Fact check: ಈ ದ್ವೇಷದ ಭಾಷಣ ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದ್ದಾ?
ನವದೆಹಲಿಯ ಜಹಾಂಗೀರ್ಪುರಿಯಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ಘಟನೆ ಬೂದಿ ಮುಚ್ಚಿದ ಕೆಂಡದಂತಿದೆ. ಈ ಸಮಯದಲ್ಲಿ ಕೆಲ ಕಿಡಿಗೇಡಿಗಳು ಇದೇ ಸಂದರ್ಭವನ್ನು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಕದಡುವಂತ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಿಂದೂಗಳ ವಿರುದ್ಧ ಬೆದರಿಕೆ ಹಾಕುತ್ತಿರುವ ಖಾಜಿ (ಶರಿಯಾ ನ್ಯಾಯಾಲಯದ ನ್ಯಾಯಾಧೀಶರು) ಎಂಬ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ವ್ಯಕ್ತಿ "ಹಿಂದೂಗಳಿಗೆ ವಿಷಯಗಳನ್ನು ಕಠಿಣಗೊಳಿಸುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.
ಜಹಾಂಗೀರ್ಪುರಿ ಹಿಂಸಾಚಾರ ಘಟನೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಏನು ಸಂಬಂಧ?
ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ವಿಡಿಯೋಕ್ಕೂ ಜಹಾಂಗೀರ್ಪುರಿ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಂಡು ಹಿಡಿದೆ. ಈ ಘಟನೆ 2019ರಲ್ಲಿ ನಡೆದಿದೆ. ಜೊತೆಗೆ ಇದನ್ನು ವಿಡಿಯೊ ಡೆಹ್ರಾಡೂನ್ನಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಡೆಹ್ರಾಡೂನ್ನ ಜಮಿಯತ್ ಉಲೇಮಾ-ಎ-ಹಿಂದ್ನ ಜಿಲ್ಲಾಧ್ಯಕ್ಷ ಮುಫ್ತಿ ರಯೀಸ್ ಅಹ್ಮದ್ ಖಾಸ್ಮಿ. ಜಾರ್ಖಂಡ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಹತ್ಯೆಯ ನಂತರ ಅವರು ಮಾಧ್ಯಮಗಳ ಮುಂದೆ ಮಾತನಾಡಿದರು.
ಜುಲೈ 1, 2019 ರಂದು "Qari usman hassani official" ಚಾನೆಲ್ನಲ್ಲಿ YouTubeನಲ್ಲಿ ಇದೇ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಮೂರು ನಿಮಿಷಗಳ ಅವಧಿಯ ವೈರಲ್ ವಿಡಿಯೊದಲ್ಲಿ ವ್ಯಕ್ತಿಯು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ಕೇಳಿದನು.
ಜೂನ್ 17, 2019 ರಂದು 24 ವರ್ಷದ ತಬ್ರೇಜ್ ಅನ್ಸಾರಿಯನ್ನು ಜಾರಾಖಂಡ್ನಲ್ಲಿ ಹಿಂದೂ ಜನಸಮೂಹ ಮರಕ್ಕೆ ಕಟ್ಟಿ, ಅಮಾನುಷವಾಗಿ ಹಲ್ಲೆ ನಡೆಸಿತು ಮತ್ತು "ಜೈ ಶ್ರೀ ರಾಮ್" ಎಂದು ಕೂಗುವಂತೆ ಒತ್ತಾಯಿಸಿತು. ತೀವ್ರವಾಗಿ ಗಾಯಗೊಂಡಿದ್ದ ತಬ್ರೇಜ್ ಅನ್ಸಾರಿ ಕೆಲ ದಿನಗಳ ನಂತರ ಸಾವನ್ನಪ್ಪಿದರು. ಇದೇ ವಿಡಿಯೋ ಜೂನ್ 27, 2019 ರಿಂದ ಲೈವ್ ಹಿಂದೂಸ್ತಾನ್ ವರದಿಯಲ್ಲಿ ಕಂಡುಬಂದಿದೆ. ಇಲ್ಲಿ ಪ್ರಚೋದಕ ಹೇಳಿಕೆಗಳನ್ನು ನೀಡುವ ವ್ಯಕ್ತಿಯ ಫೋಟೋವನ್ನು ಹಾಕಲಾಗಿದೆ.
ಈ ವರದಿಯ ಪ್ರಕಾರ ಡೆಹ್ರಾಡೂನ್ನಲ್ಲಿ ಅನ್ಸಾರಿ ಎಂಬ ಮುಸ್ಲಿಂ ವ್ಯಕ್ತಿಯ ಮೇಲೆ ಮಾರಣಾಂತಿಕ ಗುಂಪು ದಾಳಿಯ ನಂತರ ಡೆಹ್ರಾಡೂನ್ನ ಜಮಿಯತ್ ಉಲೇಮಾ-ಎ-ಹಿಂದ್ನ ಜಿಲ್ಲಾಧ್ಯಕ್ಷ ಮುಫ್ತಿ ರಯೀಸ್ ಅಹ್ಮದ್ ಖಾಸ್ಮಿ ನೇತೃತ್ವದಲ್ಲಿ ಡೆಹ್ರಾಡೂನ್ ಜಿಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇದೇ ಸುದ್ದಿಯನ್ನು ಹಲವು ಸುದ್ದಿವಾಹಿನಿಗಳು ವರದಿ ಮಾಡಿವೆ. ಆ ಸಮಯದಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸ್ಮಿ, ಪ್ರಚೋದಕ ಹೇಳಿಕೆಗಳನ್ನು ನೀಡಿದರು. ಇದರ ಬೆನ್ನಲ್ಲೇ ಡೆಹ್ರಾಡೂನ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೀಗಾಗಿ, ಡೆಹ್ರಾಡೂನ್ ಸಿಟ್ ಖಾಜಿಯವರು ನೀಡಿದ ಮೂರು ವರ್ಷಗಳ ಹಿಂದಿನ ಹೇಳಿಕೆಯನ್ನು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರಕ್ಕೆ ತಪ್ಪಾಗಿ ಜೋಡಿಸಲಾಗಿದೆ.
Fact Check
ಕ್ಲೇಮು
ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದ ದ್ವೇಷದ ಭಾಷಣ ವಿಡಿಯೋ ವೈರಲ್
ಪರಿಸಮಾಪ್ತಿ
ಮೂರು ವರ್ಷ ಹಳೆಯ ಜಾರಾಖಂಡ್ನ ವಿಡಿಯೋ ಜಹಾಂಗೀರ್ಪುರಿ ಹಿಂಸಾಚಾರದೆಂದು ವೈರಲ್