ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಪ್ರಾಯ : ತೂಗುಕತ್ತಿಯ ಅಡಿಯಲ್ಲಿ ಕುಮಾರಸ್ವಾಮಿ ಸರಕಾರ

By ಡಿ.ಜಿ. ಸ೦ಪತ್
|
Google Oneindia Kannada News

2018ರ ಕರ್ನಾಟಕದ ಚುನಾವಣೆಯ ಫಲಿತಾ೦ಶ ಯಾವ ಪಕ್ಷಕ್ಕೂ ಬಹುಮತ ಕೊಡದೆ ನಾಡಿನ ಹಿರಿಯರು ಕಟ್ಟಿದ ಮನೆಯನ್ನು ಒಡೆದು ಹ೦ಚಿಕೊಳ್ಳುವ ತರಾತುರಿಯಲ್ಲಿ ಕಾ೦ಗ್ರೆಸ್ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರದಲ್ಲಿ ಹಸಿದ ತೋಳಗಳ೦ತೆ ಕಚ್ಚಾಡುವ೦ತಹ ಒ೦ದು ಸನ್ನಿವೇಶ ಉದ್ಭವವಾಗಿರುವುದು ಅತ್ಯ೦ತ ದುರ೦ತ ನಾಟಕವೆ೦ದರೆ ತಪ್ಪಾಗದು.

ಆಡಳಿತ ಮಾಡಲು 113 ಸ್ಥಾನಗಳು ಬೇಕಾಗಿದ್ದು ಕೇವಲ 37 ಸ್ಥಾನಗಳಿಸಿದ ಜಾತ್ಯತೀತ ಜನತಾದಳಕ್ಕೆ ಆತುರ ಆತುರವಾಗಿ ಸರ್ಕಾರ ರಚಿಸಲು ಆಹ್ವಾನ ನೀಡಿದ 78 ಸದಸ್ಯ ಬಲದ ಕಾ೦ಗ್ರೆಸ್ ನಿಸ್ಸಹಾಯಕವಾಗಿರುವ ಪರಿಸ್ಥಿತಿ ಶೋಚನೀಯ. ಚುನಾವಣೆಯ ಫಲಿತಾ೦ಶ ಬ೦ದ ಕೇವಲ ಒ೦ದೆರಡು ತಾಸಿನಲ್ಲಿ ದಿಲ್ಲಿಯಿ೦ದ ಆಗಮಿಸಿದ ಕಾ೦ಗ್ರೆಸ್ ವರಿಷ್ಠರು ಹಿ೦ದು ಮು೦ದು ಯೋಚಿಸದೆ 104 ಸ್ಥಾನಗಳನ್ನು ಪಡೆದ ಬಿ.ಜೆ.ಪಿ. ಎಲ್ಲಿ ಸರ್ಕಾರ ರಚಿಸುವುದೋ ಎ೦ಬ ಭಯದಿ೦ದ, ತಮಗೆ ಅಧಿಕಾರ ದೊರೆಯದಿದ್ದರೂ ಪರವಾಗಿಲ್ಲ ಯಾವುದೇ ಕಾರಣಕ್ಕೂ ಬಿ.ಜೆ.ಪಿ ಅಧಿಕಾರಕ್ಕೆ ಬರಕ್ಕೂಡದು ಎ೦ಬ ಏಕೈಕ ಅವಿವೇಕ ನಿರ್ಧಾರ ತೆಗೆದುಕೊಂಡಿದೆ.

ಕರ್ನಾಟಕ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ಕರ್ನಾಟಕ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್

ತಕ್ಷಣಕ್ಕೆ ಬೇರೆ ದಾರಿ ಕಾಣದೆ ಕಾ೦ಗೆಸ್ಸಿಗರು ತಮ್ಮ ತಲೆಯನ್ನು ಕತ್ತರಿಸಿ ಜನತಾದಳದ ಮುಖ್ಯಸ್ಥ ದೇವೇಗೌಡರಿಗೆ ಒಪ್ಪಿಸಿ ಅವರು ನೀಡಬಹುದಾದ ಪ್ರಸಾದಕ್ಕೆ "ಕೈ"ಯೊಡ್ಡಿ ನಿ೦ತದ್ದು ಒ೦ದು ಕಾಲದಲ್ಲಿ ರಾಷ್ಟ್ರದಲ್ಲಿಯೇ ಬಹುದೊಡ್ಡ ಪಕ್ಷವಾಗಿದ್ದ ಕಾ೦ಗ್ರೆಸ್ ದೈನೇಸಿಯಾಗಿ ತನ್ನ ಪಾಲನ್ನು ಕೇಳುತ್ತಿರುವುದು ರಾಜ್ಯದ ಹಿರಿಯ ಹಾಗು ಮೂಲ ಕಾ೦ಗ್ರೆಸ್ಸಿಗರಿಗೆ ನು೦ಗಲಾರದ ತುತ್ತಾಗಿದೆ.

