ಕರ್ನಾಟಕದ ಗಟ್ಟಿದನಿ, ಹೋರಾಟಗಾರ, ಹೆಮ್ಮೆಯ ''ಪಾಪು''
ಉತ್ತರ ಕರ್ನಾಟಕದ ಗಟ್ಟಿದನಿ, ಹೋರಾಟಗಾರ, ಸಾಹಿತಿ, ಪತ್ರಕರ್ತ, ಮಾರ್ಗದರ್ಶಿ, ನಾಡೋಜ, ಪಾಟೀಲ ಪುಟ್ಟಪ್ಪ ಅವರು ಸೋಮವಾರ ಮಾರ್ಚ್ 16ರಂದು ಇಹಲೋಕ ಯಾತ್ರೆ ಮುಗಿಸಿದ್ದಾರೆ.ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು ಪಾಪು' ಎಂದೇ ಪ್ರಸಿದ್ಧರಾಗಿದ್ದಾರೆ.
ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ 1919ರಲ್ಲಿ ಸಿದ್ದಲಿಂಗಪ್ಪ ಮಲ್ಲಮ್ಮ ದಂಪತಿಗೆ ಜನಿಸಿದ ಪಾಟೀಲ್ ಪುಟ್ಟಪ್ಪ ಅವರು ಕುರುಬಗೊಂಡ, ಬ್ಯಾಡಗಿ, ಹಾವೇರಿ, ಧಾರವಾಡದಲ್ಲಿ ವ್ಯಾಸಂಗ ಮಾಡಿದರು. ಲಿಂಗರಾಜು ಕಾಲೇಜಿನಲ್ಲಿ ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ ಮಾಡಿದರು. ವಿಜಯಪುರದಲ್ಲಿ ವಕೀಲ ವೃತ್ತಿ ಆರಂಭಿಸಿದ ಪಾಟೀಲ್ ಪುಟ್ಟಪ್ಪ ಅವರಿಗೆ ವಕೀಲಿಕೆ ಕೈಹಿಡಿಯಲಿಲ್ಲ ಉದ್ಯೋಗ ಅರಸಿ ಪತ್ರಿಕಾ ರಂಗಕ್ಕೆ ಕಾಲಿಟ್ಟರು.
Breaking: ಹಿರಿಯ ಸಾಹಿತಿ ನಾಡೋಜ ಪಾಟೀಲ್ ಪುಟ್ಟಪ್ಪ ವಿಧಿವಶ
ಫ್ರೀ ಪ್ರೆಸ್ ಜರ್ನಲ್, ಬಾಂಬೆ ಕ್ರಾನಿಕಲ್ ನಲ್ಲಿ ಉದ್ಯೋಗ ಮಾಡಿದರು. ಸದಾನಂದ, ಸೈಯದ್ ಅಬ್ದುಲ್ಲಾ, ಎ. ಜಿ ತೆಂಡೂಲ್ಕರ್ ಅವರ ಪ್ರೋತ್ಸಾಹದಿಂದ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ಅಮೆರಿಕದಿಂದ ಮರಳಿದ ಮೇಲೆ 1947ರಲ್ಲಿ ವಿಶಾಲ ಕರ್ನಾಟಕ ಪತ್ರಿಕೆ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ ವಹಿಸಿದರು. 1954ರಲ್ಲಿ ಪ್ರಪಂಚ ಪತ್ರಿಕೆಯನ್ನು ಹೊರತಂದರು.
ನೆಹರೂ ನೋಡಿ ಪ್ರಭಾವಿತರಾಗಿದ್ದರು
ರಾಷ್ಟ್ರೀಯ ಪ್ರಭಾವ: 1930 ರಲ್ಲಿ ''ನಹಿ ರಖನಾ ನಹಿ ರಖನಾ ಅಂಗ್ರೇಜಿ ಸರಕಾರ್"ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮಾ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ.
