ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ಸೆ.18 ರಂದು ಫೋಟೋಗ್ರಾಫಿ ಪ್ರದರ್ಶನ

By Staff
|
Google Oneindia Kannada News

Photo Journalist exhibition
ಮೈಸೂರು, ಸೆ. 14 : ಆಸರೆ ಮತ್ತು ಸಿದ್ಧಾರ್ಥ ಗ್ರೂಪ್ ವತಿಯಿಂದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಫೋಟೋ ಪತ್ರಕರ್ತರ ಪ್ರದರ್ಶನ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸೆಪ್ಟೆಂಬರ್ 18 ರಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ವನ್ಯ ಜೀವಿಗಳ ಫೋಟೋಗ್ರಾಫಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಕೃಪಾಕರ ಮತ್ತು ಸೇನಾನಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್ ಎ ರಾಮದಾಸ್, ಶಾಸಕರಾದ ಎಚ್ ಎಸ್ ಶಂಕರಲಿಂಗೇಗೌಡ, ಉಧ್ಯಮಿ ಪಿ ವಿ ಗಿರಿ, ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕ ಕೆ ಬಿ ಗಣಪತಿ, ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟೆ, ಅಹಿಂದ ಯುವ ಘಟಕದ ಅಧ್ಯಕ್ಷ ಗಿರಿರಾಜ್ ಭಾಗವಹಿಸುವರು.

ಪ್ರಶಸ್ತಿ ವಿಜೇತ ಫೋಟೋಗ್ರಾಫರ್ ಗಳಾದ ಎಂ ಎ ಶ್ರೀರಾಮ್, ಅನುರಾಗ್ ಬಸವರಾಜ್, ನಾಗೇಶ್ ಪಣತ್ತಲೆ, ಹಂಪಾ ನಾಗರಾಜ್ ಮತ್ತು ಎಂ ಆರ್ ಮಧುಸೂಧನ್ ಫೋಟೋಗ್ರಾಫಿ ಪ್ರದರ್ಶನ ಏರ್ಪಡಿಸಲಾಗುವುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X