Navratri 2023 Day 2: ನವರಾತ್ರಿ 2ನೇ ದಿನ ಅ.16, ಬ್ರಹ್ಮಚಾರಿಣಿ ಪೂಜೆ ಮಹತ್ವ, ಮುಹೂರ್ತ, ಮಂತ್ರ
ನವರಾತ್ರಿ ಹಬ್ಬದ ಆಚರಣೆ ಶುರುವಾಗಿದೆ. ಎಲ್ಲೆಡೆ ಹಬ್ಬದ ಕಳೆ ಕಟ್ಟಿದೆ. ಒಂಬತ್ತು ದಿನಗಳ ಹಬ್ಬ ನವರಾತ್ರಿ ಹಿಂದೂಗಳಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯನ್ನು ವಸಂತ ಮತ್ತು ಶರತ್ಕಾಲದಲ್ಲಿ ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿಯನ್ನು ವಸಂತಕಾಲದಲ್ಲಿ ಆಚರಿಸಲಾಗುತ್ತದೆ. ಮತ್ತೊಂದೆಡೆ ದಕ್ಷಿಣ ಭಾರತದಲ್ಲಿ ಶರದ್ ನವರಾತ್ರಿಯನ್ನು ಶರತ್ಕಾಲದಲ್ಲಿ ಆಚರಿಸಲಾಗುತ್ತದೆ. ಶರದ್ ನವರಾತ್ರಿಯಲ್ಲಿ, ಭಕ್ತರು ನವದುರ್ಗಾ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ.
ಈ ವರ್ಷ, ಶರದ್ ನವರಾತ್ರಿಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಅಕ್ಟೋಬರ್ 15 ರಿಂದ ಅಕ್ಟೋಬರ್ 23ರವರೆಗೆ ಆಚರಿಸಲಾಗುತ್ತದೆ.
ನವರಾತ್ರಿಯ ಎರಡನೇ ದಿನ, ನವದುರ್ಗೆಯ ಎರಡನೇ ರೂಪವಾದ ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಅವಳು ಬಿಳಿ ಬಟ್ಟೆಗಳಲ್ಲಿ ಶಾಂತಿಯುತ ಮತ್ತು ಆಹ್ಲಾದಕರ ನೋಟದಲ್ಲಿ ಅಲಂಕರಿಸಲ್ಪಡುತ್ತಾಳೆ. ಅವಳು ಒಂದು ಕೈಯಲ್ಲಿ ಜಪ ಮಾಲಾ (ಮಣಿಗಳ ದಾರ) ಮತ್ತು ಇನ್ನೊಂದು ಕೈಯಲ್ಲಿ ಸಾಂಪ್ರದಾಯಿಕ ನೀರಿನ ಮಡಕೆಯಾದ ಕಮಂಡಲವನ್ನು ಹಿಡಿದಿದ್ದಾಳೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಬ್ರಹ್ಮಚಾರಿಣಿ ದೇವಿಯು ಶಿವನನ್ನು ಸಮಾಧಾನಪಡಿಸಲು ತಪಸ್ಸು ಮಾಡಿದಳು.
ದಿನಾಂಕ ಮತ್ತು ಮುಹೂರ್ತ
ನವರಾತ್ರಿಯ ಎರಡನೇ ದಿನವನ್ನು ಅಕ್ಟೋಬರ್ 16 ರಂದು ಆಚರಿಸಲಾಗುತ್ತದೆ.ಅಕ್ಟೋಬರ್ 16, 2023 - 01:15 AMಕ್ಕೆ ದ್ವಿತೀಯ ತಿಥಿ ಆರಂಭವಾಗುತ್ತದೆ. ಅಕ್ಟೋಬರ್ 17, 2023 - 01:28 AM ದ್ವಿತೀಯ ತಿಥಿ ಕೊನೆಗೊಳ್ಳುತ್ತದೆ.ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆಯಿಂದ ತಪಸ್ಸು, ವೈರಾಗ್ಯ, ಸದಾಚಾರ, ಸಂಯಮಗಳು ಪ್ರಾಪ್ತಿಯಾಗುತ್ತವೆ.
ಬಣ್ಣ, ಇಂದು ಜಪಿಸುವ ಮಂತ್ರ ಮತ್ತು ಮಹತ್ವ
ಕೆಂಪು ಬಣ್ಣವು ಉಗ್ರ ಸ್ವಭಾವ ಮತ್ತು ಕ್ರೋಧದೊಂದಿಗೆ ಸಂಬಂಧಿಸಿದೆ.
ಮಂತ್ರ:-
ಓಂ ದಧಾನ ಕರಪದ್ಮಭ್ಯಾಮಕ್ಷಮಾಲಾ ಕಮಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ
ಓಂ ದೇವೀ ಬ್ರಹ್ಮಚಾರಿಣ್ಯೈ ನಮಃ ॥
ಮಹತ್ವ:-
ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷ ಪ್ರಾಪ್ತಿಯಾಗಲಿದೆ ಎಂದು ನಂಬಲಾಗುತ್ತದೆ. ಅವಳು ಅದೃಷ್ಟವನ್ನು ನಿಯಂತ್ರಿಸುತ್ತಾಳೆ ಮತ್ತು ತನ್ನ ಅನುಯಾಯಿಗಳಿಗೆ ಬುದ್ಧಿವಂತಿಕೆ ಮತ್ತು ಸಂತೋಷವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.
