ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಯಾರು, ಏನಂದರು?
Recommended Video
ನವದೆಹಲಿ, ಏಪ್ರಿಲ್ 08: ಬಿಜೆಪಿ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಡುಗಡೆಯಾದ ಪ್ರಣಾಳಿಕೆಯನ್ನು ಸಂಕಲ್ಪ ಪತ್ರ ಎಂದು ಕರೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ ಇದನ್ನು ಜುಮ್ಲಾ ಪ್ರಣಾಳಿಕೆ ಎಂದು ಕರೆದಿದೆ. ದೇಶವನ್ನು ಅಭಿವೃದ್ಧಿಶಿಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಬದಲಿಸುವುದೇ ನಮ್ಮ ಮೂಲ ಉದ್ದೇಶ ಎಂದು ಪ್ರಣಾಳಿಕೆ ಬಿಡುಗಡೆಯ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?
48 ಪುಟಗಳ ಪ್ರಣಾಳಿಕೆಯಲ್ಲಿ ಯಾವುದೇ ಹೊಸ ಘೋಷಣೆ ಇಲ್ಲವಾದರೂ, ಹಳೆಯ ಯೋಜನೆಗಳಲ್ಲೇ ಕೆಲವು ಸುಧಾರಣೆಗಳನ್ನು ಬಿಜೆಪಿ ಮಾಡಿದಂತಿದೆ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಿದ್ಧವಾದ ಈ ಪ್ರಣಾಳಿಕೆಯನ್ನು ಪ್ರಧಾನಿ ಮೋದಿ, ಶಾಸನ ಪತ್ರ, ಸಮೃದ್ಧಿಯ ಪತ್ರ, ರಾಷ್ಟ್ರದ ಭದ್ರತೆಯ ಪತ್ರ ಎಂದಿದ್ದಾರೆ. ಈ ಕುರಿತು ನಾಯಕರ ಪ್ರತಿಕ್ರಿಯೆ ಹೇಗಿತ್ತು, ನೋಡಿ...
Array |
ರಾಜನಾಥ್ ಸಿಂಗ್
ಭಯೋತ್ಪಾದನೆಯ ಬಗ್ಗೆ ನಾವು ಶೂನ್ಯ ಸಂವೇದನೆಯನ್ನು ಹೊಂದಿದ್ದೇವೆ. ಭಾರತ ಭದ್ರವಾಗಿದ್ದರೆ ಮತ್ತಷ್ಟು ಸಾಧನೆ ಸಾಧ್ಯ. ನಮಗೆ ಎಂದಿಗೂ ದೇಶ ಮೊದಲು- ರಾಜನಾಥ್ ಸಿಂಗ್, ಗೃಹಸಚಿವ, ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ
ಬಿಜೆಪಿ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆ
Array |
ಸಂಜಯ್ ಝಾ
ಎಂಥ ವಿಪರ್ಯಾಸ! ಮೂಲಸೌಕರ್ಯಕ್ಕೆ 100 ಕೋಟಿ ರೂ!ಇದು ವೈಬ್ರಂಟ್ ಗುಜರಾತ್ 2.0. ನಾವು ಜೋಕರ್ ಗಳ ಕೈಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದೇವೆ.
ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?
|
ಶೋಭಾ ಕರಂದ್ಲಾಜೆ
ಕರಾವಳಿ ಕರ್ನಾಟಕದ ಮೀನುಗಾರರಿಗೆ ಈ ಪ್ರಣಾಳಿಕೆ ಭರವಸೆ ನೀಡಿದೆ. ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಕರಾವಳಿಯ ಮೀನುಗಾರರಿಗೆ 10,000 ಕೋಟಿ ರೂ.ವರೆಗೆ ಅನುದಾನ ನೀಡಲಿದೆ- ಶೋಭಾ ಕರಂದ್ಲಾಜೆ, ಉಡುಪಿ-ಚಿಕ್ಕಮಗಳೂರು ಸಂಸದೆ.
|
ಕರ್ನಾಟಕ ಕಾಂಗ್ರೆಸ್
ಬಿಜೆಪಿಯ ಇಂದಿನ ಪ್ರಣಾಳಿಕೆಯನ್ನು ಕೇಳಿಸಿಕೊಳ್ಳುತ್ತಿರುವುದು ಬಿಜೆಪಿ ಜನರಿಗೆ ಯಾವ ಹೊಸ ಯೋಜನೆ ಘೋಷಿಸುತ್ತಾರೆ ಎಂಬ ನಿರೀಕ್ಷಿಯಿಂದ ಅಲ್ಲ.
