ಅಭಿಮಾನಿಗಳ ಪಾಲಿಗೆ 'ಅಭಿನವ ಇಂದಿರಾ' ಪ್ರಿಯಾಂಕಾ ವಾದ್ರಾ ವ್ಯಕ್ತಿಚಿತ್ರ
ಅಭಿನವ ಇಂದಿರಾಗಾಂಧಿ ಎಂದೇ ಅಭಿಮಾನಿಗಳ ಬಳಿ ಕರೆಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹು ಮಹತ್ವದ ಪಾತ್ರ ವಹಿಸಲಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲವೆಡೆ ಪ್ರಚಾರ ನಡೆಸಿದ್ದು ಬಿಟ್ಟರೆ ಹೆಚ್ಚಾಗಿ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನ ತಾರಾಪ್ರಚಾರಕರಾಗಿ, ಅಭ್ಯರ್ಥಿಯಾಗಿಯೂ ಕಾಣಿಸಿಕೊಂಡರೆ ಅಚ್ಚರಿಯಲ್ಲ.
ಪಿಲಿಭಿಟ್ ಕ್ಷೇತ್ರದ ಬಿಜೆಪಿ ಸಂಸದೆ ಮನೇಕಾ ಗಾಂಧಿ ವ್ಯಕ್ತಿಚಿತ್ರ
ಕಳೆದ ತಿಂಗಳಷ್ಟೇ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸಿದೆ.
ಜನನ:
ಪ್ರಿಯಾಂಕಾ
ಗಾಂಧಿ
ವಾದ್ರಾ
ಅವರು
ಹುಟ್ಟಿದ್ದು,
1972
ರ
ಜನವರಿ
12
ರಂದು
ದೆಹಲಿಯಲ್ಲಿ.
ತಂದೆ:
ರಾಜೀವ್
ಗಾಂಧಿ
ತಾಯಿ:
ಸೋನಿಯಾ
ಗಾಂಧಿ
ಪತಿ:
ರಾಬರ್ಟ್
ವಾದ್ರಾ
ಮಕ್ಕಳು:
ಪತ್ರ
ರೈಹಾನ್,
ಪುತ್ರಿ
ಮಿರಾಯ
ವಿದ್ಯಾಭ್ಯಾಸ:
ದೆಹಲಿಯ
ಜೀಸಸ್
ಅಂಡ್
ಮೇರಿ
ಶಾಲೆಯಲ್ಲಿ
ಪ್ರಾಥಮಿಕ
ಶಿಕ್ಷಣಅ
ಉನ್ನತ
ಶಿಕ್ಷಣ:
ದೆಹಲಿಯ
ಜೀಸಸ್
ಮತ್ತು
ಮೇರಿ
ವಿಶ್ವವಿದ್ಯಾಲಯದಲ್ಲಿ
ಮನಶಾಸ್ತ್ರದಲ್ಲಿ
ಪದವಿ.
ಸ್ನಾತಕೋತ್ತರ
ಪದವಿ:
ಬೌದ್ಧ
ತತ್ವಗಳಿಂದ
ಅತಿಯಾಗಿ
ಪ್ರಭಾವಕ್ಕೊಳಗಾಗಿದ್ದ
ಪ್ರಿಯಾಂಕಾ,
'ಬೌದ್ಧ
ತತ್ವಗಳ
ಬಗ್ಗೆಯೂ
ಸಾಕಷ್ಟು
ಅಧ್ಯಯನ
ನಡೆಸಿ,
ಇದೇ
ವಿಷಯದಲ್ಲಿ
ಸ್ನಾತಕೋತ್ತರ
ಪದವಿ
ಪಡೆದಿದ್ದಾರೆ.
* ತಮ್ಮ ಹದಿನಾರನೇ ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಿದ್ದ ಪ್ರಿಯಾಂಕಾ ಗಾಂಧಿ, ಅಂದಿನಿಂದ ರಾಜಕೀಯ ಬದುಕಿನತ್ತ ಆಸಕ್ತಿ ಹೊಂದಿದ್ದರು.
ಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯ
* ಆದರೆ 1991 ರಲ್ಲಿ ತಂದೆ ರಾಜೀವ್ ಗಾಂಧಿ ಹತ್ಯೆಯಿಂದ ಸಾಕಷ್ಟು ನೊಂದ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರುವ ಯೋಚನೆಯನ್ನು ಎಂದಿಗೂ ಮಾಡಿರಲಿಲ್ಲ.
* ಆದರೆ ನಿರಂತರವಾಗಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ರಾಯ್ ಬರೇಲಿ ಮತ್ತು ಸಹೋದರ ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಪ್ರಿಯಾಂಕಾ ಅವರ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದರು.
*
1997
ರ
ಫೆಬ್ರವರಿ
18
ರಂದು
ದೆಹಲಿ
ಮೂಲದ
ಉದ್ಯಮಿ
ರಾಬರ್ಟ್
ವಾದ್ರಾ
ಅವರೊಂದಿಗೆ
ದಾಂಪತ್ಯ
ಜೀವನಕ್ಕೆ
ಕಾಲಿಟ್ಟರು.
