ಲಿಂಗಾಯತರ ಪ್ರೀತಿ ಯಡಿಯೂರಪ್ಪ ಕಡೆಗೆ? ಸಮೀಕ್ಷೆಯಲ್ಲಿ ಇದೆಯಾ ನೂನ್ಯತೆ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ. ಅದರ ಪ್ರಕಾರ ಲಿಂಗಾಯತರ ಪ್ರೀತಿ ಯಡಿಯೂರಪ್ಪ ಅವರ ಕಡೆಗೆ ಹೆಚ್ಚು ಇದೆ.
ಮುಖ್ಯಮಂತ್ರಿ ಯಾರಾಗಬೇಕು ಎಂದು ಲಿಂಗಾಯತರಿಗೆ ಕೇಳಲಾದ ಪ್ರಶ್ನೆಗೆ, 39% ಜನ ಲಿಂಗಾಯತರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ, 23% ಲಿಂಗಾಯತರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ. 17% ಲಿಂಗಾಯತರು ಕುಮಾರಸ್ವಾಮಿ ಪರ ಇದ್ದಾರೆ.
ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ
ಅಷ್ಟೆ ಅಲ್ಲದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಈ ಬಾರಿಯ ಚುನಾವಣೆಯ ಮುಖ್ಯ ವಿಷಯವಾಗಲಿದೆಯೇ ಎಂಬ ಪ್ರಶ್ನೆಗೆ 52% ಮಂದಿ ಹೌದು ಎಂದಿದ್ದಾರೆ. ಆದರೆ ಈ ಸಮೀಕ್ಷೆಯಲ್ಲಿ ಸಣ್ಣ ಕೊರತೆ ಇದೆ.
ಈ ಲಿಂಗಾಯತ ಸಮೀಕ್ಷೆಯಲ್ಲಿ ಎದ್ದಿರುವ ಪ್ರಶ್ನೆ ಎಂದರೆ ಸಮೀಕ್ಷೆ ನಡೆಸುವಾಗ ವೀರಶೈವ ಅಥವಾ ಲಿಂಗಾಯತ ಎಂದು ವಿಭಾಗ ಮಾಡದೇ ಸಮೀಕ್ಷೆ ಮಾಡಿರುವುದು. ಸಮೀಕ್ಷೆ ಕೇವಲ ವೀರಶೈವ ಹಾಗೂ ಲಿಂಗಾಯತ ಎರಡನ್ನೂ ಒಂದೇ ಎಂದು ಪರಿಗಣಿಸಿ ಸಮೀಕ್ಷೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾದಲ್ಲಿ ಈ ಸಮೀಕ್ಷೆ ಸತ್ಯಕ್ಕೆ ಹತ್ತಿರ ಬಾರದೇ ಹೋಗುವ ಅಪಾಯ ಇದೆ.
ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?
ವೀರಶೈವ ಮತ್ತು ಲಿಂಗಾಯತ ಎರಡೂ ಪ್ರತ್ಯೇಕ ಗೊಂಡಿದ್ದು, ಪ್ರತ್ಯೇಕಗೊಳ್ಳುವುದು ಲಿಂಗಾಯತರ ಬೇಡಿಕೆ ಆಗಿತ್ತು, ಪ್ರತ್ಯೇಕತೆಗೆ ವೀರಶೈವರ ವಿರೋಧ ಇತ್ತು. ಆದರೆ ಈ ಸಮೀಕ್ಷೆ ವೀರಶೈವ ಹಾಗೂ ಲಿಂಗಾಯತ ಎರಡನ್ನೂ ಒಟ್ಟು ಮಾಡಿ ಸಮೀಕ್ಷೆ ನಡೆಸಿರುವುದು ಸರಿಯಾದ ಫಲಿತಾಂಶ ತಂದಿದೆ ಎಂದೇನು ಎನಿಸುವುದಿಲ್ಲ.