ಬದಲಿಗೆ ಅವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ತಿಳಿದುಕೊಳ್ಳಲು ಇವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ಅಷ್ಟೇ- ಕರ್ನಾಟಕ ಕಾಂಗ್ರೆಸ್
|
ತೇಜಸ್ವಿ ಸೂರ್ಯ
ನಾವು ಮುಂದಿನ ಐದು ವರ್ಷಗಳಲ್ಲಿ ಮೆಟ್ರೋ ಸಂಪರ್ಕವನ್ನು ಹೊಂದಿದ ಐವತ್ತು ಸಿಟಿಗಳನ್ನು ಹೊಂದಿರುತ್ತೇವೆ.ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್, ಐ ವೇಸ್ ಮತ್ತು ಪ್ರಾದೇಶಿಕ ಏರ್ ಪೋರ್ಟ್ ಗಳನ್ನು ನಿರ್ಮಿಸುತ್ತೇವೆ. 2024 ರ ಹೊತ್ತಿಗೆ ಪ್ರತಿ ಮನೆಗೂ ನೀರು ನೀಡುವ ನಳ್ ಸೇ ಜಲ್ ಯೋಜನೆ ಜಾರಿಗೆ ತರುತ್ತೇವೆ. ಬಿಜೆಪಿ ತನ್ನ ಸಂಕಲ್ಪ ಪತ್ರದ ಮೂಲಕ ಹೊಸ ಭಾರತವನ್ನು ಕಟ್ಟಲು ಐತಿಹಾಸಿಕ ಪ್ರಯತ್ನ ಮಾಡಿದೆ- ತೇಜಸ್ವಿ ಸೂರ್ಯ
|
ಸಿದ್ದರಾಮಯ್ಯ
ನರೇಂದ್ರ ಮೋದಿಯವರು ತಮ್ಮ 5 ವರ್ಷಗಳ ವೈಫಲ್ಯವನ್ನು ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಹೂತಿಟ್ಟು, ಅಲ್ಲಿ ನೆಮ್ಮದಿಯಾಗಿದ್ದ ರಾಮನನ್ನು ಕರೆದುಕೊಂಡು ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೆ.
ನರೇಂದ್ರ ಮೋದಿ ಅವರೇ, ಇನ್ನೆಷ್ಟು ಕಾಲ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತೀರ? 5 ವರ್ಷದಲ್ಲಿ ಒಮ್ಮೆಯಾದರೂ ಮಂದಿರ ನೆನಪಾಗಿರಲಿಲ್ಲವೇ?- ಸಿದ್ದರಾಮಯ್ಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ
|
ಸುರೇಶ್ ಪ್ರಭು
ಆಧುನಿಕ ತಂತ್ರಜ್ಞಾನದ ಮೂಲಕ ಸೇನೆಯ ಬಲವನ್ನು ಹೆಚ್ಚಿಸುವುದರಿಂದ ರಾಷ್ಟ್ರದ ಭದ್ರತೆಯೂ ಹೆಚ್ಚಾಗಲಿದೆಯಲ್ಲದೆ, ಭಯೋತ್ಪಾದನೆಯ ನಿಯಂತ್ರಣಕ್ಕೆ ಬರಲಿದೆ. ಈಶಾನ್ಯ ರಾಜ್ಯದಿಂದ ಅಕ್ರಮವಾಗಿ ನುಸುಳುವವರನ್ನೂ ತಡೆಯಲು ಪರಿಣಾಮಕಾರಿ ಹಾದಿ ಹುಡಿದ್ದೇವೆ- ಸುರೇಶ್ ಪ್ರಭು, ಬಿಜೆಪಿ ಮುಖಂಡ