*
ಅತ್ಯುತ್ತಮ
ಛಾಯಾಗ್ರಾಹಕಿಯೂ
ಆಗಿರುವ
ಪ್ರಿಯಾಂಕಾ
ಗಾಂಧಿ,
ಛಾಯಾಗ್ರಹಣದ
ಹವ್ಯಾಸ
ಮತ್ತು
ಆಸಕ್ತಿಯನ್ನು
ತಮ್ಮ
ತಂದೆ
ರಾಜೀವ್
ಗಾಂಧಿ
ಅವರಿಂದ
ಬಳುವಳಿಯಾಗಿ
ಪಡೆದಿದ್ದರು.
* 2007 ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಕ್ಷದ ನಾಯಕರಲ್ಲಿ ಟಿಕೆಟ್ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಯವೆದ್ದಿದ್ದಾಗ, ಎರಡು ವಾರಗಳ ಕಾಲ ಅಲ್ಲಿಯೇ ಉಳಿದು, ಭಿನ್ನಾಭಿಪ್ರಾಯವನ್ನು ತಣ್ಣಗಾಗಿಸಿ, ಬಂಡಾಯ ಶಮನಗೊಳಿಸಿದ ಕೀರ್ತಿ ಪ್ರಿಯಾಂಕಾ ಅವರಿಗೆ ಸಲ್ಲುತ್ತದೆ.
ಬೆಂ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಅಂತರದಿಂದ ಗೆಲುವು ಖಚಿತ: ಆರ್ ಅಶೋಕ
* 2009 ರಲ್ಲಿ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ ಪರ ಪ್ರಚಾರ ನಡೆಸಿದರು ಪ್ರಿಯಾಂಕಾ
* 2012 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲೂ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾಗಿದ್ದ ಪ್ರಿಯಾಂಕಾ, ಅಮೇಥಿ ಮತ್ತು ಸುಲ್ತಾನ್ ಪುರದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು.
* 2014 ರ ಲೋಕಸಭಾ ಚುನಾವಣೆಯ ಸಮಯದಲ್ಲೂ ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎಂಬ ದೂರು ಕೇಳಿಬಂದಿತ್ತು.
* ಉತ್ತರ ಪ್ರದೇಶದ ಅಮೇಥಿ ಕ್ಷೇತ್ರ, ಅಂದರೆ ಸಹೋದರ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಮಾತ್ರವೇ ಇಷ್ಟು ದಿನ ಪ್ರಿಯಾಂಕಾ ಅವರ ಪ್ರಚಾರ ಸೀಮಿತವಾಗಿತ್ತು.
* ಆದರೆ 2014 ರ ಲೋಕಸಭಾ ಚುನಾವಣೆಯ ಸಮಯದಲಿ ಕಾಂಗ್ರೆಸ್ ಕಾರ್ಯಕರ್ತರೇ ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಪ್ರವೇಶಿಸಲಿ, ಅವರೇ ಪಕ್ಷದ ಚುಕ್ಕಾಣಿ ಹಿಡಿಯಲಿ ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ನೋಡುವುದಕ್ಕೂ ಥೇಟ್ ಅಜ್ಜಿ ಇಂದಿರಾ ಗಾಂಧಿ ಅವರಂತೆಯೇ ಇರುವ ಪ್ರಿಯಾಂಕಾ, ಗಟ್ಟಿಗಿತ್ತಿಯೂ ಆಗಿರುವುದರಿಂದ 2014 ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅನ್ನು ಮತ್ತೆ ಮೇಲೆತ್ತುವ ಶಕ್ತಿ ಅವರಿಗಿದೆ ಎಂಬ ಮಾತು ಕೇಳಿಬಂದಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
* ಆದರೆ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಸೂಚನೆ ನೀಡದೆ ಇದ್ದ ಪ್ರಿಯಾಂಕ ಇದೀಗ ಪಕ್ಷದಲ್ಲಿ ಮಹತ್ವದ ಹುದ್ದೆಯನ್ನು ಅಲಂಕರಿಸಿದ್ದಾರೆ.
* 2019 ರ ಜನರಿ ತಿಂಗಳಿನಲ್ಲಿ ಉತ್ತರಪ್ರದೇಶ ಪೂರ್ವ ಭಾಗಗಳ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿ, ಪ್ರಿಯಾಂಕಾ ಗಾಂಧಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.
* ಈ ವರ್ಷ ಪ್ರಿಯಾಂಕಾ ಗಾಂಧಿ ಅವರು ರಾಯ್ಬರೇಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಯುಪಿಎ ಅಧ್ಯಕ್ಷ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ಕ್ಷೇತ್ರದಿಂದ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸಿದರೆ ಅಚ್ಚರಿಯಿಲ್ಲ. ಅದೂ ಆಲ್ಲದೆ, ಇದು ಕಾಂಗ್ರೆಸ್ ನ ಭದ್ರಕೋಟೆಯಾಗಿರುವುದರಿಂದ ಈ ಕ್ಷೇತ್ರವನ್ನು ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ.