ರಂಜಾನ್ ಎಂದರೆ ಉಪವಾಸ ಮಾತ್ರವಲ್ಲ
ಈ ನೀತಿಯನ್ನು ಪಾಲಿಸಿದರೆ ಸಮುದಾಯದಲ್ಲಿರುವ ಅಸಮತೋಲ ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ, ಕಡುಬಡತನ ನಿವಾರಣೆಯಾಗುತ್ತದೆ. ಒಬ್ಬ ಬಡ ಮುಸ್ಲಿಂ ತನ್ನ ಮಕ್ಕಳನ್ನು ಶಾಲೆಗೆ ಕಳಿಸುತ್ತಾನೆ. ಅವರು ಸುಶಿಕ್ಷಿತರಾದರೆ ವಿವೇಕ ಮತ್ತು ವಿವೇಚನೆ ದಕ್ಕುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ರಂಜಾನ್ ಹಬ್ಬದಲ್ಲಿ ಉಪವಾಸದಷ್ಟೇ ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮವೆಂದರೆ ದಾನ. ಅಗತ್ಯ ಇರುವವರಿಗೆ ಎರಡು ಕೆಜಿ ಗೋಧಿ ಅಥವಾ ಅದಕ್ಕೆ ತತ್ಸಮಾನವಾದ ವಸ್ತುಪದಾರ್ಥಗಳನ್ನು ದಾನ ಮಾಡಬೇಕೆಂಬ ಆಚರಣೆ ತಲತಲಾಂತರದಿಂದ ಇದೆ. ಗೋಧಿಯೇ ಏಕೆ ಕೊಡಬೇಕು ಎಂದು ತಮಗೆ ಗೊತ್ತಿಲ್ಲ ಎಂದು ಮಕ್ಸೂದ್ ಹೇಳಿದರು.
ಬುಧವಾರ (ಆ.31) ಬೆಳಿಗ್ಗೆ ಈದ್-ಉಲ್-ಫಿತರ್ ಆಚರಣೆ (ಫಿತರ್ ಎಂದರೆ ದಾನ, charity) [2012ನೇ ಇಸ್ವಿಯ ರಂಜಾನ್ ಆಗಸ್ಟ್ 20, ಸೋಮವಾರ] ಬೆಳಿಗ್ಗೆ ಏಳುವರೆಯಿಂದ ಹನ್ನೊಂದುವರೆವರೆಗೆ ಇರುತ್ತದೆ. ಕರ್ನಾಟಕದಲ್ಲಿ ಒಟ್ಟು ಐದು ನೂರು ಜಾಗೆಗಳಲ್ಲಿ ಈದ್-ಉಲ್-ಫಿತರ್ ನಮಾಜ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಲ್ಲೆ ಇನ್ನೂರು ಜಾಗೆಗಳಿವೆ. ಮಸೀದಿಗಳ ಪ್ರಾರ್ಥನಾ ಸಭಾಂಗಣ ಮತ್ತು ಮಸೀದಿ ಮೈದಾನಗಳು ನಮಾಜ್ ತಾಣಗಳಾಗಲಿವೆ. ಈ ತಾಣಗಳ ಪೂರ್ಣ ವಿವರಗಳು ಮುಸ್ಲಿಮರು ಹೆಚ್ಚಾಗಿ ಓದುವ ಬೆಂಗಳೂರಿಂದ ಪ್ರಕಟವಾಗುವ ಡೈಲಿ ಸಲಾರ್ ಪತ್ರಿಕೆಯಲ್ಲಿ ಲಭ್ಯವಿದೆ.