PSI ನೇಮಕಾತಿ ಹಗರಣ: ಮಾಜಿ ಎಡಿಜಿಪಿ ಅಮೃತ್ ಪೌಲ್ ಬಂಧನಕ್ಕೆ ಏನು ಕಾರಣ?
ಬೆಂಗಳೂರು, ಜುಲೈ 4: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರದಂದು ಪ್ರಮುಖ ಅಧಿಕಾರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದೆ. ಈಗಾಗಲೇ ಮೂಲ ಸಲ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್ ಅವರು ಇಂದು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿದಂತೆ ಸಿಐಡಿ ಪೊಲೀಸರು ಮಹತ್ವದ ಅಂಶಗಳನ್ನು ಬಯಲಿಗೆ ಎಳೆದಿದ್ದಾರೆ. ಪಿಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ ಸೋರಿಕೆಯಾಗಿದೆ ಎಂಬ ಸ್ಫೋಟಕ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪೊಲೀಸ್ ನೇಮಕಾತಿ ವಿಭಾಗದ ಕಚೇರಿ ಅಂದರೆ, ಅಮೃತ್ ಪೌಲ್ ಅವರ ಅಧಿಕೃತ ಕಚೇರಿಯಲ್ಲಿ ಒಎಂಆರ್ ಶೀಟ್ ತಿದ್ದಲಾಗಿದೆ ಎಂಬುದು ಇದೀಗ ಸಾಬೀತಾಗಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಬಂಧನ ಮಾಡಲಾಗಿದೆ.
Breaking: ಅಮೃತ್ ಪೌಲ್ ಐಪಿಎಸ್ ಎಡಿಜಿಪಿ ಸ್ಥಾನದಿಂದ ಅಮಾನತು
ಒಂದು ವೇಳೆ ನೇಮಕಾತಿ ವಿಭಾಗದಲ್ಲಿ ಸರಿಯಾಗಿ ಬಿಗಿ ಕ್ರಮ ಜರುಗಿಸಿದ್ದರೆ ಈ ಅಕ್ರಮ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಪೊಲೀಸ್ ವಲಯದಲ್ಲಿ ಚರ್ಚ್ ನಡೆದಿದೆ. ಎಡಿಜಿಪಿ ದರ್ಜೆಯ ಅಧಿಕಾರಿಯಾಗಿ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ಮಾಡಿಸಬೇಕಿತ್ತು. ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಕರ್ತವ್ಯಲೋಪದಿಂದಲೇ ಪರೀಕ್ಷೆಯಲ್ಲಿ ಅಕ್ರಮ ನಡೆಯಲು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವರ್ಗಾವಣೆ
ಶಿಕ್ಷೆ
ಪೊಲೀಸ್
ಇಲಾಖೆಯ
ನೇಮಕಾತಿ
ವಿಭಾಗದ
ಎಡಿಜಿಪಿ
ಅಮೃತ್
ಪೌಲ್
ಅವರನ್ನು
ಏಕಾಏಕಿ
ವರ್ಗಾವಣೆ
ಮಾಡಿ
ರಾಜ್ಯ
ಸರ್ಕಾರ
ಆದೇಶಿಸಿದೆ.
1995
ನೇ
ಬಾಚ್ನ
ಐಪಿಎಸ್
ಅಧಿಕಾರಿಯಾಗಿರುವ
ಅಮೃತ್
ಪೌಲ್
ಅವರನ್ನು
ಆಂತರಿಕ
ಭದ್ರತೆ
ವಿಭಾಗದ
ಎಡಿಜಿಪಿ
ಹುದ್ದೆಗೆ
ವರ್ಗಾವಣೆ
ಮಾಡಿ
ಆದೇಶಿಸಲಾಗಿದೆ.
ಮಂಗಳೂರು
ಸೇರಿದಂತೆ
ವಿವಿಧ
ರೇಂಜ್ಗಳ
ಐಜಿಪಿಯಾಗಿ
ಅಮೃತ್
ಪೌಲ್
ಕಾರ್ಯ
ನಿರ್ವಹಿಸಿದ್ದರು.
