ಮೊಸರು, ಲಸ್ಸಿ ಮೇಲೆ ಜಿಎಸ್ಟಿ ತೆರಿಗೆ; ರಾಜ್ಯ ಸರ್ಕಾರಗಳಿಗೆ ಹೊಣೆ?
ದಿನನಿತ್ಯದ ಸಾಮಾಗ್ರಿಗಳ ಮೇಲೆ ಜಿಎಸ್ಟಿ ತೆರಿಗೆ ಹೇರಿದ್ದ ಕೇಂದ್ರ ಸರ್ಕಾರವು ಈಗ ಸಿರಿಧಾನ್ಯಗಳು, ಮೊಸರು, ಲಸ್ಸಿ ಸೇರಿದಂತೆ ವಿವಿಧ ವಸ್ತುಗಳ ಮೇಲೆ ವಿಧಿಸಿರುವ ಶೇ 5ರಷ್ಟು ಹೆಚ್ಚಿನ ಜಿಎಸ್ಟಿ ಶುಲ್ಕವನ್ನು ವಿಧಿಸುವ ನಿರ್ಧಾರವು ಆಯಾ ರಾಜ್ಯಗಳು ಹೊಣೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ವಿರೋಧ ಪಕ್ಷಗಳೂ ಕೂಡ ಈ ಕುರಿತಂತೆ ಸಾಕಷ್ಟು ಧ್ವನಿ ಏತ್ತಿದ್ದವು ಈ ಕುರಿತಂತೆ ಇಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಈ ಬಗ್ಗೆ ವಿವರವಾಗಿ ವಿವರಿಸಿದೆ. ಕೇಂದ್ರ ಸರ್ಕಾರವು ಮೊಸರು, ಪನೀರ್, ಲಸ್ಸಿ, ಅಕ್ಕಿ, ಹಿಟ್ಟು ಮತ್ತು ಬ್ರೆಡ್ನಂತಹ ವಸ್ತುಗಳ ಮೇಲೆ 5ರಷ್ಟು ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿ ದೇಶದಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ಈ ದರಗಳನ್ನು ಸರ್ಕಾರವೇ ನಿಗದಿಪಡಿಸಿಲ್ಲ, ಆದರೆ ರಾಜ್ಯ ಸರ್ಕಾರಗಳ ಒಪ್ಪಿಗೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಜಿಎಸ್ಟಿ ಬರೆ: ಮೊಸರು, ಲಸ್ಸಿ, ಮಜ್ಜಿಗೆ ದರ ಹೆಚ್ಚಿಸಿದ ಅಮುಲ್
ವಿವಿಧ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್ಟಿಯ ನಿರ್ಧಾರ ಕೇವಲ ಸರ್ಕಾರದ್ದಲ್ಲ ಎಂದು ಹೇಳಿದರು. ಇಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಈ ಮಾಹಿತಿ ನೀಡಿದ್ದಾರೆ.
ವಿವಿಧ ರಾಜ್ಯಗಳ ಹಣಕಾಸು ಸಚಿವರ ಗುಂಪು
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ವಿವಿಧ ರಾಜ್ಯಗಳ ಹಣಕಾಸು ಸಚಿವರ ಗುಂಪು (ಜಿಒಎಂ) ಒಪ್ಪಿಗೆ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ, ಬಿಹಾರ, ಕೇರಳ, ಗೋವಾ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳದಂತಹ ರಾಜ್ಯಗಳ ಸಚಿವರನ್ನು ಜಿಒಎಂ ಒಳಗೊಂಡಿತ್ತು. ಈ ವೇಳೆ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಮೊಸರಿನಂತಹ ವಸ್ತುಗಳ ಮೇಲೆ ವಿಧಿಸಲಾದ ಜಿಎಸ್ಟಿ ದರಗಳಲ್ಲಿ ವಿರೋಧ ಪಕ್ಷಗಳು ಆಳುವ ದೆಹಲಿ, ಕೇರಳ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಮಂತ್ರಿಗಳೂ ಇದ್ದಾರೆಯೇ ಎಂದು ಪ್ರಶ್ನಿಸಿದ್ದರು. ಯಾವುದೇ ರಾಜ್ಯದ ಸಚಿವರು ಪ್ರತಿಭಟನೆ ನಡೆಸಿದ್ದಾರೆಯೇ ಅಥವಾ ಅದನ್ನು ಒಪ್ಪಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದರು.
