ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
ಅಜಾತಶತ್ರು ಎಂದೇ ಹೆಸರಾದ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನ ದೇಶದಲ್ಲಿ ನಿರ್ವಾತ ಸೃಷ್ಟಿಸಿದೆ.
3 ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಹಾಸ್ಯಪ್ರಜ್ಞೆಯ ಸರಳ ಮನುಷ್ಯರಾಗಿ, ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿದವರು.
Live Updates: ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ: ಖಚಿತ ಪಡಿಸಿದ ಏಮ್ಸ್ ಆಸ್ಪತ್ರೆ
ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಪ್ರಧಾನಿಯಾಗಿ ಐದು ವರ್ಷ ಪೂರೈಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ವಾಜಪೇಯಿ. 1998 ರಿಂದ 2004 ರವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ಹಲವು ಮೊದಲುಗಳಿಗೆ ನಾಂದಿ ಹಾಡಿದವರು.
ಇಂಥ ಅಜಾತಶತ್ರು ವಾಜಪೇಯಿ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
ಜನನ ಮತ್ತು ವಿದ್ಯಾಭ್ಯಾಸ
*
ಮಧ್ಯಪ್ರದೇಶದ
ಗ್ವಾಲಿಯರ್
ನ
'ಶಿಂದೆ
ಕಿ
ಚವ್ವಾಣಿ'ಎನ್ನುವ
ಗ್ರಾಮದಲ್ಲಿ
1924
ರ
ಡಿಸೆಂಬರ್
25,
ಕ್ರಿಸ್
ಮಸ್
ದಿನ
ವಾಜಪೇಯಿ
ಅವರ
ಜನನ
*
ತಾಯಿ
ಕೃಷ್ಣಾ
ದೇವಿ
ಮತ್ತು
ತಂದೆ
ಕೃಷ್ಣ
ಬಿಹಾರಿ
ವಾಜಪೇಯಿ
*
ಗ್ವಾಲಿಯರ್
ನಲ್ಲೇ
ವಿದ್ಯಾಭ್ಯಾಸ
ಮುಗಿಸಿದ
ವಾಜಪೇಯಿ
ಅವರು
ಹಿಂದಿ,
ಇಂಗ್ಲಿಷ್
ಮತ್ತು
ಸಂಸ್ಕೃತ
ಭಾಷೆಗಳಲ್ಲಿ
ಪರಿಣಿತಿ
ಪಡೆದಿದ್ದರು.
*
ನಂತರ
ಕಾನ್ಪುರದ
ಡಿಎವಿ
ಕಾಲೇಜಿನಲ್ಲಿ
ರಾಜ್ಯಶಾಸ್ತ್ರದ
ಸ್ನಾತಕೋತ್ತರ
ಪದವಿ
ಪಡೆದರು.
*
ಗ್ವಾಲಿಯರ್
ನ
ಯುವ
ಸಂಘಟನೆಯಾದ
ಆರ್ಯ
ಕುಮಾರ್
ಸಭಾ
ಮೂಲಕ
ಸಾಮಾಜಿಕ
ಬದುಕಿಗೆ
ಪ್ರವೇಶಿಸಿದ
ವಾಜಪೇಯಿ
ಅವರು
ರಾಷ್ಟ್ರೀಯ
ಸ್ವಯಂಸೇವಕದೊಂದಿಗೆ
ಗುರುತಿಸಿಕೊಂಡವರು.
ಬಲಪಂಥೀಯ ಸಿದ್ಧಾಂತದೆಡೆಗೆ ಆಕರ್ಷಣೆ
*
1939
ರಿಂದ
ಆರೆಸ್ಸೆಸ್
ನ
ಸ್ವಯಂಸೇವಕರಾಗಿ
ಸೇರಿದ
ವಾಜಜಪೇಯಿ
ಅವರನ್ನು
ಬಲಪಂಥೀಯ
ಸಿದ್ಧಾಂತಗಳು
ಬಹುವಾಗಿ
ಆಕರ್ಷಿಸಿದ್ದವು.
