ಏಷ್ಯಾನೆಟ್ ಸಿ4 ಸಮೀಕ್ಷೆ: ವಿಜಯನ್ ಸರ್ಕಾರ ಮತ್ತೆ ಅಧಿಕಾರಕ್ಕೆ!
ತಿರುವನಂತಪುರಂ, ಮಾರ್ಚ್ 30: ಕೇರಳ ಜೊತೆಗೆ ತಮಿಳುನಾಡು, ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ಆರಂಭವಾಗಿದೆ. ಕೇರಳ ಚುನಾವಣೆಯಲ್ಲಿ ಎಲ್ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ಏಷ್ಯಾನೆಟ್ ಸಿ4 ಸಮೀಕ್ಷೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಎಬಿಪಿಯ ಎರಡು ಸಮೀಕ್ಷೆ, ಟೈಮ್ಸ್ ನೌ- ಸಿ -ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಹಾಗೂ ಮನೋರಮಾ ವಿಎಂಆರ್ ನಡೆಸಿದ್ದ ಈ ಹಿಂದಿನ ಸಮೀಕ್ಷೆಗಳು ಕೂಡಾ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವರದಿ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಸಮೀಕ್ಷೆ: ಚುನಾವಣಾ ನಿರತ ಮುಂದಿನ ಸಿಎಂ ಯಾರಾಗಬೇಕು?
ಈಗ ಏಷ್ಯಾನೆಟ್ ಸಿ 4 ಕೂಡಾ ಕೇರಳದಲ್ಲಿ ಎಲ್ಡಿಎಫ್ ಅಧಿಕಾರಕ್ಕೇರಲಿದ್ದು, ಯುಡಿಎಫ್ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಎಂದು ವರದಿ ಮಾಡಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ಗೆ ಜಯ
ಏಷ್ಯಾನೆಟ್ ಸಿ 4 ಸಮೀಕ್ಷೆ 2021 ಪ್ರಕಾರ, ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 82 ರಿಂದ 91 ಸ್ಥಾನ ಗಳಿಸಲಿದೆ. ಶೇ 42ರಷ್ಟು ಮತ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 46 ಸ್ಥಾನ ಗಳಿಸಬಹುದು, ಶೇ 34ರಷ್ಟು ಮತ ಗಳಿಕೆ ಇದೆ. ಹಾಗೂ ಬಿಜೆಪಿ 3-7 ಸ್ಥಾನ ಗೆಲ್ಲಬಹುದು ಮತ್ತು ಶೇ 18ರಷ್ಟು ಮತ ಗಳಿಕೆ ಹೊಂದಲಿದೆ ಎಂದು ಸಮೀಕ್ಷೆ ಹೇಳಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.
ಕೇರಳದಲ್ಲಿ ಎಲ್ಡಿಎಫ್- ಯುಡಿಎಫ್ ಜಟಾಪಟಿ; ಸಿಎಂ ಸ್ಥಾನಕ್ಕೆ ಪಿಣರಾಯಿ ಸೂಕ್ತ!
ಯಾವ ಕ್ಷೇತ್ರಗಳಲ್ಲಿ ಪಿಣರಾಯಿಗೆ ಗೆಲುವು
ಮನೋರಮಾ ಸುದ್ದಿ ವಾಹಿನಿ ಹಾಗೂ ವಿಎಂಆರ್ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ, ಪಾಲಕ್ಕಾಡ್, ವಯನಾಡ್, ಕೊಯಿಕ್ಕಾಡ್, ಮಲ್ಲಪ್ಪುರಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಜೊತೆಗೆ ಅಟ್ಟಿಂಗಳ್, ಚಿರಯಿಂಕೀಳ್, ನೆಡುಮಂಗಡ್, ವಾಮನಪುರಂ ಕ್ಷೇತ್ರಗಳಲ್ಲಿ ಎಲ್ಡಿಎಫ್ ಮೇಲುಗೈ ಸಾಧಿಸಲಿದೆ.
