ರಾಜ್ಯೋತ್ಸವ ಸಂದರ್ಭದಲ್ಲಿ ನಾಡ ಗೀತೆ ಓದಿ, ಕೇಳಿ
ಬೆಂಗಳೂರು, ಅ.31: ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡ ಗೀತೆಯನ್ನಾಗಿ ಕರ್ನಾಟಕ ಸರ್ಕಾರ 2004ರಲ್ಲಿ ಘೋಷಿಸಿತು.
ಕೆ.ವಿ ಪುಟ್ಟಪ್ಪ(ಕುವೆಂಪು ) ಅವರು ಈ ಪದ್ಯವನ್ನು 1924 ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಬರೆದಿದ್ದರು ಎಂಬುದು ವಿಶೇಷ. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಘೋಷಿಸಲಾಯಿತು.
ನಾಡಗೀತೆ
ವಿವಾದ:
ಮಧ್ವಾಚಾರ್ಯರ
ಹೆಸರು
ಸೇರ್ಪಡೆ
ಮತ್ತು
ಶಂಕರಾಚಾರ್ಯ,
ರಾಮಾನುಜಾಚಾರ್ಯ
ಮತ್ತು
ಬಸವೇಶ್ವರರ
ಹೆಸರು
ಕೈ
ಬಿಡಬೇಕೆಂಬ
ವಿಚಾರಗಳ
ಕುರಿತು
ಧರ್ಮ
ಗುರುಗಳು,
ಸಾಹಿತಿಗಳು
ಮತ್ತು
ರಾಜಕಾರಣಿಗಳ
ನೆಡುವೆ
ತೀವ್ರ
ಚರ್ಚೆ
ನಡೆದು
ವಿಷಯ
ವಿವಾದ
ಉಂಟಾಗಿತ್ತು.
ಕೆಲವರು
ಈ
ಗೀತೆ
ನಾಡ
ಗೀತೆಯಾಗಲು
ಅರ್ಹವಾಗಿಲ್ಲವೆಂದು
ಕೂಡ
ವಾದಿಸಿದರು.
ಇತ್ತೀಚೆಗೆ
ಪಾಟೀಲ
ಪುಟ್ಟಪ್ಪ
ಅವರು
ಈ
ಗೀತೆಯಲ್ಲಿ
ಮಹಿಳೆಯರಿಗೆ
ಸ್ಥಾನವಿಲ್ಲ
ಕಿತ್ತೂರು
ಚೆನ್ನಮ್ಮಳ
ಹೆಸರು
ಬರಬೇಕು
ಎಂದು
ವಾದಿಸಿದರು.
ಅದರೆ,
ಮೂಲ
ಪದ್ಯದಲ್ಲಿ
ಯಾವುದೇ
ಬದಲಾವಣೆ
ಮಾಡದೆ
ಹಾಗೆ
ಬಳಸುವಂತೆ
ಕರ್ನಾಟಕ
ಸರ್ಕಾರ
ಆಜ್ಞೆ
ಹೊರಡಿಸಿತು.
[ರಾಜ್ಯದ
ರೈತರ
ನಾಡ
ಗೀತೆ
ಇಲ್ಲಿದೆ
ಓದಿ]
ಸಂಗೀತ ಸಂಯೋಜನೆ: ಕುವೆಂಪು ವಿರಚಿತ ಗೀತೆಗೆ ಮೊಟ್ಟ ಮೊದಲ ಬಾರಿಗೆ ಮೈಸೂರು ಅನಂತ ಸ್ವಾಮಿ ಅವರು ರಾಗ ಸಂಯೋಜನೆ ಮಾಡಿದರು. ನಂತರದ ದಿನಗಳಲ್ಲಿ ಸಿ. ಅಶ್ವಥ್ ಅವರ ಸಂಯೋಜನೆ ಜನಪ್ರಿಯತೆ ಗಳಿಸಿತು. ಯಾರ ರಾಗ ಸಂಯೋಜನೆ ಬಳಸಬೇಕು ಎಂಬುದರ ಬಗ್ಗೆ ಕೂಡಾ ವಿವಾದ ಉಂಟಾಗಿತ್ತು. ಪ್ರೊ. ಶಿವರುದ್ರಪ್ಪ ಅವರ ಸಮಿತಿ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆಯನ್ನು ಶಿಫಾರಸು ಮಾಡಿತ್ತು.
