ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ
ಉತ್ತರಪ್ರದೇಶ ರಾಜ್ಯದ ಸರಯೂ ನದಿ ತೀರದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ತಾಣದಲ್ಲೇ ಮೊಘಲರು ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ವಾದವಿದೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಪಂಚ ಸದಸ್ಯರ ನ್ಯಾಯಪೀಠವು ಅಂತಿಮ ವಿಚಾರಣೆ, ಅಂತಿಮ ತೀರ್ಪು ಹೊರಬಂದಿದೆ.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿ, ವಿವಾದಿತ ಜಾಗವನ್ನು ಮಂದಿರಕ್ಕೆ ಹಾಗೂ ಮಸೀದಿಗೆ ಪ್ರತ್ಯೇಕವಾಗಿ 5 ಎಕರೆ ಭೂಮಿಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ.
1528ರಲ್ಲಿ ಸ್ಥಾಪನೆಯಾದ ಬಾಬರ್ ಮಸೀದಿ ಇರುವ ಸ್ಥಳವು 1885ರಲ್ಲಿ ಮೊದಲ ಬಾರಿಗೆ ಭೂಮಿ ಆಸ್ತಿ ಹಕ್ಕು ವ್ಯಾಜ್ಯ ಕೋರ್ಟ್ ಮೇಟ್ಟಿಲೇರಿತ್ತು. ಅಂದಿನಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿತ್ತು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚಿಸಿತ್ತು. ಆದರೆ, ಕೇಸ್ ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹಲವರನ್ನು ಕಾಡುತ್ತಿತ್ತು. ಭೂ ವ್ಯಾಜ್ಯದ ಸಿವಿಲ್ ಕಟ್ಲೆ ಅಲ್ಲದೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣವೂ 25 ವರ್ಷಗಳ ಕಾಲ ಮೀರಿ ವಿಚಾರಣೆ ನಡೆದಿದೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಅಯೋಧ್ಯಾ
ಆಸ್ತಿ
ಹಕ್ಕು
ಪ್ರಕರಣದ
ಟೈಮ್
ಲೈನ್:
1528:
ಹಿಂದೂಗಳ
ಆರಾಧ್ಯ
ದೈವ
ಶ್ರೀರಾಮಚಂದ್ರ
ಹುಟ್ಟಿದ
ಸ್ಥಳದಲ್ಲಿ
ಮಸೀದಿ
ನಿರ್ಮಾಣ.
1853:
ಅಯೋಧ್ಯೆದಲ್ಲಿ
ಮೊಟ್ಟ
ಮೊದಲ
ಬಾರಿಗೆ
ಕೋಮು
ಗಲಭೆ
ಘಟನೆ
ದಾಖಲಾಗಿದೆ.
1859:
ವಿವಾದಿತ
ಪ್ರದೇಶಕ್ಕೆ
ಬೇಲಿ
ಹಾಕಿದ
ಬ್ರಿಟಿಷ್
ಆಡಳಿತ.
ಒಳಾಂಗಣ
ಭಾಗ
ಮುಸ್ಲಿಮರಿಗೆ
ಹಾಗೂ
ಹೊರಾಂಗಣ
ಭಾಗ
ಹಿಂದೂಗಳಿಗೆ
ಎಂದು
ಹಂಚಿಕೆ.
1885:
ಹಿಂದೂಗಳಿಗೆ
ಹಂಚಿಕೆಯಾಗಿದ್ದ
ಹೊರಾಂಗಣ
ಭಾಗದಲ್ಲಿ
ರಾಮ
ಮಂದಿರ
ನಿರ್ಮಿಸಲು
ಮಹಂತ
ರಘುವೀರ್
ದಾಸ್
ರಿಂದ
ನಿರಾಕರಣೆ.
1949:
ಮಸೀದಿಯೊಳಗೆ
ಶ್ರೀರಾಮನ
ಪ್ರತಿಮೆ
ಕಾಣಿಸಿಕೊಂಡು
ಎಲ್ಲರ
ಹುಬ್ಬೇರಿಸಿತ್ತು.
