ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ

|
Google Oneindia Kannada News

Recommended Video

ಸುಮಲತಾಗೆ ಮಂಡ್ಯದಲ್ಲಿ ಸೋಲು | ಇದು ಚಿಂತಾಮಣಿ ಸಮೀಕ್ಷೆ | Oneindia Kannada

ಲೋಕಸಭೆ ಚುನಾವಣೆ 2019ರ ಮತದಾನ ಪ್ರಕ್ರಿಯೆ ನಂತರ ಜನಪ್ರಿಯ ರಾಜಕೀಯ ತಜ್ಞ ಚಿಂತಾಮಣಿ ಅವರು ಎಲೆಕ್ಷನ್. ಇನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿರುವ ಜನಾಭಿಪ್ರಾಯ ಸಮೀಕ್ಷೆ ಎಕ್ಸಿಟ್ ಪೋಲ್ ವರದಿ ಇಲ್ಲಿದೆ.

ಚಿಂತಾಮಣಿ 5 ಡಾಟ್ಸ್ ಸಮೀಕ್ಷಾ ವರದಿಯಂತೆ ಬಿಜೆಪಿ 271 ಗಳಿಸಲಿದ್ದು, ಎನ್ಡಿಎ 335 ಸ್ಕೋರ್ ಮಾಡಲಿದೆ. ಯುಪಿಎ 100 ಸ್ಥಾನ ಮುಟ್ಟಲು ಕಷ್ಟಪಡಲಿದೆ ಎಂದು ಏಪ್ರಿಲ್ ತಿಂಗಳಿನಲ್ಲಿ ನೀಡಿದ ಸಮೀಕ್ಷೆಯಲ್ಲಿ ಹೇಳಿತ್ತು.

Exit Poll 2019 : ದಕ್ಷಿಣದಲ್ಲಿ ಎನ್ಡಿಎಗಿಂತ ಯುಪಿಎ ಮೇಲುಗೈExit Poll 2019 : ದಕ್ಷಿಣದಲ್ಲಿ ಎನ್ಡಿಎಗಿಂತ ಯುಪಿಎ ಮೇಲುಗೈ

ಆದರೆ, ಈಗ ಏಳು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಎಕ್ಸಿಟ್ ಪೋಲ್ ವರದಿಯಂತೆ ಬಿಜೆಪಿ 285, ಎನ್ಡಿಎ 347, ಕಾಂಗ್ರೆಸ್ 53, ಯುಪಿಎ 89 ಹಾಗೂ ಇತರೆ 107 ಸ್ಥಾನಗಳು ಎಂದಿದೆ.

ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿ

ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎ ವಿರುದ್ಧ ಯುಪಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. 2009ರಂತೆ 2019ರಲ್ಲೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಏಪ್ರಿಲ್ ನಲ್ಲಿ ಬಂದಿದ್ದ ವರದಿ

ಏಪ್ರಿಲ್ ನಲ್ಲಿ ಬಂದಿದ್ದ ವರದಿ

ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ 9 ಸ್ಥಾನ ಸಿಗಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ, ಈಗ ಬಿಜೆಪಿ 22 ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ 6 ಸ್ಥಾನ ಗಳಿಸಲಿದೆ ಎಂದು ಮೇ 19ರಂದು ಎಕ್ಸಿಟ್ ಪೋಲ್ ವರದಿಯಲ್ಲಿ ಬಂದಿದೆ. ಬಿಜೆಪಿಗೆ 21 ಹಾಗೂ ಮಿತ್ರಪಕ್ಷಕ್ಕೆ 1 ಎಂದು ವರದಿ ನೀಡಿದೆ. ಪಕ್ಷೇತರ. ಇತರೆ 0 ಎಂದು ಹೇಳಿರುವುದರಿಂದ ಸುಮಲತಾ ಗೆಲುವು ಕಷ್ಟ ಎಂದು ಅಭಿಪ್ರಾಯಪಡಬಹುದು.

