ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಬದುಕಿನ ಕರಾಳ ದಿನ ಇದು, ಕಲೈನಾರ್ ಸಾವಿಗೆ ರಜನಿ ಸಂತಾಪ

|
Google Oneindia Kannada News

ಡಿಎಂಕೆ ಅಧ್ಯಕ್ಷರಾಗಿದ್ದ ಹಾಗೂ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿಯಾಗಿ ಒಟ್ಟಾರೆ ಐದು ಬಾರಿ ಸೇವೆ ಸಲ್ಲಿಸಿದ್ದ ಎಂ.ಕರುಣಾನಿಧಿ (94) ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ರಾಜಕಾರಣಕ್ಕೆ ಇಟ್ಟ ಹೆಸರಂತಿದ್ದ ತಮಿಳುನಾಡಿನ ಹಿರಿಯ ಹಾಗೂ ಪ್ರಮುಖ ಕೊಂಡಿಯೊಂದು ಕಳಚಿಕೊಂಡಂತೆ ಆಗಿದೆ.

ಒಂದು ವರ್ಷದ ಅವಧಿಯಲ್ಲಿ ಎಐಎಡಿಎಂಕೆ ಜಯಲಲಿತಾ ಹಾಗೂ ಡಿಎಂಕೆ ಕರುಣಾನಿಧಿ ಇಬ್ಬರನ್ನೂ ಕಳೆದುಕೊಂಡ ತಮಿಳುನಾಡು ರಾಜಕಾರಣದಲ್ಲಿ ಶೂನ್ಯ ಸೃಷ್ಟಿ ಆಗಿರುವುದಂತೂ ಸುಳ್ಳಲ್ಲ. ಇಂಥ ಸನ್ನಿವೇಶದಲ್ಲಿ ಸಹಜವಾಗಿ ಮುಂದೇನು ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ತಮಿಳುನಾಡು ರಾಜ್ಯ ಸರಕಾರವು ಕರುಣಾನಿಧಿ ಅವರ ಸಾವಿಗೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ.

ಅಪರೂಪದ ರಾಜಕಾರಣಿ- ಸಾಹಿತಿ ಮುತ್ತುವೇಲ್ ಕರುಣಾನಿಧಿ ನಂತರ ಮುಂದೇನು?ಅಪರೂಪದ ರಾಜಕಾರಣಿ- ಸಾಹಿತಿ ಮುತ್ತುವೇಲ್ ಕರುಣಾನಿಧಿ ನಂತರ ಮುಂದೇನು?

ಇದರ ಜತೆಗೆ ಬುಧವಾರದಂದು ಅಲ್ಲಿನ ಶಾಲೆ- ಕಾಲೇಜುಗಳಿಗೆ ರಜಾ ಘೋಷಿಸಿದೆ. ದೇಶದಾದ್ಯಂತ ವಿವಿಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು, ಪ್ರಮುಖರು ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಯಾರು- ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ಕೊಡಲಾಗಿದೆ. ಇಲ್ಲಿ ದೇವೇಗೌಡರಿಂದ ಹಿಡಿದ ವಿವಿಧ ಮುಖಂಡರ ಪ್ರತಿಕ್ರಿಯೆ ಇದೆ.

ವೈಶಿಷ್ಟ್ಯಪೂರ್ಣ ನಾಯಕತ್ವದ ಅಂತ್ಯ: ಕುಮಾರಸ್ವಾಮಿ ಸಂತಾಪವೈಶಿಷ್ಟ್ಯಪೂರ್ಣ ನಾಯಕತ್ವದ ಅಂತ್ಯ: ಕುಮಾರಸ್ವಾಮಿ ಸಂತಾಪ

ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಪ್ರಾದೇಶಿಕ ಪಕ್ಷಗಳಿಗೆ ಮಾರ್ಗ ತೋರಿದವರು ಕರುಣಾನಿಧಿ. ಅವರನ್ನು ಪ್ರೀತಿಸುವವರಿಗೆ ಮತ್ತು ಅವರ ಪಕ್ಷದ ಕಾರ್ಯಕರ್ತರಿಗೆ ಇದು ದುಃಖದ ಸನ್ನಿವೇಶ. ಅವರೊಬ್ಬರು ಮಾಗಿದ ನಾಯಕರು ಹಾಗೂ ಮುತ್ಸದ್ದಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಕೇಳಿಕೊಳ್ತೀನಿ.

ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ : ಮೋದಿ ಸಂತಾಪ ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ : ಮೋದಿ ಸಂತಾಪ

ಸುಮಿತ್ರಾ ಮಹಾಜನ್, ಲೋಕಸಭಾ ಸ್ಪೀಕರ್

ಸುಮಿತ್ರಾ ಮಹಾಜನ್, ಲೋಕಸಭಾ ಸ್ಪೀಕರ್

ಅವರೊಬ್ಬ ಮಹಾನ್ ನಾಯಕರಾಗಿದ್ದರು. ತಳಮಟ್ಟದ ಜನರ ಪರವಾಗಿ ಕೆಲಸ ಮಾಡಿದ್ದರು. ಅವರ ಸಾವು ಇಡೀ ದೇಶಕ್ಕೆ ಆದ ದೊಡ್ಡ ನಷ್ಟ.

ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ

ಪೊಣ್ ರಾಧಾಕೃಷ್ಣನ್, ಕೇಂದ್ರ ಸಚಿವ

ಪೊಣ್ ರಾಧಾಕೃಷ್ಣನ್, ಕೇಂದ್ರ ಸಚಿವ

ಅವರ ಸಾವಿನಿಂದಾಗಿ ತಮಿಳುನಾಡು ಮತ್ತು ಇಡೀ ಭಾರತಕ್ಕೆ ದೊಡ್ಡ ನಷ್ಟವಾಗಿದೆ. ಬಿಜೆಪಿ ಪರವಾಗಿ ಹಾಗೂ ವೈಯಕ್ತಿಕವಾಗಿ ಕರುಣಾನಿಧಿ ಅವರಿಗೆ ಗೌರವ ಸಲ್ಲಿಸುತ್ತೇನೆ.

ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ

ರಜನೀಕಾಂತ್, ನಟ

ರಜನೀಕಾಂತ್, ನಟ

ಇಂದು ನನ್ನ ಜೀವನದಲ್ಲೇ ಕರಾಳ ದಿನ. ಕರುಣಾನಿಧಿ ಅವರನ್ನು ಕಳೆದುಕೊಂಡ ಈ ದಿನ ಮರೆಯುವುದಿಕ್ಕೆ ಸಾಧ್ಯವಿಲ್ಲ. ಅವರ ಆತ್ಮ ಶಾಂತಿಗಾಗಿ ನಾನು ಪ್ರಾರ್ಥನೆ ಮಾಡ್ತೀನಿ.

ತಮಿಳುನಾಡು ಮಾಜಿ ಮುಖ್ಯಮಂತ್ರಿ 'ಕಲೈನಾರ್' ಕರುಣಾನಿಧಿ ಇನ್ನಿಲ್ಲ ತಮಿಳುನಾಡು ಮಾಜಿ ಮುಖ್ಯಮಂತ್ರಿ 'ಕಲೈನಾರ್' ಕರುಣಾನಿಧಿ ಇನ್ನಿಲ್ಲ

ಕೆ.ಚಂದ್ರಶೇಖರ್ ರಾವ್, ತೆಲಂಗಾಣ

ಕೆ.ಚಂದ್ರಶೇಖರ್ ರಾವ್, ತೆಲಂಗಾಣ

ಭಾರತವು ರಾಜಕಾರಣದ ಸ್ಟಾರ್ ವೊಬ್ಬರನ್ನು ಕಳೆದುಕೊಂಡಿದೆ. ಅವರ ಸಾವಿನಿಂದ ಸೃಷ್ಟಿಯಾಗಿರುವ ಖಾಲಿತನವನ್ನು ತುಂಬುವುದು ಕಷ್ಟ.

ಎಡಪ್ಪಡಿ ಕೆ.ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ

ಎಡಪ್ಪಡಿ ಕೆ.ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ

ಡಿಎಂಕೆ ಮುಖ್ಯಸ್ಥರೂ ಆಗಿದ್ದ ಎಂ.ಕರುಣಾನಿಧಿ ಅವರ ಸಾವು ತೀವ್ರ ದುಃಖ ತರುವಂಥದ್ದು. ರಾಜಕಾರಣ, ಸಿನಿಮಾ ಹಾಗೂ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದದ್ದು.

ರಣ್ ದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ

ರಣ್ ದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ

ದೇಶವು ಮಹಾನ್ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಡಿಎಂಕೆ ಕುಟುಂಬಕ್ಕೆ ನಮ್ಮ ಸಂತಾಪ ಸೂಚಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವು ತನ್ನ ಮುಖ್ಯ ಸ್ನೇಹಿತರೊಬ್ಬರನ್ನು ಕಳೆದುಕೊಂಡಿದೆ. ಈ ನಷ್ಟದಿಂದ ಹೊರಬರುವುದು ಕಷ್ಟ.

English summary
Here is the reaction of leaders and others about DMK leader and Tamil Nadu former CM M Karunanidhi demise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X