ಭಾರತದಲ್ಲಿ ಸಾಲುಸಾಲು ಹಬ್ಬಗಳು ಬರುತ್ತಿರುವಾಗಲೇ ಡ್ರೈಫ್ರೂಟ್ಸ್ ಬೆಲೆ ಹೆಚ್ಚಳ: ಕಾರಣವೇನು?
ಕೋಲ್ಕತ್ತಾದಲ್ಲಿ ಈ ಬಾರಿ ಬೆಲೆ ಏರಿಕೆಯಿಂದಾಗಿ ಹಬ್ಬದ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಜನಸಾಮಾನ್ಯರ ಕೈಗೆಟುಕುವ ಬಲೆ ಸಿಗುತ್ತಿಲ್ಲ. ಪೇಶಾವರಿ ಹಸಿರು ಪಿಸ್ತಾ, ಅಂಜೂರ, ಬಾದಾಮಿ, ವಾಲ್ನಟ್ ಕರ್ನಲ್ಗಳೆಲ್ಲವೂ ಅವುಗಳ ಬೆಲೆಯಲ್ಲಿ ಜಿಗಿತವನ್ನು ಕಂಡಿವೆ. ಮುಂಬರುವ ದೀಪಾವಳಿವರೆಗೆ ಡ್ರೈ ಫ್ರೂಟ್ಸ್ ಹೆಚ್ಚಾಗುವ ನಿರೀಕ್ಷೆ ಇದೆ. ದೀಪಾವಳಿಯೊಂದಿಗೆ ಚಳಿಗಾಲ ಆರಂಭವಾಗುವ ಮುನ್ನವೇ ಬೆಲೆ ಏರಿಕೆಯ ಪರಿಣಾಮ ಗೋಚರಿಸಲಿದೆ. ಇನ್ನು ಕರ್ನಾಟಕದಲ್ಲೂ ಮುಂಬರುವ ಹಬ್ಬಗಳ ನಡುವೆ ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದ್ದು ಈಗಾಗಲೇ ಅನೇಕ ಪ್ರದೇಶಗಳಲ್ಲಿ ಡ್ರೈ ಫ್ರೂಟ್ಸ್ ಬೆಲೆ ದುಬಾರಿಯಾಗಿವೆ.
ಅಫ್ಘಾನಿಸ್ತಾನದಿಂದ ಬರುವ ಡ್ರೈ ಫ್ರೂಟ್ಸ್ನಲ್ಲಿ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಬೆಲೆಗಳಲ್ಲಿ ಜಿಗಿತ ಕಂಡಿದ್ದು, ಕೋಲ್ಕತ್ತಾದ ಬಾಡಾ ಬಜಾರ್ನ ಜೈ ಹನುಮಾನ್ ಸ್ಟೋರ್ನ ನಿರ್ವಾಹಕ ಮತ್ತು ಸಗಟು ವ್ಯಾಪಾರಿ ರಾಜೇಂದ್ರ ಕುಮಾರ್ ಅಗರ್ವಾಲ್, ಶನಿವಾರದಂದು ಮ್ಯಾಗಜೀನ್ನೊಂದಿಗೆ ಸಂವಾದದಲ್ಲಿ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣ ಮತ್ತು ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹಬ್ಬದ ಸಮಯದಲ್ಲಿ ಡ್ರೈ ಫ್ರೂಟ್ಸ್ಗಳ ಬೆಲೆಯಲ್ಲಿ ಜಿಗಿತವಾಗಿದೆ. ಯುಎಸ್ನಿಂದ ಬಾದಾಮಿ ಮತ್ತು ಪಿಸ್ತಾಗಳ ಆಮದುಗಳ ಮೇಲೆ ಪ್ರಭಾವ ಬೀರುವುದರಿಂದ, ವಿಶೇಷವಾಗಿ ದೀಪಾವಳಿಯವರೆಗೆ ಹಬ್ಬದ ಋತುವಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ ದುಬಾರಿಯಾಗಬಹುದು. ಅಮೆರಿಕಾದ ಬಾದಾಮಿ ಮತ್ತು ವಾಲ್ನಟ್ ಕರ್ನಲ್ ಹೊರತುಪಡಿಸಿ, ಆಫ್ರಿಕಾ ಮತ್ತು ಭಾರತದ ವಿವಿಧ ಪ್ರದೇಶಗಳಿಂದ ಬರುವ ಗೋಡಂಬಿ, ಒಣದ್ರಾಕ್ಷಿ ಇತ್ಯಾದಿಗಳು ಜನರ ನೆಚ್ಚಿನವು. ಇದು ಅಗತ್ಯವನ್ನು ಪೂರೈಸುತ್ತದೆ.
