ವಿಡಿಯೋ: ಸ್ವಾಭಿಮಾನಿ ಕರ್ನಾಟಕ ನನ್ನದಾಗಬೇಕು: ನರೇಂದ್ರ ಬಾಬು
Recommended Video
ಸ್ವಾವಲಂಬಿ ಮತ್ತು ಸ್ವಾಭಿಮಾನಿ ಕರ್ನಾಟಕ ನಮ್ಮದಾಗಬೇಕು ಎಂಬುದು ಮಾಜಿ ಶಾಸಕ ಈಗಿನ ಬಿಜೆಪಿ ನಾಯಕ ನೆ.ಲ.ನರೇಂದ್ರ ಬಾಬು ಅವರು ಕನಸು.
ನರೇಂದ್ರ ಬಾಬು ಅವರ ಕನಸಿನ ಕರ್ನಾಟಕ ಶೋಷಣೆ ರಹಿತವಾಗಿರಬೇಕು, ಪ್ರೀತಿ ಪೂರಿತವಾಗಿರಬೇಕು. ಜಾಗೃತ ಜನಗಳಿಂದ ಅಭಿವೃದ್ಧಿ ಪಥದತ್ತ ಏರುಗತಿಯಲ್ಲಿರಬೇಕು.
ವಿಡಿಯೋ: ಉಪೇಂದ್ರ ಕನಸಿನ ಕರ್ನಾಟಕ ಹೇಗಿರಬೇಕು ಅಂದರೆ...
ನರೇಂದ್ರ ಅವರ ಪ್ರಕಾರ ರಾಜ್ಯದ ರೈತ ನೆಮ್ಮದಿಯಿಂದ ಬದುಕುವ ಪೂರಕ ವಾತಾವರಣ ನಿರ್ಮಾಣವಾಗಬೇಕು, ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕಬೇಕು. ಕೇವಲ ರೈತರಷ್ಟೆ ಅಲ್ಲ, ಯುವಜನರು, ಮಹಿಳೆಯರು ಸುಭಿಕ್ಷವಾಗಿ ಜೀವಿಸುವ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗಬೇಕು ಎಂಬ ಕನಸು ಅವರದ್ದು.
'ನನ್ನ ಕನಸಿನ ಕರ್ನಾಟಕ' : ವಿಡಿಯೋ ಮಾಡಿ ಕಳಿಸಿ
ಗ್ರಾಮ ಪಂಚಾಯಿತಿಯಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ ಸಹೃದಯಿ, ಜನಾನುರಾಗಿ ನಾಯಕರುಗಳು ಆರಿಸಿ ಬರಬೇಕು. ಕರ್ನಾಟಕ ತನ್ನ ಸಾಂಸ್ಕೃತಿಕ ಇತಿಹಾಸವನ್ನು ಕಳೆದುಕೊಳ್ಳದೆಯೇ ಅಭಿವೃದ್ಧಿ ಹೊಂದಿ ವೀಶ್ವಮಾನ್ಯ ಎನಿಸಿಕೊಳ್ಳಬೇಕು ಎಂಬುದು ಬಿಜೆಪಿ ಮುಖಂಡ ನೆ.ಲ.ನರೇಂದ್ರ ಬಾಬು ಅವರ ಕನಸು.