ಡೇಲಿಹಂಟ್ ಆಪ್ ಬಳಸಿ, ನಿಮ್ಮ ಸ್ವಂತ ಆಲೋಚನೆ ರೂಪಿಸಿ!
ಇದು ಹೇಳಿಕೇಳಿ ಲೋಕಸಭೆ ಚುನಾವಣೆ ಜಮಾನಾ. ನಮ್ಮಲ್ಲಿ ಸಮಸ್ಯೆಗಳಿಗೇನು ಕೊರತೆ? ಅವರನ್ನು ಇವರು ಕಾಲೆಳೆಯುವುದು, ಇವರನ್ನು ಅವರು ಕಾಲೆಳೆಯುವುದು ಸರ್ವೇಸಾಮಾನ್ಯ. ಆದರೆ, ಒಬ್ಬರ ಸಮಸ್ಯೆ ಇನ್ನೊಬ್ಬರದೂ ಆಗಿರಬೇಕಿಲ್ಲ, ಅಲ್ಲವೆ?
ಒಂದು ಸಂಘಟನೆ ಮೀಸಲಾತಿ ವಿರುದ್ಧ ಅಥವಾ ಪರವಾಗಿ ಹೋರಾಟಕ್ಕಿಳಿದರೆ, ಘೋಷಣೆಗಳನ್ನು ಕೂಗಿದರೆ, ನಾವೂ ಹತ್ತನೆಯವರ ಜೊತೆ ಹನ್ನೊಂದನೆಯವರು ಆಗಬೇಕಿಲ್ಲ. ಅವರು ಕಲ್ಲು ಎಸೆಯುತ್ತಾರೆ ಎಂದು ನಾವೂ ಕೈಯಲ್ಲಿ ಕಲ್ಲು ಹಿಡಿಯಬೇಕಿಲ್ಲ.
ಎಲ್ಪಿಜಿ ಬೆಲೆ ಏರಿಕೆಯ ಬಗ್ಗೆ ಒಂದಿಷ್ಟು ಜನ ಕಳವಳ ವ್ಯಕ್ತಪಡಿಸಿದರೆ, ಒಂದಿಷ್ಟು ಜನ ಎಲ್ಪಿಜಿ ಸಬ್ಸಿಡಿ ಕೊಟ್ಟಿದೆಯೆಂದು ಸರಕಾರವನ್ನು ಹೊಗಳಲು ಆರಂಭಿಸುತ್ತಾರೆ. ಮೀಸಲಾತಿಯಂಥ ಗಹನವಾದ ಸಂಗತಿಯ ಬಗ್ಗೆ ನೂರು ದಿಕ್ಕಿನಿಂದ ನೂರು ದನಿಗಳು ಹೊರಬೀಳುತ್ತವೆ. ಆದರೆ, ನಮ್ಮ ದನಿ, ನಮ್ಮ ಸ್ವಂತ ವಿಚಾರ ಯಾವುದು?
ಕಪ್ಪು ಹಣದ ವಿರುದ್ಧ ಕೇಂದ್ರ ಸರಕಾರ ಜಾರಿ ಮಾಡಲಾದ ಅಪನಗದೀಕರಣದಿಂದ ಲಾಭವಾಗಿದೆಯಾ, ನಷ್ಟವಾಗಿದೆಯಾ? ಡಿಜಲೀಕರಣದಿಂದ ನಿಮಗೆ ಅನುಕೂಲವಾಗಿದೆಯಾ ಅಥವಾ ಕಿರಿಕಿರಿ ಜಾಸ್ತಿಯಾಗಿದೆಯಾ? ಒಬ್ಬ ಅಪನಗದೀಕರಣದಿಂದ ದೇಶ ಮುಳುಗಿ ಹೋಗುತ್ತಿದೆ ಎಂದು ಅಬ್ಬರಿಸಿದರೆ ನೀವೂ ಹಾಗೇ ಅಂತೀರಾ?
ಗ್ರಾಹಕ ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ಸಮಾಜದಲ್ಲಿ ಮತ್ತು ನಿಮ್ಮಲ್ಲಿ ಏನೇನು ಬದಲಾವಣೆ ಕಂಡಿರಿ? ಜಿಎಸ್ಟಿ ನಿಮ್ಮ ಜೀವನವನ್ನು ಸಹನವಾಗಿಸಿದೆಯಾ ಅಥವಾ ತೆರಿಗೆ ಭಾರದಿಂದ ನಿಮ್ಮ ಜೀವನವೇ ಸಂಕಷ್ಟದಲ್ಲಿ ಸಿಲುಕಿದೆಯಾ? ಎಂದಾದರೂ ಈ ಬಗ್ಗೆ ಕೂಲಂಕಷವಾಗಿ ವಿಚಾರ ಮಾಡಿದ್ದೀರಾ? ನಿಮ್ಮ ವಿಚಾರಧಾರೆ ಏನು?
ಇಲ್ಲವಾದರೆ, ವಿಚಾರ ಮಾಡಲು ಆರಂಭಿಸಿ, ಸ್ವಂತವಾದ ಮತ್ತು ಸ್ಪಷ್ಟ ನಿಲುವನ್ನು ತಳೆಯಿರಿ. ಅವರಿವರ ಘೋಷಣೆಯಲ್ಲಿ ನಿಮ್ಮ ದನಿ ಕಳೆದುಹೋಗದಿರಲಿ. ಈ ಚುನಾವಣೆಯಲ್ಲಿ ಯಾರದ್ದೋ ಮಾತನ್ನು ಗಿಳಿಪಾಠ ಮಾಡಬೇಡಿ. ಏಕೆಂದರೆ, ಈಗಲ್ಲದಿದ್ದರೆ ನಿಮ್ಮ ದನಿ ಕೇಳುವವರೇ ಇಲ್ಲವಾಗುತ್ತಾರೆ.
ಮೊದಲಿಗೆ ಡೇಲಿಹಂಟ್ ಆಪ್ ಈಗಲೇ ಡೌನ್ಲೋಡ್ ಮಾಡಿಕೊಳ್ಳಿ. ಡೇಲಿಹಂಟ್ ನಲ್ಲಿ ಪ್ರತಿನಿತ್ಯ ಲೋಕಲ್ ಚಾನಲ್ ನಲ್ಲಿ ಬರುವ ನಿಷ್ಪಕ್ಷಪಾತವಾದ ಕನ್ನಡ ಸುದ್ದಿಗಳನ್ನು ನೋಡಿರಿ ಮತ್ತು ಸ್ವಂತ ಆಲೋಚನೆಯನ್ನು ರೂಪಿಸಿ.