ಗೋಡಂಬಿಯ ಹೆಚ್ಚಿನ ಬೇಡಿಕೆಯನ್ನು ದೇಶದ ಉತ್ಪಾದನೆಯಿಂದ ಪೂರೈಸುವುದರಿಂದ ಗೋಡಂಬಿ ಬೆಲೆ ಹೆಚ್ಚು ಹೆಚ್ಚಾಗುವುದಿಲ್ಲ ಎಂದು ಅಗರ್ವಾಲ್ ಹೇಳಿದರು. ಆದರೆ, ಅಫ್ಘಾನಿಸ್ತಾನದಿಂದ ಮತ್ತು ಪಾಕಿಸ್ತಾನದ ಮೂಲಕ ಸರಕುಗಳು ಬರುತ್ತಿವೆ. ಒಣದ್ರಾಕ್ಷಿ, ಅಂಜೂರದ ಹಣ್ಣುಗಳು, ನೋಜಸ್, ಖರ್ಜೂರ, ಪಿಸ್ತಾಗಳು ಅಫ್ಘಾನಿಸ್ತಾನದಿಂದ ನೇರವಾಗಿ ಬರುವ ಒಣ ಹಣ್ಣುಗಳು ಅವುಗಳ ಬೆಲೆಗಳು ತಕ್ಷಣವೇ ದ್ವಿಗುಣಗೊಂಡಿವೆ. ಈ ಬೆಲೆಯಿಂದ ಜನರಿಗೆ ಖರೀದಿಸಿಲು ಕಷ್ಟವಾಗುತ್ತಿದೆ ಎಂದು ಕೋಲ್ಕತ್ತಾದ ಮಾರುಕಟ್ಟೆಯಿಂದ ತಿಳಿದು ಬಂದಿದೆ. ಪಶ್ಚಿಮ ಬಂಗಾಲ ಮಾರಕಟ್ಟೆಗಳುಡ್ರೈ ಫ್ರೂಟ್ಸ್ಗಳ ಬೆಲೆ ಹಾಗೂ ಮಾರಟದಲ್ಲಿ ದೇಶದಲ್ಲಿಯೇ ಹೆಸರುವಾಸಿಯಾಗಿದೆ.
ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಭಾರಿ ಏರಿಕೆ
ಒಣದ್ರಾಕ್ಷಿ
-350
ರಿಂದ
660ಕ್ಕೆ
ಹೆಚ್ಚಳ
ಪಿಸ್ತಾ
-
950-
-2050
ರೂ.ಗೆ
ಹೆಚ್ಚಳ
ಬಾದಾಮಿ
-
-470-
760
ರೂ.ಗೆ
ಹೆಚ್ಚಳ
ಅಫ್ಘಾನಿಸ್ತಾನದ ಒಣದ್ರಾಕ್ಷಿಗಳಿಗೆ ದೇಶೀಯ ಬೇಡಿಕೆ
ಡ್ರೈ ಫ್ರೂಟ್ಸ್ನ ಸಗಟು ವ್ಯಾಪಾರಿಗಳಿಗೆ ಆನ್ಲೈನ್ ವೇದಿಕೆಯನ್ನು ಒದಗಿಸುವ ಕಂಪನಿಯಾದ ಟ್ರೇಡ್ಬ್ರಿಡ್ಜ್ನ ಕಾರ್ಯಾಚರಣೆಯ ಮುಖ್ಯಸ್ಥ ಸ್ವಪ್ನಿಲ್ ಖೈರ್ನಾರ್ ಪ್ರಕಾರ, ಅಫ್ಘಾನಿಸ್ತಾನದ ಘಟನೆ ಮತ್ತು ಯುಎಸ್ ಒಳಹರಿವು ಕಡಿಮೆಯಾದ ಕಾರಣ ಒಣ ಹಣ್ಣುಗಳ ಹೆಚ್ಚಳಕ್ಕೆ ಕಾರಣವಾಯಿತು. ಹೆಚ್ಚಿನ ಬಾದಾಮಿಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಅಂಜೂರದ ಹಣ್ಣುಗಳು ಅಫ್ಘಾನಿಸ್ತಾನದಿಂದ ಬರುತ್ತವೆ. ಅಫ್ಘಾನಿಸ್ತಾನವು ಒಣದ್ರಾಕ್ಷಿಗಳಿಗೆ ಅರ್ಧದಷ್ಟು ದೇಶೀಯ ಬೇಡಿಕೆಯನ್ನು ಪೂರೈಸುತ್ತದೆ ಎಂದು ಹೇಳಿದರು.