ಕಾಲೇಜು: ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939. ಅದೇ ವರ್ಷ ಉಡುಪಿಯ ಅಂತರಂಗ' ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ. 1941 ರಲ್ಲಿ ನಾನು ಮಾಸ್ತಿಯವರನ್ನು ಕಂಡೆ' ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ ಅಬ್ರಾಹಂ ಲಿಂಕನ್' ಕುರಿತು ಜೀವನ' ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು -ಜೀವನದಲ್ಲಿ ಸುದಿರ್ಘ ಲೇಖನ. ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿ 1942.
ಕನ್ನಡಿಗರ ಮಹಾಧಿವೇಶನ
ಚಲೇಜಾವ್
ಚಳುವಳಿ:
1942
ರಲ್ಲಿ
ರಾಷ್ಟ್ರೀಯ
ಹೋರಾಟದಲ್ಲಿ
ಭಾಗವಹಿಸಿ
ವಿದ್ಯಾರ್ಥಿಗಳ
ಸಂಘಟನೆ
ಮಾಡಿದ
ಆಪಾದನೆಗಾಗಿ'
ಅವರನ್ನು
ಕರ್ನಾಟಕ
ಕಾಲೇಜಿನಿಂದ
ಹೊರಹಾಕಿದರು.
ಒಂದು
ವರ್ಷ
ಕಾಲ
ಭೂಗತ
ಕಾರ್ಯಕರ್ತರಾಗಿ
ಕೆಲಸ.
ಕಾನೂನು
ಕಾಲೇಜು:
1943
ರಲ್ಲಿ
ಬೆಳಗಾವಿ
ಕಾನೂನು
ಕಾಲೇಜಿಗೆ
ಸೇರ್ಪಡೆ.
1945
ರಲ್ಲಿ
ಕಾನೂನು
ಪದವೀಧರ.
ಮದುವೆ:
1945
ರಲ್ಲಿ
ನವೆಂಬರ್
11
ರಂದು
ವಿಜಾಪುರದ
ಡಾ.
ಬಿ.
ಎಂ.
ಪಾಟೀಲರ
ಮಗಳು
ಇಂದುಮತಿಯವರೊಡನೆ.
ಮಕ್ಕಳು:
ಮುಂಜುಳಾ,
ಶೈಲಜಾ,
ಅಶೋಕ.
ಮುಂಬಯಿ ವಾಸ್ತವ್ಯ: 1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ. ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟ್ಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ. ಕೆ. ಸದಾನಂದರು ಫ್ರೀ ಪ್ರೆಸ್' ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕನಾಗಬೇಕೆಂದು ಹೇಳಿದರು
ಪತ್ರಿಕೋದ್ಯಮ ಆರಂಭ ದಿನಗಳು
ಕನ್ನಡಿಗರ ಮಹಾಧಿವೇಶನ: ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ. ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದುದು, 1946 ಅಗಸ್ಟ್ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು.
ಪತ್ರಿಕೋದ್ಯಮ:
ಹಾವೇರಿಯಲ್ಲಿ
ಓದುತ್ತಿರುವಾಗ
ನಮ್ಮ
ನಾಡು'
ಕೈ
ಬರಹದ
ಪತ್ರಿಕೆಯ
ಪ್ರಕಟಣೆ
1936.
ವಾರ
ಪತ್ರಿಕೆ
ವಿಶಾಲ
ಕರ್ನಾಟಕ'ದ
ಸಂಪಾದಕತ್ವ
ಅನಂತರ
ಅದು
ಅಗಸ್ಟ್
9,
1947
ರಂದು
ದಿನಪತ್ರಿಕೆಯಾಯಿತು.
ಏಕೀಕರಣ:
1949
ರ
ಆರಂಭದಲ್ಲಿ
ಕಲ್ಬುರ್ಗಿಯಲ್ಲಿ
ಕರ್ನಾಟಕ
ಏಕೀಕರಣ
ಪರಿಷತ್ತು
ಮೈಸೂರು
ಸಹಿತಿ
ಕರ್ನಾಟಕವಾಗಬೇಕೆನ್ನುವ
ಪಾಟೀಲ
ಪುಟ್ಟಪ್ಪ
ಮಂಡಿಸಿದ
ಗೊತ್ತುವಳಿ
ಕೋ.
