ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಶಿವಪುರ ಧ್ವಜ ಸತ್ಯಾಗ್ರಹ
ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದೆ. ಕರ್ನಾಟಕದಲ್ಲಿನ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಮಾನಾಡುವಾಗ ಶಿವಪುರ ಧ್ವಜ ಸತ್ಯಾಗ್ರಹವನ್ನು ನೆನಪು ಮಾಡಿಕೊಳ್ಳಬೇಕು. ಈ ಚಳವಳಿ ರಾಜ್ಯದ ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವಲ್ಲಿ ಯಶಸ್ವಿಯಾಗಿತ್ತು.
ಮಂಡ್ಯ ಜಿಲ್ಲೆಯ ಮದ್ದೂರು ಸಮೀಪ ಶಿಂಷಾ ನದಿ ತೀರದಲ್ಲಿ ಶಿವಪುರ. 1938ರ ಏಪ್ರಿಲ್ 10ರಿಂದ ಮೂರು ದಿನ ನಡೆದ ಶಿವಪುರ ಧ್ವಜ ಸತ್ಯಾಗ್ರಹ ರಾಜ್ಯದ ಹಲವು ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು.
ಸ್ವದೇಶಿ ಚಳವಳಿಗೆ ಚಾಲನೆ ನೀಡಿದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಮೈಸೂರು ಸಂಸ್ಥಾನದ ಜನರಲ್ಲಿಯೂ ಸ್ವಾತಂತ್ರ್ಯದ ಕಲ್ಪನೆ ಉಂಟಾಗಿ ಸರ್ಕಾರದ ವಿರುದ್ಧ ಆಂದೋಲನ ಆರಂಭವಾಯಿತು. ಬೆಂಗಳೂರು, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಚಳವಳಿಯಲ್ಲಿ ತೊಡಗಿದ್ದ ನಾಯಕರನ್ನು ಸರ್ಕಾರ ಬಂಧಿಸಿತು.
ವಿವಿಧ ನಾಯಕರ ಬಂಧನಕ್ಕೆ ಅಂಜದ ಜನರು 1938 ಜನವರಿ 26ರಂದು ಸ್ವರಾಜ್ಯ ದಿನಾಚರಣೆಯನ್ನು ನಡೆಸಿದರು. ಬೆಂಗಳೂರಿನಲ್ಲಿ ನಡೆದ ಸ್ವರಾಜ್ಯ ದಿನಾಚರಣೆ ವೇಳೆ ಜನರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು.
ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿತು. ಅನೇಕ ಮುಖಂಡರು ತ್ರಿವರ್ಣ ಧ್ವಜ ಹಾರಿಸಿದರು. ಆಗ ಅವರನ್ನು ಬಂಧಿಸಲಾಯಿತು. ಇದರಿಂದ ರೊಚ್ಚಿಗೆದ್ದ ನಾಯಕರು ಮೈಸೂರಿನ ಹೊರಗೆ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದರು.
ಕನ್ನಡ ನೆಲದ ಕ್ರಾಂತಿಯ ಕಿಡಿಗಳು: ವಿದುರಾಶ್ವತ್ಥದ ಬಲಿದಾನಿಗಳು
ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ತಿರುಮಲಗೌಡ ಅವರ ಜಮೀನಿನಲ್ಲಿ ಧ್ವಜಸ್ತಂಭ ನಿಲ್ಲಿಸಲಾಯಿತು. ಆದರೆ, ಮೈಸೂರು ಮ್ಯಾಜಿಸ್ಟ್ರೇಟರು ಮದ್ದೂರು ಸುತ್ತಮತ್ತ ಒಂದು ತಿಂಗಳ ಕಾಲ ಸಭೆ, ಮೆರವಣಿಗೆ, ಧ್ವಜಾರೋಹಣ ಮಾಡಬಾರದು ಎಂದು ಆದೇಶ ಹೊರಡಿಸಿದರು.
ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿ 1938 ಏಪ್ರಿಲ್ 9ರಂದು ಟಿ.ಸಿದ್ದಲಿಂಗಯ್ಯ ಅವರ ಆಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಹಲವರನ್ನು ಬಂಧಿಸಲಾಯಿತು. ಮೂರು ದಿನಗಳ ಧ್ವಜ ಸತ್ಯಾಗ್ರಹ ನಾಡಿನಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿತು.