ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಬಿಜೆಪಿ ಬೆನ್ನಿಗೆ ಲಿಂಗಾಯತರು ನಿಲ್ಲುತ್ತಾರಾ?
ಬೆಂಗಳೂರು, ಜುಲೈ 26: ಕರ್ನಾಟಕದ ರಾಜಕೀಯ ಪರಿಸ್ಥಿತಿಯು ಕ್ರಿಕೆಟ್ ಪಂದ್ಯದಂತಾಗಿದೆ. ಕೊನೆಯ ಚೆಂಡು ಎಸೆಯುವವರೆಗೂ ಸೋಲು, ಗೆಲುವನ್ನು ನಿರ್ಣಯಿಸುವುದು ಸಾಧ್ಯವಿಲ್ಲ.
ಇದೀಗ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬೇರೊಬ್ಬರು ಬಂದ ಬಳಿಕ ಲಿಂಗಾಯತರು ಬಿಜೆಪಿಗೆ ಬೆಂಬಲ ಮುಂದುವರೆಸುವರೇ ಅಥವಾ ಹಿಂದೆ ಸರಿಯುವರೇ ಎಂಬುದು ದೊಡ್ಡ ಪ್ರಶ್ನೆ ಕಾಡುತ್ತಿದೆ.
ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತಿದೆ ಅದು ಒಂದು ಪ್ರಭಾವಿ ಸಮುದಾಯವನ್ನು ಎದುರು ಹಾಕಿಕೊಂಡಂತೆ ಎಂಬ ವ್ಯಾಖ್ಯಾನಗಳು ಶುರುವಾಗಿದೆ.
ಬಿಎಸ್ವೈ ಬದಲಾಗಿ ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಅದು ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆಯೂ ಇದೆ.
ಕರ್ನಾಟಕದ ಮುಖ್ಯಮಂತ್ರಿಬಿಎಸ್ವೈ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದು, ಈಗ ಲಿಂಗಾಯತರ ನಡೆ ಏನು ಎಂಬುದು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮೇಲೆ ನಿರ್ಧರಿತವಾಗಿರುತ್ತದೆ.
ಈ ಕುರಿತು ರಾಜಕೀಯ ತಜ್ಞ ಡಾ. ಸಂದೀಪ್ ಶಾಸ್ತ್ರಿ 'ಒನ್ಇಂಡಿಯಾ' ಬಳಿ ಏನು ಹೇಳಿದ್ದಾರೆ ಎಂದು ನೋಡೋಣ..
ಡಾ. ಶಾಸ್ತ್ರಿ ಹೇಳುವ ಪ್ರಕಾರ, ಮುಂದಿನ ಮುಖ್ಯಮಂತ್ರಿ ಆಯ್ಕೆ ದೆಹಲಿಯ ಪ್ರಮುಖ ನಾಯಕರ ಕೈಯಲ್ಲಿದೆ. ಮುಖ್ಯಮಂತ್ರಿ ಬದಲಾವಣೆ ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರವಲ್ಲ.
ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ರಾಷ್ಟ್ರ ನಾಯಕರು ತುಂಬಾ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಕ್ಷ ಅಧಿಕಾರದಲ್ಲಿರುವ ದಕ್ಷಿಣದ ಏಕೈಕ ರಾಜ್ಯ ಕರ್ನಾಟಕ.
ಬಿಎಸ್ ಯಡಿಯೂರಪ್ಪ ಅವರಿಗೆ 75 ವರ್ಷವಾಗಿದ್ದಾಗ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅವರು ಲಿಂಗಾಯತ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ ಎನ್ನುವ ಅಂಶ ಬಹಳ ಮುಖ್ಯವಾಗಿದೆ.
ರಾಮಕೃಷ್ಣ
ಹೆಗಡೆಯವರು
ಲೋಕಶಕ್ತಿಯನ್ನು
ರಚಿಸಿ
ಬಿಜೆಪಿಯೊಂದಿಗೆ
ಮೈತ್ರಿ
ಮಾಡಿಕೊಂಡ
ನಂತರ
1990ರ
ದಶಕದಿಂದಲೂ
ಲಿಂಗಾಯತ
ಮತಗಳು
ಪಕ್ಷಕ್ಕೆ
ಬರುತ್ತಿದೆ.
ಲಿಂಗಾಯತ
ಮತಗಳು
ಯಾವುದೇ
ನಾಯಕರೊಂದಿಗೆ
ಸಂಬಂಧ
ಹೊಂದಿಲ್ಲ,
ಲಿಂಗಾಯತ
ಮತ
ಯಾವಾಗಲೂ
ಪಕ್ಷದೊಂದಿಗೆ
ಇರಲಿದೆ,
ಬೇರೆ
ಯಾವುದೇ
ಪಕ್ಷ
ಆ
ಮತಗಳನ್ನು
ಪಡೆಯಲು
ಸಾಧ್ಯವಿಲ್ಲ
ಎಂದು
ಶಾಸ್ತ್ರಿ
ಅಭಿಪ್ರಾಯಪಟ್ಟಿದ್ದಾರೆ.
ಇದೀಗ
ಕರ್ನಾಟಕದ
ಮುಂದಿನ
ಮುಖ್ಯಮಂತ್ರಿ
ಯಾರಾಗಲಿದ್ದಾರೆ
ಎಂಬ
ಕುತೂಹಲ
ಹೆಚ್ಚಾಗಿದೆ.