ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಸರ್ಕಾರ ಖತಂ: ನಿಜವಾಯ್ತೆ ಮೈಲಾರಲಿಂಗ ಕಾರ್ಣಿಕ ಭವಿಷ್ಯ?

|
Google Oneindia Kannada News

Recommended Video

Karnataka Crisis : ಕರ್ನಾಟಕ ರಾಜಕೀಯದ ಬಗ್ಗೆ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ | ONeindia Kannada

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವಾರ್ಷಿಕ ಕಾರ್ಣಿಕ ಉತ್ಸವದಂದು ಕೇಳಿ ಬಂದ ಗೊರವಯ್ಯನ ಭವಿಷ್ಯ ವಾಣಿ ಮತ್ತೆ ನಿಜವಾಗಿದೆ ಎಂಬ ಸುದ್ದಿ ಬಂದಿದೆ.

ಶತ ಶತಮಾನಗಳಿಂದ ಹೇಳುತ್ತಾ ಬರುತ್ತಿರುವ ಕಾರ್ಣಿಕ ಭವಿಷ್ಯದ ಮುನ್ನುಡಿ ಎಂದು ಭಕ್ತರ ನಂಬಿಕೆಯಾಗಿದೆ. ಕಳೆದ ಕಾರ್ಣಿಕ ಉತ್ಸವದಲ್ಲಿ ಗೊರವಯ್ಯ ರಾಮಯ್ಯ "ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್" ನೀಡಿದ ಭವಿಷ್ಯವಾಣಿಯನ್ನು ಈಗಿನ ಮೈತ್ರಿ ಸರ್ಕಾರ ಪತನಕ್ಕೆ ಹೋಲಿಸಲಾಗುತ್ತಿದೆ.

ಗೊರವಪ್ಪನ ಕಾರ್ಣಿಕ ಭವಿಷ್ಯ ನಿಜವಾಯ್ತು, ಜೆಡಿಎಸ್ ಗೆ ಪವರ್!ಗೊರವಪ್ಪನ ಕಾರ್ಣಿಕ ಭವಿಷ್ಯ ನಿಜವಾಯ್ತು, ಜೆಡಿಎಸ್ ಗೆ ಪವರ್!

ಈ ಬಗ್ಗೆ ನಾಡಿನ ಭವಿಷ್ಯವಾಣಿಯಾದ ಕಾರ್ಣಿಕ, ಶುಭಾಶುಭ ಫಲಗಳ ಬಗ್ಗೆ ಸಾರ್ವಜನಿಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುವ ವಿಶ್ಲೇಷಣೆಗಳು, ವಿಶೇಷ ಅರ್ಥಗಳು ಕೇಳುತ್ತಿದ್ದು, ಪರಸ್ಪರ ಚರ್ಚೆಗಳಿಗೆ ಕಾರಣವಾಗಿದೆ.

15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸರ್ಕಾರವು ವಿಶ್ವಾಸಮತ ಪರೀಕ್ಷೆಯಲ್ಲಿ ಬಹುಮತ ಕಳೆದುಕೊಂಡಿದೆ. ಮೊದಲ ಬಾರಿಗೆ ಸಿಎಂ ಆಗಿದ್ದಾಗ 20 ತಿಂಗಳುಗಳ ಕಾಲ ಹಾಗೂ ಎರಡನೇ ಬಾರಿಗೆ 14 ತಿಂಗಳುಗಳ ಅಧಿಕಾರವನ್ನು ಅನುಭವಿಸಿದರು. ಎರಡು ಬಾರಿಯೂ ಸಮ್ಮಿಶ್ರ/ ಮೈತ್ರಿ ಸರ್ಕಾರದ ನೇತೃತ್ವ ವಹಿಸಿಕೊಂಡಿದ್ದ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದಾರೆ. ಕಾರ್ಣಿಕ ಹೇಳಿದಂತೆ ಕಬ್ಬಿಣ ಸರಪಳಿ ಎಂದರೆ ಮೈತ್ರಿಯಿಂದ ಸ್ಥಾಪಿತವಾದ ಸರ್ಕಾರ ಬಿದ್ದಿದೆ ಎಂದು ಅರ್ಥೈಸಲಾಗಿದೆ. ಆದರೆ, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಇನ್ನೂ ಅಬಾಧಿತವಾಗಿದ್ದು, ಮೈತ್ರಿ ಮುರಿದರೆ ಮಾತ್ರ ಈ ವಾಕ್ಯಕ್ಕೆ ಬೆಲೆ ಬರುತ್ತದೆ ಎಂಬ ವಾದವೂ ಬಂದಿದೆ.