ಸ್ಟಫ್ಡ್ ಖರ್ಜೂರಗಳು ಬಿಸಿ ದೋಸೆಯಂತೆ ಮಾರಾಟ
ರಾಖಿ ಉಡುಗೊರೆಯಾಗಿ ಬಗೆಬಗೆಯ ಡ್ರೈ ಫ್ರೂಟ್ಸ್ಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ. ಕೆಲವರು ಹ್ಯಾಂಪರ್ಗಳನ್ನು ರಚಿಸಲು ಸಡಿಲವಾದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ, ಇತರರು ಪ್ಯಾಕ್ ಮಾಡಿದ ಒಣ ಹಣ್ಣುಗಳನ್ನು ಬಯಸುತ್ತಾರೆ. ಕಳೆದ ವರ್ಷಕ್ಕಿಂತ ಬೆಲೆ ಹೆಚ್ಚಿದ್ದರೂ ಮಾರಾಟಕ್ಕೆ ಅಡ್ಡಿಯಾಗುತ್ತಿಲ್ಲ. ಆಗಸ್ಟ್ 31ರಂದು ಗಣೇಶ ಪೂಜೆಗಾಗಿ, ಅನೇಕ ಕಚೇರಿಗಳು ತಮ್ಮ ಸಹವರ್ತಿಗಳಿಗೆ ಡ್ರೈ ಫ್ರೂಟ್ಸ್ ಉಡುಗೊರೆಯಾಗಿ ನೀಡುತ್ತವೆ. ಅದಕ್ಕೆ ಆರ್ಡರ್ ಕೂಡ ಸಿಗುತ್ತವೆ. ಸ್ಟಫ್ಡ್ ಖರ್ಜೂರಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ ಎಂದು ಡ್ರೈ ಫ್ರೂಟ್ಸ್ಗಳ ವ್ಯಾಪಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನದ ಡ್ರೈ ಫ್ರೂಟ್ಸ್ ಬೇಕು ಎನ್ನತ್ತಾರೆ
ಕಳೆದ ವರ್ಷದಲ್ಲಿ ಅಫ್ಘಾನಿಸ್ತಾನದಲ್ಲಿನ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನಿಂದ ಭಾರತದ ಡ್ರೈ ಫ್ರೂಟ್ಸ್ಗಳ ಆಮದುಗಳ ಮೇಲೆ ಟೋಲ್ ತೆಗೆದುಕೊಂಡಿತು, ಕೋಲ್ಕತ್ತಾದ ಬೇಕರಿಗಳು, ಮಿಠಾಯಿಗಳು ಮತ್ತು ಸಿಹಿ ಅಂಗಡಿಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಜೊತೆಗೆ ರಕ್ಷಾ ಬಂಧನ ಮತ್ತು ಗಣೇಶ ಚತುರ್ಥಿಯ ಈ ಹಬ್ಬದ ಸೀಸನ್ನಲ್ಲಿ ಬೆಲೆ ಏರಿಕೆ ಕಾಣುತ್ತಿರುವುದು ಜನರಿಗೆ ಸಮಸ್ಯೆಯಾಗಿದೆ.
ಈ ಬಾರಿ ವ್ಯಾಪಾರವು ಸಾಮಾನ್ಯಕ್ಕಿಂತ ಉತ್ತಮವಾಗಿದೆ. ಅಫ್ಘಾನಿಸ್ತಾನದ ಒಣ ಹಣ್ಣುಗಳು ಸ್ಥಳೀಯವಾಗಿ ಅಥವಾ ದಕ್ಷಿಣದಿಂದ ಬಂದ ಹಣ್ಣುಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿವೆ. ಆದರೆ ಗ್ರಾಹಕರು ಹೆಚ್ಚು ಪಾವತಿಸಲು ಸಿದ್ಧರಿದ್ದಾರೆ. ರಾಖಿಯಷ್ಟೇ ಅಲ್ಲ, ಗಣೇಶ ಚತುರ್ಥಿಗೂ ಆರ್ಡರ್ಗಳ ಸುರಿಮಳೆ ಶುರುವಾಗಿದೆ. ಗಣೇಶ ಪೂಜೆಗೆ ರಾಖಿಗಿಂತಲೂ ಹೆಚ್ಚಿನ ಆರ್ಡರ್ಗಳನ್ನು ಪಡೆಯುತ್ತಿದ್ದೇವೆ. ಈ ವಾರಾಂತ್ಯದಿಂದ ರಾಖಿ ಆರ್ಡರ್ಗಳು ಹೆಚ್ಚಾಗಬಹುದು. ಸಹೋದರಿಯರು ಸಾಮಾನ್ಯವಾಗಿ ಈ ಸಂದರ್ಭಕ್ಕಾಗಿ ಒಣ ಹಣ್ಣುಗಳ ಸಂಗ್ರಹವನ್ನು ಖರೀದಿಸುತ್ತಾರೆ ಎಂದು ನ್ಯೂ ಮಾರ್ಕೆಟ್ನ ಡ್ರೈ ಫ್ರೂಟ್ಸ್ಗಳ ಚಿಲ್ಲರೆ ವ್ಯಾಪಾರಿಗಳು ಹೇಳಿಕೊಂಡಿದ್ದಾರೆ.