ಬಿಜೆಪಿಯೇತರ ರಾಜ್ಯಗಳ ಸರ್ಕಾರಗಳೂ ಒಪ್ಪಿಗೆ
ಈ ಪ್ರಶ್ನೆಗೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವರು, ರಾಜ್ಯ ಸರ್ಕಾರಗಳ ಒಪ್ಪಿಗೆಯ ನಂತರವೂ ಇತ್ತೀಚೆಗೆ ಮೊಸರು, ಲಸ್ಸಿ ಮುಂತಾದ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಜಿಎಸ್ಟಿ ದರಗಳನ್ನು ನಿಗದಿಪಡಿಸಲಾಗಿದೆ. ವಿಧಿಸಿರುವ ಹೊಸ ದರಗಳಲ್ಲಿ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಸರ್ಕಾರಗಳೂ ಒಪ್ಪಿಗೆ ಸೂಚಿಸಿವೆ ಎಂಬುದು ಸ್ಪಷ್ಟವಾಗಬೇಕು. ಹೀಗಿರುವಾಗ ಇದೀಗ ಸ್ವತಃ ಪ್ರತಿಪಕ್ಷಗಳೂ ಈ ವಿಚಾರದಲ್ಲಿ ಗರಂ ಆಗಿವೆ.
ತೆರಿಗೆ ಹಿಂಪಡೆಯಲು ಕೇಂದ್ರಕ್ಕೆ ಒತ್ತಡ?
ಇನ್ನು ಜಿಎಸ್ಟಿ ಕೌನ್ಸಿಲ್ನ ಶಿಫಾರಸಿನ ನಂತರ, ಕೇಂದ್ರ ಸರ್ಕಾರವು ಮೊಸರು, ಲಸ್ಸಿ, ಬೆಲ್ಲ, ಪನೀರ್, ಅಕ್ಕಿ ಮತ್ತು ಹಿಟ್ಟು ಸೇರಿದಂತೆ ಹಲವು ವಸ್ತುಗಳ ಮೇಲೆ ಶೇ 5 ಜಿಎಸ್ಟಿ ವಿಧಿಸಿದೆ ಎಂದು ವಿವರಿಸಿದೆ, ಇದಕ್ಕೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಇದೇ ವೇಳೆ ಈ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನವೂ ಇದೆ. ಇತ್ತೀಚೆಗಷ್ಟೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೆಚ್ಚಿಸಿರುವ ಜಿಎಸ್ಟಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಹಣದುಬ್ಬರಕ್ಕೆ ಕೇಂದ್ರ ಸರಕಾರವೇ ಕಾರಣ ಎಂದು ಆರೋಪಿಸಿದರು.
ಪೆಟ್ರೋಲಿಯಂ ಉತ್ಪನ್ನಗಳಿಗೂ ಜಿಎಸ್ಟಿ?
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂತಹ ನಿರ್ಧಾರಗಳನ್ನು ಜಿಎಸ್ಟಿ ಕೌನ್ಸಿಲ್ ತೆಗೆದುಕೊಳ್ಳುತ್ತದೆ ಮತ್ತು ಈ ಪ್ರಸ್ತಾಪವು ಅದರಲ್ಲಿ ಬಂದಿದೆ ಎಂದು ಹೇಳಿದರು. ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ ಎಂದು ಚೌಧರಿ ಹೇಳಿದರು. 'ಒಂದು ರಾಷ್ಟ್ರ, ಒಂದು ಬೆಲೆ' ತತ್ವದಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಏಕರೂಪದ ಜಿಎಸ್ಟಿಯನ್ನು ಜಾರಿಗೆ ತರಲಾಗುತ್ತದೆಯೇ ಎಂದು ಬಿಜೆಪಿ ಸದಸ್ಯ ಅಶೋಕ್ ಬಾಜ್ಪೇಯ್ ಪ್ರಶ್ನಿಸಿದ್ದರು.