*
ಆರೆಸ್ಸೆಸ್
ಹಿರಿಯ
ಮುಖಂಡ
ಬಾಬಾ
ಸಾಹೇಬ್
ಆಪ್ಟೆ(ಉಮಾಕಾಂತ್
ಕೇಶವ್
ಆಪ್ಟೆ)
ಅವರಿಂದ
ಪ್ರಭಾವಿತರಾಗಿ
1940-44
ರವರೆಗೆ
ಆರೆಸ್ಸೆಸ್
ತರಬೇತಿ
ಶಿಬಿರದಲ್ಲಿ
ಪಾಲ್ಗೊಂಡ
ಅವರು
ನಂತರ
ಪೂರ್ಣಾವಧಿ
ಕಾರ್ಯಕರ್ತರಾದರು.
*
ರಾಷ್ಟ್ರಧರ್ಮ,
ಪಾಂಚಜನ್ಯ,
ಸ್ವದೇಶ್
ಮತ್ತು
ವೀರ್
ಅರ್ಜುನ್
ಪತ್ರಿಕೆಗಳಲ್ಲಿ
ಕೆಲಸ
ಮಾಡಿದರು.
*
1942
ರ
ಕ್ವಿಟ್
ಇಂಡಿಯಾ
ಚಳವಳಿಯಲ್ಲಿ
23
ದಿನಗಳ
ಕಾಲ
ಬಂಧನಕ್ಕೊಳಗಾಗಿದ್ದ
ವಾಜಪೇಯಿ
ಅವರ
ರಾಜಕೀಯ
ಬದುಕಿನ
ಆರಂಭವಾಗಿದ್ದು
ಆಗಲೇ.
*
1951ರಲ್ಲಿ
ಭರತೀಯ
ಜನಸಂಘ
ಆರಂಭವಾದಾಗ
ಅದರೊಂದಿಗೆ
ಸಕ್ರಿಯರಾದ
ವಾಜಪೇಯಿ
ಅವರು
ಶಾಮ್
ಪ್ರಸಾದ್
ಮುಖರ್ಜಿ
ಮತ್ತು
ದೀನ
ದಯಾಳ್
ಉಪಾಧ್ಯಾಯ
ಅವರ
ಒಡನಾಟಕ್ಕೆ
ಬಂದರು.
*
1954
ರಲ್ಲಿ
ಜಮ್ಮು-ಕಾಶ್ಮೀರದಲ್ಲಿ
ಕಾಶ್ಮೀರೇತರರನ್ನು
ಕೀಳಾಗಿ
ಕಾಣುವ
ಪ್ರವೃತ್ತಿಯನ್ನು
ವಿರೋಧಿಸಿ
ಶಾಮ್
ಪ್ರಸಾದ್
ಮುಖರ್ಜಿ
ಅವರು
ಆರಂಭಿಸಿದ್ದ
ಆಮರಣಾಂತ
ಉಪವಾಸ
ಸತ್ಯಾಗ್ರಹದಲ್ಲಿ
ವಾಜಪೇಯಿ
ಅವರೂ
ಭಾಗಿಯಾಗಿದ್ದರು.
*
1957ರಲ್ಲಿ
ಮಥುರಾ
ಲೋಕಸಭಾ
ಕ್ಷೇತ್ರದಿಂದ
ಸೋತರೂ,
ಬಲರಾಮ್ಪುರ
ಕ್ಷೇತ್ರದಿಂದ
ಗೆದ್ದ
ವಾಜಪೇಯಿ
ಅವರ
ಮಾತಿನ
ಶೈಲಿಗೆ
ಸ್ವತಃ
ಜವಹರಲಾಲ್
ನೆಹ್ರೂ
ಅವರೇ
ಮರುಳಾಗಿದ್ದರು.
ಅವರೊಂದು
ದಿನ
ಭಾರತದ
ಪ್ರಧಾನಿಯಾಗುತ್ತಾರೆ
ಎಂದು
ಸ್ವತಃ
ನೆಹರೂ
ಅವರೇ
ಭವಿಷ್ಯ
ನುಡಿದಿದ್ದರು!