ಜೆಡಿಎಸ್ -ಕಾಂಗ್ರೆಸ್ ಫಲಿತಾಂಶ

ಜೆಡಿಎಸ್ -ಕಾಂಗ್ರೆಸ್ ಫಲಿತಾಂಶ

ಉಳಿದಂತೆ, ಜೆಡಿಎಸ್ ಏಕೈಕ ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 7ಕ್ಕೆ ಕುಸಿಯಲಿದೆ. ಬಿಜೆಪಿ 19(2014ರಲ್ಲಿ 17), ಕಾಂಗ್ರೆಸ್ 7(9), ಜೆಡಿಎಸ್ 1(2), ಇತರೆ 1(0) ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಏಪ್ರಿಲ್ ತಿಂಗಳಿನಲ್ಲಿ ಚಿಂತಾಮಣಿ ವರದಿ ನೀಡಿತ್ತು. ಈಗ ಎಕ್ಸಿಟ್ ಪೋಲ್ ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ಸಿಗೆ 6 ಸ್ಥಾನ ಎಂದು ಹೇಳಿದೆ. ಕಾಂಗ್ರೆಸ್ಸಿಗೆ 4, ಜೆಡಿಎಸ್ ಗೆ 2 ಎಂದು ಮಾತ್ರ ಹೇಳಿದೆ. ಹಾಸನ, ಮಂಡ್ಯ ಹಾಗೂ ತುಮಕೂರು ಪೈಕಿ ಒಂದು ಸ್ಥಾನ ಕಳೆದುಕೊಳ್ಳಲಿದೆ ಎಂದು ಹೇಳಿದೆ.

ಮಂಡ್ಯದಲ್ಲಿ ಯಾವ ಅಂಶ ಪ್ರಮುಖವಾಯಿತು

ಮಂಡ್ಯದಲ್ಲಿ ಯಾವ ಅಂಶ ಪ್ರಮುಖವಾಯಿತು

ಮಂಡ್ಯದಲ್ಲಿ ಆಡಳಿತರೂಢ ಪಕ್ಷದ ಒಮ್ಮತದ ಅಭ್ಯರ್ಥಿ, ಮುಖ್ಯಮಂತ್ರಿಗಳ ಪುತ್ರನಿಗೆ ಸೋಲುಂಟಾಗಲು ಮೈತ್ರಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಖ್ಯ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಇದೆಲ್ಲವೂ ಕೊನೆ ಕ್ಷಣದಲ್ಲಿ ಬದಲಾವಣೆ ಕಂಡಿದ್ದು, ಅತ್ಯಂತ ಕಡಿಮೆ ಅಂತರದಿಂದ ನಿಖಿಲ್ ಪರವಾಗಿ ಫಲಿತಾಂಶ ತಿರುಗಲಿದೆ ಎಂದು ಚಿಂತಾಮಣಿ ಹೇಳಿದೆ.

ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50

ಸರಾಸರಿಯಲ್ಲೂ ಸುಮಲತಾಗೆ ಸಿಹಿ ಸುದ್ದಿಯಿಲ್ಲ

ಸರಾಸರಿಯಲ್ಲೂ ಸುಮಲತಾಗೆ ಸಿಹಿ ಸುದ್ದಿಯಿಲ್ಲ

ರಿಪಬ್ಲಿಕ್ ಟಿವಿ ಸಿ ವೋಟರ್ , ಜನ್ ಕಿ ಬಾತ್, ಇಂಡಿಯಾ ಟುಡೇ ಅಕ್ಸಿಸ್ ಹಾಗೂ ಮೈ ಆಕ್ಸಿಸ್ ನಲ್ಲಿ ಸುಮಲತಾಗೆ ಗೆಲುವು ಎಂದು ಹೇಳಲಾಗಿತ್ತು. ಮಿಕ್ಕ ಐದಾರು ಸಮೀಕ್ಷೆಗಳಲ್ಲಿ ಸುಮಲತಾಗೆ ಸೋಲು ಎನ್ನಲಾಗಿದೆ. ಹೀಗಾಗಿ ಪ್ರಮುಖ ಹತ್ತು ಎಕ್ಸಿಟ್ ಪೋಲ್ ಗಳ ಪೈಕಿ 6ರಲ್ಲಿ ನಿಖಿಲ್ ಪರ ಫಲಿತಾಂಶ ಬಂದಿದೆ. 4ರಲ್ಲಿ ಸುಮಲತಾ ಪರ ವರದಿ ಇದೆ.

ಮಂಡ್ಯ ಎಕ್ಸಿಟ್ ಪೋಲ್: 4 ರಲ್ಲಿ ಸುಮಲತಾ, 6 ರಲ್ಲಿ ನಿಖಿಲ್ ಗೆಲುವು!ಮಂಡ್ಯ ಎಕ್ಸಿಟ್ ಪೋಲ್: 4 ರಲ್ಲಿ ಸುಮಲತಾ, 6 ರಲ್ಲಿ ನಿಖಿಲ್ ಗೆಲುವು!

English summary
Mandya Exit Poll results 2019: Political analyzer Mr. Chintamani carried out an intensive Exit poll for Elections dot in website. According to the Chintamain-5 Dots opinion poll survey, the BJP supported candidate A Sumalatha may be defeated in a narrow margin by Nikhil Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X