Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು!
ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು ಎಂದರೆ ತಪ್ಪಾಗಲಾರದು. ಅತಿಯಾದ ಬಿಸಿಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಎಚ್ಚರಿಕೆ ವಹಿಸದಿದ್ದರೆ ತ್ವಚೆಗೂ ಸಂಕಷ್ಟ ತಂದೊಡ್ಡಬಹುದು.
ಹಾಗೆ ನೋಡಿದರೆ ಪ್ರತಿಯೊಂದು ಕಾಲದಲ್ಲಿಯೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಯಾಯ ಸಂದರ್ಭ ತಕ್ಕಂತೆ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವವರು ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ.
ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!
ಚರ್ಮದ
ಮೇಲೆ
ಪರಿಣಾಮ
ಜಾಸ್ತಿ
ಸುಡು
ಬಿಸಿಲಿನಲ್ಲಿ
ದೈಹಿಕ
ಶ್ರಮದ
ಕೆಲಸ
ಮಾಡುವವರು
ಒಂದಷ್ಟು
ಹೆಚ್ಚಿನ
ನಿಗಾ
ವಹಿಸಬೇಕು.
ಏಕೆಂದರೆ
ದೇಹದ
ಉಷ್ಣಾಂಶ
ಹೆಚ್ಚಾಗುವುದರೊಂದಿಗೆ
ನೀರಡಿಕೆ,
ಸುಸ್ತು
ಕಾಣಿಸಿಕೊಳ್ಳಬಹುದು.
ಆದ್ದರಿಂದ
ಪೌಷ್ಠಿಕಾಂಶಗಳುಳ್ಳ,
ಹಣ್ಣು
ತರಕಾರಿಗಳನ್ನು
ಹೆಚ್ಚಾಗಿ
ಸೇವಿಸುವುದು
ತುಂಬಾ
ಒಳ್ಳೆಯದು.
ಅದರಲ್ಲೂ
ಹೆಣ್ಣುಮಕ್ಕಳು
ತಮ್ಮ
ಶರೀರ
ಅಂದವಾಗಿಯೂ,
ರೋಗ
ಮುಕ್ತವಾಗಿಯೂ
ಇರಬೇಕಾದರೆ
ಚರ್ಮದ
ಬಗೆಗೂ
ಹೆಚ್ಚಿನ
ಕಾಳಜಿ
ವಹಿಸಬೇಕಾಗುತ್ತದೆ.
ಬೇಸಿಗೆಯಲ್ಲಿ ಸೂರ್ಯನ ಶಾಖವೂ ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಜತೆಗೆ ಹೆಚ್ಚು ದೇಹ ಬೆವರುವುದರಿಂದ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಹೋದರೆ ದುರ್ವಾಸನೆ ಬೀರಿ ಇತರರಿಗೆ ಅಸಹ್ಯ ಮೂಡಿಸುವುದಲ್ಲದೆ, ಹಲವು ಚರ್ಮ ರೋಗಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಬೇಸಿಗೆಯಲ್ಲಿ ನಮ್ಮ ಇತರೆ ಆರೋಗ್ಯದ ಜತೆಯಲ್ಲಿ ನಮ್ಮ ತ್ವಚೆ ಸುಂದರವಾಗಿಯೂ, ಆರೋಗ್ಯವಾಗಿಯೂ ಇರುವಂತೆ ನೋಡಿಕೊಳ್ಳುವುದೇ ಒಂದು ಸವಾಲು ಎಂದರೆ ತಪ್ಪಾಗಲಾರದು.
ಸೌಂದರ್ಯದ
ಮೇಲೆ
ದುಷ್ಪರಿಣಾಮ
ಬೇಸಿಗೆಯಲ್ಲಿ
ಮದುವೆ,
ನಾಮಕರಣ,
ಹೀಗೆ
ಹಲವಾರು
ಕಾರ್ಯಕ್ರಮಗಳು
ಇದ್ದೇ
ಇರುತ್ತದೆ.
