ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹ-ಸೌಹಾರ್ದಕ್ಕೆ ಎಳ್ಳುಬೆಲ್ಲದ ಮಧುರಕೊಂಡಿ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Makara Sankranti : Bonding relationships
ಸುಗ್ಗಿಯ ಹಬ್ಬ ಸಂಕ್ರಾಂತಿ : ಕೃಷಿ ಆಧಾರಿತ ಭಾರತದಲಿ ಮಕರ ಸಂಕ್ರಮಣ ಸುಗ್ಗಿ ಹಬ್ಬ. ಅಕ್ಕಿ, ಕಬ್ಬು, ಅರಿಶಿಣ, ನೆಲಗಡಲೆ ಹೀಗೆ ಅನೇಕ ಬೆಳೆಗಳನ್ನು ಚಳಿಗಾಲದಲಿ ಬೆಳೆಯ ರೈತ ಭೂಮಿ ತಾಯಿಗೆ, ಫಸಲಿಗೆ, ಪ್ರಕೃತಿ ವಂದನೆ ಸಲ್ಲಿಸುವ ಸುಗ್ಗಿ ಹಬ್ಬ. ಮುಂದೆಯೂ ಬೆಳೆ ಸಮೃದ್ಧಿಯಾಗಲಿ ಎಂಬುದು ಇದರ ಹಿಂದಿನ ಉದ್ದೇಶ.

ಸಂಕ್ರಾಂತಿ ಸಮಯ ಚಳಿಗಾಲ. ಈ ಸಮಯದಲಿ ದೇಹಕ್ಕೆ ಹೆಚ್ಚಿನ ಜಿಡ್ಡಿನ ಅವಶ್ಯಕೆ ಹೆಚ್ಚು ಬೇಕಾಗುವುದು. ಆದರಿಂದ ಎಳ್ಳು, ಕೊಬ್ಬರಿ, ಕಡಲೇಕಾಯಿಗಳ ಇದರ ಜತೆಗೆ ಬ್ಲೆಲ ಅಥವಾ ಸಕ್ಕರೆ ಅಚ್ಚು ಸೇರಿಸಿ ಎಲ್ಲರಿಗೂ ಹಂಚಿ ತಿನ್ನುವುದು ವಾಡಿಕೆ. ಧಾನ್ಯಕ್ಕೆ ಹಾಗೂ ದಾನಕ್ಕೆ ಇದು ಪರ್ವಕಾಲ. ಎಳ್ಳು-ಬೆಲ್ಲ ಹಂಚುವ ಮೂಲಕ 'ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು’ ಎಂಬ ಗಾದೆ ಇದರಿಂದಾಗಿಯೇ ಇರಬೇಕು. ಇಷ್ಟೇ ಅಲ್ಲ ಎಳ್ಳು ಫಲವಂತಿಕೆಯ ಸಂಕೇತವಾದರೆ, ಕಬ್ಬು ಸಂಪತ್ತಿನ ಸಂಕೇತ. ಗಂಡು-ಹೆಣ್ಣಿನ ಬಾಳಿನಲಿ ಪರಸ್ಪರ ಸಾಮರಸ್ಯ, ಸ್ನೇಹ ಇರಬೇಕು ಸಂಸಾರದಲಿ ಸರಿಗಮದಂತೆ ಎಳ್ಳು ಬೆಲ್ಲದ ಬೆರಕೆ.

ಸುಗ್ಗಿ ಕಾಲದ ಈ ಹಬ್ಬದಂದು ಕರ್ನಾಟಕದ ಮನೆ, ಮನೆಗಳಲಿ ಹುಗ್ಗಿ ವಿಶೇಷ. ಎಳ್ಳು, ಕಡಲೆಕಾಯಿಬೀಜ, ಹುರಿಗಡಲೆ, ಕುಸರಿಕಾಳು, ಸಣ್ಣದಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲ ಮತ್ತು ಇತರೆ ವಸ್ತುಗಳನ್ನು ಮಿಶ್ರಣವನ್ನು ಕಲೆಸಿ ಎಳ್ಳು ಬೀರುತ್ತಾರೆ. ಎಳ್ಳು ಸ್ನೇಹ-ಸೌಹಾರ್ದಕ್ಕೆ-ಬೆಲ್ಲ ಮಧುರ ನುಡಿಗೆ ಇವುಗಳನ್ನು ಮನೆ-ಮನೆಗೆ ಹೋಗಿ ಬೀರುವುದರ ಮೂಲಕ ಬಾಂಧವ್ಯಗಳನ್ನು ಬೆಳೆಸುವುದು.

ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಗೋಪೂಜೆ ಹೆಚ್ಚು ಮಹತ್ವ. ರೈತಾಪಿಗಳು ಕತ್ತೆಯಂತೆ ದುಡಿದು ಧಾನ್ಯ ಸಮೃದ್ಧಿಗೆ ಕಾರಣವಾಗುವ ಮತ್ತು ಹಾಲು- ಹೈನುಗಳನ್ನು ನೀಡುವ ಗೋವುಗಳನ್ನು ಸಂಕ್ರಾಂತಿಯಂದು ಪೂಜಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಅಂದು ಅವುಗಳಿಗೆ ಸಿಂಗಾರ ಮಾಡಿ ಕಿಚ್ಚು ಹಾಯಿಸಿ ಆರತಿ ಮಾಡಿ ದೃಷ್ಟಿ ತೆಗೆಯುತ್ತಾರೆ.

English summary
Makara Sankranti, the festival of happiness, prosperity and togetherness, is celebrated all over Karnataka and many parts of India in the month of January. It is harvesting time for the farmers. Everyone worships Sun, earth, bullocks, crops when the Sun god changes his trajectory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X