ಯುಡಿಎಫ್ಗೆ ನಾಲ್ಕೈದು ಸಮೀಕ್ಷೆಗಳಲ್ಲೂ ಹಿನ್ನಡೆ
ಯುಡಿಎಫ್ ಪರ ನಾಲ್ಕೈದು ಸಮೀಕ್ಷೆಗಳಲ್ಲೂ ಹಿನ್ನಡೆ ಸ್ಥಳೀಯ ಮಾಧ್ಯಮ ಸಂಸ್ಥೆಗಳು ನೀಡಿರುವ ಮೂರು ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಎಲ್ ಡಿ ಎಫ್ 72 ರಿಂದ 78 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಡಿಎಫ್ 65 ಹಾಗೂ ಬಿಜೆಪಿ 3 ರಿಂದ 7 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಎರಡನೇ ಸಮೀಕ್ಷೆಯಲ್ಲಿ ಎಲ್ ಡಿ ಎಫ್ 68 ರಿಂದ 78 ಸ್ಥಾನ, ಯುಡಿಎಫ್ 62 ರಿಂದ 72 ಸ್ಥಾನ ಹಾಗೂ ಬಿಜೆಪಿ 2 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ. ಇದಲ್ಲದೆ ಎಬಿಪಿ ಸಿ ವೋಟರ್ ಹಾಗೂ ಟೈಮ್ಸ್ ನೌ ಸಿ ವೋಟರ್ ಈ ಹಿಂದಿನ ಸಮೀಕ್ಷೆಯನ್ನು ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
ವಿಧಾನಸಭೆಯ ಬಲಾಬಲ
140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.
2016ರ ಚುನಾವಣೆಯಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು.
ಪಿಣರಾಯಿ ವಿಜಯನ್ ಜನಪ್ರಿಯತೆ
ಸಿಎಂ ಪಿಣರಾಯಿ ವಿಜಯನ್ ಜನಪ್ರಿಯತೆ ತಗ್ಗಿಲ್ಲ,
ಏಷ್ಯಾನೆಟ್ ಸಿ4 ಸಮೀಕ್ಷೆಯಂತೆ ಶೇ 41ರಷ್ಟು ಮಂದಿ ವಿಜಯನ್ ಅವರೇ ಮುಂದೆ ಸಿಎಂ ಆಗಲು ಸೂಕ್ತ ಎಂದಿದ್ದಾರೆ. ಶೇ 27ರಷ್ಟು ಮಂದಿ ಮಾಜಿ ಸಿಎಂ ಉಮ್ಮನ್ ಚಾಂಡಿ ಸಿಎಂ ಆದರೆ ಒಳ್ಳೆಯದು ಎಂದಿದ್ದರೆ, ರಮೇಶ್ ಚೆನ್ನಿತಲ ಅವರ ನಾಯಕತ್ವಕ್ಕೆ ಶೇ 7ರಷ್ಟು ಮಂದಿ ಮತ ಹಾಕಿದ್ದಾರೆ. ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ಮತ ಶೇ 11ರಷ್ಟು ಹಾಗೂ ಬಿಜೆಪಪಿ ಅಧ್ಯಕ್ಷ ಕೆ ಸುರೇಂದ್ರನ್ ಪರ ಶೇ 6ರಷ್ಟು ಮತ ಬಂದಿದೆ.
ಈ
ಹಿಂದಿನ
ಸಮೀಕ್ಷೆಗಳಲ್ಲಿ
ಪಿಣರಾಯಿ
ಸರ್ಕಾರ
ಕಾರ್ಯ
ನಿರ್ವಹಣೆ
ಅತ್ಯುತ್ತಮ
ಎಂದು
ಶೇ
31.32ರಷ್ಟು
ಮಂದಿ
ಹೇಳಿದ್ದರೆ,
ಪರವಾಗಿಲ್ಲ
ಎಂದು
ಶೇ
29.94
ಮಂದಿ
ಮತ
ಹಾಕಿದ್ದಾರೆ.
ಸಮಾಧಾನಕರವಾಗಿಲ್ಲ
ಎಂದು
ಶೇ
33.32ರಷ್ಟು
ಮಂದಿ
ಮತ
ಚಲಾಯಿಸಿದ್ದಾರೆ.
ಈ
ಬಗ್ಗೆ
ಶೇ
5.42
ರಷ್ಟು
ಮಂದಿ
ಯಾವುದೇ
ಪ್ರತಿಕ್ರಿಯೆ
ನೀಡಿಲ್ಲ.