಲಾ ಬಾಗಿಲುಗಳ ಹೊಸ್ತಿಲಿಗೂ ಮಾವಿನ ಎಲೆ ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ಮನೆಯ ಎಲ್ಲಾ ಕಡೆಗೂ ಸಿಗಿಸಿ "ಜೀವನವೆಲ್ಲಾ ಬೇವು ಬೆಲ್ಲ" ಎಂದು ಕೆಲವೇ ವಾಕ್ಯಗಳಲ್ಲಿ ಬದುಕಿನ ನಿಜಾರ್ಥವನ್ನು ಸಾರಿ, ಹೊಸವರುಷದ ಆಗಮನಕ್ಕೆ ಸಾಹಿತ್ಯಾಲಿಂಗನದ ಸವಿಮುತ್ತನ್ನಿತ್ತಿದ್ದಾರೆ.

English summary
Wish you all Happy and Prosperous New Year, Ugadi. On the occasion of Vijaya nama samvatsara Vani Ramdas from Singapore recalls the portrayal of Ugadi, hindu new year, by eminent poets of Karnataka Da Ra Bendre, Kuvempu, Putina, Shivarudrappa etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X