ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ದಾಖಲೆ ಬರೆದ ಟಾಪ್ ಸುದ್ದಿಗಳ ಗುಚ್ಛ
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಸೆಪ್ಟೆಂಬರ್ 2019 ತಿಂಗಳಿನಲ್ಲಿ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಚಯದಿಂದಾಗಿ ವೆಬ್ ಪುಟ ವೀಕ್ಷಣೆಯಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಡಿಜಿಟಲ್ ಮಾಧ್ಯಮದಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಂದೇ ವೆಬ್ ಪೋರ್ಟಲ್ ನ ನಾಲ್ಕು ಸಹ ವೆಬ್ ತಾಣಗಳ ಒಟ್ಟು ಪೇಜ್ ವ್ಯೂ ಪ್ರಮಾಣ 100 ಮಿಲಿಯನ್ ದಾಟಿದ ಉದಾಹರಣೆ ಬಹುಶಃ ಸಿಗಲಿಕ್ಕಿಲ್ಲ.
ಕರ್ನಾಟಕ ಜಿಲ್ಲಾಸುದ್ದಿ, ಕ್ರೀಡೆ, ಉದ್ಯೋಗ, ವಾಣಿಜ್ಯ, ಜ್ಯೋತಿಷ್ಯ, ರಾಜಕೀಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳನ್ನು ನಿರಂತರವಾಗಿ ಅಪ್ಡೇಟ್ ನೀಡುತ್ತಾ ಬಂದಿರುವ ಒನ್ಇಂಡಿಯಾ ತಾಣದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪೈಕಿ ವೈವಿಧ್ಯಮಯ ಸುದ್ದಿಗಳ ಜತೆ ಸಾರ್ವಜನಿಕರ ಟೀಕೆ ಟಿಪ್ಪಣಿಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗಿದೆ. ತೀರಾ ಕೆಟ್ಟ ಭಾಷೆ ಬಳಕೆ ಕಾಮೆಂಟ್ ಗಳನ್ನು ಅರಗಿಸಿಕೊಂಡು, ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.
ವೆಬ್ ತಾಣದ ಇಂದಿನ ಸಾಧನೆ ಹಿಂದೆ ಅಂದಿನ ಸಂಪಾದಕರು, ಇಂದಿನ ಸಂಪಾದಕರು ಸೇರಿದಂತೆ ಸಮಸ್ತ ಸುದ್ದಿ ಸಂಪಾದಕ ವಿಭಾಗದ ಪರಿಶ್ರಮವಿದೆ. ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ನೋಡಬಹುದು.
ಒನ್ಇಂಡಿಯಾದ ಎಂಬ ಭಾಷಾ ವೈವಿಧ್ಯತಾಣ
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ). ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಗೂ ಮುನ್ನ ಸ್ಥಾಪನೆಯಾದ ಒನ್ಇಂಡಿಯಾ ಎಂಬ ಭಾಷಾ ವೈವಿಧ್ಯತಾಣದಲ್ಲಿ ಮೊದಮೊದಲಿಗೆ ಆರಂಭವಾದ ಒನ್ಇಂಡಿಯಾ ಕನ್ನಡ ತಾಣವು ಕನ್ನಡ ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ರೂಪಿಸಿಕೊಂಡು ವೆಬ್ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಚ. ಮಂಜುನಾಥ್ ಬರೆದ ಸುದ್ದಿ, ಲೇಖನಗಳು
* Smule ಅಪ್ಲಿಕೇಷನ್ ನಿಂದ ಆರಂಭವಾದ ಸ್ನೇಹ, ಹಾಸನದ ಗೆಳೆಯ ಹಾಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಚಿಕ್ಕಬಳ್ಳಾಪುರದ ಗೃಹಿಣಿಯ ಕಥೆ ಓದುಗರನ್ನು ಕಾಡಿತ್ತು.