ಸ್ವಚ್ಛ ರಾಜಕಾರಣಿ ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ...
*
1975
ರಿಂದ
1977
ರ
ವರೆಗೆ
ತುರ್ತು
ಪರಿಸ್ಥಿಯ
ಸಮಯದಲ್ಲಿ
ಸಾಕಷ್ಟು
ಬಾರಿ
ವಾಜಪೇಯಿ
ಅವರು
ಜೈಲಿಗೆ
ತೆರಳಿದರು.
ಆದರೆ
ಕಾಂಗ್ರೆಸ್
ಪಕ್ಷದ
ಸರ್ವಾಧಿಕಾರಿ
ನಡೆಯನ್ನು
ಅವರು
ಬಹುವಾಗಿ
ಖಂಡಿಸಿದ್ದರು.
*
1977
ರ
ಚುನಾವಣೆಯಲ್ಲಿಪ್ರಧಾನಿ
ಮೊರಾರ್ಜಿ
ದೇಸಾಯಿ
ಅವರ
ಸಂಪುಟದಲ್ಲಿ
ವಿದೇಶಾಂಗ
ವ್ಯವಹಾರಗಳ
ಸಚಿವರಾಗಿದ್ದರು
ವಾಜಪೇಯಿ
*
ವಿದೇಶಾಂಗ
ಸಚಿವರಾಗಿದ್ದ
ಸಮಯದಲ್ಲಿ
ವಿಶ್ವಸಂಸ್ಥೆಯ
ಸಾಮಾನ್ಯ
ಸಭೆಯಲ್ಲಿ
ಹಿಂದಿಯಲ್ಲಿ
ಭಾಷಣ
ಮಾತಡುವ
ಮೂಲಕ
ಅವರು
ದಾಖಲೆ
ಬರೆದರು.
*
1980
ರಲ್ಲಿ
ತಮ್ಮ
ಬಹುಕಾಲದ
ಸ್ನೇಹಿತರಾದ
ಎಲ್
ಕೆ
ಅಡ್ವಾಣಿ,
ಭೈರಾನ್
ಸಿಂಗ್
ಶೆಖಾವತ್
ಸೇರಿದಂತೆ
ಜನಸಂಘ
ಮತ್ತು
ಆರೆಸ್ಸೆಸ್
ನ
ಹಲವು
ಸಹೋದ್ಯೋಗಿಗಳನ್ನೂ,
ಸಮಾನ
ಮನಸ್ಕರನ್ನೂ
ಒಂದೆಡೆ
ಸೇರಿಸಿದರು.
ಈ
ಮೂಲಕ
'ಭಾರತೀಯ
ಜನತಾ
ಪಕ್ಷ'(ಬಿಜೆಪಿ)
ಸ್ಥಾಪನೆಯಾಯಿತು.
ಬಿಜೆಪಿಯ
ಮೊದಲ
ರಾಷ್ಟ್ರಾಧ್ಯಕ್ಷರಾಗಿದ್ದ
ವಾಜಪೇಯಿ
ಅವರು,
ತಮ್ಮ
ಅತ್ಯುತ್ತಮ
ಮಾತುಗಾರಿಕೆ,
ಸರಳತೆಯಿಂದಾಗಿ
ಕೋಟ್ಯಂತರ
ಅಭಿಮಾನಿಗಳನ್ನು
ಪಡೆದರು.
*
ನಂತರ
ವಿಶ್ವ
ಹಿಂದೂ
ಪರಿಷತ್
ಮತ್ತು
ಆರೆಸ್ಸೆಸ್
ಅಯೋಧ್ಯೆಯಲ್ಲಿ
ರಾಮ
ಮಂದಿರ
ನಿರ್ಮಿಸುವ
ಕುರಿತಂತೆ
ನಡೆಸಿದ
ಹೋರಾಟದಲ್ಲೂ
ವಾಜಪೇಯಿ
ಅವರ
ಪಾತ್ರ
ಅಪಾರ.