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಜಯ
ಸುಂದರ
ನದಿ
ವನಗಳ
ನಾಡೇ,
ಜಯ
ಹೇ
ರಸಋಷಿಗಳ
ಬೀಡೆ!
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಭೂದೇವಿಯ
ಮಕುಟದ
ನವಮಣಿಯೆ,
ಗಂಧದ
ಚಂದದ
ಹೊನ್ನಿನ
ಗಣಿಯೆ;
ರಾಘವ
ಮಧುಸೂಧನರವತರಿಸಿದ
ಭಾರತ
ಜನನಿಯ
ತನುಜಾತೆ
!
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಜನನಿಯ
ಜೋಗುಳ
ವೇದದ
ಘೋಷ,
ಜನನಿಗೆ
ಜೀವವು
ನಿನ್ನಾವೇಶ,
ಹಸುರಿನ
ಗಿರಿಗಳ
ಸಾಲೇ,
ನಿನ್ನಯ
ಕೊರಳಿನ
ಮಾಲೆ,
ಕಪಿಲ
ಪತಂಜಲ
ಗೌತಮ
ಜಿನನುತ,
ಭಾರತ
ಜನನಿಯ
ತನುಜಾತೆ
!
ಜಯ
ಹೇ
ಕರ್ನಾಟಕ
ಮಾತೆ!
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಶಂಕರ
ರಾಮಾನುಜ
ವಿದ್ಯಾರಣ್ಯ,
ಬಸವೇಶ್ವರ
ಮಧ್ವರ
ದಿವ್ಯಾರಣ್ಯ
ರನ್ನ
ಷಡಕ್ಷರಿ
ಪೊನ್ನ,
ಪಂಪ
ಲಕುಮಿಪತಿ
ಜನ್ನ
ಕುಮಾರವ್ಯಾಸರ
ಮಂಗಳ
ಧಾಮ,
ಕವಿ
ಕೋಗಿಲೆಗಳ
ಪುಣ್ಯಾರಾಮ
ನಾನಕ
ರಾಮಾ
ನಂದ
ಕಬೀರರ
ಜಯ
ಹೇ
ಕರ್ನಾಟಕ
ಮಾತೆ!
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ತೈಲಪ
ಹೊಯ್ಸಳರಾಳಿದ
ನಾಡೇ,
ಡಂಕಣ
ಜಕಣರ
ನೆಚ್ಚಿನ
ಬೀಡೆ
ಕೃಷ್ಣ
ಶರಾವತಿ
ತುಂಗಾ,
ಕಾವೇರಿಯ
ವರ
ರಂಗಾ
ಚೈತನ್ಯ
ಪರಮಹಂಸ
ವಿವೇಕರ,
ಭಾರತ
ಜನನಿಯ
ತನುಜಾತೆ
!
ಜಯ
ಹೇ
ಕರ್ನಾಟಕ
ಮಾತೆ!
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಸರ್ವ
ಜನಾಂಗದ
ಶಾಂತಿಯ
ತೋಟ,
ರಸಿಕರ
ಕಂಗಳ
ಸೆಳೆಯುವ
ನೋಟ
ಹಿಂದೂ
ಕ್ರೈಸ್ತ
ಮುಸಲ್ಮಾನ,
ಪಾರಸಿಕ
ಜೈನರುದ್ಯಾನ
ಜನಕನ
ಹೋಲುವ
ದೊರೆಗಳ
ಧಾಮ,
ಗಾಯಕ
ವೈಣಿಕರಾರಾಮ
ಕನ್ನಡ
ನುಡಿ
ಕುಣಿದಾಡುವ
ಗೇಹ,
ಕನ್ನಡ
ತಾಯಿಯ
ಮಕ್ಕಳ
ದೇಹ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ
ಜಯ
ಸುಂದರ
ನದಿ
ವನಗಳ
ನಾಡೇ,
ಜಯ
ಹೇ
ರಸಋಷಿಗಳ
ಬೀಡೆ!
ಜಯ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಈ ಪುಟವನ್ನು ನಿಮ್ಮ ಸ್ನೇಹಿತರು, ಕುಟುಂಬವರ್ಗ, ಸಹದ್ಯೋಗಿಗಳೊಂದಿಗೆ ಹಂಚಿಕೊಂಡು 59ನೇ ಕನ್ನಡ ರಾಜ್ಯೋತ್ಸವದ ಸಂತೋಷವನ್ನು ಇಮ್ಮಡಿಗೊಳಿಸಿ-ಧನ್ಯವಾದ, ಸಂಪಾದಕ Onendia.com