ಪ್ರವಾಸೋದ್ಯಮ ಗರಿ ಬಾಗಲಕೋಟೆ ಬಿಜೆಪಿ ಭದ್ರಕೋಟೆಯಾಗಿಯೇ ಉಳಿಯುತ್ತಾ?
Recommended Video
ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು ಗೆಲ್ಲಬಹುದು ಎಂಬ ನಂಬಿಕೆ ಇರಿಸಿಕೊಂಡ ಕ್ಷೇತ್ರಗಳಲ್ಲಿ ಒಂದು ಬಾಗಲಕೋಟೆ ಲೋಕಸಭಾ ಕ್ಷೇತ್ರ. ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿದ್ದು 1967ರಲ್ಲಿ. ಈ ವರೆಗೆ ನಡೆದಿರುವ ಚುನಾವಣೆಗಳ ಪೈಕಿ ಎಂಟು ಬಾರಿ ಜಯಿಸಿರುವ ಕಾಂಗ್ರೆಸ್, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಜಯಿಸಿದ ಅಗ್ಗಳಿಕೆ ಪಡೆದಿದೆ.
ಆದರೆ, ಕಳೆದ ಮೂರು ಅವಧಿಗೆ ಅಂದರೆ 2004, 2009 ಹಾಗೂ 2014ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗದ್ದಿನಗೌಡರ್ ಪರ್ವತಗೌಡ ಚಂದನಗೌಡ (ಪಿ.ಸಿ.ಗದ್ದಿನಗೌಡರ್) ಜಯ ಸಾಧಿಸುತ್ತಾ ಬಂದಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಜಯ್ ಕುಮಾರ್ ಸನಾಯಕ್ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯ ದಾಖಲಿಸಿದ್ದಾರೆ ಪಿ.ಸಿ.ಗದ್ದಿನಗೌಡರ್.
ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮುಧೋಳ, ತೇರದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನುಗುಂದ್ ಹಾಗೂ ನರಗುಂದ್ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ವರೆಗೂ ಪಿ.ಸಿ.ಗದ್ದಿನಗೌಡರಿಗೂ ಸಮಸ್ಯೆಗಳು ಇರಲಿಲ್ಲ. ಆದರೆ ಈ ಬಾರಿ ಅವರಿಗೆ ಬಿಜೆಪಿಯಿಂದ ಟಿಕೆಟ್ ದೊರೆಯುವುದು ಅನುಮಾನ ಎಂಬ ವದಂತಿಗಳು ಹರಿದಾಡುತ್ತಿವೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಆ ವಿಧಾನಸಭಾ ಕ್ಷೇತ್ರವು ಇದೇ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಾವು ಪ್ರತಿನಿಧಿಸುವ ಕ್ಷೇತ್ರ ಇರುವ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಬಲವರ್ಧನೆ ಮಾಡಬಹುದಾ ಸಿದ್ದರಾಮಯ್ಯ ಅವರು ಎಂಬ ನಿರೀಕ್ಷೆ ಇದ್ದೇ ಇದೆ.
2011ರ ಗಣತಿ ಪ್ರಕಾರ ಬಾಗಲಕೋಟೆ ಜಿಲ್ಲೆಯ ಮಾಹಿತಿ ಹೀಗಿದೆ
ಒಟ್ಟು ಜನಸಂಖ್ಯೆ 18.90 ಲಕ್ಷ
ಪುರುಷರು 9,50,11
ಮಹಿಳೆಯರು 9,39,641
ಜನಸಂಖ್ಯಾ ಏರಿಕೆ ಪ್ರಮಾಣ 14.40%
ಲಿಂಗಾನುಪಾತ 989
ಸರಾಸರಿ ಸಾಕ್ಷರತಾ ಪ್ರಮಾಣ 68.82%
ಟೈಮ್ಸ್ ನೌ ಸಮೀಕ್ಷೆ : ಕರ್ನಾಟಕದಲ್ಲಿ ಎನ್ಡಿಎ, ಯುಪಿಎಗೆ ಎಷ್ಟು ಸೀಟು?
