ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಧರ್ಮಗಳು ಪ್ರೀತಿಸಲು ಕಲಿಸುತ್ತದೆ: ರಾಮಾಯಣ ರಸಪ್ರಶ್ನೆ ಗೆದ್ದ ಮುಸ್ಲಿಂ ವಿದ್ಯಾರ್ಥಿಗಳು

|
Google Oneindia Kannada News

ರಾಮಾಯಣ ಮಾಸ ಕಾರ್ಯಕ್ರಮದ ಅಂಗವಾಗಿ ಮಲಯಾಳಂ ಪುಸ್ತಕ ಪ್ರಕಾಶನ ಸಂಸ್ಥೆ ಡಿಸಿ ಬುಕ್ಸ್ ನಡೆಸಿದ ರಾಜ್ಯಮಟ್ಟದ ರಾಮಾಯಣ ಆನ್‌ಲೈನ್‌ ರಸಪ್ರಶ್ನೆಯಲ್ಲಿ ಐವರು ವಿಜೇತರಾಗಿದ್ದಾರೆ. ಇದರಲ್ಲಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಹೆಸರು ಇರುವುದು ಇಡೀ ದೇಶದ ಗಮನ ಸೆಳೆದಿದೆ.

Recommended Video

ಕೇರಳದಲ್ಲಿ ನಡೆದ ಕ್ವಿಜ್ ನಲ್ಲಿ ಗೆದ್ದಿದ್ದು ಯಾರು ಗೊತ್ತ!! | OneIndia Kannada

ಮಲಪ್ಪುರಂನ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಪಿ.ಕೆ ಮತ್ತು ಮೊಹಮ್ಮದ್ ಬಸಿತ್ ಆನ್‌ಲೈನ್ ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ 1000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಬ್ಬರು ವಿದ್ಯಾರ್ಥಿಗಳು ವಲಂಚೇರಿಯ ಕೆಕೆಎಚ್‌ಎಂ ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ ವಾಫಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಎಂಟು ವರ್ಷಗಳ ವಾಫಿ (Wafy) ಕಾರ್ಯಕ್ರಮದ ಅಡಿಯಲ್ಲಿ, ಇಬ್ಬರೂ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದವರೆಗೆ ಸ್ಲಾಮಿಕ್ ಅಧ್ಯಯನವನ್ನು ಮಾಡುತ್ತಿದ್ದಾರೆ. ಇದರಲ್ಲಿ ನಿಯಮಿತ ವಿಶ್ವವಿದ್ಯಾಲಯದ ಪದವಿ ಕೋರ್ಸ್ ಕೂಡ ಸೇರಿದೆ.

ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೂ ಮಹಾಕಾವ್ಯದ ಬಗ್ಗೆ ತಿಳಿದಿದ್ದರೂ, ವಾಫಿ ಕೋರ್ಸ್‌ಗೆ ಸೇರಿದ ನಂತರ ರಾಮಾಯಣ ಮತ್ತು ಹಿಂದೂ ಧರ್ಮದ ಬಗ್ಗೆ ಆಳವಾಗಿ ಓದಲು ಮತ್ತು ಕಲಿಯಲು ಪ್ರಾರಂಭಿಸಿದರು, ಅದರ ಪಠ್ಯಕ್ರಮವು ಎಲ್ಲಾ ಪ್ರಮುಖ ಧರ್ಮಗಳ ಬೋಧನೆಗಳನ್ನು ಹೊಂದಿದೆ.

ವಿಡಿಯೋ: ರಾಮಾಯಣ, ಮಹಾಭಾರತದ ಬಗ್ಗೆ ಶಾಲಾ ಮಕ್ಕಳ ಜ್ಞಾನಕ್ಕೆ ಮೆಚ್ಚುಗೆವಿಡಿಯೋ: ರಾಮಾಯಣ, ಮಹಾಭಾರತದ ಬಗ್ಗೆ ಶಾಲಾ ಮಕ್ಕಳ ಜ್ಞಾನಕ್ಕೆ ಮೆಚ್ಚುಗೆ

ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮವನ್ನು ಅಧ್ಯಯನ ಮಾಡುವ ಭಾರತೀಯ ಧರ್ಮಗಳ ಕುರಿತಾದ ಪಠ್ಯವನ್ನು ಒಳಗೊಂಡಿರುವ ವಾಫಿ ಕೋರ್ಸ್‌ನ ವಿಶಿಷ್ಟ ಪಠ್ಯಕ್ರಮವು ಸ್ಪರ್ಧೆಯಲ್ಲಿ ಗೆಲ್ಲಲು ಸಹಾಯ ಮಾಡಿತು ನೀಡಿತು ಎಂದು ಜಬೀರ್ ಹೇಳಿದರು. ಕೋರ್ಸ್‌ನ ಭಾಗವು ಕ್ರಿಶ್ಚಿಯನ್ ಧರ್ಮ, ಜುದಾಯಿಸಂ, ಟಾವೊಯಿಸಂ ಇತ್ಯಾದಿಗಳನ್ನು ಪರಿಚಯಿಸುವ ಅಧ್ಯಯನವನ್ನು ಒಳಗೊಂಡಿದೆ.

 ಹಲವು ಧರ್ಮಗಳ ಅಧ್ಯಯನ ಮಾಡುವ ವಾಫಿ ಕೋರ್ಸ್

ಹಲವು ಧರ್ಮಗಳ ಅಧ್ಯಯನ ಮಾಡುವ ವಾಫಿ ಕೋರ್ಸ್

"ನಮ್ಮ ಪ್ರಾಂಶುಪಾಲರಾದ ಅಬ್ದುಲ್ ಹಕೀಂ ಫೈಝಿ ಅಡ್ರಿಸ್ಸೆರಿ ನೇತೃತ್ವದ ಇಸ್ಲಾಮಿಕ್ ಕಾಲೇಜುಗಳ ಸಮನ್ವಯದಿಂದ ವಿನ್ಯಾಸಗೊಳಿಸಲಾದ ವಾಫಿ ಕೋರ್ಸ್‌ನ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಬಹು-ಧರ್ಮೀಯ ಸಮಾಜದಲ್ಲಿ ಬದುಕಲು ಸಜ್ಜುಗೊಳಿಸುವ ಉದ್ದೇಶದಿಂದ ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತದೆ. ಪಠ್ಯಕ್ರಮವು ವಿವಿಧ ಧರ್ಮಗಳನ್ನು ವಿವರವಾಗಿ ಅಧ್ಯಯನ ಮಾಡುವ ಪಠ್ಯಗಳನ್ನು ಹೊಂದಿದೆ" ಎಂದು ಜಬೀರ್ ಹೇಳಿದರು.

ಪಠ್ಯಕ್ರಮದಿಂದ ಸ್ಫೂರ್ತಿ ಪಡೆದ ಕೆಲವು ಹಿರಿಯರು ಈಗ ವಿದೇಶಿ ವಿಶ್ವವಿದ್ಯಾಲಯಗಳಿಂದ ಇಸ್ಲಾಂ ಮತ್ತು ಬೌದ್ಧಧರ್ಮ ಮತ್ತು ಇಸ್ಲಾಂ ಮತ್ತು ಸಿಖ್ ಧರ್ಮ ಸೇರಿದಂತೆ ಧರ್ಮಗಳ ತುಲನಾತ್ಮಕ ಅಧ್ಯಯನದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

 ರಾಮನ ಸದ್ಗುಣಗಳು ಆದರ್ಶವಾಗಬೇಕು

ರಾಮನ ಸದ್ಗುಣಗಳು ಆದರ್ಶವಾಗಬೇಕು

"ಎಲ್ಲಾ ಭಾರತೀಯರು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಓದಬೇಕು ಮತ್ತು ಕಲಿಯಬೇಕು ಏಕೆಂದರೆ ಅವು ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸದ ಭಾಗವಾಗಿದೆ. ಈ ಪಠ್ಯಗಳನ್ನು ಕಲಿಯುವುದು ಮತ್ತು ಅರ್ಥಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನಾನು ನಂಬುತ್ತೇನೆ" ಎಂದು ಜಬೀರ್ ಹೇಳಿದ್ದಾರೆ.

ಶ್ರೀರಾಮನು ಸದಾಚಾರ, ಸಹನೆ ಮತ್ತು ಪ್ರಶಾಂತತೆಯ ಮೂರ್ತರೂಪ ಎಂದು ತಿಳಿಸಿದ ವಾಫಿ ವಿದ್ಯಾರ್ಥಿ, ಇಂತಹ ಉದಾತ್ತ ಸದ್ಗುಣಗಳು ಪ್ರತಿಯೊಬ್ಬ ಮನುಷ್ಯನ ಭಾಗವಾಗಬೇಕು ಎಂದರು.

"ತನ್ನ ಪ್ರೀತಿಯ ತಂದೆ ದಶರಥನಿಗೆ ನೀಡಿದ ಭರವಸೆಯನ್ನು ಈಡೇರಿಸಲು ರಾಮನು ತನ್ನ ರಾಜ್ಯವನ್ನು ಸಹ ತ್ಯಾಗ ಮಾಡಬೇಕಾಯಿತು. ಅಧಿಕಾರಕ್ಕಾಗಿ ಕೊನೆಯಿಲ್ಲದ ಹೋರಾಟದ ಅವಧಿಯಲ್ಲಿ ನಾವು ರಾಮನಂತಹ ಪಾತ್ರಗಳಿಂದ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ಸಂದೇಶದಿಂದ ಸ್ಫೂರ್ತಿ ಪಡೆಯಬೇಕು," ಎಂದು ಅವರು ವಿವರಿಸಿದರು.