* ಮಂಗಳೂರಲ್ಲಿ ಮನೆಯಲ್ಲಿದ್ದವನನ್ನೇ ಹುಡುಕಿ ಬಂತು ಕೋಟಿ-ಕೋಟಿ ಸಂಪತ್ತು..ಮುಂದೆ ಓದಿ* ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಗಳಾದ ಕೇರಳದ ಆರು ಸೇಲ್ಸ್ಮನ್ಗಳು ಹೇಗೆ? ಯಾವ ಲಾಟರಿ ಹೊಡೆಯಿತು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ* ಹೆದ್ದಾರಿ ಟೋಲ್ಗಳ ಬೃಹತ್ ಭ್ರಷ್ಟಾಚಾರ ತೆರೆದಿಟ್ಟ ವಕೀಲರ ವಿಡಿಯೋ ವೈರಲ್ ಆಗಿತ್ತು..[ಸುದ್ದಿ ಇಲ್ಲಿದೆ]
ಟ್ರಾಫಿಕ್ ಪೊಲೀಸರ ದುರ್ವತನೆ ಸಮರ್ಥಿಸಿದರೇ ಬೆಂಗಳೂರು ಕಮೀಷನರ್?
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಉಪಸಂಪಾದಕ. ಚಲನಚಿತ್ರ ವೀಕ್ಷಣೆ, ಸಾಹಿತ್ಯ ಮತ್ತು ಕ್ರೀಡೆ ನನ್ನ ಮೆಚ್ಚಿನ ಹವ್ಯಾಸಗಳು.
ಅಮಿತ್ ಮೃಗವಧೆ
ರೈಲು ಡಿಕ್ಕಿಯಾಗಿ ಆನೆ ಸಾವು: ಭೀಕರ ಘಟನೆಯ ವೈರಲ್ ವಿಡಿಯೋ
ವಿಶ್ವಸಂಸ್ಥೆಯಲ್ಲಿ ಪಾಕ್ಗೆ ಬೆವರಿಳಿಸಿದ ಈ ಮಹಿಳಾ ಅಧಿಕಾರಿ ಬಗ್ಗೆ ಗೊತ್ತೇ?
ಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆ
ಆರ್ಥಿಕ ಕುಸಿತ ಎದುರಿಸುವುದು ಹೇಗೆ?: ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್
* ಇಸ್ರೋ ಸಿಬ್ಬಂದಿಗೆ ಮತ್ತೊಂದು ಆಘಾತ ನೀಡಿದ ಕೇಂದ್ರ ಸರ್ಕಾರ
ಒನ್ಇಂಡಿಯಾ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ/ವರದಿಗಾರ. ಸಾಹಿತ್ಯ, ಸಿನಿಮಾ, ಕ್ರಿಕೆಟ್, ಬರವಣಿಗೆ, ಪ್ರವಾಸ ಹವ್ಯಾಸದ ಪ್ರಮುಖ ಭಾಗಗಳು.
ತೃಪ್ತಿ ಹೆಗಡೆ
ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ
'ನನಗಿದ್ದಿದ್ದು ಒಬ್ಬಳೇ ಮಗಳು...' ಬಿಕ್ಕಿ ಬಿಕ್ಕಿ ಅತ್ತ ಶುಭಶ್ರೀ ತಂದೆ
ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ಪಾಕಿಸ್ತಾನ ಹೇಳಿದ್ದೇನು?
'ತಮಿಳರಾದ ನೀವು...' ಸಂದರ್ಶಕನ ಪ್ರಶ್ನೆಗೆ ಶಿವನ್ ಕೊಟ್ಟ ತೂಕದ ಉತ್ತರ!
ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದ ಪುತ್ತೂರಿನ ವಕೀಲ ಇವರೇ..!
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಉಪಸಂಪಾದಕಿ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹುಟ್ಟೂರು. ಬರವಣಿಗೆ, ಓದು, ಕನ್ನಡ ಸಾಹಿತ್ಯ, ಫೋಟೋಗ್ರಫಿ, ಪ್ರವಾಸ, ಚಿತ್ರ ಬರೆಯುವುದು ನನ್ನ ಹವ್ಯಾಸ. ಬ್ಯಾಡ್ಮಿಂಟನ್, ಚೆಸ್ ಕ್ರೀಡೆಗಳಲ್ಲಿ ಆಸಕ್ತಿ.