ಪ್ರಶಸ್ತಿ, ಯಶಸ್ಸು, ಗೌರವ
*
ಈ
ಎಲ್ಲವುಗಳಿಂದಾಗಿ
ಮಾರ್ಚ್
1995ರಲ್ಲಿ
ಗುಜರಾತ್
ಮತ್ತು
ಮಹಾರಾಷ್ಟ್ರ
ವಿಧಾನಸಭೆಯಲ್ಲಿ
ಬಿಜೆಪಿ
ಅಮೋಘ
ಜಯ
ದಾಖಲಿಸಿತು.
ಕರ್ನಾಟಕದಲ್ಲೂ
ಬಿಜೆಪಿ
ಉತ್ತಮ
ಪ್ರದರ್ಶನ
ನೀಡಿತು.
*
1992
ರಲ್ಲಿಪದ್ಮವಿಭೂಷಣ
ಪ್ರಶಸ್ತಿ
*
1993
ರಲ್ಲಿ
ಕಾನ್ಪುರ
ವಿಶ್ವಿದ್ಯಾಲಯದಿಂದ
ಡಾಕ್ಟರೇಟ್
ಗೌರವ.
*
1994
ರಲ್ಲಿ
ಲೋಕಮಾನ್ಯ
ತಿಲಕ್
ಪ್ರಶಸ್ತಿ
*
1994
ರಲ್ಲಿ
ಅತ್ಯುತ್ತಮ
ಸಂಸದೀಯಪಟು
ಪ್ರಶಸ್ತಿ
*
1995
ರ
ಮುಂಬೈಯಲ್ಲಿ
ನಡೆದ
ಬಿಜೆಪಿ
ಸಭೆಯಲ್ಲಿ
ವಾಜಪೇಯಿ
ಅವರನ್ನು
ಪ್ರಧಾನಿ
ಅಭ್ಯರ್ಥಿ
ಎಂದು
ಆಗಿನ
ಬಿಜೆಪಿ
ಅಧ್ಯಕ್ಷರಾಗಿದ್ದ
ಎಲ್
ಕೆ
ಅಡ್ವಾಣಿ
ಅವರು
ಘೋಷಿಸಿದರು.
ರಾಜಕೀಯದಲ್ಲಿ ಅಮೋಘ ಪ್ರದರ್ಶನ
*
1996
ರ
ಮೇ
ತಿಂಗಳಿನಲ್ಲಿ
ಬಿಜೆಪಿ
ಲೋಕಸಭಾ
ಚುನಾವಣೆಯಲ್ಲಿ
ಅತಿ
ದೊಡ್ಡ
ಪಕ್ಷವಾಗಿ
ಹೊರಹೊಮ್ಮಿತ್ತು
*
ಆಗಿನ
ಭಾರತದ
ರಾಷ್ಟ್ರಪತಿಯಾಗಿದ್ದ
ಶಂಕರ್
ದಯಾಳ್
ಶರ್ಮಾ
ಅವರು
ವಾಜಪೇಯಿ
ಅವರನ್ನು
ಸರ್ಕಾರ
ರಚನೆಗೆ
ಆಹ್ವಾನಿಸಿದ್ದರು.
ಆಗ
ಭಾರತದ
10ನೇ
ಪ್ರಧಾನಿಯಾಗಿ
ಅಧಿಕಾರ
ಸ್ವೀಕರಿಸಿದ
ವಾಜಪೇಯಿ
ಅವರು,
ಬಹುಮತ
ಸಾಬೀತುಪಡಿಸಲಾಗದೆ
ಕೇವಲ
13
ದಿನಗಳಲ್ಲೇ
ರಾಜೀನಾಮೆ
ನೀಡಬೇಕಾಯ್ತು.
*
ನಂತರ
1998ರ
ವರೆಗೂ
ಯುನೈಟೆಡ್
ಫ್ರಂಟ್
ಸರ್ಕಾರಗಳು
ಆಡಳಿತ
ನಡೆಸಿದವು.
ನಂತರ
1998
ರಲ್ಲಿ
ಮತ್ತೆ
ನಡೆದ
ಚುನಾವಣೆಯಲ್ಲಿ
ಮತ್ತೆ
ಬಿಜೆಪಿ
ಅತಿ
ದೊಡ್ಡ
ಪಕ್ಷವಾಗಿ
ಹೊರಹೊಮ್ಮಿತು.
