ಕಾಂಗ್ರೆಸ್ ಪ್ರಣಾಳಿಕೆ : ಯಾರಿಗೆ ಮೊದಲ ಆದ್ಯತೆ?
ನವದೆಹಲಿ, ಏಪ್ರಿಲ್ 02: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ ಚಿದಂಬರಂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದವರ ಸಮ್ಮುಖದಲ್ಲಿ ನವದೆಹಲಿಯಲ್ಲಿಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
LIVE: Congress President @RahulGandhi launches 2019 Manifesto. #CongressManifesto2019 https://t.co/th35WGsl63
— Congress (@INCIndia) April 2, 2019
ಪಿ.ಚಿದಂಬರಂ ನೇತೃತ್ವದ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಲ್ಲಿ ಮನಪ್ರೀತ್ ಬಾದಲ್, ಸುಷ್ಮಿತಾ ದೇವ್, ರಾಜೀವ್ ಗೌಡ, ಭುಪೀಂದರ್ ಸಿಂಗ್ ಹೂಡಾ, ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಬಿಂದು ಕೃಷ್ಣಾ, ಸೆಲ್ಜಾ ಕುಮಾರಿ, ರಘುವೀರ್ ಸಿಂಗ್ ಮೀನಾ, ಬಾಲಚಂದ್ರ ಮುಂಗೇಕರ್, ಮೀನಾಕ್ಷಿ ನಟರಾಜನ್, ರಜನಿ ಪಾಟಿಲ್, ಸ್ಯಾಮ್ ಪಿತ್ರೋಡಾ, ಸಚಿನ್ ರಾವ್, ತಮೃದ್ವಜ್ ಸಾಹು, ಮುಖುಲ್ ಸಗ್ಮಾ, ಶಶಿ ತರೂರ್, ಲಲಿತೇಶ್ ತ್ರಿಪಾಠಿ ಸೇರಿ 19 ಮಂದಿ ಸದಸ್ಯರಿದ್ದರು.
ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ
ನಿರುದ್ಯೋಗ ನಿರ್ಮೂಲನೆ, ಮಹಿಳಾ ಸಬಲೀಕರಣ, ರೈತರ ಉದ್ಧಾರ ಇವೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಗ್ರಸಾಲಿನಲ್ಲಿ ರಾರಾಜಿಸುತ್ತಿದ್ದು, ಪ್ರಣಾಳಿಕೆಯ ಹೈಲೈಟ್ಸ್ ಗಳ ಲೈವ್ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.
ನಿರವ್ ಮೋದಿ, ಮೆಹೂಲ್ ಚೋಕ್ಸಿ ಅಂತಹ ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಹಣ ಪಡೆದು ಸುಲಭವಾಗಿ ದೇಶ ಬಿಟ್ಟು ಓಡಿಹೋಗುತ್ತಿದ್ದರೂ ಅವರನ್ನು ಏನೂ ಮಾಡಲಾಗದ ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿ ದುಡಿಯುವ ರೈತರು ಬ್ಯಾಂಕ್ ಸಾಲ ಪಾವತಿಸಲು ವಿಫಲರಾದರೆ ಅವರನ್ನು ಜೈಲಿಗೆ ಕಳಿಸುತ್ತಾರೆ. @RahulGandhi #CongressManifesto2019 pic.twitter.com/0d6Q3OfTwg
— Karnataka Congress (@INCKarnataka) April 2, 2019
ನಾನು ದೇಶದ ಪರವಾಗಿ ಕೆಲಸ ಮಾಡುತ್ತಿದ್ದು ನಮ್ಮ ಆಯ್ಕೆ ಮಾಡುವುದು ಬಿಡುವುದು ಜನರಿಗೆ ಬಿಟ್ಟ ವಿಚಾರವಾಗಿದೆ. @RahulGandhi
— Karnataka Congress (@INCKarnataka) April 2, 2019
#CongressManifesto2019 pic.twitter.com/E9Pu9VAf5j