ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಕ್ಷ್ಮತೆ, ಸ್ವಾವಲಂಬನೆ, ಸ್ವಪ್ರಯತ್ನಕ್ಕೆ ಇಂಬು ಕೊಟ್ಟ ಲಾಕ್ ಡೌನ್ ಗೆ ದೀರ್ಘ ನಮಸ್ಕಾರ

By ಪುಷ್ಪಾ ಎರ್ಮಾಳ್
|
Google Oneindia Kannada News

ಮಾರ್ಚ್ 23ನೇ ತಾರೀಕು. ಕೊರೊನಾ ಎಂಬ ಮಹಾಮಾರಿ ಎಲ್ಲೆಲ್ಲೂ ಹಬ್ಬುತ್ತಿತ್ತು. ಟಿವಿಯಲ್ಲಿ ಸುದ್ದಿ ವಾಹಿನಿಯನ್ನು ವೀಕ್ಷಿಸುತ್ತಿದ್ದೆ. ನಾಳೆಯಿಂದ ಇಡೀ ಕರ್ನಾಟಕ ಲಾಕ್ ಡೌನ್ ಎಂಬ ವರದಿ ಬರುತ್ತಿತ್ತು.

ಅದನ್ನು ನೋಡಿದ ತಕ್ಷಣ ಅಪಾರ್ಟ್ಮೆಂಟಿನ ನಾಲ್ಕು ಗೋಡೆಗಳ ಜೈಲೆಂಬ ವಾಸಸ್ಥಾನದಿಂದ ನಮ್ಮಹಳ್ಳಿಯ ಸ್ವಚ್ಚಂದ ಪರಿಸರಕ್ಕೆ ಅದೇ ದಿನ ರಾತ್ರಿ ಎದ್ದೆವೋ ಬಿದ್ದೆವೋ ಎಂದು ಹಾರಿ ಬಂದು, ಸ್ವಸ್ಥಾನವನ್ನು ಸೇರಿಕೊಂಡಿದ್ದೆವು.

 94ರ ವೃದ್ಧೆ 40 ವರ್ಷದ ನಂತರ ಗೂಡು ಸೇರಲು ಕಾರಣ ಗೂಗಲ್, ವಾಟ್ಸಾಪ್! 94ರ ವೃದ್ಧೆ 40 ವರ್ಷದ ನಂತರ ಗೂಡು ಸೇರಲು ಕಾರಣ ಗೂಗಲ್, ವಾಟ್ಸಾಪ್!

ಬಂದ ನಾಲ್ಕಾರು ದಿನಗಳು ಎಲ್ಲವೂ ಸರಿಯಾಗಿಯೇ ಇದ್ದವು. ಆದರೆ ಟಿವಿಯಲ್ಲಿ ಯಾವುದೇ ಧಾರಾವಾಹಿಗಳಿಲ್ಲದೆ, ಹೊರಗೆಲ್ಲಿಯೂ ಹೋಗಲಿಕ್ಕಾಗದೆ ಬೇಸರ ಶುರುವಾಯಿತು. ಆಗ ನನ್ನನ್ನು ಎಚ್ಚರಿಸಿದ್ದು ನನ್ನ ಗತ ಜೀವನದ ಚಟುವಟಿಕೆಗಳು.

Long Lockdown Days Teached Self-Effort, Self - Reliant: Covid 19

ನಗರಕ್ಕೆ ಹೋಗಿ ನೆಲೆಸಿದ ನಂತರ ಹಳ್ಳಿಯಲ್ಲಿದ್ದಾಗ ನಾನು ಮಾಡುತ್ತಿದ್ದ ಕೆಲಸಗಳಿಗೆಲ್ಲಾ ಪೂರ್ಣವಿರಾಮ ಬಿದ್ದಿತ್ತು. ಒಂದು ಜಾಗದ ಕೊರತೆ ಇರಬಹುದು,ಇನ್ನೊಂದು ಸಮಯದ ಅಭಾವವೂ ಇರಬಹುದು,ಮತ್ತೊಂದು ನಮಗೆ ಬೇಕಿದ್ದೆಲ್ಲಾ ಅಂಗಡಿಯಲ್ಲಿ ಕೊಳ್ಳುವಂಥ ಸಾಮರ್ಥ್ಯವೂ ಬಂದಿರಬಹುದು.

ಅಲ್ಲಿಯವರೆಗೂ ಒಂದು ವರ್ಷಕ್ಕೆ ಮನೆಗೆ ಬೇಕಾಗುವಷ್ಟು ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿಗಳನ್ನೆಲ್ಲಾ ನಾನೇ ಮಾಡುತಿದ್ದೆ.ಈಗ ನಿಂತುಹೋಗಿದ್ದ ಅವುಗಳಿಗೆಲ್ಲ ಪುನಶ್ಚೇತನ ಬಂದಿತು. ಮಾರ್ಚ್, ಏಪ್ರಿಲ್ ತಿಂಗಳ ಬಿಸಿಲು ಕೈ ಬೀಸಿ ಕರೆಯುತ್ತಿತ್ತು. ಅದನ್ನು ವ್ಯರ್ಥಗೊಳಿಸಲು ಇಷ್ಟವಾಗದೆ ಕಾರ್ಯನಿರತಳಾದೆ.