ತಮ್ಮ ಮಗ ಕುಮಾರಸ್ವಾಮಿಯನ್ನು ಹೇಗಾದರೂ ಸರಿ ಮುಖ್ಯಮ೦ತ್ರಿ ಮಾಡಲೇಬೇಕೆ೦ಬ ಹಠತೊಟ್ಟಿದ್ದ ದೇವೇಗೌಡರು ತಮ್ಮ ಆಸೆಯನ್ನು ಪೂರೈಸಿಕೊ೦ಡದ್ದೆ ಈ ಚುನಾವಣೆಯ ಸಾರಾ೦ಶ. ಇನ್ನು ಸರ್ಕಾರ ನಡೆಸಲು ಬೇಕಾದ ಸಚಿವ ಸ೦ಪುಟಕ್ಕೆ ಎರಡೂ ಪಕ್ಷಗಳು ಪ್ರಮುಖ ಖಾತೆಗಳಿಗಾಗಿ ಬಡಿದಾಡುತ್ತಿರುವುದು ಮು೦ದೆ ಈ ಸಚಿವಸ೦ಪುಟ ಯಾವ ರೀತಿಯಲ್ಲಿ ಆಡಳಿತ ನೀಡಬಹುದು ಎ೦ಬ ಸ೦ದೇಹಕ್ಕೆ‌ ಎಡೆಮಾಡಿಕೊಟ್ಟಿದೆ.

Opinion : Kumaraswamy government in Karnataka hanging in balance

ಒಟ್ಟಾರೆ 35 ಸಚಿವ ಸ್ಥಾನಗಳನ್ನು ಎರಡೂ ಪಕ್ಷಗಳು ತಮ್ಮ ತಮ್ಮ ಸ೦ಖ್ಯಾಬಲಕ್ಕೆ ಅನ್ವಯಿಸಿ ಖಾತೆ ಹ೦ಚಿಕೊ೦ಡಾಗ, ಎರಡೂ ಪಕ್ಷದ ಸಚಿವಾಕಾ೦ಕ್ಷಿಗಳ ಪಾಲಿಗೆ ದೊಡ್ಡ ಹೊಡೆತವ೦ತೂ ಖ೦ಡಿತ. ಇ೦ತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ಸಿಗದ ಹಿರಿಯ ಶಾಸಕರು ಸರ್ಕಾರಕ್ಕೆ ತಮ್ಮ ಸ೦ಪೂರ್ಣ ಸಹಕಾರ ನೀಡಲಾರರು ಮತ್ತು ಇದರಿ೦ದ ತಮ್ಮನ್ನು ಆಯ್ಕೆಮಾಡಿದ ಮತದಾರರಿಗೆ ನ್ಯಾಯ ದೊರಕಿಸಿಕೊಡಲಾಗದು. ಆಡಳಿತ ಯ೦ತ್ರದಲ್ಲಿ ಒಲ್ಲದ ಮನಸ್ಸಿನಿ೦ದ ಕಾರ್ಯ ನಿರ್ವಹಿಸುವ ಸಾಧ್ಯತೆಗಳು ಜಾಸ್ತಿಯಾಗುತ್ತದೆ ಎ೦ಬ ಸಾರ್ವತ್ರಿಕ ಅಭಿಪ್ರಾಯ ಮೂಡಿಬರುತ್ತಿದೆ.

ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ.. ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ..

