ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?
ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
ಈ ಸಂವಿಧಾನವು ಡಿಸೆಂಬರ್ 9, 1949 ರಿಂದ ನವೆಂಬರ್ 26, 1949ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ 26, 1950ರಂದು ಜಾರಿಗೆ ಬಂದಿತು.
ಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರು
ಅನುಚ್ಛೇಧಗಳನ್ನು ಸಂವಿಧಾನದ ತಿದ್ದುಪಡಿಯ ಮುಖಾಂತರ ಸೇರಿಸಬಹುದು. ಪ್ರಚಲಿತದಲ್ಲಿರುವ 12 ಅನುಚ್ಛೇಧಗಳು ಇವುಗಳನ್ನು ಒಳಗೊಂಡಿವೆ.
ಬಿಜೆಪಿ 370 ವಿಧಿ ರದ್ದು ಮಾಡುವಂತಿಲ್ಲ: ಒಮರ್
ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರ ಪರಮಾವಧಿ; ಉನ್ನತ ಅಧಿಕಾರಿಗಳ ಸಂಬಳ(ವರಮಾನ);ಪ್ರಮಾಣವಚನಗಳ ವಿಧಗಳು; ರಾಜ್ಯಸಭೆ(ರಾಜ್ಯಗಳ ಪರಿಷತ್ತು - ಸಂಸತ್ತಿನ ಮೇಲ್ಮನೆ)ಯಲ್ಲಿ ಪ್ರತಿ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಿಷ್ಟು ಎಂದು ಸ್ಥಾನಗಳನ್ನು ನಿಗದಿಪಡಿಸುವುದು.
ಸಂವಿಧಾನದ
370ನೇ
ಪರಿಚ್ಛೇದ
ಸಂವಿಧಾನದ
21ನೇ
ಪರಿಚ್ಛೇದಲ್ಲಿ
370ನೇ
ವಿಧಿ(Article)
ಬಗ್ಗೆ
ಉಲ್ಲೇಖಿಸಲಾಗಿದೆ.
ಇದರ
ಪ್ರಕಾರ
ಜಮ್ಮು
ಮತ್ತು
ಕಾಶ್ಮೀರ
ಶಾಸನಸಭೆ
ನಿರ್ಣಯದ
ಮೂಲಕ
ಅಂಗೀಕರಿಸುವವರೆಗೆ
ಅಲ್ಲಿನ
ಆಡಳಿತಕ್ಕೆ
ಅಗತ್ಯವಾದ
ಅವಕಾಶಗಳನ್ನು
ಒದಗಿಸುವುದು
ಇದರ
ಉದ್ದೇಶ.
ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಸಹಮತ ಅಗತ್ಯ
370ನೇ
ಜಾರಿ
ಇರುವ
ಕಾಶ್ಮೀರದಲ್ಲಿ
ಪೌರತ್ವ,
ನಿರ್ದಿಷ್ಟ
ಆಸ್ತಿಯ
ಮಾಲೀಕತ್ವ,
ಮೂಲಭೂತ
ಹಕ್ಕುಗಳ
ಅನುಷ್ಠಾನ
ಮುಂತಾದ
ವಿಚಾರಗಳಲ್ಲಿ
ವಿಶೇಷ
ಕಾನೂನುಗಳು
ಅನುಷ್ಠಾನಗೊಳ್ಳುತ್ತವೆ.
ಕೇಂದ್ರ
ಸರ್ಕಾರದ
ಯಾವುದೇ
ನಿರ್ಧಾರಗಳನ್ನು
ಆ
ರಾಜ್ಯದಲ್ಲಿ
ಜಾರಿಗೊಳಿಸಬೇಕಾದಲ್ಲಿ,
ಅದಕ್ಕೆ
ಆ
ನಿರ್ದಿಷ್ಟ
ರಾಜ್ಯದಲ್ಲಿ
ಆಡಳಿತ
ನಡೆಸುವ
ಸರ್ಕಾರದ
ಸಹಮತ
ಅಗತ್ಯ.
*
ರಕ್ಷಣೆ,
ಹಣಕಾಸು,
ವಿದೇಶಾಂಗ
ವ್ಯವಹಾರ
ಹಾಗೂ
ಸಂಪರ್ಕ
ಕ್ಷೇತ್ರಗಳಲ್ಲಿ
ಭಾರತದ
ಸಂವಿಧಾನ
ವಿಧಿ
ವಿಧಾನಗಳಂತೆ
ನಡೆದುಕೊಳ್ಳಬೇಕು.
*
ಭಾರತದ
ಗಣರಾಜ್ಯದ
ಅಂಗವಾದರೂ
ಪ್ರತ್ಯೇಕ
ಸಂವಿಧಾನವನ್ನು
ಹೊಂದಬಹುದು.