ಹಿಂದೂಗಳು
ತಂದಿಟ್ಟಿದ್ದಾರೆ
ಎಂದು
ಮುಸ್ಲಿಮರಿಂದ
ದೂರು.
ಪ್ರಕರಣ
ಕೋರ್ಟ್
ಮೆಟ್ಟಿಲೇರುತ್ತಿದ್ದಂತೆ
ಎಚ್ಚೆತ್ತುಕೊಂಡ
ಸರ್ಕಾರ
ಗೇಟ್
ಬೀಗ
ಹಾಕಿ
ಜಡೆಯಿತು.
ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!
1950-61
:
ರಾಮ್
ಲಲ್ಲಾ
ಪೂಜೆಗೆ
ಅನುವು
ಮಾಡಿಕೊಡುವಂತೆ
ಕೋರಿ
ನಾಲ್ಕು
ಪ್ರತ್ಯೇಕ
ಅರ್ಜಿ,
ವಿವಾದಿತ
ಸ್ಥಳದಲ್ಲಿ
ಮಂದಿರ
ನಿರ್ಮಾಣಕ್ಕೆ
ಅನುವು
ಕೋರಿ
ಅರ್ಜಿ.
1984:
ಶ್ರೀರಾಮ
ಜನ್ಮಭೂಮಿ
ವಿಮೋಚನೆಗಾಗಿ
ಹಿಂದೂ
ಸಮಿತಿ
ಅಸ್ತಿತ್ವಕ್ಕೆ,
ಮಂದಿರ
ನಿರ್ಮಾಣದ
ಗುರಿ.
ವಿಶ್ವ
ಹಿಂದೂ
ಪರಿಷತ್
ಹಾಗೂ
ಎಲ್
ಕೆ
ಅಡ್ವಾಣಿ
ನೇತೃತ್ವದಲ್ಲಿ
ಭಾರತೀಯ
ಜನತಾ
ಪಕ್ಷದಿಂದ
ಅಭಿಯಾನ.
1986:
ಮಸೀದಿ
ಬಾಗಿಲು
ತೆರೆವುಗೊಳಿಸಿ
ಹಿಂದೂಗಳಿಗೆ
ಪೂಜೆ
ಸಲ್ಲಿಸಲು
ಅವಕಾಶ
ನೀಡುವಂತೆ
ನ್ಯಾಯಾಲಯದ
ತೀರ್ಪು.
ಪ್ರತಿಭಟನೆಗಾಗಿ
ಮುಸ್ಲಿಮರಿಂದ
ಬಾಬ್ರಿ
ಮಸೀದಿ
ಕಾರ್ಯಕಾರಿ
ಸಮಿತಿ
ಸ್ಥಾಪನೆ.
1989:
ವಿಎಚ್
ಪಿ
ಅಭಿಯಾನ
ಶುರು,
ವಿವಾದಿತ
ಮಸೀದಿ
ಜಾಗದ
ಪಕ್ಕ
ರಾಮ
ಮಂದಿರಕ್ಕಾಗಿ
ಶಂಕುಸ್ಥಾಪನೆ.
ನಾಲ್ಕು
ಅರ್ಜಿಗಳ
ವಿಚಾರಣೆ
ಅಲಹಾಬಾದ್
ಹೈಕೋರ್ಟಿಗೆ
ವರ್ಗ
1990:
ವಿಎಚ್
ಪಿ
ಕಾರ್ಯಕರ್ತರಿಂದ
ಮಸೀದಿಯ
ಪಾರ್ಶ್ವ
ಭಾಗ
ಧ್ವಂಸ.
ಸಮಸ್ಯೆ
ಬಗೆಹರಿಸಲು
ಪ್ರಧಾನಿ
ಚಂದ್ರಶೇಖರ್
ರಿಂದ
ವಿಫಲ
ಯತ್ನ.
1991:
ಆಯೋಧ್ಯೆ
ಇರುವ
ಉತ್ತರಪ್ರದೇಶದಲ್ಲಿ
ಅಧಿಕಾರಕ್ಕೆ
ಬಂದ
ಬಿಜೆಪಿ.
ಡಿಸೆಂಬರ್ 06, 1992: ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು.