*
1999
ರವರೆಗೂ
ಪ್ರಧಾನಿಯಾಗಿದ್ದ
ವಾಜಪೇಯಿ
ಅವರು
ಎಐಎಡಿಎಂಕೆ
ಪಕ್ಷವು
ಬೆಂಬಲ
ವಾಪಸ್
ಪಡೆದ
ಪರಿಣಾಮ
ಕೇವಲ
13
ತಿಂಗಳುಗಳ
ಆಡಳಿತ
ನಡೆಸಿ
ರಾಜೀನಾಮೆ
ನೀಡಬೇಕಾಯ್ತು.
ಪೋಖ್ರಾನ್ ಮತ್ತು ಕಾರ್ಗಿಲ್
*1998
ರಲ್ಲಿ
ಯಶಸ್ವಿಯಾಗಿ
ಪೋಖ್ರಾನ್
ಟೆಸ್ಟ್
ಮಾಡುವ
ಮೂಲ
ಇಡೀ
ಜಗತ್ತೂ
ಭಾರತದತ್ತ
ಅಚ್ಚರಿಯಿಂದ
ನೋಡುವಂತೆ
ಮಾಡಿದ
ಕೀರ್ತಿ
ವಾಜಪೇಯಿ
ಅವರದು.
*
1999
ರಲ್ಲಿ
ನಡೆದ
ಭಾರತ
ಮತ್ತು
ಪಾಕಿಸ್ತಾನ
ನಡುವಿನ
ಕಾರ್ಗಿಲ್
ಯುದ್ಧದಲ್ಲಿ
ಭಾರತೀಯ
ಸೇನೆಯನ್ನು
ಉತ್ತೇಜಿಸಿ,
ಗೆಲ್ಲುವಂತೆ
ಮಾಡಿದ
ಕೀರ್ತಿ
ಸಹ
ಅಜಾತ
ಶತ್ರು
ವಾಜಪೇಯಿ
ಅವರದು!
ಮತ್ತೆ ಅಧಿಕಾರಕ್ಕೆ
*
ನಂತರ
1999
ರಲ್ಲಿ
ನಡೆದ
ಚುನಾವಣೆಯಲ್ಲಿ
303(543)
ಕ್ಷೇತ್ರಗಳನ್ನು
ಗೆಲ್ಲುವ
ಮೂಲಕ
ಬಿಜೆಪಿ
ನೇತೃತ್ವದ
ಎನ್
ಡಿ
ಎ
ಸರ್ಕಾರ
ಅಸ್ತಿತ್ವಕ್ಕೆ
ಬಂತು.
*
2004
ರವರೆಗೆ
ತಮ್ಮ
ಆಡಳಿತಾವಧಿಯಲ್ಲಿ,
ಸಂಸತ್ತಿನ
ಮೇಲಿನ
ದಾಳಿ,
ಗುಜರಾತ್
ಗಲಭೆ
ಸೇರಿದಂತೆ
ಹಲವು
ಕ್ಲಿಷ್ಟಕರ
ಸನ್ನಿವೇಶವನ್ನು
ಅವರು
ಎದುರಿಸಿದರು.
*
2004
ರಲ್ಲಿ
ಬಿಜೆಪಿ
ಪರ
ಜನರಲ್ಲಿ
ಉತ್ತಮ
ಭಾವನೆ
ಇದ್ದಿದ್ದರಿಂದ
ಅವಧಿಗೂ
ಮೊದಲೇ
ಲೋಕಸಭೆಯನ್ನು
ರದ್ದು
ಮಾಡಿ,
ವಾಜಪೇಯಿ
ಅವರು
ಚುನಾವಣೆಗೆ
ಹೊರಟಿದ್ದು
ಅವರ
ರಾಜಕೀಯ
ಬದುಕಿನ
ಬಹುದೊಡ್ಡ
ಪ್ರಮಾದವಾಯಿತು.