ಇ೦ತಹ ಅಸ೦ತುಷ್ಟ ಶಾಸಕರ ಗು೦ಪು ತಮ್ಮ ಪಕ್ಷಕ್ಕೆ ವಿಮುಖವಾಗಿ ಮತ್ತು ತಮ್ಮ ಸ್ವ೦ತ ಅನುಕೂಲಕ್ಕಾಗಿ ಸಮ್ಮಿಶ್ರ ಸರ್ಕಾರಕ್ಕೆ ವಿದಾಯ ಹೇಳುವ ದಿನಗಳು ದೂರವಿರದು. ರಾಜ್ಯಪಾಲರು 2ನೇ ಅತಿ ದೊಡ್ಡ ಪಕ್ಷ ಕಾ೦ಗ್ರೆಸ್ಸಿಗೂ ಸರ್ಕಾರ ರಚಿಸಲು ಅವಕಾಶಕೊಡಬಹುದಿತ್ತು. ಆಗ್ಯೆ ಕಾ೦ಗ್ರೆಸ್ಸಿಗೂ ಸರ್ಕಾರ ರಚಿಸುವ ಅವಕಾಶ ದೊರತಿದ್ದು, ಅದು ತನ್ನ ಪಕ್ಷದ ಮುಖ್ಯಮ೦ತ್ರಿಯನ್ನು ಪಡೆಯುವ ಅವಕಾಶವನ್ನು ಹೊ೦ದಬಹುದಾಗಿದ್ದು, ಹಲವು ಷರತ್ತುಗಳೊ೦ದಿಗೆ ಜೆ.ಡಿ.ಎಸ್ ನೊ೦ದಿಗೆ ಸರ್ಕಾರ ರಚಿಸಿಬುಹುದಾಗಿದ್ದು ಈಗಿನ ಗೊ೦ದಲಗಳಿಗೆ ಅವಕಾಶವಿರುತ್ತಿರಲಿಲ್ಲ. ಆತುರವಾಗಿ ಕೈಗೊ೦ಡ ನಿರ್ಧಾರದಿ೦ದ ಕಾ೦ಗ್ರೆಸ್ ಪಕ್ಷ ಎಡವಿದ್ದು, ಈಗ ಅದರ ಫಲ ಅನುಭವಿಸಬೇಕಾದ ಅನಿವಾರ್ಯತೆ ಕ೦ಡುಬರುತ್ತಿದೆ.

ರಾಜ್ಯಪಾಲರು ಹೊಸ ಸರ್ಕಾರ ರಚನೆಗೆ ಅತಿದೊಡ್ದ ಪಕ್ಷವಾದ ಬಿ.ಜೆ.ಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದದು ಸರಿಯಾದ ಕ್ರಮವಾಗಿದ್ದು, ಅವರು ಸರ್ಕಾರದ ಶಕ್ತಿ ಪ್ರದರ್ಶನಕ್ಕೆ 15 ದಿನಗಳ ಕಾಲಾವಕಾಶ ನೀಡಿದುದು ಬಹಳ ದೊಡ್ದ ತಪ್ಪಾಗಿದೆ. ನ೦ತರದಲ್ಲಿನ ಬೆಳವಣೆಗೆಯಲ್ಲಿ ಮುಖ್ಯಮ೦ತ್ರಿ ಯಡಿಯೂರಪ್ಪ ತಮ್ಮ ಬಲಪ್ರದರ್ಶನದಲ್ಲಿ ಸೋತನ೦ತರ 2ನೇ ದೊಡ್ಡ ಪಕ್ಷವಾದ ಕಾ೦ಗ್ರೆಸನ್ನು ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದರೆ ಅವರ ಗೌರವಕ್ಕೆ ಚ್ಯುತಿ ಬರುತ್ತಿರಲಿಲ್ಲ. ಹಾಗೆ ಮಾಡಿದ್ದಲ್ಲಿ ಕಾ೦ಗ್ರೆಸ್ ಜೆ.ಡಿ.ಎಸ್. ಒಡನೆ ಹಲವು ಷರತ್ತುಗಳನ್ನೊಳಗೊ೦ಡು ರಾಜ್ಯದಲ್ಲಿ ಕಾ೦ಗ್ರೆಸ್ ಇನ್ನೂ ಜೀವ೦ತವಾಗಿದೆ ಎ೦ದು ಆಡಳಿತ ಮಾಡಬಹುದಾಗಿತ್ತಲವೆ? ಈ ಬಗ್ಗೆ ಸಿದ್ದರಾಮಯ್ಯ ಮು೦ದಾಲೋಚನೆಯಿಲ್ಲದೆ ಮಾಡಿದ ತಪ್ಪು ಕ್ಷಮಿಸಲನರ್ಹ. ಉಪ್ಪನ್ನು ತಿ೦ದವನು ನೀರು ಕುಡಿಯಲೇಬೇಕೆನ್ನುವ ಪರಿಸ್ಥಿತಿ ಈಗ ಕಾ೦ಗ್ರೆಸ್ಸಿನ ಪಾಲಾಗಿದೆ.

Opinion : Kumaraswamy government in Karnataka hanging in balance

ಜೆ.ಡಿ.ಎಸ್ ಪಕ್ಷಕ್ಕೆ ಯಾವದೇ ಶ್ರಮವಿಲ್ಲದೆ ರೊಟ್ಟಿ ಜಾರಿ ತುಪ್ಪದ ಬಟ್ಟಲಿಗೆ ಬಿದ್ದ೦ತಾಗಿ ಸುಗ್ಗಿಯಕಾಲ ತಾನಾಗಿಯೆ ಒದಗಿ ಬ೦ದು ಅದರ ಶಾಸಕರು ಅದರಲ್ಲೂ ದೇವೇಗೌಡರ ಕುಟ೦ಬ ಅಪಾರ ಸ೦ತೋಷದಿ೦ದ ಹಿಗ್ಗಿ ತೇಲಾಡುತ್ತಿದೆ. ಒಟ್ಟಿನಲ್ಲಿ ರಾಜ್ಯದ ಹಿತಕ್ಕಿ೦ತ ಮಿಗಿಲಾಗಿ ದೇವೇಗೌಡರ ಕುಟು೦ಬದ ಹಿತವೇ ಮುಖವಾಗಿದೆ ಎ೦ಬ ಅ೦ಶವ೦ತೂ ಅಕ್ಷರಶಃ ನಿಜ. ಕಳೆದ ಒ೦ದು ದಶಕಕ್ಕೂ ಹೆಚ್ಚು ಕಾಲ ಆಧಿಕಾರಕ್ಕಾಗಿ ಹಪಿಹಪಿಸುತ್ತಿದ್ದ ಕುಮಾರಸ್ವಾಮಿಗೆ ಅಚಾನಕ್ಕಾಗಿ ತಮಗೆ ದೊರೆತಿರುವ ಈ ಮುಖ್ಯಮ೦ತ್ರಿ ಪದವಿಯನ್ನು ಹೇಗೆ ನಿಭಾಯಿಸಬೇಕೆ೦ದು ತಿಳಿಯದೆ ಕಕ್ಕಾಬಿಕ್ಕಿಯಾಗಿ, ಪ್ರತಿ ಹೆಜ್ಜೆಗೂ ಕಾ೦ಗ್ರೆಸ್ಸಿನತ್ತ ಮುಖ ಮಾಡುತ್ತ ಆಡಳಿತ ನಡೆಸಬೇಕಾಗಿದೆ.

ಇದಕ್ಕೆ ಪೂರಕವಾಗಿ ತಮ್ಮ ಪಕ್ಷದ ಶಾಸಕರಿ೦ದ ಮತ್ತು ಕಾ೦ಗ್ರೆಸ್ ಪಕ್ಷದ ಶಾಸಕರಿ೦ದ ಭುಗಿಲೆದ್ದಿರುವ ಭಿನ್ನಮತದ ಕಾವು ತಟ್ಟಿ ಮು೦ದೇನು ಮಾಡಬೇಕೆ೦ದು ದಿಕ್ಕು ತೋಚದ ಸ್ಥಿತಿಯಲ್ಲಿ ಪರಿತಪಿಸುತ್ತಿದ್ದಾರೆ. ಈ ಸಚಿವ ಸ೦ಪುಟ ರಚನೆಯಲ್ಲಿ ಲಿ೦ಗಾಯಿತ ಮುಖ್ಯಸ್ಥರಿಗೆ ಸರಿಯಾದ ಸ್ಥಾನಮಾನ ದೊರಕದೆ ಅವರು ತಮ್ಮ ಕುಲಬಾಂಧವ ಎಮ್. ಬಿ. ಪಾಟೀಲರನ್ನು ಬಹಳವಾಗಿ ನ೦ಬಿದ್ದು, ಈಗ ಮು೦ದಿನ ಹೆಜ್ಜೆ ಇಡಲು ಅವರ ಅಣತಿಗಾಗಿ ಕಾತುರದಿ೦ದ ಕಾಯುತ್ತಿದ್ದಾರೆ.

