ಲಸಿಕೆ ಹಾಕಿದ ಜಾಂಬಿ, ಲೈಂಗಿಕ ವಿರೋಧಿ ಬೆಡ್!, ಇಲ್ಲಿದೆ 2021 ರ ಸುಳ್ಳು ಸುದ್ದಿಗಳು
ನಾಳೆಯಿಂದ 2022 ಆರಂಭವಾಗಲಿದೆ. ಅಂದರೆ ಹೊಸ ವರ್ಷ ಆರಂಭವಾಗಲಿದೆ. ಇದಕ್ಕೂ ಮುನ್ನ ನಾವಿಲ್ಲಿ 2021 ರ ಕೆಲವು ತಮಾಷೆಯ ವಿಚಾರಗಳನ್ನು ಮೆಲುಕು ಹಾಕಿದ್ದೇವೆ. ಜನರನ್ನು ನಗೆಯ ಕಡಲಲ್ಲಿ ತೇಲಿಸಿದ ಕೆಲವು ಸುಳ್ಳು ಸುದ್ದಿಗಳು ಇನ್ನು ಎಷ್ಟು ವರ್ಷ ಕಳೆದರೂ ನೆನಪಿನಲ್ಲಿ ಇರುವುದು ಖಂಡಿತ.
ಇನ್ನು ಈ ನಕಲಿ ಸುದ್ದಿಗಳನ್ನು ನೀವು ಕೂಡಾ ಒಮ್ಮೆಯಾದರೂ ನಂಬಿರಬಹುದು. ಬೇರೆಯೇ ವಿವಾಹದ ಸ್ಥಳದಲ್ಲಿ ಪಾರಾಚ್ಯೂಟ್ ಮೂಲಕ ವಧು ಇಳಿದು ಬೇರೆಯೇ ವರನನ್ನು ವಿವಾಹವಾದ ಬಗ್ಗೆ, ಯುವತಿಗೆ ತನ್ನ ಪ್ರೇಮಿಯು ತನ್ನ ಹಲ್ಲುಗಳಿಂದ ಮಾಡಿದ ಆಭರಣವನ್ನು ಉಡುಗೊರೆ ನೀಡಿದ ಬಗ್ಗೆ, ಬಿಹಾರದ ದರ್ಭಾಂಗದಲ್ಲಿ ತೆವಳುವ ಪ್ರಾಣಿ ಇರುವ ಬಗ್ಗೆ, ಮಂಗಳೂರು ಕಡಲ ತೀರದಲ್ಲಿ ಅಳುವ ಮತ್ಸ್ಯಕನ್ಯೆ ಕಂಡು ಬಂದ ಬಗ್ಗೆ ಹೀಗೆ ಹಲವಾರು ವಿಚಿತ್ರವಾದ, ವಿಲಕ್ಷಣವಾದ ಸುಳ್ಳು ಸುದ್ದಿಗಳು 2021 ರಲ್ಲಿ ಹರಡಿದೆ.
ಕೊರೊನಾ ವೈರಸ್ನ ಹಲವಾರು ರೂಪಾಂತರಗಳು ಇರುವಂತೆ, ಈ ಸುಳ್ಳು ಸುದ್ದಿಗಳು ಕೂಡಾ ಬೇರೆ ಬೇರೆ ರೀತಿಯಲ್ಲಿ ಹರಡಿದೆ. ಈ ಪೈಕಿ ಕೆಲವು ಸುದ್ದಿಗಳನ್ನು ಜನರು ಸತ್ಯ ಎಂದೇ ನಂಬಿರುವುದು ಕೂಡಾ ಇದೆ. ಇನ್ನು ಕೆಲವು ಸುದ್ದಿಗಳು ಜನರನ್ನು ಗೊಂದಲಕ್ಕೆ ಒಳಪಡಿಸಿದರೆ, ಇನ್ನೂ ಕೆಲವು ಸುದ್ದಿಗಳು ಜನರು ಅಸಹ್ಯ ಪಡುವಂತೆ ಮಾಡಿದೆ.
ಭಾರತದಲ್ಲಿ 2021 ರಲ್ಲಿ ಇವರ ಬಗ್ಗೆ ಅಧಿಕ ಫಾಕ್ಟ್ಚೆಕ್!