ಮೈಲಾರ ಲಿಂಗೇಶ್ವರ ಕಾರ್ಣಿಕ ದೈವವಾಣಿಯ ಅರ್ಥ: ಉಳಿದವರು ಕಂಡಂತೆಮೈಲಾರ ಲಿಂಗೇಶ್ವರ ಕಾರ್ಣಿಕ ದೈವವಾಣಿಯ ಅರ್ಥ: ಉಳಿದವರು ಕಂಡಂತೆ

2017ರ ಫೆಬ್ರವರಿ ಮೊದಲ ವಾರದಲ್ಲಿ 'ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೆ ಪರಾಕ್‌' ಎಂದು ಕಾರ್ಣಿಕ ನುಡಿ ಹೇಳಿದ್ದರು. ಪ್ರಸ್ತುತ ರಾಜಕಾರಣದ ಸ್ಥಿತಿ ಕುರಿತಂತೆ ಭವಿಷ್ಯ ನುಡಿದಿದ್ದು ನಿಜವಾಗಿದೆ, ಜೆಡಿಎಸ್ ಗೆ ಅಧಿಕಾರ ಸಿಕ್ಕಿದೆ ಎಂದು ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಧರ್ಮದರ್ಶಿ ವೆಂಕಪ್ಪ ಒಡೆಯರ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 ಭವಿಷ್ಯ ನುಡಿಯನ್ನು ಕಾರ್ಣಿಕರು ವಿಶ್ಲೇಷಣೆ ಮಾಡಿದ್ದಾರೆ

ಭವಿಷ್ಯ ನುಡಿಯನ್ನು ಕಾರ್ಣಿಕರು ವಿಶ್ಲೇಷಣೆ ಮಾಡಿದ್ದಾರೆ

ಗೊರವಯ್ಯ ರಾಮಯ್ಯ ಅವರು ಈ ಬಾರಿಯ ಭವಿಷ್ಯ ನುಡಿಯನ್ನು ಕಾರ್ಣಿಕರು ವಿಶ್ಲೇಷಣೆ ಮಾಡಿದ್ದಾರೆ. ಅದರಂತೆ, 2019ರಲ್ಲಿ ನುಡಿದ ವಾಣಿ: "ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್" "ರಾಜಕೀಯ ನಾಯಕರ ಸಂಕಲ್ಪ ಸಿದ್ಧಿಸುತ್ತದೆ. ಮೈತ್ರಿಕೂಟಗಳಲ್ಲಿ ಬಿರುಕು, ಸಂಬಂಧ ಮುರಿಯಲಿದೆ. ರಾಜ್ಯದಲ್ಲಿ ರೈತರ ಸಂಕಷ್ಟಗಳು ನಿವಾರಣೆಯಾಗಲಿವೆ. ವ್ಯಾಪಾರ ವಾಣಿಜ್ಯ ಉದ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ಈ ಬಾರಿ ಒಳ್ಳೆಯದಾಗಲಿದೆ," ಎಂಬರ್ಥ ಎಂದು ಅಧಿಕೃತವಾಗಿ ಫೆಬ್ರವರಿ ತಿಂಗಳಿನಲ್ಲಿ ಘೋಷಿಸಲಾಗಿದೆ.

