ಎಳ್ಳಿನಲ್ಲೇನಿದೆ ?ತಿನ್ನುವುದರಿಂದ ಏನು ಲಾಭ?
ಜ್ಯೋತಿಷ
ಶಾಸ್ತ್ರದ
ಪ್ರಕಾರ
ಶನಿ
ಶರೀರದಲ್ಲಿರುವ
ಜೀವನಾಡಿಗೆ
ಕಾರಕ.
ಈ
ಜೀವನಾಡಿಯ
ಒಂದು
ಶಾಖೆಯು
ಹೃದಯ
ಬಡಿತ
ಮತ್ತು
ರಕ್ತಚಲನೆಗಳನ್ನು
ನಿಯಂತ್ರಿಸುತ್ತದೆ.
ವೈದ್ಯ
ಶಾಸ್ತ್ರದ
ಪ್ರಕಾರ
ಧನುರ್ಮಾಸದ
ಚಳಿ
ಮುಗಿಯುವ
ವೇಳೆಗೆ
ಶರೀರದ
ಕೊಬ್ಬಿನ
ಅಂಶವು
ಕಮ್ಮಿಯಾಗಿರುವುದರಿಂದ
ಮಕರ
ಮಾಸ
ಶುರುವಾಗುವಾಗಲೇ
ಈ
ಕೊಬ್ಬಿನ
ಕೊರತೆಯನ್ನು
ಸರಿದೂಗಿಸಬೇಕು.
ಇದರಿಂದ
ಸೂರ್ಯನ
ಪ್ರಭಾವವನ್ನು
ಮುಂದೆ
ಎದುರಿಸಲು
ಶರೀರದಲ್ಲಿ
ಮುಖ್ಯವಾದ
ಜೀವನಾಡಿಯು
ಸುಗಮವಾಗಿ
ಕೆಲಸ
ಮಾಡುವುದರ
ಮೂಲಕ
ಹೃದಯದ
ಕ್ರಿಯೆಯೂ
ಸರಿಯಾಗಿರುವಂತೆ
ಮಾಡುವ
ಎಳ್ಳು
ಬೆಲ್ಲವನ್ನು
ಸೇವನೆ
ಮಾಡುವಂತೆ
ನಿಯಮ
ಮಾಡಿದ್ದಾರೆ.
ಪುಷ್ಯ ನಕ್ಷತ್ರವು ಶನಿಯ ನಕ್ಷತ್ರ. ಶನಿಗೆ ಯಮ ಅಧಿದೇವತೆ. ಯಮ ಎಂದರೆ ಸಂಯಮ ಎಂದರ್ಥ. ಇದು ಜೀವನಾಡಿಯ ಮೂಲಕ ಮಾತ್ರ ಹತೋಟಿ ಸಾಧ್ಯ. ಜೀವನಾಡಿಯ ಈ ಕೆಲಸಕ್ಕೆ ಕೊಬ್ಬಿನ ಅಂಶ ಕಮ್ಮಿಯಾದರೆ ನಿಶ್ಯಕ್ತಿ, ಅನಾರೋಗ್ಯ ಇತ್ಯಾದಿಗಳು ಉಂಟಾಗುತ್ತವೆ. ಇದನ್ನು ನಿವಾರಿಸುವುದೇ ಎಳ್ಳು ಬೆಲ್ಲದ ಸೇವನೆ ಉದ್ದೇಶ. ಗರುಡ ಪುರಾಣದಲ್ಲಿ ನಾಭಿಸ್ಥಾನವು ಶನಿ ಸ್ಥಾನವೆಂದು ಹೇಳಲ್ಪಟ್ಟಿದೆ. ನಾಭಿ ಕಮಲದಿಂದ ಸೃಷ್ಟಿಕರ್ತನಾದ ಬ್ರಹ್ಮ ಹುಟ್ಟಿದನೆಂದು ಪುರಾಣ ಸಾರಿದೆ. ಯಾವಾಗ ಶರೀರದ ಈ ಪ್ರದೇಶವನ್ನು ಶನಿ ಪ್ರದೇಶವೆಂದು ಹೇಳಿದರೋ ಆಗ ಈ ಪ್ರದೇಶಕ್ಕೆಲ್ಲ ಮಹತ್ವಕ್ಕೆ ಶನಿಕಾರಕನೆಂದಾಯಿತು. ಈ ತಿಂಗಳಿನಲ್ಲಿ ಎಳ್ಳು ತಿಂದರೆ ಶನಿಯ ಉಪದ್ರವ ಶಮನವಾಗುತ್ತದೆಂಬ ತಾತ್ಪರ್ಯ.