ಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರು
ಮುಂಬೈ, ಅಕ್ಟೋಬರ್ 09: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿಕೂಟಕ್ಕೆ ಜಯ ಸಿಗುವ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆಯಿಂದ ಮುನ್ಸೂಚನೆ ಸಿಕ್ಕಿದೆ. ಈ ಸಮೀಕ್ಷೆಗಳು ನಿಜವಾಗಿ ಬಿಜೆಪಿ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿಯಾಗಬಹುದು ಎಂಬ ಕುತೂಹಲ ಪ್ರಶ್ನೆಗೆ ಟಾರೋ ಕಾರ್ಡ್ ಭವಿಷ್ಯ ಇಲ್ಲಿದೆ.
ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ 3239 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಶಿವಸೇನಾ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ವಿರುದ್ಧ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.
ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ
288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ 200 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್ ಸಿ ವೋಟರ್ಸ್ ಸಮೀಕ್ಷೆ ಹೇಳಿದೆ. ಕಳೆದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ-ಶಿವಸೇನಾ 49 ಸ್ಥಾನಗಳ ಪೈಕಿ 41 ಸ್ಥಾನ ಗಳಿಸಿತ್ತು. ಬಿಜೆಪಿಯಿಂದ ಮತ್ತೊಮ್ಮೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಅಧಿಕಾರ ಹಂಚಿಕೆ ಹಾಗೂ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಚರ್ಚೆಯಾಗಿದ್ದು ಕೂಡಾ ಪರಿಣಾಮಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಆದರೆ ಟಾರೋ ಕಾರ್ಡ್ ಭವಿಷ್ಯ ಬೇರೆಯದ್ದೇ ಕಥೆ ಹೇಳುತ್ತಿದೆ.
ಮೈತ್ರಿಯಿಂದ ಲಾಭ ಬಂದರೂ ಸಿಎಂ ಸ್ಥಾನಕ್ಕಾಗಿ ಪೈಪೋಟಿ
2014ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಈ ಪಕ್ಷಗಳು ಈಗ ಮತ್ತೆ ಒಂದಾಗಿವೆ. ಬಿಜೆಪಿ 260 ಕ್ಷೇತ್ರ ಹಾಗೂ ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಮ್ಯಾಜಿಕ್ ನಂಬರ್ 145 ದಾಟಲು ಆಗಿರಲಿಲ್ಲ. ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.
ಸದ್ಯ ಮುಖ್ಯಮಂತ್ರಿ ರೇಸಿನಲ್ಲಿರುವ ದೇವೇಂದ್ರ ಫಡ್ನವೀಸ್ ಹಾಗೂ ಆದಿತ್ಯ ಠಾಕ್ರೆ ಇಬ್ಬರಿಗೂ ಅಕ್ಟೋಬರ್ 21 ರ ಮತದಾನ ಒಳ್ಳೆದಿನವಾಗಿದೆ. ಅಕ್ಟೋಬರ್ 24 ಆದಿತ್ಯ ಠಾಕ್ರೆಗೆ ಒಳ್ಳೆ ದಿನವಾಗಿದ್ದು, ದೇವೇಂದ್ರರನ್ನು ಹಿಂದಿಕ್ಕುವ ಮುನ್ಸೂಚನೆ ಸಿಕ್ಕಿದೆ. ಈ ದಿನಗಳಲ್ಲಿ ಮುಂದಿನ ಸಿಎಂ ಬಗ್ಗೆ ಬಿಜೆಪಿ ನಿರ್ಧರಿಸಿದರೆ, ಆದಿತ್ಯ ಮುಂದಿನ ಸಿಎಂ ಆಗುವ ಅವಕಾಶ ನಿಚ್ಚಳವಾಗಿದೆ.
ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?
ಸಿಎಂ ಸ್ಥಾನದ ಬಗ್ಗೆ ನಿರ್ಧಾರ ವಿಳಂಬವಾದರೆ
ಸಿಎಂ ಸ್ಥಾನದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿರ್ಧಾರ ಅಂತಿಮಗಿಳಿಸುವುದನ್ನು ವಿಳಂಬ ಮಾಡಿದರೆ ಏನಾಗಲಿದೆ.?