ಇಂತಹ
ಕಾರ್ಯಕ್ರಮಗಳಿಗೆ
ಹೋಗಿ
ಬರುವುದೆಂದರೆ
ಕಷ್ಟದ
ಕೆಲಸವಾಗುತ್ತದೆ.
ಜತೆಗೆ
ಕಾರ್ಯಕ್ರಮಗಳಲ್ಲಿ
ತಾವು
ಸುಂದರವಾಗಿ
ಕಾಣಬೇಕೆಂಬ
ಬಯಕೆಯಂತೂ
ಇದ್ದೇ
ಇರುತ್ತದೆ.
ಇಷ್ಟಕ್ಕೂ
ಸುಂದರವಾಗಿ
ಕಾಣಬೇಕಾಗಿದರೆ
ನಮ್ಮ
ತ್ವಚೆಯೂ
ಆರೋಗ್ಯ
ಪೂರ್ಣವಾಗಿರಬೇಕು.
ಅದನ್ನು
ಕಾಪಾಡಿಕೊಳ್ಳುವ
ಕೆಲಸವನ್ನು
ಪ್ರತಿಯೊಬ್ಬರು
ಮಾಡಬೇಕು.
ಚರ್ಮವು ಆರೋಗ್ಯವಾಗಿರಲು ಸೂರ್ಯನ ಕಿರಣಗಳ ಅಗತ್ಯವಿದೆಯಾದರೂ, ಅತಿಯಾದ ಸೂರ್ಯನ ಶಾಖ ಚರ್ಮಕ್ಕೆ ಹಾನಿ ಮಾಡುತ್ತದೆ. ಏಕೆಂದರೆ ಸೂರ್ಯ ಕಿರಣದಲ್ಲಿನ ಅತಿನೇರಳೆ ಬಣ್ಣದ ಕಿರಣಗಳು ಚರ್ಮವನ್ನು ಒಣಗುವಂತೆ ಮಾಡಿ ಮೃದುತ್ವವನ್ನು ನಾಶಮಾಡುತ್ತದೆ. ಸೂರ್ಯ ಕಿರಣಗಳಿಂದಾಗಿ ಉಂಟಾಗುವ ರೆಡಿಯೇಷನ್ನಿಂದಲೂ ಸಹ ಚರ್ಮವು ತನ್ನ ತೇವವನ್ನು ಕಳೆದುಕೊಂಡು ಕಳಾಹೀನವಾಗಿ ಬಿಡುತ್ತದೆ. ಆದುದರಿಂದ ವಾಕಿಂಗ್ ಮಾಡಲು ಬಯಸುವವರು ಮುಂಜಾನೆ ವಾಕಿಂಗ್ ಮಾಡುವುದು ಒಳ್ಳೆಯದು.
ಬಿಗಿ
ಉಡುಪು
ಧರಿಸುವುದು
ಒಳ್ಳೆಯದಲ್ಲ
ಇನ್ನು
ಬೇಸಿಗೆಯಲ್ಲಿ
ಚರ್ಮ
ಮತ್ತು
ದೇಹದ
ಆರೋಗ್ಯವನ್ನು
ಕಾಪಾಡಿಕೊಳ್ಳಬೇಕಾದರೆ
ಪೌಷ್ಟಿಕಾಂಶವುಳ್ಳ
ಆಹಾರ,
ಕಾಯಿಪಲ್ಯೆ,
ತರಕಾರಿಗಳನ್ನು
ಆಹಾರವಾಗಿ
ಸೇವಿಸಬೇಕು.
ಕೇಕ್,
ತಂಪು
ಪಾನೀಯಗಳು,
ಸಿಹಿತಿಂಡಿಗಳು,
ಮಸಾಲೆಯ
ಪದಾರ್ಥಗಳನ್ನು
ಸೇವಿಸುವುದನ್ನು
ಆದಷ್ಟು
ಕಡಿಮೆ
ಮಾಡಬೇಕು.