ಬಾಲರಾಜ್ ತಂತ್ರಿ
ಡಿಕೆಶಿ ವಿಚಾರಣೆ: ಇಡಿ ಅಧಿಕಾರಿಗಳ ಈ ಹೇಳಿಕೆಗೆ ರಾಜಕಾರಣಿಗಳು ತಲೆ ತಗ್ಗಿಸಲೇಬೇಕು
ಡಿಕೆಶಿ ಬಂಧನಕ್ಕೆ ಒಕ್ಕಲಿಗ ಟಚ್: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಬಿಜೆಪಿ ಮಾಸ್ಟರ್ ಪ್ಲಾನ್
ಖರ್ಗೆ ನಾಡಿನಲ್ಲಿ ಕುರುಬ ಸಮಾವೇಶ: ಇದೇನು ಸಿದ್ದರಾಮಯ್ಯ ಶಕ್ತಿ ಪ್ರದರ್ಶನವೋ?
ಸಿಎಂ ಕಚೇರಿಯಿಂದ ಹೊರಬಿದ್ದ ಏಕಾಏಕಿ ಆದೇಶ: ಏನಿದರ ಹಿಂದಿನ ಮರ್ಮ!
ರಾಜ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರು ಅಂತಿಮ: ಅಧಿಕೃತ ಘೋಷಣೆಯೊಂದೇ ಬಾಕಿ
ಒನ್ ಇಂಡಿಯಾ ಸಂಸ್ಥೆಯ ಎಡ್ಮಿನ್ ಮುಖ್ಯಸ್ಥ. ಸ್ವಂತ ಊರು ಕರಾವಳಿ ಜಿಲ್ಲೆ ಉಡುಪಿ. ರಾಜಕೀಯ ಸಂಬಂಧ ಲೇಖನ ಬರೆಯುವುದೆಂದರೆ ತುಸು ಇಷ್ಟ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ ನನ್ನ ಹವ್ಯಾಸ ಮತ್ತು ಆಸಕ್ತಿ.
ಗುರುರಾಜ್ ಕುಂಟವಳ್ಳಿ ಬರೆದ ಸುದ್ದಿ, ಲೇಖನಗಳು
ಯಡಿಯೂರಪ್ಪ ನಿರಾಳ; ಅನರ್ಹ ಶಾಸಕರ ಕನಸು ನುಚ್ಚು ನೂರು!
ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆ
ಬ್ರೇಕಿಂಗ್ ನ್ಯೂಸ್: ಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತ
ಹೊಸಕೋಟೆ; ಹುಲಿ, ಸಿಂಹ, ಗುಳ್ಳೇನರಿ ಹೋಲಿಕೆ, ಬೈಗುಳಗಳು!
ಶಿಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಸುರೇಶ್ ಕುಮಾರ್
ಒನ್ ಇಂಡಿಯಾ ಸಂಸ್ಥೆಯ ಎಡ್ಮಿನ್ ಮುಖ್ಯಸ್ಥ. ಸ್ವಂತ ಊರು ಕರಾವಳಿ ಜಿಲ್ಲೆ ಉಡುಪಿ. ರಾಜಕೀಯ ಸಂಬಂಧ ಲೇಖನ ಬರೆಯುವುದೆಂದರೆ ತುಸು ಇಷ್ಟ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ ನನ್ನ ಹವ್ಯಾಸ ಮತ್ತು ಆಸಕ್ತಿ.
ನಯನಾ ಬಿ.ಜೆ ಬರೆದ ಸುದ್ದಿ, ಲೇಖನಗಳು
ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ: ಎಚ್ಡಿಕೆ ಏನಂದ್ರು?
ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?
ಬೆಂಗಳೂರಿನ ಸ್ಮಶಾನದಲ್ಲಿ ಗ್ಯಾಸ್ ಏಜೆನ್ಸಿ ನೌಕರರ ನಿಗೂಢ ಸಾವು
ಹುಷಾರ್! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ
ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತದ ತಿರುಗೇಟು
ಒನ್ಇಂಡಿಯಾ ಕನ್ನಡ ವಿಭಾಗದಲ್ಲಿ ವರದಿಗಾರ್ತಿ ಹಾಗೂ ಉಪ ಸಂಪಾದಕಿಯಾಗಿ ಕೆಲಸ ನಿರ್ವಹಣೆ. ನಾಲ್ಕು ವರ್ಷ ವರದಿಗಾರ್ತಿಯಾಗಿ ವೃತ್ತಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ. ಹಿಂದಿ ಸಾಹಿತ್ಯ, ಹಾಡುಗಾರಿಕೆ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.