ನವೆಂಬರ್ 1 ರಿಂದ ನ 10ರೊಳಗೆ ನಿರ್ಧರಿಸಿದರೆ ದೇವೇಂದ್ರಗೆ ಲಾಭವಾಗಲಿದೆ. ನ 11 ರಿಂದ ನ. 15ರೊಳಗೆ ನಿರ್ಧರಿಸಿದರೂ ದೇವೇಂದ್ರಗೆ ಲಾಭವಾಗಲಿದ್ದು ಅಥವಾ ಬಿಜೆಪಿಯಿಂದಲೇ ಯಾರಾದರೂ ಸಿಎಂ ಆಗುತ್ತಾರೆ.
ಸಿಎಂ ಆಯ್ಕೆ ಬಗ್ಗೆ ನಿರ್ಧಾರ ವಿಳಂಬವಾದಷ್ಟು ಆದಿತ್ಯ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಟಾರೋ ಕಾರ್ಡ್ ತಿಳಿಸಿವೆ.
ಅಚ್ಚರಿಯ ಹೆಸರು ಹೊರಬರಲಿದೆ
ಶಿವಸೇನಾದ ಉದ್ಧವ್ ಠಾಕ್ರೆ, ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರಿಗೂ ಸಿಎಂ ಆಗುವ ಯೋಗವಿಲ್ಲ. ದೇವೇಂದ್ರ ಫಡ್ನವೀಸ್ ಅವರ ಹೆಸರು ಹೇಗೆ ಅಚ್ಚರಿಯಾಗಿ ಮೂಡಿಬಂದಿತ್ತೋ ಅದರಂತೆ ಈ ಬಾರಿಯೂ ಬಿಜೆಪಿಯಿಂದಲೇ ಹೊಸಬರ ಹೆಸರು ಮುಂಚೂಣಿಗೆ ಬರಲಿದೆ. ಬಿಜೆಪಿಯಿಂದ ಬೇರೆ ಯಾರಾದ್ರೂ ಸಿಎಂ ಆಗುವ ಸಾಧ್ಯತೆಯಿದೆ ಎಂದರೆ ವಿತ್ತ ಸಚಿವರಾಗಿದ್ದ ಸುಧೀರ್ ಮುಂಗಂಟಿವಾರ್ ಹೆಸರು.
ಎಬಿಪಿ ನ್ಯೂಸ್ ಸಿ ವೋಟರ್ ಪ್ರಕಾರ
ಎಬಿಪಿ ನ್ಯೂಸ್ ಸಿ ವೋಟರ್ ಪ್ರಕಾರ ಬಿಜೆಪಿ-ಶಿವಸೇನಾ ಮೈತ್ರಿ ಸಾಧಿಸಿದ್ದು ಈ ಬಾರಿ ಯಶ ತಂದುಕೊಡಲಿದೆ. 205 ಸ್ಥಾನ ಬಹುತೇಕ ಗೆಲ್ಲಲಿದೆ ಎಂದು ಹೇಳಿದೆ. ಈ ಬಾರಿ ಕೂಡಾ ಮೈತ್ರಿ ಸಾಧಿಸುವುದು ಕಷ್ಟ ಸುಲಭವಾಗಿರಲಿಲ್ಲ. ಸೆಪ್ಟೆಂಬರ್ 30ಕ್ಕೆ ಕೊನೆಗೂ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿತು. ಅದಲ್ಲದೆ, ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಎದ್ದಿದ್ದ ಬಂಡಾಯವನ್ನು ಶಮನವಾಗಿದ್ದರಿಂದ ಅಧಿಕೃತ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದವರು ನಾಮಪತ್ರ ಹಿಂಪಡೆದುಕೊಂಡಿದ್ದು ಫಲ ನೀಡಲಿದೆ.