ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಂವತ್ಸರದ ಆಗಮನ- ಕವಿಗಳಿಗೆ ನಮನ

By ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

ಸಂಭವಾಮಿ ಯುಗೇ...ಯುಗೇ. ಯುಗಾದಿಯಂದು ಬೇವು-ಬೆಲ್ಲ ಸೇವಿಸುವಾಗ ಕೆಳಗಿನ ಈ ಶ್ಲೋಕಗಳನ್ನು ಉಚ್ಚರಿಸಿ ತಿನ್ನುವಂತೆ ಹಿರಿಯರು ಹೇಳುತ್ತಾರೆ.

"ಶತಾಯು ವಜ್ರ ದೇಹಾಯ ಸರ್ವ ಸಂಪತ್ಕರಾಯಚ ಸರ್ವರಿಷ್ಟ ವಿನಾಶಯ ನಿಂಭಕಂದಳ ಭಕ್ಷಣಂ". ಹೊಸತು ವರುಷ, ಹೊಸತು ಹರುಷ, ಹೊಸತು ಹೊಸತು ತರುವ ವಿಜಯ ನಾಮ ಸಂವತ್ಸರದ ಹೊಸವರುಷಕ್ಕೆ ಕೆಲವೊಂದು "ಯುಗಾದಿ" ಕವನಗಳ (ಆಯ್ದ ಪದಗಳ) ಪಠಣ, ಮನನ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|
ಹೊಂಗೆ ಹೂಂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ||

Ugadi portrayal in Kannada poems

ವರಕವಿ ಬೇಂದ್ರೆಯವರ ಈ ಕವನ ಮನಕೆ ಆಪ್ತವೆನಿಸುವುದು. "ಯುಗ ಯುಗಾದಿ ಕಳೆದರೂ" ಕವನದ ಶ್ರವಣವೂ, ಪಂಚಾಂಗ ಪಠಣದಷ್ಟೇ ಮುಖ್ಯ. ಯುಗಾದಿಗೆ ಯುಗಾದಿಯೇ ಸಾಟಿ. ಪ್ರತಿವರುಷವೂ ಪ್ರಭವದಿಂದ -ಅಕ್ಷಯದ ತನಕ 60 ಹೆಸರುಗಳಿಂದ ಆಚರಿಸುವ ಯುಗಾದಿ, ಮುಂಬರುವ ದಿನಗಳು "ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪು ಸೂಸಿ" ಒಳ್ಳೆಯದಾಗುವುದು ಎಂಬ "ಜೀವಕಳೆಯ ತರುವ" ಭರವಸೆಯ ಅಭಯ ಹಸ್ತ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...ಕುಲವಧು ಚಿತ್ರದಲಿ ಅಳವಡಿಸಿಕೊಂಡು, ಎಸ್. ಜಾನಕಿಯವರ ಕೋಕಿಲ ಕಂಠದಿಂದ ಹೊಮ್ಮಿರುವ, ಹೊಸ ಯುಗದ ಹುಟ್ಟು ಹಬ್ಬದ ಆಗಮನವನು ಸೂಚಿಸುವ ಈ ಕವನವನ್ನು ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೆ ಮತ್ತೆ ಮತ್ತೆ ಕೇಳಬೇನಿಸುತ್ತದೆ. ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ.

English summary
Wish you all Happy and Prosperous New Year, Ugadi. On the occasion of Vijaya nama samvatsara Vani Ramdas from Singapore recalls the portrayal of Ugadi, hindu new year, by eminent poets of Karnataka Da Ra Bendre, Kuvempu, Putina, Shivarudrappa etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X