ಡಾ. ಬಿಸಿ ರಾಯ್ ಸ್ಮರಣೆಯಲ್ಲಿ ವೈದ್ಯಲೋಕಕ್ಕೆ ಥ್ಯಾಂಕ್ಸ್ ಎಂದ ಟ್ವೀಟ್ಸ್
ಪಶ್ಚಿಮ ಬೆಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಡಾ.ಬಿದನ್ ಚಂದ್ರ ರಾಯ್ ಅವರು ಮಹಾತ್ಮಾ ಗಾಂಧೀಜಿ ಅವರ ಆಪ್ತ ಮಿತ್ರ ಹಾಗೂ ಪರ್ಸನಲ್ ಡಾಕ್ಟರ್ ಆಗಿದ್ದವರು
ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜು.1ರಂದು ದೇಶದೆಲ್ಲೆಡೆ ರಾಷ್ಟ್ರೀಯ ವೈದರ ದಿನಾಚರಣೆ' ನಡೆಯುತ್ತಿದೆ. ಈ ದಿನ ಮಹಾವೈದ್ಯ ಬಿಸಿ ರಾಯ್ ಅವರ ಜಯಂತಿ ಹಾಗೂ ವರ್ಧಂತಿ ದಿನವಾಗಿರುವುದು ವಿಶೇಷ.
ಡಾ.ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿ ಪಡೆದ ನಂತರ ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ 14 ವರ್ಷ ಕರ್ತವ್ಯ ನಿಭಾಯಿಸಿದ ರಾಯ್ ಅವರು ಸಿಎಂ ಆಗಿದ್ದಾಗಲೂ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು
ಡಾ.ಬಿ.ಸಿ.ರಾಯ್ ಅವರ ಜನಸೇವೆಯನ್ನು ಪರಿಗಣಿಸಿ ಜನಸಾಮಾನ್ಯರು ಕೃತಜ್ಞತೆಯನ್ನು ಸಲ್ಲಿಸುವ ದಿನ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ವೃತ್ತಿ ನಿರತರಾಗಿರುವ ಎಲ್ಲ ವೈದ್ಯರಿಗೂ ಈ ದಿನ ಸುದಿನದಂದು, 'ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ರೋಗಿಗಳಿಗೆ ಹೊಸ ಬದುಕು ನೀಡುವ ವೈದ್ಯ ವೃತ್ತಿಯನ್ನು ದೇವರ ಕೆಲಸಕ್ಕೆ ಹೋಲಿಸುತ್ತಾರೆ. ಅದಕ್ಕೆಂದೇ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಚಾಲ್ತಿಯಲ್ಲಿದೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ವೈದ್ಯರಿಗೆ ಎಲ್ಲಾ ಸ್ತರದ ಗಣ್ಯರು, ಸಾರ್ವಜನಿಕರಿಂದ ಧನ್ಯವಾದ ಅರ್ಪಣೆಯಾಗುತ್ತಿದೆ.
|
ವೈದ್ಯರಿಗೆ ಶುಭಹಾರೈಸಿದ ಟ್ವೀಟ್ ಲೋಕ
ವೈದ್ಯರಿಗೆ ಶುಭಹಾರೈಸಿದ ಟ್ವೀಟ್ ಲೋಕ, ಬಡವ, ಬಲ್ಲಿದರೆನ್ನದೆ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಾ, ಸೇವಾ ಮನೋಭಾವದಲ್ಲಿ ಎಲ್ಲರನ್ನು ಕಾಣುವ ವೈದ್ಯರಿಗೆ ನಮೋಃ ನಮಃ ಎಂದ ಪ್ರಧಾನಿ ನರೇಂದ್ರ ಮೋದಿ.
|
ಬಿಸಿ ರಾಯ್ ಅವರ ಜನ್ಮದಿನ ಹಾಗೂ ಮರಣ ದಿನ
ನಿಮ್ಮ ವೈದ್ಯರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು, ರೋಗಿಗಳ ಆರೋಗ್ಯಕ್ಕಾಗಿ ಅವಿರತವಾಗಿ ಹೋರಾಡುವ ಎಲ್ಲ ವೈದ್ಯರಿಗೂ ವೈದ್ಯ ದಿನದ ಶುಭಾಶಯಗಳು, ಇಂದು ಪಶ್ಚಿಮ ಬಂಗಾಲದ ಮಾಜಿ ಸಿಎಂ, ದೇಶಭಕ್ತ ಡಾ. ಬಿಸಿ ರಾಯ್ ಅವರ ಜನ್ಮದಿನ ಹಾಗೂ ಮರಣ ದಿನವಾಗಿರುವುದು ವಿಶೇಷ.
|
ಅಪೋಲೋ ಆಸ್ಪತ್ರೆಯಿಂದ ಶುಭಹಾರೈಕೆ
ವೈದ್ಯಲೋಕದ ಬಗ್ಗೆ ವಿಶೇಷ ವಿಡಿಯೋ ಮೂಲಕ ಶುಭಹಾರೈಸಿದ ಅಪೋಲೋ ಆಸ್ಪತ್ರೆ ಸಮೂಹ.
|
ಆರೋಗ್ಯಯುತ ಸಮಾಜ ನಿರ್ಮಾಣ
ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ವೈದ್ಯರ ಕರ್ತವ್ಯ ಹಾಗೂ ಉದ್ದೇಶ ಎಂದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್.
|
ವೈದ್ಯರಿಗೆ ಧನ್ಯವಾದ ಎಂದು ವಿವಿಧ ಸ್ತರದ ಸಾರ್ವಜನಿಕರು
ಬಡವ, ಬಲ್ಲಿದರೆನ್ನದೆ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಾ, ಸೇವಾ ಮನೋಭಾವದಲ್ಲಿ ಎಲ್ಲರನ್ನು ಕಾಣುವ ವೈದ್ಯರಿಗೆ ಧನ್ಯವಾದ ಎಂದು ವಿವಿಧ ಸ್ತರದ ಸಾರ್ವಜನಿಕರು