ಮನೆಯಲ್ಲಿಯೇ ಬೆಳೆದ ಮಾವಿನಕಾಯಿಯ ಮಿಡಿ ಉಪ್ಪಿನಕಾಯಿ, ಹಲಸಿನ ಕಾಯಿಯ ಹಪ್ಪಳ, ಅಕ್ಕಿ ಹಪ್ಪಳ, ಸಂಡಿಗೆಗಳೆಲ್ಲ ಕೆಲವೇ ದಿನಗಳಲ್ಲಿ ತಯಾರಾದವು. ಅದರಿಂದಾದ ತೃಪ್ತಿ, ಆನಂದವನ್ನು ಪದಗಳಲ್ಲಿ ಬಣ್ಣಿಸಲಾಗದು.ಹೇಳಿ ಕೇಳಿ ನಮ್ಮದು ಕರಾವಳಿ ತೀರ.

Long Lockdown Days Teached Self-Effort, Self - Reliant: Covid 19

ಹೇರಳವಾಗಿದ್ದ ತೆಂಗಿನ ಮರದ ಗರಿಗಳಿಂದ ಒಂದಷ್ಟು ಕಸಗುಡಿಸುವ ಪೊರಕೆಗಳು ತಯಾರಿಸಲ್ಪಟ್ಟವು. ಮನೆಗೂ ಉಪಯೋಗವಾಗುವದರ ಜೊತೆಗೆ ನಾಲ್ಕಾರು ಕಾಸು ಕೈಗೂ ಸೇರಿತು. ಸ್ವಸಂಪಾದನೆ ಮತ್ತೆ ಶುರುವಾಗಿತ್ತು. ಹೊರಗಡೆ ಹೋಗುವ ಅವಕಾಶವೇ ಇಲ್ಲದಾದಾಗ ದೇವರ ಮೇಲಿನ ಭಕ್ತಿಯು ಹೆಚ್ಚಿ, ಸಮಯ ಕೊಲ್ಲಲು, ದೇವರ ಸ್ತೋತ್ರಗಳ ಮೊರೆ ಹೋಗಬೇಕಾಯಿತು.

'ಯಜಮಾನ'ನ ನಿರೀಕ್ಷೆಯಲ್ಲಿದ್ದ 'ಬಸವ'ನಿಗೆ ವರವಾಗುತ್ತಾ ಲಾಕ್ ಡೌನ್ ವಿನಾಯಿತಿ?'ಯಜಮಾನ'ನ ನಿರೀಕ್ಷೆಯಲ್ಲಿದ್ದ 'ಬಸವ'ನಿಗೆ ವರವಾಗುತ್ತಾ ಲಾಕ್ ಡೌನ್ ವಿನಾಯಿತಿ?

ದೇವರಿಗೆ ದೀಪ ಹಚ್ಚಲು ಬತ್ತಿಗಳ ಅಭಾವ ಕಂಡು ಬಂದಾಗ, ಹತ್ತಿರದಲ್ಲಿ ಅಂಗಡಿಗಳೂ ಇಲ್ಲದಿದ್ದುದರಿಂದ ಸ್ವಪ್ರಯತ್ನದಿಂದ ಬತ್ತಿ ಮಾಡುವುದನ್ನು ಕಲಿತೆ. ಈಗ ಒಂದು ದಿನದಲ್ಲಿ ನೂರಾರು ಬತ್ತಿಗಳನ್ನು ಮಾಡುವ ಸಾಮರ್ಥ್ಯ ಬಂದಿದೆ. ಬತ್ತಿಗಾಗಿ ವ್ಯಯ ಮಾಡುತ್ತಿದ್ದ ಹಣವೂ ಉಳಿಯುತ್ತಿದೆ.

'ಮನಸಿದ್ದರೆ ಮಾರ್ಗ 'ಎಂಬಂತೆ ಎಲ್ಲವನ್ನೂ ನಾವೇ ಕಲಿತು ಮಾಡಬಹುದು ಎಂಬ ಆತ್ಮವಿಶ್ವಾಸ ನನ್ನಲ್ಲಿ ಮೂಡಿದೆ. ಏನೇ ಆಗಲಿ ಗತ ಜೀವನದ ನೆನಪುಗಳನ್ನು ಮರಳಿಸಿದ, ಸೂಕ್ಷ್ಮತೆ, ಸ್ವಾವಲಂಬನೆ, ಸ್ವಪ್ರಯತ್ನಕ್ಕೆ ಇಂಬುಕೊಟ್ಟ ಲಾಕ್ ಡೌನ್ ಗೆ ಒಂದು ದೀರ್ಘ ನಮಸ್ಕಾರ.

English summary
Long Lockdown Days Teached Self-Effort, Self - Reliant: Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X