ಗೂಗಲ್ ಫ್ಯಾಕ್ಟ್ ಚೆಕ್ ಎಕ್ಸ್ಪ್ಲೋರರ್ ಮೂಲಕ ನೋಡಿದಾಗ ಪ್ರಮುಖವಾಗಿ ಬಿಜೆಪಿ ನಾಯಕರುಗಳ ಬಗ್ಗೆ ಫಾಕ್ಟ್ಚೆಕ್ ಮಾಡಲಾಗಿದೆ ಎಂದು ತಿಳಿದು ಬರುತ್ತದೆ. ಹೆಚ್ಚು ಫಾಕ್ಟ್ಚೆಕ್ ಮಾಡಿದ ವ್ಯಕ್ತಿಗಳ ಪೈಕಿ ಅಗ್ರ ಐದು ಸ್ಥಾನದಲ್ಲಿ ಬಿಜೆಪಿ ನಾಯಕರಾದ ಸಂಬಿತ್ ಪಾತ್ರ, ಅಮಿತ್ ಮಾಳವೀಯ ಮತ್ತು ಪ್ರೀತಿ ಗಾಂಧಿ ಇದ್ದಾರೆ. ಇನ್ನು ಪಾಕಿಸ್ತಾನ ಮೂಲದ ಕೆನಡಾದ ಅಂಕಣಕಾರ ತಾರೆಕ್ ಫತಾಹ್ ಮತ್ತು ಸುದರ್ಶನ್ ನ್ಯೂಸ್ನ ಮುಖ್ಯ ಸಂಪಾದಕ ಸುರೇಶ್ ಚವ್ಹಾನ್ ಕೆ ಕೂಡಾ ಪಟ್ಟಿಯಲ್ಲಿ ಇದ್ದಾರೆ.
|
ಮಂಗಳೂರಿನಲ್ಲಿ ಮತ್ಸ್ಯಕನ್ಯೆ
ಯಾಸ್ ಚಂಡಮಾರುತದ ಸಮಯದಲ್ಲಿ ಬಿಹಾರದ ದರ್ಭಾಂಗಾದಲ್ಲಿ "ತೆವಳುವ ಜೀವಿ" ಆಕಾಶದಿಂದ ಬೀಳುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಲಕ್ಷಣವಾದ ಕಥೆಗಳು ಹರಡಿದ್ದು, ಇದನ್ನು ನಂಬಿದ ಜನರು ಕೂಡಾ ಇದ್ದಾರೆ. ಈ ವಿಚಾರವನ್ನು ಪೋಸ್ಟ್ ಮಾಡಿದ ಕೂಡಲೇ ಸಾವಿರಾರು ಜನರು ಮತ್ತೆ ಶೇರ್ ಮಾಡಿಕೊಂಡಿದ್ದಾರೆ. ಇದು ನಿಜವಾಗಿ ಇಟಾಲಿಯನ್ ಕಲಾವಿದರಿಂದ ರಚಿಸಲ್ಪಟ್ಟ ಸಿಲಿಕಾನ್ ಆಟಿಕೆಯಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಓರ್ವ ವ್ಯಕ್ತಿ ವಿಮಾನದ ಇಂಜಿನ್ ಮೇಲೆ ಮಲಗಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಆದರೆ ನಿಜವಾಗಿ ಇದು ವಿಯೆಟ್ನಾಮೀಸ್ ಗ್ರಾಫಿಕ್ ಡಿಸೈನರ್ ಮಾಡಿದ ಅದ್ಭುತ ಡಿಜಿಟಲ್ ಸೃಷ್ಟಿಯಾಗಿದೆ. ಇನ್ನು ಮಂಗಳೂರಿನ ಕಡಲತೀರದಲ್ಲಿ ರೋದಿಸುತ್ತಿರುವ ಮತ್ಸ್ಯಕನ್ಯೆಯು ಕೂಡಾ ವೈರಲ್ ಆಗಿತ್ತು. ಇದು ವಾಸ್ತವವಾಗಿ ಸಮುದ್ರ ಸಂರಕ್ಷಣೆಯ ಜಾಗೃತಿ ವೀಡಿಯೊವಾಗಿದ್ದು, ಇದನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆ.
|
ಪ್ಯಾರಚೂಟ್ನಲ್ಲಿ ಬಂದ ವಧು, ತಾಳಿ ಕಟ್ಟಿದ್ದು ಬೇರೆ ವರ!
ಇನ್ನು ಮತ್ತೊಂದು ತಮಾಷೆಯ ವಿಚಾರವೂ ಇದೆ. ವಧು ಪ್ಯಾರಚೂಟ್ನಲ್ಲಿ ಬಂದು ಬೇರೆಯೇ ವಿವಾಹದ ಸಮಾರಂಭದಲ್ಲಿ ಲ್ಯಾಂಡ್ ಆಗಿ, ಬೇರೆಯೇ ವರನನ್ನು ವಿವಾಹವಾಗಿದ್ದಾಳೆ ಎಂದು ಕೂಡಾ ವರದಿ ಆಗಿತ್ತು. ನಿಮಗೆ ತಮಾಷೆಯೆನಿಸುತ್ತದೆ ಅಲ್ಲವೇ?, ಆದರೆ ಈ ಸುಳ್ಳು ಸುದ್ದಿ ಹರಿದಾಡಿದ್ದು ನಿಜ. ಆದರೆ ಹಲವಾರು ಮುಖ್ಯವಾಹಿನಿಯ ಮಾಧ್ಯಮಗಳು ಗ್ವಾಲಿಯರ್ನಲ್ಲಿ ವಧುವು ಬೇರೆಯೆ ವಿವಾಹ ಸಮಾರಂಭಕ್ಕೆ ಪ್ಯಾರಾಚೂಟ್ ಮೂಲಕ ಬಂದಿದ್ದು, ಬೇರೆ ವ್ಯಕ್ತಿಯನ್ನು ಮದುವೆಯಾಗುವ ಬಗ್ಗೆ ವಿಲಕ್ಷಣ ಕಥೆಯನ್ನು ವರದಿ ಮಾಡಿದೆ. ನಿಜವಾಗಿ ಇದೊಂದು ಹಾಸ್ಯವನ್ನು ಬಿತ್ತರಿಸುವ ವೆಬ್ಸೈಟ್ನಲ್ಲಿ ಪ್ರಕಟವಾದ ಕಾಲ್ಪನಿಕ ಕಥೆಯಾಗಿದೆ. ಇನ್ನು ಈ ಸಂದರ್ಭದಲ್ಲೇ ಕೋವಿಡ್ ಸಂದರ್ಭದಲ್ಲಿ ಒಲಿಂಪಿಕ್ ಸಂಘಟಕರನ್ನು ಕ್ರೀಡಾಪಟುಗಳಿಗೆ ಲೈಂಗಿಕ ವಿರೋಧಿ ಬೆಡ್ಗಳನ್ನು ನೀಡಿದ್ದಾರೆ ಎಂದು ಕೂಡಾ ವರದಿ ಮಾಡಲಾಗಿದೆ. ಆದರೆ ಈ ಬೆಡ್ ಅನ್ನು ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನವೇ ಡಿಸೈನ್ ಮಾಡಲಾಗಿತ್ತು. 400 ಪೌಂಡ್ಗಳಿಗಿಂತ ಹೆಚ್ಚು ತೂಕವನ್ನು ಈ ಬೆಡ್ ಹೊರಬಲ್ಲದು.
ಸಂಸ್ಕೃತದಲ್ಲಿ ಕೋಡಿಂಗ್!
ಸಂಸ್ಕೃತವು ವೈಜ್ಞಾನಿಕ ಮತ್ತು ಗಣಿತದ ಹೊಂದಾಣಿಕೆಯ ಭಾಷೆಯಾಗಿದೆ ಎಂಬುವುದಕ್ಕೆ ನಾವು ಹೆಮ್ಮೆ ಪಡಬೇಕು. ಆದರೆ ಐಐಟಿ ಚಿನ್ನದ ಪದಕ ವಿಜೇತರೊಬ್ಬರು ಸಂಸ್ಕೃತ ಕೋಡಿಂಗ್ ಬಳಸಿ ಭಾರತೀಯ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ರಚಿಸಿದ್ದಾರೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ಇನ್ನು ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ತಾಲಿಬಾನ್ ಉಗ್ರರು ಮಾಸ್ಕ್ ಧರಿಸಿದ್ದಕ್ಕೆ ಸಿಎನ್ಎನ್ ಹೊಗಳಿದೆ ಎಂದು ಕೂಡಾ ಸುಳ್ಳು ಸುದ್ದಿಯಾಗಿದೆ. ಲಸಿಕೆ ಹಾಕದ ಜನರನ್ನು ಯುಎಸ್ ಶಿಬಿರಗಳಲ್ಲಿ ಬಂಧಿಸುತ್ತಿದೆ ಎಂದು ಕೂಡಾ ಸುದ್ದಿಯಾಗಿದೆ.