ಚೆನ್ನಬಸಪ್ಪನವರ
ಅನುಮೋದನೆ
ಪಡೆದು
ಸ್ವೀಕೃತವಾಯಿತು.
ಸರದಾರ ಪಟೇಲ ಪುಟ್ಟಪ್ಪ: ಬಿ. ಎನ್. ದಾತಾರ ನೇತೃತ್ವದಲ್ಲಿ ಮಂಗಳವೀಡು ಶ್ರೀನಿವಾಸರಾವ್, ಕೃಷ್ಣಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕೋಸುಗ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟಿ ಮಾಡಿದರು.
ನವಯುಗ ಪತ್ರಿಕೆ ಸಂಪಾದಕತ್ವ
ಅಮೇರಿಕೆಗೆ ಪ್ರಯಾಣ: 1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ. ಅಮೇರಿಕೆಯಲ್ಲಿ ವಿಲ್ ಡುರ್ಯಾಂಟ್, ರಾಬರ್ಟ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ ಫರ್ಟರ್, ಐನ್ನ್ ಸ್ಟೈನ್ ಮೊದಲಾದವರ ಭೇಟಿ ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡರ್ನ್ ಸಂದರ್ಶನ.
ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ''ನವಯುಗ' ದಿನಪತ್ರಿಕೆಯ ಸಂಪಾದಕತ್ವ. ಸಂಪಾದಕತ್ವ. ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ ಸುದ್ದಿ ಅಮೇರಿಕೆಯ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬಂದಿತು.
''ಪ್ರಪಂಚ''ದ ಆರಂಭ
''ಪ್ರಪಂಚ''ದ
ಆರಂಭ:
1954
ಮಾರ್ಚ
10
ರಂದು
ಬಂಡವಾಳ
ಯಾವುದೂ
ಇಲ್ಲದೆ
ಕೇವಲ
ಲೆಕ್ಕಣಿಕೆಯಿಂದ
ಪ್ರಪಂಚ'
ವಾರ
ಪತ್ರಿಕೆಯ
ಆರಂಭ.
ಡಿವಿಜಿ.
ಆಗ
ಕಳಿಸಿದ
ಸಂದೇಶದಲ್ಲಿ
ಹೇಳಿದರು
ನೀವು
ಜೀವಂತ
ತಂತಿ
ಯಾವುದನ್ನಾದರೂ
ಆಕರ್ಷಕವಾಗಿ
ಬರೆಯಬಲ್ಲಿರಿ'
ಪ್ರಥಮ
ಕನ್ನಡ
ಡೈಜಿಸ್ಟ್:
1956
ಅಗಸ್ಟ್
ನೂತನ
ಪ್ರಥಮ
ಡೈಜಿಸ್ಟ್
ಸಂಗಮ'
ಪ್ರಕಟಿಸಿದರು.
ಜನರಲ್
ಕಾರಿಯಪ್ಪ
ಡೈಜಿಸ್ಟ್
ಅವರಿಂದ
ಬಿಡುಗಡೆ
ಕರ್ನಾಟಕ
ಮೆಡಿಕಲ್:
ಹುಬ್ಬಳ್ಳಿ
ಸರಕಾರಿ
ವೈದ್ಯಕೀಯ
ಕಾಲೇಜಿಗೆ
ಕರ್ನಾಟಕ
ಮೆಡಿಕಲ್
ಕಾಲೇಜು'
ಎಂದು
ಕಾಲೇಜು
ಹೆಸರು
ಕೊಡಿಸಿದುದು
1958.
ವಿಶ್ವವಾಣಿ
ದಿನಪತ್ರಿಕೆ
:
`ವಿಶ್ವವಾಣಿ'
ಪತ್ರಿಕೆಯನ್ನು
ಅಗಸ್ಟ್
31,
1959
ರಲ್ಲಿ
ಆರಂಭಿಸಿದರು.