 ಅಯೋಧ್ಯಾ ಕಾಂಡ ತನಗಿಷ್ಟ

ಅಯೋಧ್ಯಾ ಕಾಂಡ ತನಗಿಷ್ಟ

ರಾಮಾಯಣ ಮಹಾಕಾವ್ಯದಲ್ಲಿ , ಲಕ್ಷ್ಮಣನ ಕೋಪ ಮತ್ತು ಶ್ರೀರಾಮನ ಸಾಂತ್ವನವನ್ನು ವಿವರಿಸುವ "ಅಯೋಧ್ಯಾ ಕಾಂಡ"ದ ಪದ್ಯಗಳು ತನಗೆ ಇಷ್ಟ ಎಂದು ಮೊಹಮ್ಮದ್ ಬಸಿತ್ ಹೇಳುತ್ತಾರೆ. ತುಂಚತು ರಾಮಾನುಜನ್ ಎಝುತಾಚನ್ ಅವರು ಬರೆದ ಮಹಾಕಾವ್ಯದ ಮಲಯಾಳಂ ಆವೃತ್ತಿಯಾದ 'ಆಧ್ಯಾತ್ಮ ರಾಮಾಯಣ'ದ ಪದ್ಯಗಳನ್ನು ನಿರರ್ಗಳವಾಗಿ ಮತ್ತು ಸುಮಧುರವಾಗಿ ನಿರೂಪಿಸುವುದು ಮಾತ್ರವಲ್ಲದೆ ಆ ಸಾಲುಗಳ ಅರ್ಥ ಮತ್ತು ಸಂದೇಶವನ್ನು ವಿವರಿಸುತ್ತಾರೆ.

ಯಾವುದೇ ಧರ್ಮವು ದ್ವೇಷವನ್ನು ಉತ್ತೇಜಿಸುವುದಿಲ್ಲ ಆದರೆ ಶಾಂತಿ ಮತ್ತು ಸೌಹಾರ್ದತೆಯನ್ನು ಮಾತ್ರ ಪ್ರಚಾರ ಮಾಡುತ್ತದೆ, ರಸಪ್ರಶ್ನೆ ಗೆಲುವು ಮಹಾಕಾವ್ಯವನ್ನು ಹೆಚ್ಚು ಆಳವಾಗಿ ಕಲಿಯಲು ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಿದರು.

 ತಯಾರಿ ಇಲ್ಲದೆ ಸ್ಪರ್ಧೆಯಲ್ಲಿ ಭಾಗಿ

ತಯಾರಿ ಇಲ್ಲದೆ ಸ್ಪರ್ಧೆಯಲ್ಲಿ ಭಾಗಿ

ಡಿಸಿ ಬುಕ್ಸ್‌ನ ಟೆಲಿಗ್ರಾಮ್ ಗುಂಪಿನಿಂದ ರಾಮಾಯಣ ರಸಪ್ರಶ್ನೆ ಬಗ್ಗೆ ತಿಳಿದುಕೊಂಡರು ಮತ್ತು ಅದಕ್ಕೆ ಸಹಿ ಹಾಕಿದರು. ಸಮಯಾವಕಾಶ ಕಡಿಮೆ ಇದ್ದುದ್ದರಿಂದ ಯಾವುದೇ ಪೂರ್ವ ತಯಾರಿ ಇಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಿದೆವು ಎಂದು ಅವರು ಹೇಳಿದ್ದಾರೆ.

ಜಬೀರ್ ಅಂತಿಮ ವರ್ಷದ ವಾಫಿ ಪಿಜಿ ವಿದ್ಯಾರ್ಥಿಯಾಗಿದ್ದು, ಸಮಾಜಶಾಸ್ತ್ರದಲ್ಲಿ ಬಿಎ ಪೂರ್ಣಗೊಳಿಸಿದ್ದಾರೆ. ಸಹ ವಿಜೇತ ಮತ್ತು ಓಮನೂರಿನ ನಿವಾಸಿ ಮೊಹಮ್ಮದ್ ಬಸಿತ್ ಬಿಎ ಸೈಕಾಲಜಿ ಪೂರ್ಣಗೊಳಿಸಿದ್ದು, ಐದನೇ ವರ್ಷದ ವಾಫಿ ವಿದ್ಯಾರ್ಥಿ ವಿದ್ಯಾರ್ಥಿಯಾಗಿದ್ದಾರೆ.
ಅಭಿರಾಮ್ ಎಂ.ಪಿ, ನೀತು ಕೃಷ್ಣನ್ ಮತ್ತು ನವನೀತ್ ಗೋಪನ್ ಸ್ಪರ್ಧೆಯಲ್ಲಿ ಗೆದ್ದ ಇತರೆ ವಿದ್ಯಾರ್ಥಿಗಳಾಗಿದ್ದಾರೆ.

English summary
Two Muslim students from Malappuram in Kerala have won statewide online Ramayana quiz contest organised by DC Books, a Kerala Publisher. Mohammed Jabir P K and Mohammed Basith M, topped the quiz which had a participation of over 1,000 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X