1993 : ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶ (67 ಎಕರೆ) ವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಉತ್ತರಪ್ರದೇಶ ಸರ್ಕಾರ. ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಹಿಂದೂ ಪೂಜಾ ಮಂದಿರವಿತ್ತೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಿದ ಸರ್ಕಾರ.
ಅಕ್ಟೋಬರ್ 1993: ಎಲ್ ಕೆ ಅಡ್ವಾಣಿ ಹಾಗೂ 13 ಮಂದಿಗಳ ಮೇಲೆ ಬಾಬ್ರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪ ಹೊರೆಸಿ ಚಾರ್ಜ್ ಶೀಟ್ ಹಾಕಿದ ಸಿಬಿಐ.
1994: ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಭಾಗೀಯ ಪೀಠದಲ್ಲಿ ನಿರಂತರವಾಗಿ ಪ್ರಕರಣದ ವಿಚಾರಣೆ. 1998: ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು.
2001:
ವಿಎಚ್
ಪಿ
ಯಿಂದ
ಮತ್ತೆ
ರಾಮಜನ್ಮಭೂಮಿಯಲ್ಲಿ
ಮಂದಿರ
ಸ್ಥಾಪನೆ
ಸಂಕಲ್ಪ.
ಮಸೀದಿ
ಧ್ವಂಸ
ವಾರ್ಷಿಕ
ದಿನ
ಹಲವೆಡೆ
ಗಲಭೆ,
ಹಿಂಸಾಚಾರ.
ಮೇ
4,
2001:
ಎಲ್
ಕೆ
ಅಡ್ವಾಣಿ,
ಕಲ್ಯಾಣ್
ಸಿಂಗ್
ಸೇರಿದಂತೆ
13
ಮುಖಂಡರ
ಮೇಲಿದ್ದ
ಚಾರ್ಜ್
ಶೀಟ್
ರದ್ದುಗೊಳಿಸಿದ
ವಿಶೇಷ
ನ್ಯಾ.
ಎಸ್
.ಕೆ
ಶುಕ್ಲಾ.
ಕ್ರೈಂ
197
(ಮಸೀದಿ
ಧ್ವಂಸ)
ಹಾಗೂ
198(ಕ್ರಿಮಿನಲ್
ಪಿತೂರಿ)
ಎರಡನ್ನು
ಪ್ರತ್ಯೇಕಿಸಿ
ಆದೇಶ.
ಜನವರಿ
2002
:
ಹಿಂದೂ
-ಮುಸ್ಲಿಂ
ನಾಯಕರ
ಜತೆ
ಮಾತುಕತೆ
ನಡೆಸಲು
ವಾಜಪೇಯಿ
ಅವರಿಂದ
ತಮ್ಮ
ಕಚೇರಿಯಲ್ಲಿ
ಪ್ರತ್ಯೇಕ
ಕೇಂದ್ರ
ಸ್ಥಾಪನೆ.
ಏಪ್ರಿಲ್ 2002: ಮೂವರು ಹೈಕೋರ್ಟ್ ಜಡ್ಜ್ ಗಳಿದ್ದ ಪೀಠದಿಂದ ವಿವಾದಿತ ಧಾರ್ಮಿಕ ತಾಣ ವಿಚಾರಣೆ. ಜನವರಿ 2003: ವಿವಾದಿತ ತಾಣ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಶುರು.
ಆಗಸ್ಟ್ 2003: ಶ್ರೀರಾಮನ ಜನ್ಮಸ್ಥಳ ಇದೇ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಸಮೀಕ್ಷೆ ಹೇಳಿಕೆ.
ಸೆಪ್ಟೆಂಬರ್ 2003: ಏಳು ಹಿಂದೂ ನಾಯಕರ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ. ಆದರೆ, 1992ರಲ್ಲಿ ಘಟನಾ ಸ್ಥಳದಲ್ಲಿದ್ದ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ವಿರುದ್ಧ ಆರೋಪ ಕೇಳಿ ಬರಲಿಲ್ಲ. ಅಕ್ಟೋಬರ್ 2004: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ ಎಂದು ಅಡ್ವಾಣಿ ಹೇಳಿಕೆ
ನವೆಂಬರ್ 2004 : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಕೈವಾಡ ಇಲ್ಲ ಎಂಬ ಈ ಹಿಂದಿನ ತೀರ್ಪು ಮರು ಪರಿಶೀಲನೆ ಅರ್ಜಿಯನ್ನು ಸ್ವೀಕರಿಸಿದ ಉತ್ತರ ಪ್ರದೇಶದ ಕೋರ್ಟ್.
