ಜನ್ಮಾಷ್ಟಮಿ ವಿಶೇಷ: ಕೃಷ್ಣವೇಷಧಾರಿಗಳ ಅಂದ ಚೆಂದ ನೋಡಿ
ಜಗದೇಕ ಪಿತ, ಮಾಧವ, ಮುಕುಂದ, ಕೇಶವ ಹೀಗಾಗಿ ನೂರಾರು ನಾಮಗಳಿಂದ ಕರೆಸಿಕೊಳ್ಳುವ ನವನೀತ ಚೋರ ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಇಂದು ಕೂಡಾ ದೇಶದೆಲ್ಲೆಡೆ ಮನೆ ಮಾಡಿದೆ. ದೇಶ, ಭಾಷೆ, ಪ್ರಾಂತ್ಯ, ಗಡಿ ಮೀರಿದ ಭಕ್ತಿ ಭಾವದಿಂದ ಕೃಷ್ಣನ ಭಜನೆ ಮಾಡುತ್ತಿದ್ದಾರೆ.
ಸಾವಿರಾರು ಜನ ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಮುದ್ದು ಕೃಷ್ಣನನ್ನು ಜತೆಗೆ ಪುಟ್ಟ ರಾಧೆಯನ್ನು ಮನೆಯಲ್ಲಿಯೇ ನೋಡಿ ಖುಷಿಪಟ್ಟಿದ್ದಾರೆ. ಜಗವೆಂಬ ನಾಟಕ ರಂಗದ ಸೂತ್ರಧಾರನಾದ ಮಾಧವನನ್ನು ಮನಸಾರೇ ಹಾಡಿ ಹೊಗಳಿ, ಪೂಜಿಸಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.
ಜನ್ಮಾಷ್ಟಮಿಯ ವೇಳೆ ವೇಷ ಧರಿಸುವ ಈ ವ್ಯಕ್ತಿ ಬಡಮಕ್ಕಳ ಪಾಲಿನ ಆಶಾಕಿರಣ
ಉಡುಪಿ, ಮಥುರಾ, ಪಂಡರಾಪುರ, ಗುರುವಾಯೂರು, ದ್ವಾರಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಕೃಷ್ಣ ದೇಗುಲಗಳು ಸಂಭ್ರಮ, ಸಡಗರ ಮನೆ ಮಾಡಿದೆ. ಮಥುರಾ ನಗರದ್ದಲ್ಲಂತೂ ಹಿಂದೂ ಮುಸ್ಲಿಮರು ಕಲೆತು ಒಟ್ಟಿಗೆ ಕೃಷ್ಣನ ಸೇವೆಗೆ ನಿಲ್ಲುತ್ತಾರೆ, ಕರ್ನಾಟಕದ ವಿವಿಧೆಡೆ ಮುಸ್ಲಿಂ ಬಾಂಧವರ ಮಕ್ಕಳು ಕೂಡಾ ನವನೀತ ಚೋರ ಕೃಷ್ಣನ ವೇಷ ಧರಿಸಿ ಈ ದಿನ ಸಂಭ್ರಮಿಸುತ್ತಾರೆ
ಕೃಷ್ಣ ಎಂದರೆ ಕಷ್ಟ ಒಂದಿಷ್ಟಿಲ್ಲ ಎನ್ನುತ್ತಾ ದೇಶದೆಲ್ಲೆಡೆ ಮುರಾರಿಯ ಅಲೆಯಲ್ಲಿ ಎಲ್ಲರೂ ಮಿಂದೆದ್ದಿದಾರೆ.ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಕೆಲ ಚಿತ್ರಗಳು ಇಲ್ಲಿವೆ ನೋಡಿ ಅನಂದಿಸಿ... ಚಿತ್ರಗಳ ಕೃಪೆ: ಪಿಟಿಐ
ಶ್ರೀಕೃಷ್ಣನ ಕಾಣಲು ಹಾತೊರೆದ ಭಕ್ತ ಸಮೂಹ
ಮಥುರಾ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರದಿಂದಲೇ ಭಕ್ತಾದಿಗಳು ಕೃಷ್ಣದೇಗುಲಕ್ಕೆ ಹೆಚ್ಚಿನ ಸಂಖ್ಯೆಯಿಂದ ಬರುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಲ್ಲಿ ಕೃಷ್ಣ ಭಜನೆ ಮುಗಿಲು ಮುಟ್ಟಿದೆ.
