ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?
Recommended Video
ಬೆಂಗಳೂರು, ಆಗಸ್ಟ್ 05: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ ಪರಿಚ್ಛೇದ 370(3) ರದ್ದುಗೊಳಿಸುವ ವಿಧೇಯಕವನ್ನು ಗೃಹ ಸಚಿವ ಅಮಿತ್ ಶಾ ಮಂಡನೆ ಮಾಡಿದರು. ಇದಕ್ಕೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತವೂ ಸಿಕ್ಕಿದೆ. ಇದಾದ ಬಳಿಕ ಕಣಿವೆ ರಾಜ್ಯದಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ? ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಣಯದಿಂದ ಮುಂದಾಗುವ ಪರಿಣಾಮವೇನು? ಮುಂದೆ ಓದಿ...
"ಜಮ್ಮುಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಕ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ. ಇದರ ಜೊತೆಗೆ ಅರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಶೇ10ರಷ್ಟು ಮೀಸಲಾತಿ ಒದಗಿಸುವ ವಿಧೇಯಕವನ್ನು ಮಂಡಿಸಲಾಗಿದೆ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾರತದ ನಕ್ಷೆ ಬದಲು, ದೇಶದ ಕೇಂದ್ರಾಡಳಿತ ಪ್ರದೇಶಗಳೆಷ್ಟು?
ಸಂವಿಧಾನದ 21ನೇ ಪರಿಚ್ಛೇದಲ್ಲಿ 370ನೇ ವಿಧಿ(Article) ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಶಾಸನಸಭೆ ನಿರ್ಣಯದ ಮೂಲಕ ಅಂಗೀಕರಿಸುವವರೆಗೆ ಅಲ್ಲಿನ ಆಡಳಿತಕ್ಕೆ ಅಗತ್ಯವಾದ ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಗಳನ್ನು ಆ ರಾಜ್ಯದಲ್ಲಿ ಜಾರಿಗೊಳಿಸಬೇಕಾದಲ್ಲಿ, ಅದಕ್ಕೆ ಆ ನಿರ್ದಿಷ್ಟ ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಸಹಮತ ಅಗತ್ಯವಾಗಿತ್ತು.
ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪುದುಚೇರಿಯಂತೆ ಚುನಾವಣೆ ಎದುರಿಸಿ ಜನಾದೇಶ ಪಡೆದ ಸರ್ಕಾರ ರಚನೆಯಾಗಿ ಹೊಸ ಮುಖ್ಯಮಂತ್ರಿ ಹೊಂದಬಹುದು. ಆದರೆ, ಲಡಾಕ್ ಮಾತ್ರ ಅಂಡಮಾನ್ ಮತ್ತು ನಿಕೋಬಾರ್ ಇನ್ನಿತರ ಕೇಂದ್ರಾಡಳಿತ ಪ್ರದೇಶಗಳಂತೆ ಉಳಿಯಲಿದೆ.
ಈ ಮುಂಚೆ ಇದ್ದ ಪರಿಸ್ಥಿತಿ ಏನು?:
* ಸಂವಿಧಾನದ 370ನೇ ಪರಿಚ್ಛೇದ ಜಾರಿ ಇದ್ದ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಂಡಿತ್ತು.
* ಭಾರತದ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಕಾನೂನು ಹೊಂದಬಹುದಾಗಿತ್ತು. ಆದರೆ, ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಕ್ಷೇತ್ರಗಳಲ್ಲಿ ಭಾರತದ ಸಂವಿಧಾನ ವಿಧಿ ವಿಧಾನಗಳಂತೆ ನಡೆದುಕೊಳ್ಳಬೇಕಾಗಿತ್ತು.
* ಜಮ್ಮು ಕಾಶ್ಮೀರದಲ್ಲಿ ಹೊರ ರಾಜ್ಯದವರು ಯಾರೂ ಆಸ್ತಿ ಹಾಗೂ ಭೂಮಿ ಖರೀದಿಸುವಂತಿರಲಿಲ್ಲ. ಈ ನಿಯಮವೇ ಜಮ್ಮು ಕಾಶ್ಮೀರವು ಭಾರತದಿಂದ ಬೇರೆ ಎಂಬ ಭಾವನೆ ಬೆಳೆಯಲು ಕಾರಣವಾಗಿತ್ತು. ಬೇರೆಯವರು ಬಂಡವಾಳ ತೊಡಗಿಸಲು ಅವಕಾಶವಿಲ್ಲದ ಕಾರಣ ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿತ್ತು. ಇದಕ್ಕಾಗಿಯೇ ಸ್ಥಳೀಯರು ಶಸ್ತ್ರ ಕೈಗೆತ್ತಿಕೊಂಡು ಉಗ್ರರಾಗುತ್ತಿದ್ದಾರೆಂದು ವರದಿ ಬಂದಿತ್ತು.
ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?
ಒಂದು ರಾಷ್ಟ್ರ, ಒಂದು ಸಂವಿಧಾನ
* ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ರಾಷ್ಟ್ರಗೀತೆ ಹಾಗೂ ಒಂದು ರಾಷ್ಟ್ರಧ್ವಜ ಎಂಬ ಪರಿಕಲ್ಪನೆಗೆ ವ್ಯತಿರಿಕ್ತವಾದ ಪರಿಸ್ಥಿತಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಬಹುದಾಗಿತ್ತು.
* ಕಲಂ 35-ಎ ನಿಂದಾಗಿ ಅವರ ಹಕ್ಕುಗಳನ್ನು ಕಸಿದುಕೊಂಡ ಆರೋಪ, ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿತ್ತು.
* ಕಣಿವೆ ರಾಜ್ಯದಲ್ಲಿ ಸರ್ಕಾರಿ ನೇಮಕಾತಿ, ಸ್ಥಿರಾಸ್ತಿ ಖರೀದಿ, ಸರ್ಕಾರಿ ಯೋಜನೆಗಳ ಸೌಲಭ್ಯ, ಸಾರ್ವಜನಿಕ ಕಲ್ಯಾಣಭಿವೃದ್ಧಿ ಯೋಜನೆಗೆ ಲಾಭ ಖಾಯಂ ಆಗಿ ನೆಲೆಸಿರುವವರಿಗೆ ಸಿಕ್ಕಿತು. ಹೊರ ರಾಜ್ಯದಿಂದ ಬಂದು ನೆಲೆಸಿದವರಿಗೆ ಈ ಲಾಭ ಸಿಗುತ್ತಿರಲಿಲ್ಲ.
* ಕಣಿವೆ ರಾಜ್ಯದಲ್ಲಿನ ಮಹಿಳೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಹೊಂದಿಲ್ಲದ ಪುರುಷನನ್ನು ವಿವಾಹವಾದರೆ ದಂಪತಿಯ ಮಕ್ಕಳಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಮಹಿಳೆಯ ಹೆಸರಿನಲ್ಲಿ ಆಸ್ತಿ ಇದ್ದರೆ ಅದನ್ನು ಮಕ್ಕಳಿಗೆ ನೀಡಲು ಬರುತ್ತಿರಲಿಲ್ಲ.
370 ರದ್ದು: ಯಾವ ಪಕ್ಷ ಬೆಂಬಲಿಸಿತು, ಯಾವುದು ಇಲ್ಲ?
ಸಂವಿಧಾನ, ಕಾನೂನು ಸುವ್ಯವಸ್ಥೆ
*
ಈ
ಮುಂಚೆ
ಇದ್ದ
ಪ್ರತ್ಯೇಕ
ಸಂವಿಧಾನ
ಹೊಂದುವ
ಅಧಿಕಾರವೂ
ರದ್ದಾಗಿದ್ದು,
ಭಾರತದ
ಸಂವಿಧಾನಕ್ಕೆ
ಜಮ್ಮು
ಮತ್ತು
ಕಾಶ್ಮೀರ
ಹಾಗೂ
ಲಡಾಕ್
ಬದ್ಧವಾಗಿರಬೇಕಿದೆ.
*
ದ್ಚಿಪೌರತ್ವ
ಇರುವುದಿಲ್ಲ.
ಶಾಶ್ವತ
ನಾಗರಿಕ
ಪ್ರಮಾಣ
ಪತ್ರ
ರದ್ದಾಗಿದೆ.
ಎಲ್ಲಾ
ಕಾಶ್ಮೀರಿಗಳು
ಭಾರತದ
ನಾಗರೀಕರಾಗಿರುತ್ತಾರೆ.
*
ಪ್ರತ್ಯೇಕ
ಕಾನೂನು
ಇರುವುದಿಲ್ಲ,
ಕೇಂದ್ರ
ಸರ್ಕಾರದ
ಕಾನೂನು,
ನಿಬಂಧನೆಗಳು
ನೇರವಾಗಿ
ಅನ್ವಯವಾಗಲಿದೆ.
*
ಜಮ್ಮು
ಮತ್ತು
ಕಾಶ್ಮೀರದಲ್ಲಿ
ಪುದುಚೇರಿ
ಮಾದರಿ
ಅಳವಡಿಸುವುದಾಗಿ
ಅಮಿತ್
ಶಾ
ಹೇಳಿರುವುದರಿಂದ
ಚುನಾಯಿತ
ಹೊಸ
ಸರ್ಕಾರವು
ಕಾನೂನು
ಸುವ್ಯವಸ್ಥೆ
ಜವಾಬ್ದಾರಿ
ವಹಿಸಿಕೊಳ್ಳಲಿದೆ.
ದೆಹಲಿ
ಹಾಗೂ
ಇನ್ನಿತರ
ಕೇಂದ್ರಾಡಳಿತ
ಪ್ರದೇಶಗಳಲ್ಲಿ
ನೇರವಾಗಿ
ಕೇಂದ್ರ
ಸರ್ಕಾರದ
ನಿಯಂತ್ರಣದಲ್ಲಿರಲಿದೆ.
*
ಕೇಂದ್ರ
ಸರ್ಕಾರದ
ಎಲ್ಲಾ
ಜನಪ್ರಿಯ
ಯೋಜನೆಗಳು
ಕಣಿವೆ
ರಾಜ್ಯಕ್ಕೆ
ಅನ್ವಯವಾಗಲಿದೆ.
ಪ್ರತ್ಯೇಕ ಧ್ವಜವಿಲ್ಲ, ಹೂಡಿಕೆ ಸಾಧ್ಯ
*
ಬೇರೆ
ರಾಜ್ಯದವರು
ನೇರವಾಗಿ
ಬಂಡವಾಳ
ಹೂಡಿಕೆ
ಮಾಡಬಹುದು,
ಆಸ್ತಿ
ಖರೀದಿಸಬಹುದು.
*
ಬೇರೆ
ರಾಜ್ಯದವರು
ಕಾಶ್ಮೀರದಲ್ಲಿ
ನೆಲೆಸಬಹುದು,
ಸ್ಥಳೀಯರೊಡನೆ
ಸಂಬಂಧ
ಬೆಳೆಸಿ,
ಆಸ್ತಿ
ಪಡೆಯಬಹುದು.
*
ಶೇಖ್
ಅಬ್ದುಲ್ಲಾ(ಒಮರ್
ಅಬ್ದುಲ್ಲಾ
ಅಜ್ಜ)
ಘೋಷಿಸಿದಂತೆ
ನಾನೇ
ಪ್ರಧಾನಿ,
ಇದುವೆ
ಪ್ರತ್ಯೇಕ
ಧ್ವಜ
ಎನ್ನುವಂತಿಲ್ಲ.
ಭಾರತದ
ತ್ರಿವರ್ಣ
ಧ್ವಜಕ್ಕೆ
ತಲೆಬಾಗಬೇಕು.
*
ಆರೆಸ್ಸೆಸ್
ಶಾಖೆಗಳನ್ನು
ಆರಂಭಿಸಬಹುದು,
ಹಿಂದೂ
ಶಾಸಕರನ್ನು
ಮುಂದಿನ
ವಿಧಾನಸಭೆಯಲ್ಲಿ
ಕಾಣಬಹುದು.
ಕಾಶ್ಮೀರಿ
ಪಂಡಿತರು
ಮತ್ತೆ
ಕಣಿವೆಗೆ
ಮರಳಬಹುದು.
*
ಬೇರೆ
ರಾಜ್ಯಗಳಂತೆ
ಪ್ರತಿ
ಐದು
ವರ್ಷಕ್ಕೆ
ಚುನಾವಣೆ
ನಡೆಯಲಿದ್ದು,
ವಿಧಾನಸಭೆ
ಅವಧಿಯೂ
5
ವರ್ಷಕ್ಕೆ
ಸೀಮಿತವಾಗಲಿದೆ.
*
ಆರ್ಟಿಕಲ್
360
ಅನ್ವಯ
ಆರ್ಥಿಕ
ತುರ್ತುಪರಿಸ್ಥಿತಿಯನ್ನು
ಕೇಂದ್ರ
ಸರ್ಕಾರ
ಹೇರಬಹುದು.
*
ಬೇರೆ
ರಾಜ್ಯದ
ಪುರುಷರನ್ನು
ಇಲ್ಲಿನ
ಮಹಿಳೆಯರು
ಮದುವೆಯಾಗಬಹುದು.
ಈ
ಮುಂಚೆ
ಮದುವೆಗೆ
ಅನುಮತಿ
ಇದ್ದರೂ
ದಂಪತಿಯ
ಮಕ್ಕಳಿಗೆ
ಶಾಶ್ವತ
ನಿವಾಸಿ
ಪ್ರಮಾಣ
ಪತ್ರ
ಸಿಗುತ್ತಿರಲಿಲ್ಲ,
ಈಗ
ಕಾಶ್ಮೀರಿ
ಮಹಿಳೆಯ
ಹೆಸರಿನಲ್ಲಿ
ಆಸ್ತಿ
ಇದ್ದರೆ
ಅದನ್ನು
ಮಕ್ಕಳಿಗೆ
ನೀಡಬಹುದು,