ಸೆಪ್ಟೆಂಬರ್ 2010 : ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು. ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ತೀರ್ಪು.
ಮೇ 2011: 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯ. ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್. ಡಿಸೆಂಬರ್ 25, 2014: 1949ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅರ್ಜಿದಾರ ಮೊಹಮ್ಮದ್ ಫರೂಕ್ ನಿಧನ.
ಸೆಪ್ಟೆಂಬರ್ 27, 2017: 1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎನ್ನಲಾಗಿತ್ತು.
ವಿಸ್ತೃತ ಸಂವಿಧಾನ ಪೀಠ ರಚನೆಗೆ ಆಗ್ರಹಿಸಿದ್ದ ಮುಸ್ಲಿಂ ಸಂಘಟನೆಗಳ ಮನವಿಯನ್ನು ನ್ಯಾ. ನಜೀರ್ ಪುರಸ್ಕರಿಸಿದರು. ಆದರೆ, ಇದರ ವಿರುದ್ಧ ತ್ರಿಸದಸ್ಯ ಪೀಠದಲ್ಲಿ 2:1 ರ ಫಲಿತಾಂಶ ಬಂದಿದೆ. ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ ಅಶೋಕ್ ಭೂಷಣ್ ಎತ್ತಿ ಹಿಡಿದರೆ, ನ್ಯಾ ಅಬ್ದುಲ್ ನಜೀರ್ ಅಸಮ್ಮತಿ ವ್ಯಕ್ತಪಡಿಸಿದರು.
ಮಾರ್ಚ್ 06, 2019: ಕೋರ್ಟ್ ಮೇಲ್ವಿಚಾರಣೆಯಲ್ಲಿ ರಾಮಜನ್ಮಭೂಮಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಕುರಿತಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್. ತೀರ್ಪನ್ನು ಕಾಯ್ದಿರಿಸಿ, ಮಧ್ಯಸ್ಥಿಕೆ ಯಾರು ನಡೆಸಬೇಕು ಎಂಬುದನ್ನು ಅರ್ಜಿದಾರರೇ ನಿರ್ಧರಿಸಲಿ ಎಂದ ಸುಪ್ರೀಂ ಕೋರ್ಟ್.
ಜೂನ್ 18, 2019 ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು 40 ದಿನಗಳ ಕಾಲ ಪ್ರತಿದಿನ ಅರ್ಜಿ ವಿಚಾರಣೆ ನಡೆಸಿ ಅಕ್ಟೋಬರ್ 16ರಂದು ವಿಚಾರನೆ ಅಂತ್ಯಗೊಳಿಸಲಿದೆ. ನವೆಂಬರ್ 17ರೊಳಗೆ ಅಂತಿಮ ತೀರ್ಪು ನೀಡಬೇಕಿದೆ.
ನವೆಂಬರ್ 09, 2019:ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ಆದೇಶವನ್ನು ಪಕ್ಕಕ್ಕಿಟ್ಟ ಸುಪ್ರೀಂಕೋರ್ಟ್, ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರನೇ ಒಂದು ಭಾಗ ಹಂಚಿಕೆ ಮಾಡಿದ್ದ ಆದೇಶವನ್ನು ತಿರಸ್ಕರಿಸಲಾಗಿದೆ. ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ಸ್ಥಾಪನೆಯಾಗಿದ್ದ ಟ್ರಸ್ಟ್ ಗೆ ನೀಡಿದ ಕೋರ್ಟ್,
* ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಪ್ರತ್ಯೇಕ ಟ್ರಸ್ಟ್ ರಚನೆ ಆಗಬೇಕಿದೆ. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕಾಗುತ್ತದೆ.