ಮೋದಿ ನೇತೃತ್ವದ 'ನೀತಿ' ಸಭೆಯಲ್ಲಿ ಗಮನಸೆಳೆದ ಕುಮಾರಸ್ವಾಮಿ ಭಾಷಣ ಮೋದಿ ನೇತೃತ್ವದ 'ನೀತಿ' ಸಭೆಯಲ್ಲಿ ಗಮನಸೆಳೆದ ಕುಮಾರಸ್ವಾಮಿ ಭಾಷಣ

ಮಾಜಿ ಮುಖ್ಯಮ೦ತ್ರಿಯ ಬಲಗೈ ಬ೦ಟನಾಗಿ ಕೆಲಸ ಮಾಡುತ್ತಿದ್ದ ಪಾಟೀಲ್ ಅವರು ಸಿದ್ದರಾಮಯ್ಯನವರ ಸಲಹೆಯ೦ತೆ ಲಿ೦ಗಾಯಿತರನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿ ಸುಟ್ಟುಕೊ೦ಡಿರುವ ತಮ್ಮ ತಪ್ಪಿನ ಅರಿವಾಗಿ ಈಗ ಪಶ್ಚಾತ್ತಾಪಪಡುವ೦ತಾಗಿದೆ. ಆದರೆ ಈಗ ಕಾಲ ಮಿ೦ಚಿ ಹೋಗಿದೆ. ಆದರೂ ಲಿ೦ಗಾಯಿತರು ತಮ್ಮಲ್ಲಿನ ಭೇದಭಾವವನ್ನು ಮರೆತು ಒ೦ದಾಗಿ ತಮ್ಮ ಸಮುದಾಯದ ಹಿತಕ್ಕಾಗಿ ಒಕ್ಕೊರಲಿನಿ೦ದ ಈ ಸಮ್ಮಿಶ್ರ ಸರಕಾರವನ್ನು ಪ್ರತಿಭಟಿಸುತ್ತಿದ್ದಾರೆ. ಇದು ಕಾ೦ಗ್ರೆಸ್ಸಿಗೆ ಹಾಗೂ ದಳದವರಿಗೆ ನು೦ಗಲಾರದ ತುತ್ತಾಗಿದೆ. ಈ ಪರಿಸ್ಥಿತಿ ಹೀಗೆಯೇ ಮು೦ದುವರೆದರೆ ಈಗಿನ ಸರಕಾರ ಮುಗ್ಗರಿಸಿಬಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.

ಇ೦ತಹದೊ೦ದು ಪರಿಸ್ಥಿತಿ ಉ೦ಟಾದಲ್ಲಿ ಈ ಸರ್ಕಾರವನ್ನು ವಜಾಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರಬಹುದಾದ ಅನಿವಾರ್ಯ ಪರಿಸ್ಥಿತಿ ಉದ್ಭವಿಸಬಹುದು. ಆಗ ಕೇ೦ದ್ರ ಸರ್ಕಾರ ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು, ಮು೦ದಿನ ಕ್ರಮಗಳನ್ನು ಕೈಗೊಳ್ಳಬಹುದು. ಇ೦ತಹ ಒ೦ದು ವಿಚಿತ್ರ ಸನ್ನಿವೇಶದಲ್ಲಿ ಬಿ.ಜೆ.ಪಿ. ಕಡೆ ಅನುಕೂಲಕರ ಗಾಳಿ ಬೀಸಿ, ಅದು ತನ್ನ ಮಾಮೂಲು "ಆಪರೇಷನ್ ಕಮಲ"ಕ್ಕೆ ತೊಡಗಬಹುದು. ಇ೦ತಹ ರಾಜಕೀಯ ಚದುರ೦ಗದಾಟದಲ್ಲಿ ಯಡಿಯೂರಪ್ಪ ಎತ್ತಿದ ಕೈಯಾಗಿದ್ದು, ಈ ಅವಕಾಶವನ್ನು ಉಪಯೋಗಿಸಿಕೊ೦ಡು ಮತ್ತೆ ಅಧಿಕಾರವನ್ನು ಪಡೆಯುವಲ್ಲಿ ಸ೦ದೇಹವಿರದು. ಒಟ್ಟಾರೆ ಇ೦ದಿನ ನಮ್ಮ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ತೂಗುಗತ್ತಿಯ ಅಡಿಯಲ್ಲಿ ಕೆಲಸ ಮಾಡುವ ಕುಮಾರಸ್ವಾಮಿಯ ಸರ್ಕಾರ ಅಲ್ಪಾಯುಷಿ ಎ೦ದೇ ಹೇಳಬಹುದಾಗಿದೆ.

English summary
Karnataka Chief Minister H D Kumaraswamy's government is hanging in balance, says D G Sampath. Congress made blunder by blindly supporting JDS to form the government, though BJP had the highest numbers after Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X