ಚರ್ಮಕ್ಕೆ
ಹೊಂದಿಕೊಳ್ಳುವ
ಸಾಬೂನನ್ನು
ಅರಿತು
ಅದನ್ನೇ
ಉಪಯೋಗಿಸಬೇಕು.
ಕೃತಕ
ಸೌಂದರ್ಯ
ವರ್ಧಕಗಳಿಂದ
ಆದಷ್ಟು
ದೂರವಿರಬೇಕು.
ಬಾದಾಮಿ
ಎಣ್ಣೆಯಿಂದ
ಚರ್ಮವನ್ನು
ಮೃದುವಾಗಿ
ಮಾಲೀಸ್
ಮಾಡಬೇಕು.
ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಕಾಟನ್ ಬಟ್ಟೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲೆ ಇಟ್ಟುಕೊಂಡರೆ ಜಿಡ್ಡು ದೂರವಾಗುತ್ತದೆ. ಧರಿಸುವ ಉಡುಪು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಶರೀರ ಹಾಗೂ ಬಟ್ಟೆ ಸ್ವಚ್ಛವಾಗಿರುವಂತೆ ಪ್ರತಿದಿನವೂ ನೋಡಿಕೊಳ್ಳಬೇಕು.
ಹಣ್ಣಿನ
ಸೇವನೆಗೆ
ಆದ್ಯತೆ
ನೀಡಿ
ಸಾಮಾನ್ಯವಾಗಿ
ಬೇಸಿಗೆಯಲ್ಲಿ
ಬಾಯಾರಿಕೆ
ನಮ್ಮನ್ನು
ಕಾಡುತ್ತದೆ.
ಎಷ್ಟು
ನೀರು
ಕುಡಿದರೂ
ಮತ್ತೆ
ಬೇಕೆನಿಸುತ್ತದೆ.
ಶರೀರದಲ್ಲಿ
ಉಷ್ಣದ
ಅಂಶವನ್ನು
ಕಡಿಮೆ
ಮಾಡಬೇಕಾದರೆ
ನಾವೆಲ್ಲರೂ
ಹೆಚ್ಚು
ಹೆಚ್ಚು
ಹಣ್ಣು-ತರಕಾರಿ
ಸೇವಿಸುವುದನ್ನು
ರೂಢಿಸಿಕೊಳ್ಳಬೇಕು.
ಏಕೆಂದರೆ
ಇದರಲ್ಲಿರುವ
ಲವಣಗಳು,
ವಿಟಮಿನ್ಗಳಂತಹ
ಪೌಷ್ಠಿಕ
ಪದಾರ್ಥಗಳು
ಶರೀರಕ್ಕೆ
ಪೋಷಕ
ಶಕ್ತಿಯನ್ನು
ನೀಡುತ್ತವೆ.
ನಮ್ಮ
ಆಹಾರದೊಂದಿಗೆ
ಕನಿಷ್ಠ
ಒಂದು
ರೀತಿಯ
ಹಣ್ಣನ್ನಾದರೂ
ಸೇವಿಸುವುದು
ಒಳ್ಳೆಯದು.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಏಕೆಂದರೆ ಈ ಹಣ್ಣು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೇರಳವಾದ ಲವಣಗಳು ಹಾಗೂ ವಿಟಮಿನ್ಗಳಿವೆ. ಅಷ್ಟೇ ಅಲ್ಲ ದ್ರವ ಪದಾರ್ಥವೂ ಇದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ಗಳು ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ತಾಜಾ ಸೊಪ್ಪು, ಹಸಿಬಟಾಣಿ, ಟೊಮೆಟೊದೊಂದಿಗೆ ಕೂಡಿದ ತರಕಾರಿ ಸಲಾಡ್ ಶರೀರಕ್ಕೆ ಆರೋಗ್ಯ ನೀಡುತ್ತದೆ.
ಬೇಸಿಗೆಯಲ್ಲಿ ಮಸಾಲೆಯ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಜತೆಗೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಲು ಮರೆಯಬಾರದು.