*
2004
ರ
ರ
ಲೋಕಸಭಾ
ಚುನಾವಣೆಯಲ್ಲಿ
ಬಿಜೆಪಿ
ಅರ್ಧಕ್ಕಿಂತ
ಕಡಿಮೆ
ಸ್ಥಾನಕ್ಕೆ
ಕುಸಿದು,
ಕಾಂಗ್ರೆಸ್
ನೇತೃತ್ವದ
ಯುಪಿಎ
ಸರ್ಕಾರ
ಅಸ್ತಿತ್ವಕ್ಕೆ
ಬಂತು.
*
ಈ
ಸೋಲಿನ
ನೈತಿಕ
ಹೊಣೆ
ಹೊತ್ತು
ಪ್ರತಿಪಕ್ಷ
ನಾಯಕನ
ಸ್ಥಾನಕ್ಕೆ
ರಾಜೀನಾಮೆ
ನೀಡಿದ
ವಾಜಪೇಯಿ
ಅವರು
ಎಲ್
ಕೆ
ಅಡ್ವಾಣಿ
ಅವರನ್ನು
ಆ
ಸ್ಥಾನಕ್ಕೆ
ಆರಿಸಿದರು.
ಅಜಾತಶತ್ರುವಿನ ಕೊನೆಯ ದಿನಗಳು
*
ಅತ್ಯುತ್ತಮ
ಕವಿಯಾಗಿದ್ದ
ವಾಜಪೇಯಿ
ಅವರು
ರಾಜಕೀಯ
ಬದುಕಿನಿಂದ
ಸ್ವಲ್ಪ
ದೂರವೇ
ಉಳಿದು
ಸಾಹಿತ್ಯದಲ್ಲಿ
ತೊಡಗಿಸಿಕೊಂಡರು.
*
ಆದರೆ
2009
ರಲ್ಲಿ
ಪಾರ್ಶ್ವವಾಯುವಿಗೆ
ತುತ್ತಾದ
ಅವರು
ನಂತರದ
ದಿನಗಳಲ್ಲಿ
ಮಧುಮೇಹದಿಂದ
ಬಳಲುತ್ತ,
ಕಿಡ್ನಿ
ಸಮಸ್ಯೆಗೂ
ಗುತ್ತಾಗಿದ್ದರು.
ಕ್ರಮೇಣ
ಯಾರನ್ನೂ
ಗುರುತಿಸಲಾಗದ
ಸ್ಥಿತಿಯಲ್ಲೇ
ಇದ್ದರು.
*
ವಾಜಪೇಯಿ
ಅವರ
ಹುಟ್ಟಿದ
ದಿನವಾದ
ಡಿ.25
ಅನ್ನು
ಪ್ರತಿವರ್ಷ
'ಉತ್ತಮ
ಆಡಳಿತ
ದಿನ'(Good
governance
day)ವನ್ನಾಗಿ
ಆಚರಿಸಲು
2014
ರಲ್ಲಿ
ಘೋಷಣೆ.
*
2015
ರಲ್ಲಿ
ಸರ್ಕಾರ
ಅವರಿಗೆ
ಭಾರತ
ಸರ್ಕಾರದ
ಅತ್ಯುನ್ನತ
ನಾಗರಿಕ
ಗೌರವವಾದ
ಭಾರತ
ರತ್ನವನ್ನು
ನೀಡಿತು.
*
2018
ರ
ಜೂನ್
11
ರಂದು
ದೆಹಲಿಯ
ಏಮ್ಸ್
ಆಸ್ಪತ್ರೆಗೆ
ದಾಖಲಾಗಿದ್ದ
ವಾಜಪೇಯಿ
ಅವರು
ಯಾವುದೇ
ಚಿಕಿತ್ಸೆ
ಸ್ಪಂದಿಸಲಿಲ್ಲ.
*
2018
ಆಗಸ್ಟ್
16
ರಂದು
ಅಜಾತ
ಶತ್ರು
ವಾಜಪೇಯಿ
ಅವರು
ಇಹಲೋಕ
ತ್ಯಜಿಸಿದರು.