ಕ.ವಿ.ವಿ.
ಸಿಂಡಿಕೇಟ್
ಸದಸ್ಯರು:
1961
ರಲ್ಲಿ
ಕರ್ನಾಟಕ
ವಿಶ್ವವಿದ್ಯಾಲಯದ
ಸಿನೇಟ್
ಸಿಂಡಿಕೇಟ್
ಸದಸ್ಯರಾಗಿ
ಆಯ್ಕೆ.
ರಾಜ್ಯಸಭೆಯ ಸದಸ್ಯತ್ವ
ರಾಜ್ಯಸಭೆಯ
ಸದಸ್ಯತ್ವ:
1962
ಮಾರ್ಚನಲ್ಲಿ
ರಾಜ್ಯಸಭೆಯ
ಸದಸ್ಯರಾಗಿ
ಆಯ್ಕೆಯಾದರು.
ಸದಸ್ಯತ್ವ
1974ರವರೆಗೆ
ಇತ್ತು.
ಕ.ವಿ.ವ.ಸಂಘದ
ಅಧ್ಯಕ್ಷ:
ಕರ್ನಾಟಕದ
ಪ್ರಥಮ
ಹಾಗೂ
ಪ್ರಮುಖ
ಸಾಂಸ್ಕೃತಿಕ
ಸಂಸ್ಥೆ
ಧಾರವಾಡದ
ಕರ್ನಾಟಕ
ಅಧ್ಯಕ್ಷತೆ.
ವಿದ್ಯಾವರ್ಧಕ
ಸಂಘದ
ಅಧ್ಯಕ್ಷರಾಗಿ
1967
ರಲ್ಲಿ
ಆಯ್ಕೆಯಾದರು.
ಅಲ್ಲಿಂದ
ಇಲ್ಲಿಯವರೆಗೆ
ಸತತವಾಗಿ
ಅಧ್ಯಕ್ಷರಾಗಿದ್ದಾರೆ.
ವಿದೇಶ
ಯಾತ್ರೆ:
ಪಶ್ಚಿಮ
ಜರ್ಮನಿ,
ಬ್ರಿಟಿಶ್
ಸರಕಾರಗಳ
ಆಮಂತ್ರಣದ
ಮೇರೆಗೆ
1965
ರಲ್ಲಿ
ಆ
ದೇಶಗಳಿಗೆ
ಸಂದರ್ಶನ.
1988
ರಲ್ಲಿ
ಸೋವಿಯತ್
ಸರಕಾರದ
ಆಮಂತ್ರಣದ
ಮೇರೆಗೆ
ರಶ್ಯಾಕ್ಕೆ
ಭೇಟಿ.
ಗೋಕಾಕ
ವರದಿ:
1982
ರಲ್ಲಿ
ಗೋಕಾಕ
ವರದಿಯ
ಬಗೆಗೆ
ನಡೆದ
ಹೋರಾಟದಲ್ಲಿ
ನಾಯಕತ್ವ
ವಹಿಸಿ
ರಾಜ್ಯವ್ಯಾಪಿ
ಹೋರಾಟ.
ಆಂದೋಲನ,
ಸಂಘಟನೆ,
ಸರಕಾರ
ಗೋಕಾಕ
ವರದಿಯನ್ನು
ಒಪ್ಪುವಂತೆ
ಮಾಡಿದರು.
ಕನ್ನಡ
ಕಾವಲು:
1985
ರಲ್ಲಿ
ಕರ್ನಾಟಕ
ಸರಕಾರವು
ಕನ್ನಡ
ಕಾವಲು
ಹಾಗೂ
ಗಡಿ
ಸಲಹಾ
ಸಮಿತಿಯನ್ನು
ಸಮಿತಿ.
ರಚಿಸಿ,
ಅಧ್ಯಕ್ಷರನ್ನಾಗಿ
ಮಾಡಿದರು.