ಯಾವ ಧರ್ಮದವರು ಯಾವ ಪ್ರಮಾಣದಲ್ಲಿ ಇದ್ದಾರೆ ಎಂಬ ಲೆಕ್ಕಾಚಾರ ಹೀಗಿದೆ:
ಹಿಂದೂ 86.48%
ಜೈನ 1.33%
ಕ್ರಿಶ್ಚಿಯನ್ 0.18%
ಸಿಖ್ 0.02%
ಬೌದ್ಧರು 0.02%
ಇತರರು 0.01%
ಮಾಹಿತಿ ಇಲ್ಲದ್ದು 0.31%
ಮುಸ್ಲಿಮರು 11.64%
ಸಂಸದ ಪಿ.ಸಿ.ಗದ್ದಿನ ಗೌಡರ್ ಗೆ ಮೀಸಲಾದ ಸಂಸತ್ ನಿಧಿಯ ಪ್ರಮಾಣ 25 ಕೋಟಿ. ಅದರಲ್ಲಿ ಸರಕಾರದಿಂದ ಬಿಡುಗಡೆ ಆಗಿರುವುದು 17.5 ಕೋಟಿ. ಬಡ್ಡಿಯು ಸೇರಿ ವೆಚ್ಚ ಮಾಡಲು ದೊರೆತ ಮೊತ್ತ 18.05 ಕೋಟಿ. ಬಾಕಿ ಇರುವ ಮೊತ್ತವೂ ಸೇರಿ ಸಂಸದರೂ ಶಿಫಾರಸು ಮಾಡಿರುವುದು 21.25 ಕೋಟಿ. ಅದರಲ್ಲಿ ಜಿಲ್ಲಾ ಅಧಿಕಾರಿಗಳು ಮಂಜೂರು ಮಾಡಿರುವುದು 21.25 ಕೋಟಿಯಾದರೆ, ವೆಚ್ಚ ಮಾಡಿರುವುದು 15.84 ಕೋಟಿ ರುಪಾಯಿ. ಖರ್ಚಾಗದೆ ಉಳಿದಿರುವ ಮೊತ್ತ 2.21 ಕೋಟಿ.
Times Now-VMR ಸಮೀಕ್ಷೆ: ಎನ್ ಡಿಎ 252, ಯುಪಿಎ 147, ಇತರರು 144
ಇನ್ನು ಸಂಸತ್ ನಲ್ಲಿ ಪಿ.ಸಿ.ಗದ್ದಿನ ಗೌಡರ್ ಹೇಗೆ ಪಾಲ್ಗೊಂಡಿದ್ದರೆ ಎಂಬುದನ್ನು ಗಮನಿಸಿದರೆ, ಒಟ್ಟು 8 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 94 ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಹಾಜರಾತಿ ಪ್ರಮಾಣ 86%.
ಬಾಗಲಕೋಟೆಯಲ್ಲಿನ ಒಟ್ಟು ಮತದಾರರ ಸಂಖ್ಯೆ 15,68,620. ಅದರಲ್ಲಿ ಪುರುಷ ಮತದಾರರು 7,93,338 ಹಾಗೂ ಮಹಿಳಾ ಮತದಾರರು 7,75,282. ಆ ಪೈಕಿ 2014ರಲ್ಲಿ 10,79,310 ಮಂದಿ ಮತ ಚಲಾಯಿಸುವ ಮೂಲಕ ಶೇಕಡಾ 69ರಷ್ಟು ಮತದಾನ ಆಯಿತು ಗದ್ದಿನಗೌಡರ್ 5,71,548 ಮತಗಳನ್ನು ಪಡೆಯುವ ಮೂಲಕ ವಿಜಯಿಯಾದರು.
ಬಾಗಲಕೋಟೆಯ ಜನಸಂಖ್ಯೆ ಬಗ್ಗೆ ಮತ್ತೊಮ್ಮೆ ತಿಳಿದುಕೊಂಡು ಬಿಡಿ. ಒಟ್ಟು ಜನಸಂಖ್ಯೆ 21,24,906. ಆ ಪೈಕಿ ಶೇಕಡಾ 70.16% ಗ್ರಾಮೀಣ ಭಾಗದವರು. 29.84%ರಷ್ಟು ನಗರ ಪ್ರದೇಶದವರು. 16.29% ಪರಿಶಿಷ್ಟ ಜಾತಿ ಹಾಗೂ 5.2% ಪರಿಶಿಷ್ಟ ಪಂಗಡದವರು ಇದ್ದಾರೆ.
ಈ ಜಿಲ್ಲೆಯ ಸರಾಸರಿ ಸಾಕ್ಷರತಾ ಪ್ರಮಾಣ ಹೆಚ್ಚಾಗಬೇಕಿದೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ, ಮಹಾಕೂಟ ಹೀಗೆ ಅದ್ಭುತ ಪ್ರವಾಸಿ ತಾಣಗಳಿರುವ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮವನ್ನು ಉದ್ಯೋಗಾವಕಾಶವಾಗಿ ಬಳಸಿಕೊಂಡಿರುವುದು ಕಂಡುಬರುವುದಿಲ್ಲ. ಇನ್ನು ಸ್ಥಳೀಯವಾಗಿಯೂ ಉದ್ಯೋಗ ಸೃಷ್ಟಿ ಆಗಬೇಕು.
ಕೃಷಿಯೇ ಇಲ್ಲಿನ ಮುಖ್ಯ ಕಸುಬಾಗಿದ್ದು, ಕಾರ್ಮಿಕರ ಅಗತ್ಯ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಆಯಾ ಕೃಷಿಗೆ ಪೂರಕವಾದ ಕೈಗಾರಿಕೆ-ಉದ್ಯಮಗಳು ಆರಂಭವಾದರೆ ಇನ್ನೂ ಹೆಚ್ಚಿನ ಅನುಕೂಲ ಆಗುತ್ತದೆ.