ಪಾಕ್, ಚೀನಾದಿಂದ ಗಡಿ ಕ್ಯಾತೆ: ಕೇಂದ್ರ ಸರ್ಕಾರಕ್ಕೆ ಹೊಸ 'ಸಿಡಿಎಸ್' ನೇಮಕದ ತಲೆನೋವು
ನವದೆಹಲಿ, ಡಿಸೆಂಬರ್ 09: ಭಾರತಕ್ಕೆ ಹೊಸ 'ಸಿಡಿಎಸ್'( ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುಡುಕುವುದೇ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚೀನಾ ಹಾಗೂ ಪಾಕಿಸ್ತಾನದ ಗಡಿಯಲ್ಲಿ ತಂಟೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈಗ ಭಾರತಕ್ಕೆ ಹೊಸ 'ಚೀಫ್ ಆಫ್ ಡಿಫೆನ್ಸ್ ಸ್ಟಾಫ್' ನೇಮಕದ ತಲೆನೋವು ಆರಂಭವಾಗಿದೆ.
ಸಿಡಿಎಸ್ ಬಿಪಿನ್ ರಾವತ್ ಅವರ ಅಘಾತಕಾರಿ ನಿಧನದ ಬಳಿಕ ಕೇಂದ್ರ ಸರ್ಕಾರವು ಈಗ ಹೊಸ ಸಿಡಿಎಸ್ ನೇಮಕ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರದ ಗಡಿಯಲ್ಲಿ ಒಂದೆಡೆ ಚೀನಾ ಮತ್ತೊಂದೆಡೆ ಪಾಕಿಸ್ತಾನ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿದೆ.
Timeline:ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮೂರೂ ಸೇನೆಯನ್ನು ಸಂಬಾಳಿಸಿಕೊಂಡು ಹೋಗುವ ಹಾಗೂ ಕೇಂದ್ರ ಸರ್ಕಾರಕ್ಕೆ ನಿಖರ ಹಾಗೂ ಬಿಪಿನ್ ರಾವತ್ ರೀತಿಯಲ್ಲಿ ಸಮರ್ಥವಾಗಿ ಸಲಹೆಗಳನ್ನು ನೀಡಬಲ್ಲಂತಹ ಒಬ್ಬ ಸಿಡಿಎಸ್ ಹುಡುಕುವುದು ಕೇಂದ್ರ ಸರ್ಕಾರಕ್ಕೆ ಸವಾಲಿನ ವಿಷಯವಾಗಿದೆ.
ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಆಗಿ ಅತ್ಯಂತ ಸಮರ್ಥವಾಗಿ ಅಷ್ಟೇ ನಿಖರವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈಗ ಬಿಪಿನ್ ರಾವತ್ ರೀತಿಯಂತಹ ವ್ಯಕ್ತಿಯನ್ನೇ ಹುಡುಕುವುದು ಕೇಂದ್ರ ಸರ್ಕಾಕ್ಕೆ ಸುಲಭದ ಕೆಲಸವಲ್ಲ.
ಜನರಲ್ ನರವಾಣೆ ಮುಂದಿನ ಏಪ್ರಿಲ್ನಲ್ಲಿ ನಿವೃತ್ತಿ ಹೊಂದುತ್ತಿದ್ದು, ಅವರನ್ನು ಮುಂದಿನ ಸಿಡಿಎಸ್ ಆಗಿ ನೇಮಕ ಮಾಡಿದರೆ ಆರ್ಮಿ ಚೀಫ್ ಹುದ್ದೆ ಖಾಲಿ ಇರಲಿದೆ. ಆಗ ಸರ್ಕಾರವು ಹೊಸ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕಾಗುತ್ತದೆ.
ಬಿಪಿನ್ ರಾವತ್ ಅವರು 1999 ರಲ್ಲಿ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ಆಗಿನ ಉಪಪ್ರಧಾನಿ ಎಲ್ಕೆ ಅಡ್ವಾಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಗಿಲ್ ಯುದ್ಧವನ್ನು ಪರಿಶೀಲಿಸಲು ಸರ್ಕಾರವು ಮಂತ್ರಿಗಳ ಗುಂಪನ್ನು (GoM) ರಚಿಸಿತ್ತು.
ಜನರಲ್ ಬಿಪಿನ್ ರಾವತ್ ಹಠಾತ್ ನಿಧನ: ಯಾರಾಗಲಿದ್ದಾರೆ ಹೊಸ ಸಿಡಿಎಸ್?
ಯುದ್ಧದ ಸಮಯದಲ್ಲಿ ಭಾರತೀಯ ಸೇನೆ ಮತ್ತು ವಾಯುಪಡೆಯ ನಡುವಿನ ಸಮನ್ವಯದ ಕೊರತೆಯನ್ನು ಈ GoM ಪತ್ತೆಹಚ್ಚಿದೆ. ಇದೇ ಗುಂಪು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ನೇಮಕಕ್ಕೆ ಶಿಫಾರಸು ಮಾಡಿತ್ತು. ಮೂರು ಸೇವೆಗಳ ನಡುವೆ ಸಾಮರಸ್ಯ ಮೂಡಿಸುವುದು ಇದರ ಉದ್ದೇಶವಾಗಿತ್ತು.
ಸಿಡಿಎಸ್ ರಾವತ್ ಯಾವಾಗಲೂ ತಂತ್ರಜ್ಞಾನದ ವಿಷಯದಲ್ಲಿ ಮುಂದಿರಬೇಕೆಂದು ಬಯಸಿದ್ದರು. ರಕ್ಷಣಾ ಮೂಲಗಳ ಪ್ರಕಾರ, ಭಾರತದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ಸ್ಥಿರ ಬೆಳವಣಿಗೆಗೆ ಅವರು ಕೊಡುಗೆ ನೀಡಿದ್ದಾರೆ.
ಏಪ್ರಿಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಪಿನ್ ರಾವತ್ ತಂತ್ರಜ್ಞಾನದ ವಿಷಯದಲ್ಲಿ ಚೀನಾ ಅತ್ಯಂತ ಸಮರ್ಥವಾಗಿದೆ ಎಂಬ ಭಾವನೆ ನಮ್ಮಲ್ಲಿದೆ. ಅವರು ಭಾರತದ ಮೇಲೆ ಸೈಬರ್ ದಾಳಿಗಳನ್ನು ಮಾಡುತ್ತಲೇ ಇದ್ದಾರೆ. ಚೀನಾದ ಸೈಬರ್ ದಾಳಿಯನ್ನು ಎದುರಿಸಲು ಭಾರತವು ತನ್ನ ಸೈಬರ್ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಎಂದಿದ್ದರು.
ಕಳೆದ ಕೆಲವು ವರ್ಷಗಳಿಂದ, ಚೀನಾ LAC ಮೇಲೆ ಕಾರ್ಯನಿರ್ವಹಿಸುತ್ತಿದೆ. ಭಾರತದ ಗಡಿಯಲ್ಲಿ ಚೀನಾ ಸೇನೆ ಮುನ್ನುಗ್ಗುತ್ತಿದೆ. ಸಿಡಿಎಸ್ ರಾವತ್ ಅಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಥಿಯೇಟರ್ ಕಮಾಂಡ್ ರಚಿಸುವ ಕೆಲಸವನ್ನು ಪ್ರಾರಂಭಿಸಿದರು.
ಥಿಯೇಟರ್ ಕಮಾಂಡ್ ಮೂರು ಸೈನ್ಯಗಳು ಯುದ್ಧದ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಲು ಅನುವು ಮಾಡಿಕೊಡುತ್ತದೆ. ಸೇನಾ ವ್ಯವಹಾರಗಳ ನಿರ್ದೇಶನದ ಅಡಿಯಲ್ಲಿ ಸೇನೆಯ ಮೂರು ವಿಭಾಗಗಳು ಬಲಪಡಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಾಶ್ಮೀರದಲ್ಲಿ, ಅವರು ವಾಯುಪಡೆಯ ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು, ಈ ಕಾರಣದಿಂದಾಗಿ ಪಾಕಿಸ್ತಾನದ ಮೇಲೆ ನಿಕಟ ನಿಗಾ ಇರಿಸಲಾಗಿದೆ.
ಬಿಪಿನ್ ರಾವತ್ ಅವರು 1978 ರಲ್ಲಿ ಸೇನೆಯ 11 ನೇ ಗೂರ್ಖಾ ರೈಫಲ್ಸ್ನ 5 ನೇ ಬೆಟಾಲಿಯನ್ನಲ್ಲಿ ನಿಯೋಜಿಸಲ್ಪಟ್ಟರು. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅವರಿಗೆ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ನೀಡಲಾಯಿತು. ಅವರು ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಸೇನಾ ಪದಕ, ವಿದೇಶ ಸೇವಾ ಪದಕ ಮುಂತಾದ ಪದಕಗಳನ್ನು ಪಡೆದಿದ್ದಾರೆ.
ಸಿಡಿಎಸ್ನ ಹಿರಿತನದ ಪ್ರಕಾರ, ಜನರಲ್ ಎಂಎಂ ನರವಾಣೆ ಅವರ ಹಕ್ಕು ಪ್ರಬಲವಾಗಿದೆ. ರಕ್ಷಣಾ ತಜ್ಞರ ಪ್ರಕಾರ ಬಿಪಿನ್ ರಾವತ್ ಅವರ ಉತ್ತರಾಧಿಕಾರಿಯಾಗಿ ಅವರನ್ನು ಆಯ್ಕೆ ಮಾಡಬಹುದು.
ಜನರಲ್ ಬಿಪಿನ್ ರಾವತ್ ಅವರು 31 ಡಿಸೆಂಬರ್ 2019 ರಂದು ನಿವೃತ್ತರಾದರು. ಅವರ ಸ್ಥಾನಕ್ಕೆ ಜನರಲ್ ಮನೋಜ್ ಮುಕುಂದ್ ನರವಾಣೆ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರು ದೇಶದ 28ನೇ ಸೇನಾ ಮುಖ್ಯಸ್ಥರಾಗಿದ್ದಾರೆ.