ಕಛೇರಿಗಳಲ್ಲಿ
ಕನ್ನಡ
ತರುವ
ಪ್ರಯತ್ನಕ್ಕೆ
ಭಾರೀ
ಯಶಸ್ಸು.
***
ಬರೆದ ಪುಸ್ತಕಗಳು, ಪ್ರಶಸ್ತಿಗಳು
ಬರೆದ
ಪುಸ್ತಕಗಳು:
ನನ್ನದು
ಈ
ಕನ್ನಡ
ನಾಡು'
ನಮ್ಮದು
ಈ
ಭರತ
ಭೂಮಿ'
ಕರ್ನಾಟಕದ
ಕಥೆ'
ಸೋವಿಯತ್
ದೇಶ
ಕಂಡೆ'
ಸಾವಿನ
ಮೇಜವಾನಿ'
ಗವಾಕ್ಷ
ತೆರೆಯಿತು'
ಶಿಲಾಬಾಲಿಕೆ
ನುಡಿದಳು'
ಕಲಾ
ಸಂಗಮ'
ಬೆಳೆದ
ಬದುಕು'
ಭಾರತದ
ಬೆಳಕು'
ನೆಲದ
ನಕ್ಷತ್ರಗಳು'
ಸರ್
ಸಾಹೇಬರು'
ಹೊಸಮನಿ
ಸಿದ್ದಪ್ಪ'
ಪ್ರಪಂಚ
ಪಟುಗಳು'
ನಮ್ಮ
ಜನ
ನಮ್ಮ
ದೇಶ'
ಈಗ
ಹೊಸದನ್ನು
ಕಟ್ಟೋಣ'
ಪಾಪು
ಪ್ರಪಂಚ'
ಬದುಕುವ
ಮಾತು'
ಅಮೃತವಾಹಿನಿ'
ವ್ಯಕ್ತಿ
ಪ್ರಪಂಚ'
ಸುವರ್ಣ
ಕರ್ನಾಟಕ'
ಮುಂತಾದ
50
ಕ್ಕಿಂತ
ಹೆಚ್ಚು
ಕೃತಿಗಳು.
ಸಂದ
ಪ್ರಶಸ್ತಿಗಳು:
ರಾಜ್ಯೋತ್ಸವ
ಪ್ರಶಸ್ತಿ
1976,
ಟಿ.ಎಸ್.ಆರ್.
ಪತ್ರಿಕೋದ್ಯಮ
ಪ್ರಶಸ್ತಿ,
ಕರ್ನಾಟಕ
ವಿಶ್ವವಿದ್ಯಾಲಯದ
ಡಿ.ಲಿಟ್
ಗೌರವ,
ಹಂಪಿ
ವಿಶ್ವವಿದ್ಯಾಲಯದ
ನಾಡೋಜ'
ಪ್ರಶಸ್ತಿ,
ಟಿಳಕ
ಮೊಹರೆ
ಪ್ರಶಸ್ತಿ,
ಮಾಳವಾಡ
ಪ್ರಶಸ್ತಿ,
ವಜ್ರಕುಮಾರ
ಪ್ರಶಸ್ತಿ,
ವಿಶ್ವೇಶ್ವರಯ್ಯ
ಪ್ರಶಸ್ತಿ,
ಆದಿಚುಂಚನಗಿರಿ
ಪ್ರಶಸ್ತಿ,
ಭಾಲ್ಕಿ
ಚೆನ್ನಬಸವೇಶ್ವರ
ಪ್ರಶಸ್ತಿ,
ಬಸವಶ್ರೀ
ಪ್ರಶಸ್ತಿ,
ಕರ್ನಾಟಕ
ಚೂಡಾಮಣಿ
ಪ್ರಶಸ್ತಿ
ಹಾಗೂ
ನೃಪತುಂಗ
ಪ್ರಶಸ್ತಿ
ಪುರಸ್ಕೃತರು.