ವಚನಗಳಲ್ಲಿ ನಾಮಾಮೃತ ತುಂಬಿದ ಅಣ್ಣ ಬಸವಣ್ಣ
"ಇವನಾರವ, ಇವನಾರವ ಎಂದೆನ್ನದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ" ಎಂದು, ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದರು. ತನ್ನಿಮ್ಮಿತ್ತ ಭಕ್ತಿ ಭಂಡಾರಿ ಬಸವಣ್ಣ ಅವರ ಒಂದೆರಡು ವಚನಗಳು ಓದುಗರ ಸಮಕ್ಷಯಕ್ಕೆ...
ನೆಲವೊಂದೇ
ಹೊಲಗೇರಿ
ಶಿವಾಲಯಕ್ಕೆ
ಜಲವೊಂದೇ
ಶೌಚಾ
ಚಮನಕ್ಕೆ
!
ಕುಲವೊಂದೇ
ತನ್ನ
ತಾನರಿದವಂಗೆ
!
ಫಲವೊಂದೇ
ಫಡದರ್ಶನ
ಮುಕ್ತಿಗೆ
ನಬಿಲವೊಂದೇ
ಕೂಡಲ
ಸಂಗಮದೇವ
ನಿಮ್ಮನರಿದವಂಗೆ
ಅರ್ಥ:
ನಾವು
ಆಚರಿಸುವ
ಆಚರಣೆಗಳಿಂದ
ಮಾತ್ರ
ಉತ್ತಮ,
ಅಧಮರೆನಿಸಿಕೊಳ್ಳುತ್ತೇವೆ
ಜಾತಿಯಿಂದಲ್ಲ.
ನೆಲ
ಒಂದೇ
ಅಲ್ಲಿ
ಶಿವಾಲಯಕಟ್ಟಿದರೆ
ಪುಣ್ಯಕ್ಷೇತ್ರ,
ದುರಾಚಾರಿಗಳ
ತಾಣವಾದರೆ
ಅದು
ಹೊಲಗೇರಿ.
ನೀರು
ಒಂದೇ
ಅದು
ಪೂಜೆಗೆ
ಬಳಸಿದರೆ
ತೀರ್ಥ,
ಶೌಚಕ್ಕೆ
ಬಳಸಿದರೆ
ಕೊಳಕು
ನೀರು.
ಅಂತೆಯೇ
ಕಾರ್ಯದಿಂದ
ಮಾನವ
ಕುಲವೊಂದೆ
ಉತ್ತಮ.
ಜ್ಞಾನದಿಂದ
ಉತ್ತಮ,
ಅಜ್ಞಾನದಿಂದ
ಅಧಮ
ಆಯಾಜಾತಿಗಳ
ಗುರಿ
ಒಂದೇ
ಅದುವೇ
ಮುಕ್ತಿ
ಮೇಲು
ಕೀಳೆಂದು
ಜಾತಿಯನ್ನು
ವಿಂಗಡಿಸುವದನ್ನು
ಈ
ವಚನದಲ್ಲಿ
ಖಂಡಿಸಿದ್ದಾರೆ.
-----------------
ಹಬ್ಬಕ್ಕೆ
ತಂದ
ಹರಕೆಯ
ಕುರಿ
ತೋರಣಕ್ಕೆ
ತಂದ
ತಳಿರ
ಮೇಯಿತ್ತು!
ಕೊಂದಿಹರೆಂಬುದನರಿಯದೆ
ಬೆಂದೊಡಲ
ಹೊರೆವುತ್ತಲಿದೆ?
ಅದಂದೆ
ಹುಟ್ಟಿತ್ತು
ಅದಂದೇ
ಹೊಂದಿತ್ತು!!
ಕೊಂದವರುಳಿವರೆ
ಕೂಡಲ
ಸಂಗಮದೇವ
ಅರ್ಥ:
ಬಲಿ
ಕೊಡಲೆಂದು
ತಂದ
ಕುರಿಯು
ತನಗೆ
ಮುಂದೆ
ಸಾವಿದೆ
ಎಂದರಿಯದೆ
ಬಾಗಿಲಿಗೆ
ಕಟ್ಟಿದ
ತೋರಣದ
ಹಸಿರೆಲೆಗಳನ್ನು
ತಿನ್ನುತ್ತಿರುವುದು.
ತನ್ನೆದುರಲ್ಲಿ
ತನ್ನ
ಕೊರಳನ್ನು
ಕತ್ತರಿಸಲು
ಕತ್ತಿ
ಮಸೆಯುತ್ತಿರುವರು
ಎಂಬ
ಅರಿವು
ಅದಕ್ಕಿಲ್ಲ.
ಈ
ಮಾನವನಾದರೂ
ಬಲಿ
ಕುರಿಯಂತೆ,
ಸಾವು
ಈಗಲೋ
ಆಗಲೋ
ಬರಲು
ಸಿದ್ಧವಾಗಿದ್ದರೂ,
ಸುಖಕ್ಕೆ
ಬಲಿಗಳಂತಹ
ಹೀನ
ಕಾರ್ಯಗಳನ್ನೆಸಗುತ್ತಿರುವನು.
---------
ನಿಮ್ಮೆಲ್ಲರ ಒಳ್ಳೆಯ ಸದುಪಯೋಗ ಆಶಯಗಳು ಅಕ್ಷಯವಾಗಿ ಬೆಳೆಯಲಿ ಎಂದು ಆಶಿಸುತ್ತ ಅಕ್ಷಯ ತದಿಗೆ ಮತ್ತು ಬಸವ ಜಯಂತಿಯ ಶುಭಾಶಯಗಳು....