ಆಹಾರದಲ್ಲಿ ಮೂತ್ರ ಬೆರೆಸಿದ ವ್ಯಾಪಾರಿ..
ಇನ್ನು ಗುವಾಹಟಿಯ ಬೀದಿ ಬದಿಯ ಆಹಾರದಲ್ಲಿ ವ್ಯಾಪಾರಿಯೊಬ್ಬರು ಆಹಾರದಲ್ಲಿ ಮೂತ್ರವನ್ನು ಬೆರೆಸಿದ ಕಥೆಯೂ ಕೂಡಾ ಹರಡಿತ್ತು. ಅದಕ್ಕೆ ಕೋಮುವಾದ ತಿರುಗೇಟು ನೀಡಲು ಮತ್ತಷ್ಟು ಟ್ವಿಸ್ಟ್ ಕೂಡಾ ಮಾಡಲಾಗಿತ್ತು. "ದಿ ಗಿಫ್ಟ್ ಆಫ್ ದಿ ಮಾಗಿ" ಎಂಬ ಪ್ರಸಿದ್ಧ ಕಥೆಯನ್ನು ನೀವು ಓದಿದ್ದರೆ, ನಿಜವಾದ ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ನಿಮಗೆ ತಿಳಿಯುತ್ತದೆ. ಆದರೆ ಜಗತ್ತಿನಲ್ಲಿ ಯಾವ ಹುಡುಗಿ ತನ್ನ ಪ್ರೇಮಿಯ ಹಲ್ಲುಗಳಿಂದ ಮಾಡಿದ ಆಭರಣಗಳನ್ನು ಉಡುಗೊರೆಯಾಗಿ ಪಡೆಯಲು ಬಯಸುತ್ತಾಳೆ ಹೇಳಿ.. ಅಂತಹ ಸುಳ್ಳು ಸುದ್ದಿ ಕೂಡಾ ಹರಡಿದೆ.
|
ಕೋವಿಡ್ಗಿಂತ ಸಾಂಕ್ರಾಮಿಕ ಈಗ ನಕಲಿ ಸುದ್ದಿ
ಸುಳ್ಳು ಮಾಹಿತಿಗಳು ಕೊರೊನಾ ವೈರಸ್ ಸೋಂಕಿಗಿಂತ ಅತೀ ವೇಗವಾಗಿ ಹರಡುತ್ತದೆ ಎಂಬುವುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಕೋವಿಡ್ ಲಸಿಕೆಯಿಂದಾಗಿ ದೇಹದಲ್ಲಿ ಅಯಸ್ಕಾಂತ ಸೃಷ್ಟಿ ಆಗುತ್ತದೆ ಎಂಬ ಸುಳ್ಳು ಸುದ್ದಿಯೂ ಕೂಡಾ ಹರಡಿದೆ. ಲಸಿಕೆಗಳು ಜನರನ್ನು ಸೋಮಾರಿಗಳು ಮತ್ತು ನರಭಕ್ಷಕರನ್ನಾಗಿ ಮಾಡುವ ಕಥೆಯು ಜಾಂಬಿ ಫಿಲ್ಮ್ನ ಶಾಟ್ನಂತೆ ಕಾಣುತ್ತದೆ. ಇನ್ನು ಈರುಳ್ಳಿಯಿಂದಾಗು ಭಯಾನಕ ಕಪ್ಪು ಶಿಲೀಂಧ್ರ, ಮ್ಯೂಕೋರ್ಮೈಕೋಸಿಸ್ ಬರುತ್ತದೆ. ಅದು ಈರುಳ್ಳಿಯ ಸಿಪ್ಪೆಯಲ್ಲಿ ಇರುತ್ತದೆ ಎಂಬ ಸುದ್ದಿಯೂ ಕೂಡಾ ಹರಡಿತ್ತು.