ಕಬ್ಬಿಣ ಸರಪಳಿ ಎಂದರೆ ಮೈತ್ರಿ ಸರ್ಕಾರ ಎಂಬರ್ಥ, ಮೈತ್ರಿ ಸರ್ಕಾರಕ್ಕೆ ಉಳಿಗಾಲವಿಲ್ಲ, ಸರ್ಕಾರ ಉರುಳಿಬೀಳಲಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ಇದು ಮಹಾಘಟಬಂದನ್ ಬಗ್ಗೆ ಹೇಳಿದ ಮಾತು ಎಂದಿದ್ದಾರೆ. ಬಹುಮತ ಯಾರಿಗೂ ಸಿಗಲ್ಲ, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ. ಕಬ್ಬಿಣದ ಅಧಿಪತಿ ಶನಿ ಕೃಪೆ ಸಿಕ್ಕಿ ರೈತರಿಗೆ ಒಳಿತಾಗಲಿದೆ ಎನ್ನಲಾಗಿದೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದರು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿ ಸರ್ಕಾರ ರಚಿಸಿದೆ.

 ಗೊರವಪ್ಪನ ಕಾರ್ಣಿಕ ಭವಿಷ್ಯ 2018

ಗೊರವಪ್ಪನ ಕಾರ್ಣಿಕ ಭವಿಷ್ಯ 2018

ಗೊರವಪ್ಪನ ಕಾರ್ಣಿಕ ಭವಿಷ್ಯ,'ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೆ ಪರಾಕ್‌' ಅರ್ಥ: ಆಕಾಶದಂತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಅಧಿಕಾರ ಸಿಕ್ಕಿಲ್ಲ. ಬದಲಿಗೆ ಗಿಳಿಯಂತಿರುವ ಹಸಿರು ಬಣ್ಣದ ಸಣ್ಣ ಪಕ್ಷ ಜೆಡಿಎಸ್‌ಗೆ ಅಧಿಕಾರ ಸಿಕ್ಕಿದೆ ಎಂದು ವೆಂಕಪ್ಪ ಒಡೆಯರ್ ವಿಶ್ಲೇಷಿಸಿದ್ದಾರೆ. ಈ ಹಿಂದೆ ಸಹ ಗೊರವಪ್ಪ ಹೇಳಿರುವ ಕಾರ್ಣಿಕಗಳು ಸತ್ಯವಾಗಿದ್ದು, ಇದು ಶ್ರೀಕ್ಷೇತ್ರದ ಮಹಿಮೆಯಾಗಿದೆ ಎಂದು ಒಡೆಯರ್ ಹೇಳಿದ್ದಾರೆ.

ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ

 ಹೂವಿನಹಡಗಲಿ ತಾಲೂಕಿನ ದೇಗುಲ

ಹೂವಿನಹಡಗಲಿ ತಾಲೂಕಿನ ದೇಗುಲ

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ

 ಗೊರವಯ್ಯನಿಗೆ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ

ಗೊರವಯ್ಯನಿಗೆ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ

ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ಜಪ, ತಪದಲ್ಲಿರುತ್ತಾನೆ. ತದನಂತರ ಕ್ಷೇತ್ರದ ಧರ್ಮದರ್ಶಿ ಯವರೊಂದಿಗೆ ಮತ್ತು ವಿಜಯನಗರದ ಅರಸರು ಅರ್ಪಿಸಿದ್ದ ಮೂರ್ತಿಯೊಂದಿಗೆ ಕುದುರೆ ಏರಿ ಡಂಕನಮರಡಿ ಎನ್ನುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ಕ್ಷೇತ್ರದ ಪರಂಪರೆಯಂತೆ 15 ಅಡಿ ಎತ್ತರದ ಬಿಲ್ಲುಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ.

English summary
Mylara Lingeshwara Annual Karnika Utava and Utterance predication comes true again. According to Temple administration official statement during February explains about JDS -Congress coalition government is like a chain and it will break down.Karnikotsava is annual fair in Mylara Lingeshwara Temple in Hoovina Hadagali Taluk, Bellary District
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X