ಪೂಜಾ ವಿಧಿ
ಈ ದಿನ, ಭಕ್ತರು ಬೆಳಗಿನ ಪೂಜೆಗೆ ಹಾಜರಾಗಲು ಬೇಗನೆ ಎಚ್ಚರಗೊಳ್ಳುತ್ತಾರೆ.
ಅವರು ಪೂಜೆಗಾಗಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸುತ್ತಾರೆ.
ಬ್ರಹ್ಮಚಾರಿಣಿ ದೇವಿಯ ವಿಗ್ರಹವನ್ನು ಜೇನುತುಪ್ಪ ಮತ್ತು ಹಾಲಿನಲ್ಲಿ ಅದ್ದಿ ಮತ್ತು ವಿಗ್ರಹದ ಹಣೆಗೆ ಸಿಂಧೂರವನ್ನು ಲೇಪಿಸಲಾಗುತ್ತದೆ.
ಪೂಜೆಯ ಸಮಯದಲ್ಲಿ ಭಕ್ತರು ಬ್ರಹ್ಮಚಾರಿಣಿ ದೇವಿಗೆ ಹೂವು, ಶ್ರೀಗಂಧ, ಹಾಲು, ಅನ್ನ, ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸುತ್ತಾರೆ.
ಪೂಜೆಯ ಸಮಯದಲ್ಲಿ ಅವಳನ್ನು ದಾಸವಾಳ ಮತ್ತು ಬಿಳಿ ಕಮಲದ ಹೂವುಗಳಿಂದ ಪೂಜಿಸಲಾಗುತ್ತದೆ.
ಪಾರ್ವತಿ ದೇವಿ ಬ್ರಹ್ಮಚಾರಿಣಿ ಆದದ್ದು ಹೇಗೆ?
ಬ್ರಹ್ಮಚಾರಿಣಿ ದುರ್ಗಾದೇವಿಯ ಎರಡನೇ ಅವತಾರ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ. ಬ್ರಹ್ಮಚಾರಿಣಿ ಎಂಬ ಹೆಸರು ಎರಡು ಪದಗಳಿಂದ ಬಂದಿದೆ. 'ಬ್ರಹ್ಮ' ಎಂದರೆ ತಸ್ಸು, 'ಚಾರಿಣಿ' ಎಂದರೆ ಕಟ್ಟಾ ಸ್ತ್ರೀ ಅನುಯಾಯಿ. ದಕ್ಷಮಹಾರಾಜನ ಮಗಳಾದ ಸತೀ ದೇವಿ ಯಜ್ಞದ ಬೆಂಕಿಗೆ ಆಹುತಿಯಾದ ನಂತರ, ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಪಾರ್ವತಿಯಾಗಿ ಜನಿಸುತ್ತಾಳೆ. ಈ ಜನ್ಮದಲ್ಲೂ ಶಿವನನ್ನೇ ಮದುವೆಯಾಗಲು ಬಯಸಿದ ಪಾರ್ವತಿಯು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಮಾಡಲಾರಂಭಿಸುತ್ತಾಳೆ.
ಸಾವಿರ ವರ್ಷಗಳವರೆಗೂ ಹಣ್ಣು ಮತ್ತು ಹೂವುಗಳು ಹಾಗೂ ಎಲೆಗಳನ್ನು ಸೇವಿಸುತ್ತಾಳೆ. ತನ್ನ ತಪಸ್ಸನ್ನು ಯಶಸ್ವಿಗೊಳಿಸುವ ಸಲುವಾಗಿ ಆಕಾಶವನ್ನೇ ಚಪ್ಪರವಾಗಿಸಿ ಕಾಡಿನ ನೆಲದ ಮೇಲೆಯೇ ಮಲಗುತ್ತಾಳೆ. ತನ್ನ ಕಠಿಣ ತಪಸ್ಸಿನ ರೀತಿಯಿಂದಲೇ ಪಾರ್ವತಿಯು ಬ್ರಹ್ಮಚಾರಿಣಿ ಎಂಬ ಹೆಸರನ್ನು ಪಡೆಯುತ್ತಾಳೆ. ಕೊನೆಯಲ್ಲಿ ಬ್ರಹ್ಮನು ಪ್ರತ್ಯಕ್ಷನಾಗಿ' ಇದುವರೆಗೂ ಯಾರೂ ಮಾಡದಂತಹ ಕಠಿಣ ತಪಸ್ಸನ್ನು ನೀನು ಮಾಡಿದ್ದೀಯಾ, ಶಿವನ ಮೇಲಿರುವ ನಿನ್ನ ಪ್ರೀತಿ ನಿಜವಾದುದು ಮತ್ತು ಪರಿಶುದ್ಧವಾದುದು, ಹೀಗಾಗಿಯೇ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದ್ದೀಯ, ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ' ಎಂದು ಆಶೀರ್ವದಿಸಿದನು. ಹೀಗೆ ಕಠೋರ ತಪಸ್ಸು ಮಾಡಿದ ಪಾರ್ವತಿಯು ಬ್ರಹ್ಮಚಾರಿಣಿಯೆಂಬ ಹೆಸರನ್ನು ಪಡೆಯುತ್ತಾಳೆ. ಮುಂದೆ ಈಶ್ವರನೂ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.