ಪೊಲೀಸ್
ಕಮೀಷನರ್
ಹುದ್ದೆ
ನಿರೀಕ್ಷೆಯಲ್ಲಿದ್ದರು.
ADGP ಬಂಧನ: ಸಿಎಂ, ಗೃಹ ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು
ಆರಂಭದಲ್ಲಿ ಅಮೃತ್ ಪೌಲ್ ಕೈವಾಡದ ಬಗ್ಗೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿರಲಿಲ್ಲ. ಡಿವೈಎಸ್ಪಿ ಶಾಂತಕುಮಾರ್ ಬಂಧನದ ಬಳಿಕ ನೇಮಕಾತಿ ವಿಭಾಗದಲ್ಲಿ ನಡೆದಿರುವ ಅಕ್ರಮ ಬೆಳಕಿಗೆ ಬಂದಿತ್ತು.
ಪಿಎಸ್ಐ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಹಲವು ಸಿಬ್ಬಂದಿ ಬಂಧನಕ್ಕೆ ಒಳಗಾಗಿದ್ದರು. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಶ್ರೀಧರ್ ಮನೆಯಲ್ಲಿ ಒಂದೂವರೆ ಕೋಟಿ ರೂ. ಹಣ ಪತ್ತೆಯಾಗಿತ್ತು.
ದೂರವಾಣಿ
ಕರೆಗಳ
ವಿನಿಮಯವೇ
ಆಧಾರ
ನೇಮಕಾತಿ
ವಿಭಾಗದ
ಸ್ಟ್ರಾಂಗ್
ರೂಮ್
ನಲ್ಲಿಯೇ
ಒಎಂಆರ್
ಶೀಟ್ಗಳನ್ನು
ತಿದ್ದುಪಡಿ
ಮಾಡಲಾಗಿದೆ.
ಕಿಂಗ್
ಪಿನ್ಗಳು
ನೇಮಕಾತಿ
ವಿಭಾಗದ
ಡಿವೈಎಸ್ಪಿ
ಶಾಂತಕುಮಾರ್
ಅವರ
ಜತೆ
ನಿರಂತರ
ಸಂಪರ್ಕದಲ್ಲಿರುವುದು
ತನಿಖೆ
ವೇಳೆ
ಬೆಳಕಿಗೆ
ಬಂದಿದೆ.
ಸದ್ಯ
ಬಂಧನಕ್ಕೆ
ಒಳಗಾಗಿರುವ
ಶಾಂತಕುಮಾರ್
ಮತ್ತು
ನೇಮಕಾತಿ
ವಿಭಾಗದ
ಮುಖ್ಯಸ್ಥರ
ನಡುವೆ
ಅನೇಕ
ದೂರವಾಣಿ
ಕರೆಗಳ
ವಿನಿಮಯ
ಆಗಿರುವುದನ್ನು
ಸಿಐಡಿ
ಪತ್ತೆ
ಮಾಡಿದೆ.
ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾನಾ ಬಗೆಯ ಅಕ್ರಮಗಳು ನಡೆದಿವೆ. ಒಂದೆಡೆ ಪರೀಕ್ಷಾ ಕೇಂದ್ರದಲ್ಲಿಯೇ ವಿದ್ಯಾರ್ಥಿಗಳ ಉತ್ತರ ಹಾಳೆಗಳನ್ನು ಪಡೆದು ಸರಿ ಉತ್ತರ ತುಂಬಿಸಿ ಅಕ್ರಮ ಎಸಗಲಾಗಿದೆ. ಇನ್ನೊಂದೆಡೆ ಬ್ಲೂಟೂತ್ ಉಪಕರಣ ಇಟ್ಟುಕೊಂಡು ಪರೀಕ್ಷೆ ಬರೆದು ಪಿಎಸ್ಐ ಹುದ್ದೆಗೆ ನೇಮಕವಾಗಿದ್ದಾರೆ.
ಇಷ್ಟೆಲ್ಲಾ ಅಕ್ರಮಗಳು ನಡೆಯಲು ಕಾರಣ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದಿಂದ ಎತ್ತಂಗಡಿ ಮಾಡಲಾಗಿತ್ತು. ಇದೇ ಬಂಧನಕ್ಕೆ ಕಾರಣವಾಯಿತು.
Recommended Video