370ನೇ ಪರಿಚ್ಛೇದವು ತಾತ್ಕಾಲಿಕ
ಆದರೆ, ದೇಶದ ರಕ್ಷಣೆ, ವಿದೇಶಾಂಗ ವ್ಯವಹಾರ, ಮಾಹಿತಿ ಮತ್ತು ಪ್ರಸಾರ ಹಕ್ಕುಗಳ ಇಲಾಖೆಗಳ ನಿಯಮಗಳು ಮಾತ್ರ ಇತರೆ ರಾಜ್ಯಗಳಿಗೆ ಅನ್ವಯವಾಗುವಂತೆ 370 ಪರಿಚ್ಛೇದ ಅನ್ವಯವಾಗುವ ರಾಜ್ಯಕ್ಕೂ ನೇರವಾಗಿ ಅನ್ವಯವಾಗುತ್ತದೆ.
370ನೇ ಪರಿಚ್ಛೇದವು ತಾತ್ಕಾಲಿಕವಾಗಿದ್ದು, ಇದು ಪರಿವರ್ತನೆಯ ಅಧಿಕಾರವೆ ಹೊರತೂ ಶಾಶ್ವತ ಅಧಿಕಾರವಲ್ಲ. ಇದು ಕಾಶ್ಮೀರಕ್ಕೆ ಮಾತ್ರವಲ್ಲ, ಉಳಿದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. ಆದರೆ, 370ನೇ ತಾತ್ಕಾಲಿಕ ಕ್ರಮ ಎಂಬುದನ್ನು ಒಪ್ಪಲು ಅಲ್ಲಿನ ಆಡಳಿತಗಾರರು ಷೇಕ್ ಅಬ್ದುಲ್ಲಾರಿಂದ ಒಮರ್ ಅಬ್ದುಲ್ಲಾ ತನಕ ಮೆಹಬೂಬಾ ಮುಫ್ತಿ ತನಕ ಯಾರೂ ಒಪ್ಪಿಲ್ಲ.
ನೆಹರೂ ಮಾಡಿದ ಸಣ್ಣ ಪ್ರಮಾದ
ಮೊದಲ ಪ್ರಧಾನಿ ಜವಹಾರಲಾಲ್ ನೆಹರೂ ಮಾಡಿದ ಸಣ್ಣ ತಾಂತ್ರಿಕ ತಪ್ಪಿನಿಂದ ಜಮ್ಮು ಮತ್ತು ಕಾಶ್ಮೀರವು ಭಾರತ ಇತರೆ ರಾಜ್ಯಗಳಂತೆ ಸೇರ್ಪಡೆಯಾಗುವ ಅವಕಾಶ ತಪ್ಪಿ ಹೋಯಿತು. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಬದಲಿಗೆ ಸದರ ಇ ರಿಯಾಸತ್ ಎಂದು ಕರೆಯಲಾಗುತ್ತಿತ್ತು. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವಾಗಿ ಜಮ್ಮು ಮತ್ತು ಕಾಶ್ಮೀರ ಸೇರ್ಪಡೆಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲು ಅಲ್ಲಿನ ವಿಧಾನಸಭೆಗೆ ಬಿಟ್ಟಿದ್ದು ತಪ್ಪಾಗಿಬಿಟ್ಟಿತು. ಪ್ರತ್ಯೇಕ ಸಂವಿಧಾನ ಹೊಂದುವ ಅಧಿಕಾರ ಸಿಕ್ಕಿತು.
ಪ್ರತ್ಯೇಕ ನಾಗರಿಕತೆ ಹೊಂದಿರುತ್ತಾರೆ
ಈ ವಿಧಿಯಡಿ ಜಮ್ಮು ಮತ್ತು ಕಾಶ್ಮೀರ ತನ್ನದೇ ಪ್ರತ್ಯೇಕ ಕಾನೂನುಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರುತ್ತಾರೆ. ಅವರ ಮೂಲಭೂತ ಹಕ್ಕುಗಳೂ ಬೇರೆಯಾಗಿವೆ. ಈ ರಾಜ್ಯದ ಮೇಲೆ ಕೇಂದ್ರ ಸರ್ಕಾರಕ್ಕೆ ಕೇವಲ ರಕ್ಷಣೆ, ಸಂಪರ್ಕ ಹಾಗೂ ವಿದೇಶಾಂಗ ಸಂಬಂಧಗಳ ವಿಷಯದಲ್ಲಿ ಮಾತ್ರ ಅಧಿಕಾರವಿರುತ್ತದೆ. ಆದರೆ, ಜಮ್ಮು ಕಾಶ್ಮೀರ ಸರ್ಕಾರವು ಸಾಕಷ್ಟು ಅಧಿಕಾರ ಹೊಂದಿದ್ದರೂ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಜೊತೆ ಸಂಪರ್ಕಿಸಲೇಬೇಕು.