ಕೊಡಗಿನ ನಷ್ಟವನ್ನೆಲ್ಲ ತುಂಬಿಸು ಕೃಷ್ಣಾ : ವಿದ್ಯಾಧೀಶ ತೀರ್ಥ ಸ್ವಾಮೀಜಿ
ಜಮ್ಮುವಿನಲ್ಲೂ ಕೃಷ್ಣ ಜನ್ಮಾಷ್ಟಮಿ
ಜಮ್ಮು: ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಭಕ್ತಾದಿಗಳು ಮೆರವಣಿಗೆ ಮೂಲಕ ಕೃಷ್ಣನನ್ನು ಹೊತ್ತು ತಿರುಗಿ ಸಂಭ್ರಮಿಸಿದರು.
ಕೈಯಲ್ಲಿ ಪಿಳ್ಳಂಗೋವಿ ಹಿಡಿದು ಬಂದನೋ ಪುಟ್ಟ ಕಿಟ್ಟಪ್ಪ!
ಆಮೃತಸರ್ ನಲ್ಲಿ ಬಾಲ ಕೃಷ್ಣರ ಜತೆ ಯೋಧ
ಆಮೃತಸರ್ ನಲ್ಲಿ ಬಾಲ ಕೃಷ್ಣರ ಜತೆ ಸೆಲ್ಪಿ ತೆಗೆದುಕೊಳ್ಳುತ್ತಿರುವ ಗಡಿ ಭದ್ರತಾ ಪಡೆಯ ಯೋಧ.
ಕೋಲ್ಕತ್ತಾದಲ್ಲಿ ಜನ್ಮಾಷ್ಟಮಿ ಸಂಭ್ರಮ
ಕೋಲ್ಕತ್ತಾ : ಶ್ರೀಕೃಷ್ಣನ ವೇಷ ಧರಿಸಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ಸಿದ್ಧರಾಗಿರುವ ಚಿಣ್ಣರು.
ಕೃಷ್ಣರನ್ನು ಸಿದ್ಧಪಡಿಸುತ್ತಿರುವ ಅಮ್ಮಂದಿರು
ಬೆಂಗಳೂರು: ದೇಶದೆಲ್ಲೆಡೆ ಜನ್ಮಾಷ್ಟಮಿ ಅಂಗವಾಗಿ ಬಾಲ ಕೃಷ್ಣ ವೇಷಧಾರಿಗಳ ಸ್ಪರ್ಧೆ, ಸಂಭ್ರಮ ಕಂಡು ಬಂದಿತು.
ಭೋಪಾಲ್ ನಲ್ಲಿ ಸಿಎಂ ಶಿವರಾಜ್ ಸಿಂಗ್
ಭೋಪಾಲ್ : ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಶ್ರೀಕೃಷ್ಣ ಮೂರ್ತಿಯನ್ನು ಹೊತ್ತು ಮೆರವಣಿಗೆ ಬಂದರು.
ಜೈಪುರದಲ್ಲಿ ನಡೆದ ಕಾರ್ಯಕ್ರಮ
ಜೈಪುರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೃಷ್ಣ, ರಾಧೆ ವೇಷಧಾರಿಗಳು.
ಚೆನ್ನೈನಲ್ಲಿ ಚಿಣ್ಣರ ಸಂಭ್ರಮ
ಕೃಷ್ಣ, ಯಾದವರ ವೇಷ ಧರಿಸಿದ ಮಕ್ಕಳು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಗುವಹಾಟಿಯಲ್ಲಿ ಕೃಷ್ಣನಿಗೆ ಅಭಿಷೇಕ
ಗುವಹಾಟಿಯಲ್ಲಿ ಶ್ರೀಕೃಷ್ಣನಿಗೆ ಪಂಚಾಮೃತ ಅಭಿಷೇಕ ಮಾಡುತ್ತಿರುವ ಭಕ್ತರು.
ಪಾಟ್ನದಲ್ಲಿ ಇಸ್ಕಾನ್ ನಿಂದ ಕೃಷ್ಣಪೂಜೆ
ಪಾಟ್ನದಲ್ಲಿ ಇಸ್ಕಾನ್ ನಿಂದ ಕೃಷ್ಣನಿಗೆ ವಿಶೇಷ ಪೂಜೆ, ಆರತಿ, ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.