ಶ್ರೀನಿವಾಸ ಮಠ ಬರೆದ ಸುದ್ದಿ, ಲೇಖನಗಳು
ಚಿಕ್ಕಬಳ್ಳಾಪುರ ಎಲೆಕ್ಟ್ರಿಷಿಯನ್ ಗೆ 'ಇಟಲಿ ಗೆಳತಿ'ಯಿಂದ 33 ಲಕ್ಷ ವಂಚನೆ
ಮಹಿಷ ದಸರಾ ಬಗ್ಗೆ ಚಿಂತಕ ಭಗವಾನ್ ಏನಂತಾರೆ?
ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ
ಬೆಂಗಳೂರಲ್ಲಿ ಒಕ್ಕಲಿಗರ ಬಲ ಪ್ರದರ್ಶನದ ನಂತರ ಕೈ ಎತ್ತಿವೆ ಈ 4 ಪ್ರಶ್ನೆಗಳು
ನಿಮ್ಮ ರಾಶಿಯ ಚಿಹ್ನೆಯ ಪ್ರಕಾರ ಗುಣ- ಸ್ವಭಾವ ತಿಳಿದುಕೊಳ್ಳಿ
ಒನ್ಇಂಡಿಯಾ ಕನ್ನಡದಲ್ಲಿ ಹಿರಿಯ ಉಪಸಂಪಾದಕ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಕೆಎಸ್ ಒಯುನಿಂದ ಎಂ.ಕಾಂ., ಭಾರತೀಯ ವಿದ್ಯಾಭವನದಲ್ಲಿ ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ಮಾಡಿದ್ದೇನೆ. ಪತ್ರಿಕೋದ್ಯಮಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಮಾನವೀಯ ಸಂವೇದಿ ಸುದ್ದಿ, ಜ್ಯೋತಿಷ್ಯ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ನನ್ನ ಆದ್ಯತೆ.
ಸುಮಲತಾ ಬರೆದ ಸುದ್ದಿ, ಲೇಖನಗಳು
ಯಾದಗಿರಿ ಕಣ್ವ ಸ್ವಾಮಿಯ ಚಾಟಿಂಗ್ ಹಿಸ್ಟರಿ; ಕ್ಲಿಕ್ ಮಾಡೋ ಮುನ್ನ ಯೋಚ್ನೆ ಮಾಡಿ!
ಯಡಿಯೂರಪ್ಪ ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ತಿ ವಿವರ; ಕೋಟಿ ಕೋಟಿ ಹಣ ಇದ್ದರೂ ಬಂಗಾರ ಮಾತ್ರ ಇಲ್ಲ
ಮೋದಿ ಹೆಸರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ ಜೆಡಿಎಸ್ ಶಾಸಕ ಜಿಟಿಡಿ
ಉಪಚುನಾವಣೆ ಘೋಷಣೆ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ
ಮಹೇಶ್ ಮಲ್ನಾಡ್ ಬರೆದ ಸುದ್ದಿ, ಲೇಖನಗಳು
ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?
ಕರೋಲಿ ಬಾಬಾ ಆಶ್ರಮಕ್ಕೆ ಗೌಡ್ರ ಭೇಟಿ: ಅಂದು ತಿವಾರಿಗಾಗಿ ಇಂದು ಡಿಕೆಶಿಗಾಗಿ
ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?
ಜಗನ್ ಮಹತ್ವದ ನಿರ್ಣಯ, ಟಿಟಿಡಿ ಮಂಡಳಿಗೆ ಸುಧಾಮೂರ್ತಿ ನೇಮಕ
ಒನ್ಇಂಡಿಯಾ ವೆಬ್ ತಾಣದ ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಾಫಿ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.