ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?
ಮುಂಬೈ, ಅಕ್ಟೋಬರ್ 03: ಇದೇ ಮೊದಲ ಬಾರಿಗೆ ಬಾಳಾ ಸಾಹೇಬ್ ಠಾಕ್ರೆ ಕುಟುಂಬದ ಸದಸ್ಯರೊಬ್ಬರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಠಾಕ್ರೆ ಅವರ ಮೊಮ್ಮಗ ಆದಿತ್ಯ ಇಂದು ವರ್ಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಗುರುವಾರದಂದು ಮುಂಬೈನ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಜೊತೆಗೆ ಆದಿತ್ಯ ಸಲ್ಲಿಸಿರುವ ಅಫಿಡವಿಟ್ ನ ಪ್ರಕಾರ ಅವರ ಬಳಿ 16.05 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ಜ್ಯೋತಿಷ್ಯ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಫಡ್ನವೀಸ್ ಗೆ ಸಿಎಂ ಯೋಗವಿಲ್ಲ
ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಲ್ಲಿ ಆದಿತ್ಯ ಠಾಕ್ರೆ ಪಾಲ್ಗೊಂಡಿದ್ದರು. 1966ರಲ್ಲಿ ಶಿವಸೇನಾ ಸ್ಥಾಪನೆಯಾಗಿದ್ದು, ಇಲ್ಲಿ ತನಕ ಬಾಳಾ ಠಾಕ್ರೆ ಕುಟುಂಬಸ್ಥರು ಚುನಾವಣೆ ಎದುರಿಸಿರಲಿಲ್ಲ. ಆದರೆ ಈ ಬಾರಿ ಆದಿತ್ಯ ಕಣಕ್ಕಿಳಿಯಲು ಬಯಸಿದ್ದರಿಂದ ಈ ಸ್ಥಾನದಿಂದ ಸ್ಪರ್ಧಿಸುತ್ತಿದ್ದ ಸುನಿಲ್ ಶಿಂಧೆ ಅವರು ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟಿದ್ದರು.
ಚರಾಸ್ತಿ ಹಾಗೂ ಸ್ಥಿರಾಸ್ತಿ ಮೌಲ್ಯ
ಆದಿತ್ಯ ಠಾಕ್ರೆ ನೀಡಿರುವ ಮಾಹಿತಿ ಪ್ರಕಾರ ಅವರ ಬಳಿ ಸ್ಥಿರಾಸ್ತಿ 4.67 ಕೋಟಿ ರು ಹಾಗೂ ಚರಾಸ್ತಿ 11.38 ಕೋಟಿ ರು ನಷ್ಟಿದೆ. 10 ಕೋಟಿ 36 ಲಕ್ಷದ 15 ಸಾವಿರದ 218 ರೂಪಾಯಿ ಬ್ಯಾಂಕಿನಲ್ಲಿ ಠೇವಣಿ ಹೊಂದಿದ್ದಾರೆ. ಕೈಯಲ್ಲಿ 30,000 ರೂಪಾಯಿ ನಗದು ಇಟ್ಟುಕೊಂಡಿದ್ದಾರೆ.
ಹೂಡಿಕೆ, ಕಾರು ವಿವರ
ಆದಿತ್ಯ ವಿವಿಧ ಬಾಂಡ್, ಷೇರುಗಳ ಮೇಲೆ 20.39 ಲಕ್ಷ ರು ಹೂಡಿಕೆ ಮಾಡಿದ್ದಾರೆ. ಆದಿತ್ಯ ಬಳಿ ವಿಶ್ವದರ್ಜೆಯ ಬಿಎಂಡಬ್ಲ್ಯೂ ಕಾರಿದೆ. ಅದರ ಮೌಲ್ಯ ಸುಮಾರು 6.5 ಲಕ್ಷ ರೂಪಾಯಿ. ಇದರ ಜೊತೆಗೆ 64 ಲಕ್ಷ 65 ಸಾವಿರ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಇದಲ್ಲದೆ 10 ಲಕ್ಷದ 22 ಸಾವಿರದ ಆಸ್ತಿ ಇನ್ನಿತರ ಆಸ್ತಿ ಇದೆ ಎಂದು ತೋರಿಸಿದ್ದಾರೆ. ಆದಿತ್ಯ ಠಾಕ್ರೆ ನೀಡಿರುವ ಅಫಿಡವಿಟ್ ಪ್ರಕಾರ ಸಾಲಗಾರರಲ್ಲ, ಆದಿತ್ಯ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.
ಮಹಾ ಚುನಾವಣೆ ಬಿಜೆಪಿ ಎರಡನೇ ಪಟ್ಟಿಯಲ್ಲಿ ಅಚ್ಚರಿ, ತಾವ್ಡೆ ಔಟ್!
ಬಿಜೆಪಿ ಜೊತೆ ಶಿವಸೇನಾ ಮೈತ್ರಿ
ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150,ಶಿವಸೇನೆ 124 ಮತ್ತು ಇತರ ಸಣ್ಣ ಪುಟ್ಟ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ. 2014ರಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು, 260 ಕ್ಷೇತ್ರಗಳ ಪೈಕಿ ಬಿಜೆಪಿ 122ರಲ್ಲಿ ಗೆಲುವು ಸಾಧಿಸಿತ್ತು. ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 63ರಲ್ಲಿ ಜಯ ದಾಖಲಿಸಿತ್ತು.
ಯುವ ಸೇನಾ ಅಧ್ಯಕ್ಷ ಬಾಳಾ ಠಾಕ್ರೆ
2010ರಲ್ಲಿ
ಯುವ
ಸೇನಾದ
ಅಧ್ಯಕ್ಷರಾಗಿ
ಆಯ್ಕೆಯಾದರು.
2017ರಲ್ಲಿ
ಮುಂಬೈ
ಜಿಲ್ಲಾ
ಫುಟ್ಬಾಲ್
ಅಸೋಸಿಯೇಷನ್
ಅಧ್ಯಕ್ಷರಾಗಿ
ಆಯ್ಕೆಯಾದರು.
2018ರಿಂದ
ಶಿವಸೇನಾ
ಮುಖಂಡರಾಗಿ
ಕಾರ್ಯ
ನಿರ್ವಹಿಸುತ್ತಿದ್ದಾರೆ.
ಬಾಂಬಾ
ಸ್ಕಾಟಿಷ್
ಶಾಲೆ,
ಸೈಂಟ್
ಕ್ಸೇವಿಯರ್
ಕಾಲೇಜ್,
ಕೆಸಿ
ಕಾನೂನು
ಕಾಲೇಜಿನ
ಹಳೆ
ವಿದ್ಯಾರ್ಥಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಸುಗಮ... ಶಿವಸೇನೆಗೆ ಡಿಸಿಎಂ ಪೋಸ್ಟ್ ಪಕ್ಕಾ!