ಸ್ನೇಹ-ಸೌಹಾರ್ದಕ್ಕೆ ಎಳ್ಳುಬೆಲ್ಲದ ಮಧುರಕೊಂಡಿ
ಸಂಕ್ರಾಂತಿ ಸಮಯ ಚಳಿಗಾಲ. ಈ ಸಮಯದಲಿ ದೇಹಕ್ಕೆ ಹೆಚ್ಚಿನ ಜಿಡ್ಡಿನ ಅವಶ್ಯಕೆ ಹೆಚ್ಚು ಬೇಕಾಗುವುದು. ಆದರಿಂದ ಎಳ್ಳು, ಕೊಬ್ಬರಿ, ಕಡಲೇಕಾಯಿಗಳ ಇದರ ಜತೆಗೆ ಬ್ಲೆಲ ಅಥವಾ ಸಕ್ಕರೆ ಅಚ್ಚು ಸೇರಿಸಿ ಎಲ್ಲರಿಗೂ ಹಂಚಿ ತಿನ್ನುವುದು ವಾಡಿಕೆ. ಧಾನ್ಯಕ್ಕೆ ಹಾಗೂ ದಾನಕ್ಕೆ ಇದು ಪರ್ವಕಾಲ. ಎಳ್ಳು-ಬೆಲ್ಲ ಹಂಚುವ ಮೂಲಕ 'ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು’ ಎಂಬ ಗಾದೆ ಇದರಿಂದಾಗಿಯೇ ಇರಬೇಕು. ಇಷ್ಟೇ ಅಲ್ಲ ಎಳ್ಳು ಫಲವಂತಿಕೆಯ ಸಂಕೇತವಾದರೆ, ಕಬ್ಬು ಸಂಪತ್ತಿನ ಸಂಕೇತ. ಗಂಡು-ಹೆಣ್ಣಿನ ಬಾಳಿನಲಿ ಪರಸ್ಪರ ಸಾಮರಸ್ಯ, ಸ್ನೇಹ ಇರಬೇಕು ಸಂಸಾರದಲಿ ಸರಿಗಮದಂತೆ ಎಳ್ಳು ಬೆಲ್ಲದ ಬೆರಕೆ.
ಸುಗ್ಗಿ ಕಾಲದ ಈ ಹಬ್ಬದಂದು ಕರ್ನಾಟಕದ ಮನೆ, ಮನೆಗಳಲಿ ಹುಗ್ಗಿ ವಿಶೇಷ. ಎಳ್ಳು, ಕಡಲೆಕಾಯಿಬೀಜ, ಹುರಿಗಡಲೆ, ಕುಸರಿಕಾಳು, ಸಣ್ಣದಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲ ಮತ್ತು ಇತರೆ ವಸ್ತುಗಳನ್ನು ಮಿಶ್ರಣವನ್ನು ಕಲೆಸಿ ಎಳ್ಳು ಬೀರುತ್ತಾರೆ. ಎಳ್ಳು ಸ್ನೇಹ-ಸೌಹಾರ್ದಕ್ಕೆ-ಬೆಲ್ಲ ಮಧುರ ನುಡಿಗೆ ಇವುಗಳನ್ನು ಮನೆ-ಮನೆಗೆ ಹೋಗಿ ಬೀರುವುದರ ಮೂಲಕ ಬಾಂಧವ್ಯಗಳನ್ನು ಬೆಳೆಸುವುದು.
ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಗೋಪೂಜೆ ಹೆಚ್ಚು ಮಹತ್ವ. ರೈತಾಪಿಗಳು ಕತ್ತೆಯಂತೆ ದುಡಿದು ಧಾನ್ಯ ಸಮೃದ್ಧಿಗೆ ಕಾರಣವಾಗುವ ಮತ್ತು ಹಾಲು- ಹೈನುಗಳನ್ನು ನೀಡುವ ಗೋವುಗಳನ್ನು ಸಂಕ್ರಾಂತಿಯಂದು ಪೂಜಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಅಂದು ಅವುಗಳಿಗೆ ಸಿಂಗಾರ ಮಾಡಿ ಕಿಚ್ಚು ಹಾಯಿಸಿ ಆರತಿ ಮಾಡಿ ದೃಷ್ಟಿ ತೆಗೆಯುತ್ತಾರೆ.